ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !

ಸಾಮಾನ್ಯವಾಗಿ ನಾವು ದಿನವಿಡಿ ಯಾವುದಾದರೂ ಧಾರ್ಮಿಕ ಕೃತಿಯನ್ನು ಮಾಡುತ್ತಿರುತ್ತೇವೆ, ಉದಾ. ಬೆಳಗ್ಗೆ ಎದ್ದ ನಂತರ ದೇವತೆಗಳನ್ನು ಸ್ಮರಿಸುವುದು (ಪ್ರಾತಃಸ್ಮರಣೆ), ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆ ಮಾಡುವುದು, ಸೌಭಾಗ್ಯವತಿ ಸ್ತ್ರೀಯರು ಅನ್ನಪೂರ್ಣೇಶ್ವರಿದೇವಿಯ ಪೂಜೆಯನ್ನು ಮಾಡುವುದು ಮತ್ತು ತುಳಸಿಗೆ ನೀರು ಹಾಕುವುದು, ದೇವರ ಪೂಜೆಯ ನಂತರ ಅಥವಾ ಮಧ್ಯಾಹ್ನ ನೈವೇದ್ಯವನ್ನು ಅರ್ಪಿಸುವುದು, ಸಾಯಂಕಾಲ ತುಳಸಿಯ ಮುಂದೆ ದೀಪವನ್ನು ಹಚ್ಚಿ ನಮಸ್ಕಾರ ಮಾಡುವುದು, ಸಾಯಂಕಾಲ ರಾಮರಕ್ಷಾ, ಶುಭಂ ಕರೋತಿ ಇತ್ಯಾದಿ ಸ್ತ್ರೋತ್ರ-ಶ್ಲೋಕಗಳನ್ನು ಪಠಿಸುವುದು, ದೇವತೆಗಳ ನಾಮಜಪ ಮತ್ತು ಪ್ರಾರ್ಥನೆ ಮಾಡುವುದು … Read more

ಮನುಷ್ಯ ಜನ್ಮದ ಧ್ಯೇಯ – ಧರ್ಮಗ್ರಂಥಗಳಲ್ಲಿ ಹೇಳಿರುವಂತೆ

ಶ್ರೀಮದ್ಭಾಗವತ, ವೇದಗಳು, ಶ್ರೀಮದ್ಭಗವದ್ಗೀತೆ, ಉಪನಿಷತ್ತು ಇತ್ಯಾದಿ ಧರ್ಮಗ್ರಂಥಗಳಲ್ಲಿರುವ ಅನೇಕ ಶ್ಲೋಕಗಳ ಮಾಧ್ಯಮದಿಂದ ಮನುಷ್ಯ ಜನ್ಮದ ಉದ್ದೇಶವನ್ನು ತಿಳಿದುಕೊಳ್ಳೋಣ.

ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?

ಮೃತ ವ್ಯಕ್ತಿಯ ಕೈಗಡಿಯಾರ, ಸಂಚಾರಿವಾಣಿ (ಮೊಬೈಲ್), ಬರವಣಿಗೆಯ ವಸ್ತು, ಪುಸ್ತಕ, ಬ್ಯಾಗ್ ಇತ್ಯಾದಿ ವಸ್ತುಗಳನ್ನು ಏನು ಮಾಡಬೇಕು ಎಂಬುದಕ್ಕೆ ಅಧ್ಯಾತ್ಮಶಾಸ್ತ್ರದಲ್ಲಿರುವ ಉತ್ತರ.

‘ತಾರೀಖಿನ ಮೇಲೆ ತಾರೀಖು’ ಇನ್ನೆಷ್ಟು ದಿನ ? ನಾಮದೇವ್ ಜಾಧವ್‌ಗೆ ನ್ಯಾಯ ಯಾವಾಗ ? – ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥ

27 ವರ್ಷಗಳಿಂದ ಬಾಕಿ ಉಳಿದಿದ್ದ ಮೊಕದ್ದಮೆಯಿಂದ ಪುಣೆ ನ್ಯಾಯಾಲಯದಲ್ಲಿ ಆತ್ಮಹತ್ಯೆ ದೇಶದಾದ್ಯಂತದ 5 ಕೋಟಿ ಪ್ರಕರಣಗಳು, ನ್ಯಾಯಕ್ಕಾಗಿ 324 ವರ್ಷಗಳ ಪ್ರತಿಕ್ಷೆ ಶ್ರೀ. ಅಭಯ್ ವರ್ತಕ್, ಸನಾತನ ಸಂಸ್ಥೆ ‘ತಾರೀಖಿನ ಮೇಲೆ ತಾರೀಖು’ ಎಂಬ ದುಷ್ಚಕ್ರದಲ್ಲಿ 27 ವರ್ಷಗಳ ಕಾಲ ಸಿಲುಕಿ, ನ್ಯಾಯಕ್ಕಾಗಿ ಕಾಯುತ್ತಾ ಹತಾಶರಾದ ಶ್ರೀ. ನಾಮದೇವ್ ಜಾಧವ್ ಅವರು ಪುಣೆ ನ್ಯಾಯಾಲಯದ ಕಟ್ಟಡದಿಂದ ಹಾರಿ ತಮ್ಮ ಜೀವನವನ್ನು ಕೊನೆಗೊಳಿಸಿದರು. ಇದು ಆತ್ಮಹತ್ಯೆಯಲ್ಲ, ಬದಲಿಗೆ ವಿಳಂಬ ಮತ್ತು ಉದಾಸೀನತೆಯಿಂದ ಕೂಡಿದ ವ್ಯವಸ್ಥೆಯಿಂದಾದ ಕೊಲೆ ಎಂದು ಹೇಳಬಹುದು. … Read more

ನಿರಪರಾಧಿ ಹಿಂದುತ್ವವಾದಿಗಳ ಒಂಬತ್ತುವರೆ ವರ್ಷಗಳ ನಷ್ಟವನ್ನು ಯಾರು ಭರಿಸುತ್ತಾರೆ ? – ಸನಾತನ ಸಂಸ್ಥೆಯ ಪ್ರಶ್ನೆ

ಪಾನ್ಸರೆ ಹತ್ಯಾಕಾಂಡದಲ್ಲಿ ನಿಷ್ಕಳಂಕ ಹಿಂದುತ್ವವಾದಿಗಳಾದ ಡಾ. ತಾವಡೆ, ಅಮೋಲ್ ಕಾಳೆ ಮತ್ತು ಶರದ್ ಕಳಸ್ಕರ್ ಅವರಿಗೆ ಜಾಮೀನು ! ಶ್ರೀ. ಅಭಯ ವರ್ತಕ್, ವಕ್ತಾರರು, ಸನಾತನ ಸಂಸ್ಥೆ ಕೊಲ್ಲಾಪುರ – ಕಾಮ್ರೇಡ್ ಗೋವಿಂದ ಪಾನ್ಸರೆ ಹತ್ಯಾಕಾಂಡದಲ್ಲಿ ಹಿಂದುತ್ವವಾದಿಗಳಾದ ಡಾ. ವೀರೇಂದ್ರಸಿಂಹ ತಾವಡೆ, ಶ್ರೀ. ಅಮೋಲ್ ಕಾಳೆ ಮತ್ತು ಶ್ರೀ. ಶರದ್ ಕಳಸ್ಕರ್ ಅವರಿಗೆ ಮುಂಬೈ ಉಚ್ಚ ನ್ಯಾಯಾಲಯದ ಕೊಲ್ಲಾಪುರ ಪೀಠವು ಜಾಮೀನು ನೀಡಿದೆ. ನ್ಯಾಯಮೂರ್ತಿ ಶಿವಕುಮಾರ್ ಡಿಗೆ ಅವರು ನೀಡಿದ ಈ ನಿರ್ಧಾರದಿಂದ 9 ವರ್ಷ 6 … Read more

ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)

ವ್ಯಕ್ತಿ ಮೃತನಾದ ನಂತರ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ಅವನ ಕ್ರಿಯಾಕರ್ಮಗಳನ್ನು ಪುರೋಹಿತರಿಂದ ಮಾಡಿಸಿಕೊಳ್ಳುತ್ತೇವೆ. ಬಹಳಷ್ಟು ಕಡೆ ಅಂತ್ಯಸಂಸ್ಕಾರದ ಬಗ್ಗೆ ಜ್ಞಾನವಿರುವ ಪುರೋಹಿತರು ಬೇಗನೇ ಸಿಗುವುದು ಕಠಿಣವಾಗಿರುತ್ತದೆ. ಇಂತಹ ಸಮಯದಲ್ಲಿ ಪುರೋಹಿತರು ಬರುವ ತನಕ ಮುಂದಿನ ಕೆಲವು ಕೃತಿಗಳನ್ನು ಮಾಡಬಹುದು. ಉಳಿದ ಕೃತಿಗಳನ್ನು ಮಾಡಲು ಪುರೋಹಿತರು ಮಾರ್ಗದರ್ಶನ ಮಾಡಿಯೇ ಮಾಡುತ್ತಾರೆ, ಆದರೆ ನಮಗೂ ಅವುಗಳನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂದು ತಿಳಿದಿದ್ದರೆ ಆ ಕೃತಿಗಳನ್ನು ಮಾಡಲು ಸುಲಭವಾಗುತ್ತದೆ. ಸೂಚನೆ : ಇವುಗಳಲ್ಲಿನ ಕೆಲವು ಕೃತಿಗಳಲ್ಲಿ ಅಪವಾದ, ಹಾಗೆಯೇ ಪ್ರಾಂತ … Read more

ಅಶುಭ ಕಾಲದಲ್ಲಿ ಹುಟ್ಟಿದ ಮಗುವಿನ ಜನನಶಾಂತಿ ಏಕೆ ಮಾಡಬೇಕು?

ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ಆರೋಗ್ಯ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುವ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ.