೨೦೨೬ರ ಮಹಾಶಿವರಾತ್ರಿಯಿಂದ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವವರು ಮಾಡಬೇಕಾದ ನಾಮಜಪ

ಈಗ ಮೂರನೇ ಮಹಾಯುದ್ಧದ ಕಾಲವು ಹತ್ತಿರ ಬರುತ್ತಿರುವುದರಿಂದ, ಅದರಲ್ಲಿ ನಮ್ಮ ರಕ್ಷಣೆಯಾಗಲು ಮತ್ತು ಮುಂದೆ ‘ರಾಮರಾಜ್ಯದ ಸ್ಥಾಪನೆ’ಯಾಗಲು, ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ಜಪವನ್ನು ಕಡಿಮೆಪಕ್ಷ ೧೦ ಮಾಲೆಗಳು ಮತ್ತು ಗರಿಷ್ಠ ಸಾಧ್ಯವಾದಷ್ಟು ಮಾಡಬೇಕು.
ಇದರೊಂದಿಗೆ ದಿನಕ್ಕೆ ಒಮ್ಮೆ ರಾಮರಕ್ಷಾ ಸ್ತೋತ್ರ ಮತ್ತು ಹನುಮಾನಚಾಲೀಸಾ (ಹಿಂದಿ ತಿಳಿಯುವವರು) ಅಥವಾ ಮಾರುತಿ ಸ್ತೋತ್ರ (ಮರಾಠಿ ತಿಳಿಯುವವರು) ಇವುಗಳ ಅರ್ಥ ತಿಳಿದುಕೊಂಡು ಭಾವಪೂರ್ಣವಾಗಿ ಪಠಿಸಬೇಕು.
ಈ ನಾಮಜಪವನ್ನು ಈಗಿನಿಂದ ಮೂರನೇ ಮಹಾಯುದ್ಧವು ಮುಗಿದು ರಾಮರಾಜ್ಯ ಸ್ಥಾಪನೆಯಾಗುವವರೆಗೆ ಮಾಡಬೇಕಿದೆ.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ (೩೧.೧.೨೦೨೬)
ಕಾಲಾನುಸಾರ ಬದಲಾದ ನಾಮಜಪಗಳ ಸ್ವರೂಪ
೧. ಸಾಧಕರು ೧೯೯೯ ರಿಂದ ಪ್ರಮುಖವಾಗಿ ಪ್ರತಿದಿನ ಮುಂದಿನ ವ್ಯಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ.
೧ ಅ. ಕುಲದೇವತೆಯ ಜಪ : ಇದನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡುವುದು. ಈ ಜಪವು ಪ್ರಾರಬ್ಧದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೧ ಆ. ದತ್ತನ ಜಪ – ‘ಶ್ರೀ ಗುರುದೇವ ದತ್ತ |’ : ತೊಂದರೆಯ ತೀವ್ರತೆಗನುಸಾರ ಈ ಜಪವನ್ನು ೩ ರಿಂದ ೯ ಮಾಲೆಗಳಷ್ಟು ಮಾಡುವುದು. ಈ ಜಪವು ಪೂರ್ವಜರಿಂದ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
೨. ೨೦೧೦ ರಿಂದ ವ್ಯಷ್ಟಿ ಸಾಧನೆ ಮಾಡುವವರು ಸಮಷ್ಟಿಗಾಗಿ ಮಾಡಬೇಕಾದ ಜಪ
೨೦೧೦ ರಿಂದ, ‘ಕಾಲಾನುಸಾರ ಸಮಷ್ಟಿ ಸಾಧನೆ ಮಾಡುವ ಸಾಧಕರು “ಓಂ ನಮೋ ಭಗವತೇ ವಾಸುದೇವಾಯ |” ಈ ಜಪವನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಮಾಡಬೇಕು’ ಎಂದು ಹೇಳಲಾಗಿತ್ತು.
೩. ೨೦೨೧ ರಲ್ಲಿ ‘ನಿರ್ವಿಚಾರ’ ನಾಮಜಪ ಮಾಡಲು ತಿಳಿಸಲಾಗಿತ್ತು
೪. ೨೦೨೬ರ ಮಹಾಶಿವರಾತ್ರಿಯಿಂದ ಈ ನಾಮಜಪವನ್ನು ಪ್ರಾರಂಭಿಸಲು ಕಾರಣ
‘ಸ್ವತಃ ಶಿವನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿರುತ್ತಾನೆ. ಆದ್ದರಿಂದ ಅವನ ಆಶೀರ್ವಾದದೊಂದಿಗೆ ಕಾಲಾನುಸಾರ ಸಾಧನೆಯಾಗಿ ಈ ನಾಮಜಪವನ್ನು ಪ್ರಾರಂಭಿಸಲಿದ್ದೇವೆ.’
– (ಸಚ್ಚಿದಾನಂದ ಪರಬ್ರಹ್ಮ) ಡಾ. ಜಯಂತ ಆಠವಲೆ (೩೧.೧.೨೦೨೬)
ಕೆಲವು ಸೂಚನೆಗಳು
೧. ವ್ಯಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ
೧ ಅ. ಹೊಸ ಸಾಧಕರಿಗಾಗಿ ನಾಮಜಪ : ಹೊಸ ಸಾಧಕರು ಕುಲದೇವತೆಯ ನಾಮಜಪವನ್ನು ಕಡಿಮಪಕ್ಷ ೧ ಗಂಟೆ ಮತ್ತು ದತ್ತನ ನಾಮಜಪವನ್ನು ಪೂರ್ವಜರ ತೊಂದರೆಗನುಸಾರ ೩, ೬ ಅಥವಾ ೯ ಮಾಲೆಗಳನ್ನು ಮಾಡಬೇಕು. ನಂತರ ಉಳಿದ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡಬೇಕು.
೧ ಆ. ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳ ನಿವಾರಣೆಗಾಗಿ ‘ಪ್ರಾಣಶಕ್ತಿವಹನ ಪದ್ಧತಿ’ಯಂತೆ ಹುಡುಕಿದ ನಾಮಜಪ ಅಥವಾ ಕಾಯಿಲೆಗಳಿಗಾಗಿ ಯಾವುದಾದರೂ ವಿಶಿಷ್ಟ ನಾಮಜಪವನ್ನು ಹೇಳಿದ್ದರೆ, ಅದನ್ನು ಪೂರ್ಣಗೊಳಿಸಿದ ನಂತರ ಉಳಿದ ಸಮಯದಲ್ಲಿ ಶ್ರೀರಾಮನ ಜಪ ಮಾಡಬೇಕು.
೨. ಸಮಷ್ಟಿ ಸಾಧನೆಯ ದೃಷ್ಟಿಕೋನದಿಂದ ನಾಮಜಪ
ಯಾವ ಸಾಧಕರು ಶ್ರೀಕೃಷ್ಣ ಅಥವಾ ‘ನಿರ್ವಿಚಾರ’ ನಾಮಜಪ ಮಾಡುತ್ತಿದ್ದರೋ, ಅವರು ಅದನ್ನು ನಿಲ್ಲಿಸಿ ಈಗ ಕೇವಲ ಶ್ರೀರಾಮನ ಜಪವನ್ನು ಮಾಡಬೇಕು.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಾಚರಣೆ, ಸಾಧನೆ ಮಾಡಿ ಆಧ್ಯಾತ್ಮಿಕ ಬಲ ಹೆಚ್ಚಿಸಿ ! – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು,...
ಬನ್ನಿ, ಆಧ್ಯಾತ್ಮಿಕ ಶಿಲ್ಪಿಗಳಾಗೋಣ!
ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ನೀಡಿದ ಮಾರ್ಗದರ್ಶನ
ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿ ಇರುವ ಅಡಚಣೆಗಳು ಮತ್ತು ಪರಿಹಾರೋಪಾಯ
ಸಾಧಕರೇ, ಸುಖಭೋಗಗಳಲ್ಲಿ ರಮಿಸಿ ಸಾಧನೆಯ ಹಾನಿಯನ್ನು ಮಾಡಿಕೊಳ್ಳಬೇಡಿ