ಯದ್ಧಕಾಲ ಹಾಗೂ ಆಪತ್ಕಾಲದಲ್ಲಿ ನೆರವಾಗುವ ಈ ಕೃತಿಗಳನ್ನು ಈಗಿನಿಂದಲೇ ಮಾಡಿ !

Article also available in :

ಸದ್ಗುರು (ಡಾ.) ಮುಕುಲ ಗಾಡಗೀಳ

ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಉಕ್ರೇನ್‌ನ್ನಿನ ಜನರು ಯುದ್ಧದ ಬೇಗೆ ಹೇಗಿರುತ್ತದೆ ?, ಎಂಬುದು ಅನುಭವಿಸುತ್ತಿರುವ ಬಗ್ಗೆ ನಾವು ಪ್ರತಿದಿನ ಬರುವ ವಾರ್ತೆಗಳಲ್ಲಿ ಓದುತ್ತಿದ್ದೇವೆ. ಮುಂದೆ ಈ ಯುದ್ಧದಲ್ಲಿ ಇತರ ದೇಶಗಳೂ ಸೇರಿಕೊಂಡರೆ ಮೂರನೇ ಮಹಾಯುದ್ಧ ಆರಂಭವಾಗಲು ಹೆಚ್ಚು ಸಮಯ ತಗಲುವುದಿಲ್ಲ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಉಕ್ರೇನ್‌ನ್ನಿನ ಜನರು ಮೂರನೇ ಮಹಾಯುದ್ಧವನ್ನು ಎದುರಿಸಲು ಸ್ವಲ್ಪವಾದರೂ ಸಿದ್ಧರಾಗಿರಬಹುದು. ಅವರ ಸೈನ್ಯವು ಜನರಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ತರಬೇತಿಯನ್ನು ನೀಡುತ್ತಿದೆ. ಆದ್ದರಿಂದ ಅವರ ಮನೋಬಲ ಹೆಚ್ಚಾಗಿ ಆ ಜನರು ರಷ್ಯಾದ ಸೈನ್ಯನೊಂದಿಗೆ ಹೋರಾಡುತ್ತಿದ್ದಾರೆ. ಇದರಿಂದ ರಷ್ಯಾಗೆ ಉಕ್ರೇನ್‌ಅನ್ನು ವಶಪಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಉಕ್ರೇನ್‌ನ್ನಿನ ಜನರ ಈ ಸಿದ್ಧತೆಯು ಶ್ಲಾಘನೀಯವಾಗಿದ್ದರೂ, ಅದು ಕೇವಲ ಶಾರೀರಿಕ ಹಾಗೂ ಮಾನಸಿಕ ಸ್ತರದಲ್ಲಿದೆ. ಎಲ್ಲಕ್ಕಿಂತ ಮಹತ್ವದ ಸಿದ್ಧತೆ ಎಂದರೆ ಆಧ್ಯಾತ್ಮಿಕ ಸ್ತರದ ಸಿದ್ಧತೆ !

ಭಾರತದ ಜನರು ರಷ್ಯಾ-ಉಕ್ರೇನ್ ಯುದ್ಧದ ವಾರ್ತೆಗಳಿಂದ ‘ಪ್ರತ್ಯಕ್ಷವಾಗಿ ಯದ್ಧವನ್ನು ಹೇಗೆ ಎದುರಿಸಬೇಕಾಗಬಹುದು’ ಎಂಬುದನ್ನು ಕಲಿಯಬೇಕು. ಮೂರನೇ ಮಹಾಯುದ್ಧವಾದರೆ ಅದು ಅನೇಕ ತಿಂಗಳುಗಟ್ಟಲೆ ನಡೆಯಲಿದೆ. ಆದ್ದರಿಂದ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಲು ನಿಖರವಾಗಿ ಯಾವ ಅಂಶಗಳತ್ತ ಗಮನ ಹರಿಸಬೇಕು, ಎಂಬುದನ್ನು ಇಲ್ಲಿ ನೀಡಲಾಗಿದೆ. ಈ ಸಿದ್ಧತೆ ಇಂದಿನಿಂದಲೇ ಗಾಂಭೀರ್ಯದಿಂದ ಮಾಡಿರಿ !

೧. ಶಾರೀರಿಕ ಸ್ತರದ ಸಿದ್ಧತೆ

ಅ. ವಿಪತ್ತನ್ನು ಎದುರಿಸಲು ನಮ್ಮ ಶರೀರ ಸಧೃಢವಾಗಿರಬೇಕು. ಅದಕ್ಕಾಗಿ ಪ್ರತಿದಿನ ನಿಯಮಿತವಾಗಿ ೩೦ ನಿಮಿಷವಾದರೂ ವ್ಯಾಯಾಮ ಮಾಡಿ. ಎಲ್ಲ ಅಂಗಗಳನ್ನು ಶಕ್ತಿಶಾಲಿಯನ್ನಾಗಿಸಲು ಸುಂದರ ವ್ಯಾಯಾಮ ಪದ್ದತಿಯೆಂದರೆ ಸೂರ್ಯನಮಸ್ಕಾರ. ಇದನ್ನು ದಿನಂಪ್ರತಿ ೧೨ ಸಲವಾದರೂ ಮಾಡಬೇಕು. ಪ್ರತಿದಿನ ಸ್ವಲ್ಪವಾದರೂ ಓಡುವ ವ್ಯಾಯಾಮ ವಿಧ ಮಾಡಿರಿ. ನಮಗೆ ೫-೧೦ ನಿಮಿಷಗಳಾದರೂ ಓಡಲು ಬರಬೇಕು. ನಮಗೆ ಸಾಧ್ಯವಾಗುವಷ್ಟು ವ್ಯಾಯಾಮವನ್ನು ಮಾಡಬೇಕು ಹಾಗೂ ಅದನ್ನು ಪ್ರತಿದಿನ ಸ್ವಲ್ಪಸ್ವಲ್ಪ ಹೆಚ್ಚಿಸಬೇಕು.

ಆ. ಪ್ರತಿದಿನ ಪ್ರಾಣಾಯಾಮ ಮಾಡಿ. ಅದು ಗೊತ್ತಿಲ್ಲದಿದ್ದರೆ ಕಲಿತುಕೊಳ್ಳಿ. ಪ್ರಾಣಾಯಾಮ ಮಾಡುವುದರಿಂದ ಉಸಿರನ್ನು ಹಿಡಿದಿಟ್ಟುಕೊಳ್ಳುವ (ಕುಂಭಕ ಮಾಡುವ) ಅಭ್ಯಾಸವಾಗುತ್ತದೆ. ಈ ಅಭ್ಯಾಸವು ನೀರಿನಿಂದ ಯಾರನ್ನಾದರೂ ಕಾಪಾಡಲು, ಹೊಗೆ ಇದ್ದಲ್ಲಿ ಅಥವಾ ಅನಿಲ ಸೋರಿಕೆಯಾದಲ್ಲಿ ನಮಗೆ ಉಪಯೋಗವಾಗುವುದು.

ಇ. ಈಜಲು ಬರಬೇಕು, ಇದು ಅತ್ಯಂತ ಅಗತ್ಯವಿದೆ. ನೀರಿನಲ್ಲಿ ಬಿದ್ದಿರುವ ಇನ್ನೊಬ್ಬರನ್ನು ಅಥವಾ ನಮ್ಮ ಜೀವವನ್ನು ಉಳಿಸಿಕೊಳ್ಳಲು ಇದರ ಉಪಯೋಗವಾಗುವುದು.

ಈ. ಯುದ್ಧದ ಸಮಯದಲ್ಲಿ ಆಹಾರ ಸಿಗಲು ಕಷ್ಟವಾಗುತ್ತದೆ. ಆಗ ನಮಗೆ ೧-೨ ದಿನ ಉಪವಾಸವೂ ಮಾಡಬೇಕಾಗಬಹುದು. ಅದನ್ನು ಅಭ್ಯಾಸ ಮಾಡಿಕೊಳ್ಳಲು ಏನೂ ತಿನ್ನದೇ-ಕುಡಿಯದೇ ಒಂದು ಹೊತ್ತಾದರೂ ಉಪವಾಸ ಇರುವ ಅಭ್ಯಾಸವನ್ನು ಮಾಡಿ ಕೊಳ್ಳಬೇಕು. ಇದಕ್ಕಾಗಿ ವಾರದಲ್ಲಿ ಒಂದು ದಿನ ಅದರ ಅಭ್ಯಾಸ ಮಾಡಿಕೊಳ್ಳಿ. ಮುಂದೆ ‘ಇಡೀ ದಿನ ಕೇವಲ ನೀರು ಕುಡಿದು ಉಪವಾಸ ಇರಬಹುದೇ ?’, ಎಂಬುದನ್ನೂ ನೋಡಿರಿ.

ಉ. ನಮಗೆ ಕೆಲವು ಶಾರೀರಿಕ ತೊಂದರೆಗಳಿದ್ದರೆ, ಸಮಯವಿದ್ದಾಗಲೇ ಅದನ್ನು ವೈದ್ಯರು ಅಥವಾ ಆಧುನಿಕ ವೈದ್ಯರಿಗೆ (ಡಾಕ್ಟರ್) ತೋರಿಸಿ ಅವನ್ನು ನಿವಾರಿಸಿಕೊಳ್ಳಿ. ಸ್ವಲ್ಪ ನೋವಿದ್ದರೂ ಅದರ ಕಡೆಗೆ ನಿರ್ಲಕ್ಷಿಸಬಾರದು. ೪೦ ವರ್ಷ ಮತ್ತು ಅದಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿಗಳು ತಮ್ಮ ಸಾಮಾನ್ಯ ವೈದ್ಯಕೀಯ, ಕಣ್ಣಿನ ಮತ್ತು ಹಲ್ಲಿನ ಪರೀಕ್ಷೆಯನ್ನು (routine checkup) ಮಾಡಿಸಿಕೊಳ್ಳಬೇಕು. ಮುಂದೆ ಯುದ್ಧಕಾಲದಲ್ಲಿ ವೈದ್ಯಕೀಯ ಸಹಾಯವು ಸುಲಭವಾಗಿ ದೊರಕಲಾರದು.

ಊ. ಮೇಲಿನ ಪರೀಕ್ಷೆಯಲ್ಲಿ ಕಂಡುಬಂದ ವ್ಯಾಧಿಗಳ ಮೇಲೆ ಆವಶ್ಯಕತೆಗನುಸಾರವಾಗಿ ಮುಂದಿನ ಹಂತದ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಗಳನ್ನು ಮಾಡಿ ತಮ್ಮ ವೈದ್ಯಕೀಯ ಸ್ಥಿತಿಯನ್ನು ಸಾಧ್ಯವಾದಷ್ಟು ಸಾಮಾನ್ಯ ಮಾಡಿಕೊಳ್ಳಬೇಕು, ಉದಾ. ರಕ್ತದಲ್ಲಿನ ಜೀವಸತ್ವಗಳ ಪ್ರಮಾಣವು ಆವಶ್ಯಕತೆಗಿಂತಲೂ ಕಡಿಮೆ ಇದ್ದರೆ, ಅದು ಮೊದಲಿನಂತೆ ಆಗುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಜೀವಸತ್ವಗಳಿಗೆ ಪೂರಕವಾದ ಆಹಾರ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು.

ಎ. ನಮಗಾದ ಕಾಯಿಲೆಗಳು ‘ಅವು ಎಂದು ಗಮನಕ್ಕೆ ಬಂದವು ?’, ಅದರ ಕಾರಣಗಳು, ಅವುಗಳಿಗೆ ತೆಗೆದುಕೊಳ್ಳುತ್ತಿರುವ ವೈದ್ಯಕೀಯ ಚಿಕಿತ್ಸೆಗಳು, ಪೂರಕವಾದ ಆಹಾರ, ಪಥ್ಯ ಇತ್ಯಾದಿಗಳನ್ನು ಒಂದು ಪುಸ್ತಕದಲ್ಲಿ ನೋಂದಣಿ ಮಾಡಿಡಬೇಕು. ‘ಯಾವುದೇ ಒಂದು ಕಾಯಿಲೆಗೆ ಸಂಬಂಧಿಸಿದ ಪರೀಕ್ಷೆಯನ್ನು ಪುನಃ ಯಾವಾಗ ಮಾಡಬೇಕು ?’, ಇದರ ನೋಂದಣಿಯನ್ನು ಪುಸ್ತಕದಲ್ಲಿ ಮಾಡಬೇಕು. ನೋಂದಣಿಯಲ್ಲಿ ನಮಗೆ ಯಾವುದಾದರೊಂದು ಔಷಧಿ, ಪದಾರ್ಥ, ಆಹಾರಪದಾರ್ಥ, ಧೂಳು ಇವುಗಳಲ್ಲಿನ ಯಾವುದಾದರೊಂದು ಘಟಕದ ಅಲರ್ಜಿ ಇದ್ದರೆ ಅದರ ನೋಂದಣಿಯನ್ನು ಮಾಡಿಡಬೇಕು.

ಏ. ನಮ್ಮ ಕಾಯಿಲೆಗೆ ಸಂಬಂಧಿಸಿದ ವೈದ್ಯಕೀಯ ದಾಖಲೆ ಹಾಗೂ ವರದಿಗಳ ಕಡತವನ್ನು (ಫೈಲ್) ಮಾಡಿಡಬೇಕು. ಒಂದು ಕಾಯಿಲೆಯ ದಾಖಲೆ ಹಾಗೂ ವರದಿಗಳು ಒಟ್ಟಿಗಿರಬೇಕು ಮತ್ತು ಅದರ ಕ್ರಮವನ್ನು ದಿನಾಂಕಾನುಸಾರವಾಗಿ ಜೋಡಿಸಬೇಕು. ಇತ್ತೀಚಿನ ದಾಖಲೆಗಳನ್ನು ಎಲ್ಲಕ್ಕಿಂತಲೂ ಮೇಲಿಡಬೇಕು. ಅದೇ ರೀತಿಯಲ್ಲಿ ‘ಹಿಂದಿನ ೩ ವರ್ಷಗಳ ದಾಖಲೆಗಳನ್ನು ಒಂದು ಕಡತದಲ್ಲಿ ಮತ್ತು ಅದಕ್ಕಿಂತಲೂ ಹಳೆಯ ಕಾಗದ ಪತ್ರಗಳನ್ನು ಇನ್ನೊಂದು ಕಡತದಲ್ಲಿ’, ಈ ರೀತಿಯಲ್ಲಿ ಇಡಬಹುದು. ಸಾಧ್ಯವಿದ್ದಲ್ಲಿ ಸಂಚಾರವಾಣಿಯಿಂದ ಮಹತ್ವದ ದಾಖಲೆ ಮತ್ತು ವರದಿಗಳ ಛಾಯಾಚಿತ್ರ ತೆಗೆಯಬೇಕು ಮತ್ತು ಅದನ್ನು ಸಂಚಾರವಾಣಿ, ‘ಪೆನ್‌ಡ್ರೈವ್’ ಇತ್ಯಾದಿಗಳಲ್ಲಿ ಸುರಕ್ಷಿತವಾಗಿಡಬೇಕು.

ಐ. ರಕ್ತದೊತ್ತಡ, ಮಧುಮೇಹ ಇಂತಹ ದೀರ್ಘಕಾಲಾವಧಿಗಾಗಿ (ಒಂದೊಮ್ಮೆ ಜೀವಮಾನವಿಡಿ) ಔಷಧೋಪಚಾರವನ್ನು ಮುಂದುವರೆಸಬೇಕಾದಂತಹ ಕಾಯಿಲೆಗಳಿದ್ದರೆ ಆಧುನಿಕ ವೈದ್ಯರ ಸಲಹೆಯಂತೆ ಅವುಗಳ ಔಷಧಿಯನ್ನು ಸಂಗ್ರಹಿಸಿಡಬೇಕು. ಕನ್ನಡಕ, ಕಿವಿಯಂತ್ರ ಇವುಗಳಂತಹ ದಿನನಿತ್ಯದ ಜೀವನಕ್ಕಾಗಿ ನಮಗೆ ಅತ್ಯಾವಶ್ಯಕವಾಗಿರುವ ಪ್ರತಿಯೊಂದು ಉಪಕರಣಗಳ ಒಂದು ಸಂಖ್ಯೆ ಹೆಚ್ಚಿನದು ನಮ್ಮಲ್ಲಿರಬೇಕು ಹಾಗೂ ಆ ಉಪಕರಣಕ್ಕಾಗಿ ಬೇಕಾಗುವ ‘ಬ್ಯಾಟರಿ’ ಇತ್ಯಾದಿಗಳ ಆವಶ್ಯತೆ ಇರುವಷ್ಟು ಸಂಗ್ರಹವು ನಮ್ಮಲ್ಲಿರಬೇಕು. ನಮಗೆ ಚಿಕಿತ್ಸೆಗಾಗಿ ಬೇಕಾಗುವ ಔಷಧಗಳು, ಉಪಕರಣಗಳು ಇವುಗಳ ಒಂದು ‘ಎಮರ್ಜನ್ಸಿ ಕಿಟ್’ (ಆಪತ್ಕಾಲದ ಸಂಚನ್ನು) ಸಿದ್ಧಪಡಿಸಿಡಬೇಕು. ಅದರಲ್ಲಿ ಕಡಿಮೆಯೆಂದರೆ ೧೫ ದಿನಕ್ಕೆ ಸಾಕಾಗುವಷ್ಟು ಔಷಧಿಗಳಿರಬೇಕು. ತುರ್ತು ಪರಿಸ್ಥಿತಿಯಲ್ಲಿ ನಾವು ಆ ‘ಕಿಟ್’ ನ್ನು ತಕ್ಷಣ ತೆಗೆದುಕೊಂಡು ಹೋಗಬಹುದು.

೨. ಮಾನಸಿಕ ಸ್ತರದ ಸಿದ್ಧತೆಗಳು

ಅ. ‘ಒಂದೊಮ್ಮೆ ಕಠಿಣ ಪ್ರಸಂಗ ಉದ್ಭವಿಸಿದರೆ ನಾವು ಅದನ್ನು ಎದರಿಸಬಹುದಾ ?’, ಇದನ್ನು ನೋಡಬೇಕು. ಇನ್ನೊಬ್ಬರ ಮೇಲೆ ಒಂದು ಕಠಿಣ ಪ್ರಸಂಗ ಬಂದರೆ ‘ಆ ಸಮಯದಲ್ಲಿ ನಾವು ಏನು ಮಾಡುತ್ತೇವೆ ?’, ಎಂಬ ಪ್ರಶ್ನೆಯನ್ನು ನಾವೇ ನಮಗೆ ಕೇಳಿ ಆ ಪ್ರಸಂಗದ ಅಭ್ಯಾಸವನ್ನು ಮಾಡಬೇಕು. ಅದರಿಂದ ಮನಸ್ಸಿನ ಸಿದ್ಧತೆಯಾಗುತ್ತದೆ ಮತ್ತು ನಮ್ಮ ಮೇಲೆ ಆ ರೀತಿಯಾದ ಪ್ರಸಂಗವು ಬಂದೆರಗಿದರೆ ನಮ್ಮಿಂದ ಆ ಸಮಯದಲ್ಲಿ ಬೇಗ ಬೇಗನೆ ಕೃತಿಗಳಾಗುತ್ತವೆ.

ಆ. ನಮಗೆ ಅಥವಾ ಇತರರಿಗೆ ಬಹಳಷ್ಟು ಪ್ರಮಾಣದಲ್ಲಿ ಗಾಯವಾದರೆ ಅಥವಾ ಸುಟ್ಟಿದರೆ, ನಾವು ಅದನ್ನು ಸಹಿಸಬಹುದಾ ? ಆ ಪ್ರಸಂಗದಲ್ಲಿ ನಾವು ಸುಮ್ಮನೆ ನರಳುತ್ತೇವೆಯೋ, ಭಯಭೀತರಾಗುತ್ತೇವೋ ಅಥವಾ ಅದರ ಮೇಲೆ ಉಪಚಾರವೆಂದು ಏನಾದರೂ ಕೃತಿಯನ್ನು ಮಾಡುತ್ತೇವೆಯೋ ? ‘ಯಾರಿಗಾದರೂ ಅಪಘಾತವಾಗಿದ್ದನ್ನು ನೋಡಿದರೆ ನಾವು ಅವರಿಗೆ ಸಹಾಯ ಮಾಡಲು ಧಾವಿಸುತ್ತೇವೆಯೋ ?’, ಎಂಬುವುದನ್ನು ನೋಡಬೇಕು. ಇಂತಹ ಸಮಯದಲ್ಲಿ ನಾವು ಜವಾಬ್ದಾರಿ ವಹಿಸಿ ಕೃತಿ ಮಾಡಬೇಕು.

ಇ. ಮನೆಯಲ್ಲಿ ಅಥವಾ ಇನ್ನೆಲ್ಲಾದರೂ ಸ್ವಲ್ಪ ಬೆಂಕಿ ತಗುಲಿದರೆ, ನಾವು ಗಾಬರಿಗೊಂಡು ಓಡುತ್ತೇವೆಯೋ ಅಥವಾ ಬೆಂಕಿಯನ್ನು ನಂದಿಸಲು ಏನಾದರೂ ಕೃತಿಯನ್ನು ಮಾಡುತ್ತೇವೆಯೋ ? ನಾವು ಗಾಬರಿಗೊಂಡರೆ, ನಮಗೆ ಬೆಂಕಿಯನ್ನು ಎದುರಿಸುವ ತಾತ್ತ್ವಿಕ ಮಾಹಿತಿ ಇದ್ದರೂ ‘ಆ ಪ್ರಸಂಗದಲ್ಲಿ ಏನು ಮಾಡಬೇಕು ?’ ಎಂಬುದು ತೋಚುವುದಿಲ್ಲ; ಆದುದರಿಂದ ಆ ಪ್ರಸಂಗದಲ್ಲಿ ಮನಸ್ಸು ಗಟ್ಟಿಯಾಗಿರುವುದು ಮಹತ್ವದಾಗಿದೆ.

ಈ. ‘ಯಾರಾದರೂ ನಮ್ಮೊಂದಿಗೆ ಗುಂಡಾಗಿರಿ ಮಾಡುತ್ತಿದ್ದರೆ ನಾವು ಚಾಣಾಕ್ಷತೆಯಿಂದ ಅದನ್ನು ಎದುರಿಸಬಹುದಾ ?’, ಎಂದು ತಮ್ಮನ್ನೇ ತಾವು ಕೇಳಬೇಕು. ಪ್ರಸಂಗ ಬಂದರೆ ಗೂಂಡಾಗಳ ಜೊತೆ ಹೊಡೆದಾಡುವ ಸಿದ್ಧತೆ ಇರಬೇಕು. ನಮ್ಮ ಪರಿಚಯದ ವ್ಯಕ್ತಿ ಹಾಗೂ ಇನ್ನೊಬ್ಬ ವ್ಯಕ್ತಿಯಲ್ಲಿ ಜಗಳವಾಗುತ್ತಿದ್ದರೆ ಅದನ್ನು ಬಿಡಿಸುವ ಪ್ರಯತ್ನವನ್ನು ಮಾಡಬೇಕು.

ಉ. ಇತರರಿಗೆ ಸಹಾಯ ಮಾಡುವ ವೃತ್ತಿ ನಮ್ಮಲ್ಲಿರಬೇಕು ಮತ್ತು ಅದು ಇಲ್ಲದಿದ್ದರೆ ಪ್ರಯತ್ನಪೂರ್ವಕವಾಗಿ ಬೆಳೆಸಬೇಕು. ನಮ್ಮಲ್ಲಿ ಆ ವೃತ್ತಿ ಇದ್ದರೆ, ನಮಗೆದುರಾಗುವ ಕಠಿಣ ಪ್ರಸಂಗದಲ್ಲಿ ದೇವರು ಇತರರನ್ನು ನಮ್ಮ ಸಹಾಯಕ್ಕೆ ಕಳುಹಿಸುವರು.

ಊ. ನಮ್ಮ ಸ್ವಭಾವ ಏಕಾಂಗಿಯಾಗಿರಬಾರದು. ಇಂತಹ ವ್ಯಕ್ತಿಗೆ ಆಪತ್ಕಾಲದಲ್ಲಿ ಸಹಾಯ ಸಿಗುವುದು ಕಠಿಣವಾಗುತ್ತದೆ; ಏಕೆಂದರೆ ಅವರಿಗೆ ಪರಿಚಯದವರು ಎಂದು ಯಾರೂ ಇರುವುದಿಲ್ಲ. ಆದ್ದರಿಂದ ಎಲ್ಲರೊಂದಿಗೆ ಹೊಂದಿಕೊಳ್ಳುವ, ಎಲ್ಲರೊಂದಿಗೆ ಮಾತನಾಡುವ ಮತ್ತು ಒಟ್ಟಾಗಿರುವ ಅಭ್ಯಾಸವನ್ನು ನಾವು ಮಾಡಿಕೊಳ್ಳಬೇಕು. ಏಕಾಂಗಿ ವ್ಯಕ್ತಿಯು ಕೇವಲ ತನ್ನ ವಿಚಾರವನ್ನೇ ಮಾಡುತ್ತಾನೆ. ತದ್ವಿರುದ್ಧ ಇತರರ ವಿಚಾರ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.

ಎ. ಮನಸ್ಸಿನಲ್ಲಿ ಮಾತೃಭೂಮಿಯ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಬೇಕು. ಯಾವ ರೀತಿ ತಾಯಿಯು ನಮ್ಮನ್ನು ಬೆಳೆಸುತ್ತಾಳೋ, ಅದೇ ರೀತಿ ನಮ್ಮ ಮಾತೃಭೂಮಿಯೂ ನಮ್ಮ ಪಾಲನೆ ಪೋಷಣೆಯನ್ನು ಮಾಡುತ್ತಾಳೆ; ಆದ್ದರಿಂದ ಅವಳ ಬಗ್ಗೆ ನಮಗೆ ಕೃತಜ್ಞತೆ ಎನಿಸಬೇಕು. ಹೀಗೆನಿಸಿದಾಗಲೇ, ನಾವು ಅವಳಿಗಾಗಿ ಪ್ರಾಣತ್ಯಾಗವನ್ನು ಮಾಡಲು ಸಹ ಹಿಂಜರಿಯುವುದಿಲ್ಲ. ಸ್ವಾತಂತ್ರ್ಯವೀರರು ಹೀಗೆ ಮಾಡಿದರೆಂದೇ ನಮಗೆ ಸ್ವಾತಂತ್ರ್ಯ ದೊರಕಿತು. ಮಾತೃಭೂಮಿಯ ಬಗ್ಗೆ ಪ್ರೀತಿ ಎನಿಸುವುದು, ಅಂದರೆ ದೇಶಪ್ರೇಮವೆನಿಸುವುದು. ಹೀಗೆ ಅನಿಸಿದಾಗಲೇ, ನಾವು ಸಮಯ ಬಂದಾಗ ದೇಶಕ್ಕಾಗಿ ಶತ್ರುಗಳ ವಿರುದ್ಧ ಹೋರಾಡಬಹುದು. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಜನತೆಯು ಇದನ್ನೇ ಮಾಡುತ್ತಿದೆ. ಮಾತೃಭೂಮಿಯ ಬಗ್ಗೆ ಪ್ರೀತಿ ಅನಿಸಿದರೆ, ನಾವು ಸ್ವಾರ್ಥಕ್ಕಾಗಿ ನಮ್ಮ ಸಹೋದರ ಸಹೋದರಿಯರನ್ನು ವಂಚಿಸಿ ಭ್ರಷ್ಟಾಚಾರ ಮಾಡಲಾರೆವು ಅಥವಾ ಶತ್ರುವಿಗೆ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲ. ಮಾತೃಭೂಮಿಯಲ್ಲಿ ನೆಲೆಸಿರುವ ಎಲ್ಲರ ಬಗ್ಗೆ ನಮಗೆ ಪ್ರೀತಿಯೇ ಅನಿಸುವುದು. ದೇಶಕ್ಕಾಗಿ ನಾವು ಕರ್ತವ್ಯದಿಂದ ವರ್ತಿಸಲು ಸಿದ್ಧರಾಗೋಣ.

೩. ಬೌದ್ಧಿಕ ಸ್ತರದ ಸಿದ್ಧತೆ

ಅ. ಯುದ್ಧಕಾಲದಲ್ಲಿ ಇತರರಿಗೆ ಸಹಾಯ ಮಾಡಲು ಪ್ರಥಮೋಪಚಾರ ಬರುವುದು ಆವಶ್ಯಕವಾಗಿದೆ. ಶರೀರಕ್ಕೆ ಗಾಯವಾದರೆ ಬ್ಯಾಂಡೆಜ್ ಹೇಗೆ ಕಟ್ಟುವುದು, ಮೂಳೆ ಮುರಿತವಾದರೆ ಹೇಗೆ ಸಹಾಯ ಮಾಡುವು್ಉ, ಸ್ಟ್ರೆಚರ್ ಲಭ್ಯವಿಲ್ಲದಿದ್ದರೆ ಜೋಳಿಗೆಯ ಸಹಾಯದಿಂದ ವ್ಯಕ್ತಿಯನ್ನು ಇನ್ನೊಂದೆಡೆ ಹೇಗೆ ಕರೆದೊಯ್ಯುವುದು, ಇತ್ಯಾದಿ ವಿಷಯಗಳನ್ನು ಕಲಿತುಕೊಳ್ಳಬೇಕು. ಯುದ್ಧಕಾಲದಲ್ಲಿ ನಾವು ಈ ರೀತಿ ಇತರರಿಗೆ ಸಹಾಯ ಮಾಡಬೇಕಾಗಬಹುದು. ಈ ಜ್ಞಾನವನ್ನು ಪಡೆಯಲು ಸನಾತನದ ಮುಂದಿನ ೩ ಗ್ರಂಥಗಳು ಲಭ್ಯವಿವೆ.

೧. ರೋಗಿಯ ಜೀವರಕ್ಷಣೆ ಮತ್ತು ಮರ್ಮಾಘಾತ ಮುಂತಾದ ರೋಗಗಳಿಗೆ ಪ್ರಥಮ ಚಿಕಿತ್ಸೆ

೨. ರಕ್ತಸ್ರಾವ, ಗಾಯ, ಮೂಳೆಮುರಿತ ಮುಂತಾದವುಗಳಿಗೆ ಪ್ರಥಮ ಚಿಕಿತ್ಸೆ

೩. ಉಸಿರುಗಟ್ಟುವುದು, ಸುಟ್ಟುಕೊಳ್ಳುವುದು, ಪ್ರಾಣಿಗಳ ಕಡಿತ ಇತ್ಯಾದಿಗಳಿಗೆ ಪ್ರಥಮ ಚಿಕಿತ್ಸೆ

ಆ. ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸಲು, ರಕ್ತದೊತ್ತಡವನ್ನು ಅಳೆಯಲು ಮತ್ತು ಪಲ್ಸ್ ಆಕ್ಸಿಮೀಟರ್ ಬಳಸಲು ಕಲಿತುಕೊಳ್ಳಬಹುದು.

ಇ. ಯುದ್ಧಕಾಲದಲ್ಲಿ ಯಾವುದಾದರೊಂದು ಸ್ಥಳದಲ್ಲಿ ಬೆಂಕಿ ಹತ್ತಿಕೊಂಡರೆ ಅದನ್ನು ಹೇಗೆ ನಂದಿಸಬೇಕು ಎಂಬುದರ ಸ್ವಲ್ಪವಾದರೂ ಜ್ಞಾನವಿರುವುದು ಆವಶ್ಯಕವಾಗಿದೆ. ಎಣ್ಣೆಯಿಂದ ಹತ್ತಿಕೊಂಡ ಬೆಂಕಿ, ವಿದ್ಯುತ್ ಉಪಕರಣಗಳಿಂದ ಹತ್ತಿಕೊಂಡ ಬೆಂಕಿ, ಇಂತಹ ವಿವಿಧ ಬೆಂಕಿಗಳನ್ನು ವಿವಿಧ ಪದ್ಧತಿಗಳಿಂದ ನಂದಿಸಬೇಕಾಗುತ್ತದೆ. ಇದರ ಜ್ಞಾನವಿರಬೇಕು.

ಈ ಜ್ಞಾನವನ್ನು ಪಡೆಯಲು ಸನಾತನದ ಅಗ್ನಿಶಮನ ತರಬೇತಿ ಈ ಗ್ರಂಥವು ಲಭ್ಯವಿದೆ.

ಈ. ಯುದ್ಧಕಾಲದಲ್ಲಿ ವೈದ್ಯಕೀಯ ಸಹಾಯ ಬೇಗ ದೊರಕುವುದು ಕಠಿಣವಿರುತ್ತದೆ. ಅಂತಹ ಸಮಯದಲ್ಲಿ ರೋಗಿಗೆ ನಾವು ಬಿಂದುಒತ್ತಡ ಮಾಡಿ, ಅವರಿಗಾಗಿ ನಾಮಜಪವನ್ನು ಮಾಡಿ ಅವರ ಮೇಲೆ ಪ್ರಾಣಶಕ್ತಿವಹನ ಪದ್ಧತಿಯಿಂದ ಉಪಾಯ ಮಾಡಿ ಕೆಲವು ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಮತ್ತು ಕೆಲವು ರೋಗಗಳಲ್ಲಿ ರೋಗಿಯ ನೋವನ್ನು ಕಡಿಮೆ ಮಾಡಬಹುದು. ಈ ಉಪಾಯಪದ್ಧತಿಗಳ ಮಾಹಿತಿ ಪಡೆಯಲು ಸನಾತನದ ಮುಂದಿನ ಗ್ರಂಥಗಳ ಅಧ್ಯಯನವನ್ನು ಈಗಲೇ ಮಾಡಿರಿ, ಹಾಗೆಯೇ ಈ ಗ್ರಂಥಗಳನ್ನು ತಮ್ಮ ಹತ್ತಿರವಿಟ್ಟುಕೊಳ್ಳಿರಿ.

೧. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ಬಿಂದುಒತ್ತಡ

೨. ಸಾಮಾನ್ಯ ರೋಗಗಳಿಗೆ ಬಿಂದುಒತ್ತಡ ಉಪಚಾರ (ಜ್ವರ, ಮಲಬದ್ಧತೆ ಮುಂತಾದ ೮೦ ಕ್ಕಿಂತಲೂ ಹೆಚ್ಚು ಕಾಯಿಲೆಗಳಿಗೆ ಉಪಯುಕ್ತ !)

೩. ರೋಗ ನಿವಾರಣೆಗಾಗಿ ನಾಮಜಪ

೪. ನಾಮಜಪಗಳಿಂದ ದೂರವಾಗುವ ರೋಗಗಳು (ನಾಮಜಪದ ಬಗೆಗಿನ ಸೂಚನೆಗಳೊಂದಿಗೆ ಮುದ್ರೆ ಮತ್ತು ನ್ಯಾಸವೂ ಸಮಾವೇಶಗೊಂಡಿದೆ)

೫. ರೋಗಗಳಿಗನುಸಾರ ನಾಮಜಪ ಉಪಾಯ (ದೇವತೆಗಳ ಜಪ, ಬೀಜಮಂತ್ರ, ಅಂಕಜಪ ಇತ್ಯಾದಿ)

೬. ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು?

೭. ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಮಾಡಬೇಕಾದ ಉಪಾಯ

ಈ ಗ್ರಂಥಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !

ಉ. ಯುದ್ಧಕಾಲದಲ್ಲಿ ಭೂಮಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಅಡಗಿಕೊಳ್ಳುವುದು ಎಲ್ಲಕ್ಕಿಂತ ಸುರಕ್ಷಿತವಾಗಿರುತ್ತದೆ. ಇಂತಹ ನೆಲಮಾಳಿಗೆಗಳು ನಮ್ಮ ಊರಲ್ಲಿ ಎಲ್ಲೆಲ್ಲಿವೆ ಎಂಬುದರ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಗರದಲ್ಲಿನ ಮೆಟ್ರೋ ರೈಲು ನಿಲ್ದಾಣಗಳು ಹೆಚ್ಚಾಗಿ ಭೂಮಿಯ ಕೆಳಗೆ ಇರುತ್ತವೆ. ಇಂತಹ ಭೂಮಿಯ ಕೆಳಗಿರುವ ಮೆಟ್ರೋ ನಿಲ್ದಾಣಗಳಲ್ಲಿಯೂ ನಾವು ಸ್ವಲ್ಪ ಸಮಯ ಅಡಗಿಕೊಳ್ಳಬಹುದು. ಕೆಲವೊಮ್ಮೆ ದೊಡ್ಡ ಚತುಷ್ಪದ ರಸ್ತೆಗಳನ್ನು ದಾಟಲು ಭೂಮಿಯ ಕೆಳಗೆ ಪಾದಚಾರಿಗಳಿಗಾಗಿ ಮಾರ್ಗವಿರುತ್ತದೆ. ಇಂತಹ ಸ್ಥಳದಲ್ಲಿಯೂ ನಾವು ಅಡಗಿಕೊಳ್ಳಬಹುದು. ಬಾಂಬ್‌ಸ್ಫೋಟ, ಅಣುಬಾಂಬ್ ಸ್ಫೋಟ್‌ನಿಂದ ಹರಡುವ ಘಾತಕ ವಿಕಿರಣಗಳು ಇವುಗಳಿಂದ ಈ ಭೂಮಿಯ ಕೆಳಗಿನ ಸ್ಥಾನಗಳು ನಮ್ಮನ್ನು ರಕ್ಷಿಸುತ್ತವೆ.

ಊ. ನಮ್ಮ ಊರಲ್ಲಿ ಅಥವಾ ನಗರಗಳಲ್ಲಿ ವಿವಿಧ ಸೇವಾಭಾವಿ ಸಂಘಟನೆಗಳಿರುತ್ತವೆ. ಅವುಗಳ ಮಾಹಿತಿ ಪಡೆದುಕೊಂಡು ಅವರ ಪರಿಚಯ ಮಾಡಿಕೊಳ್ಳಬೇಕು. ನಮ್ಮ ಮೇಲೆ ಅಥವಾ ನಮ್ಮ ಅಕ್ಕಪಕ್ಕದ ಪರಿಸರದಲ್ಲಿ ಯಾವುದಾದರೊಂದು ಕಠಿಣ ಪ್ರಸಂಗಗಳಾದರೆ ಅವರ ಸಹಾಯ ಪಡೆಯಲು ಸಾಧ್ಯವಾಗುವುದು. ಅವರ ಸಂಪರ್ಕ ಕ್ರಮಾಂಕವನ್ನು ಪಡೆಯಬೇಕು. ನಮ್ಮ ಸಂಪರ್ಕ ಕ್ರಮಾಂಕವನ್ನು ಅವರಿಗೆ ನೀಡಬೇಕು, ಅದರಿಂದ ಸಮಯ ಬಂದಾಗ
ನಾವು ಸಹ ಅವರ ಸಹಾಯಕ್ಕೆ ಹೋಗಲು ಸಾಧ್ಯವಾಗುತ್ತದೆ.

೪. ಆಧ್ಯಾತ್ಮಿಕ ಸ್ತರದ ಸಿದ್ಧತೆ

ಅ. ಹಿಂದೂ ಸಂಸ್ಕೃತಿಯಲ್ಲಿ ತಿಳಿಸಿರುವ ಆಚಾರಧರ್ಮವನ್ನು ಪಾಲಿಸಿ. ಆಚಾರಧರ್ಮದ ಪಾಲನೆಯನ್ನು ಮಾಡಿದರೆ ನಮ್ಮ ಪ್ರತಿಯೊಂದು ಕೃತಿ ಸಾತ್ತ್ವಿಕವಾಗಿ ನಮಗೆ ಚೈತನ್ಯ ಸಿಗುತ್ತದೆ, ಇದರ ಹೊರತಾಗಿ ನಮಗೆ ಈಶ್ವರನವರೆಗೆ ಹೋಗಲು ಸಾಧ್ಯವಾಗುತ್ತದೆ. ಆಚಾರಧರ್ಮದ ಪಾಲನೆ ಮಾಡುವುದರಿಂದ, ಅಂದರೆ ಧರ್ಮಾಚರಣೆ ಮಾಡುವುದರಿಂದ ನಮ್ಮ ವೃತ್ತಿಯು ಸಾತ್ತ್ವಿಕವಾಗುತ್ತದೆ ಮತ್ತು ನಮ್ಮ ಮಾರ್ಗಕ್ರಮಣ ಈಶ್ವರನ ದಿಕ್ಕಿನತ್ತ ಬೇಗನೆ ಆಗುತ್ತದೆ. ಆಚಾರಧರ್ಮದ ಪಾಲನೆಯಿಂದ ವ್ಯಕ್ತಿಯ ವ್ಯಾವಹಾರಿಕ ಜೀವನದಲ್ಲಿಯೂ ಅಭಿವೃದ್ಧಿಯಾಗಲು ಸಹಾಯವಾಗುತ್ತದೆ, ಉದಾ. ಸತ್ಯದಿಂದ ನಡೆಯಬೇಕು – ಇದನ್ನು ಪಾಲಿಸುವುದರಿಂದ ವ್ಯಕ್ತಿಗೆ ಸುಳ್ಳು ಮಾತನಾಡುವುದರಿಂದ ಬರುವ ಪಾಪವು ತಗಲುವುದಿಲ್ಲ, ಹಾಗೆಯೇ ಅವನಲ್ಲಿ ನೈತಿಕತೆ ಮತ್ತು ಸುಸಂಸ್ಕೃತಿಯ ಗುಣಗಳ ವಿಕಾಸವೂ ಆಗುತ್ತದೆ. ಈಶ್ವರನು ಇಂತಹ ಸತ್ತ್ವಗುಣಿ ವ್ಯಕ್ತಿಯನ್ನೇ ಅವನ ಕಠಿಣ ಕಾಲದಲ್ಲಿ ರಕ್ಷಣೆ ಮಾಡುತ್ತಾನೆ. ದೈನಂದಿನ ಜೀವನದಲ್ಲಿ ಆಚಾರಧರ್ಮವನ್ನು ಹೇಗೆ ಪಾಲಿಸಬೇಕು ಎಂದು ತಿಳಿದುಕೊಳ್ಳಲು ಸನಾತನದ ಮುಂದಿನ ಪ್ರಾಥಮಿಕ ಗ್ರಂಥವನ್ನು ಓದಬೇಕು.

೧. ಆಚಾರಧರ್ಮದ ಪ್ರಾಸ್ತಾವಿಕ

೨. ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ

೩. ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ

ಈ ಗ್ರಂಥಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !

ಆ. ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರವನ್ನು ಮಾಡಬೇಕು. ಇದೂ ಸಾಧ್ಯವಾಗದಿದ್ದರೆ ಯಾವುದಾದರೊಂದು ಸಮಯ ಮಾಡಬೇಕು. ಅಗ್ನಿಹೋತ್ರ ಮಾಡುವುದರಿಂದ ನಮ್ಮ ಸುತ್ತಲಿನ ವಾತಾವರಣವು ಜಂತು ಮುಕ್ತ, ಶುದ್ಧ, ಪ್ರಾಣಶಕ್ತಿಯುಕ್ತ ಮತ್ತು ಪವಿತ್ರವಾಗುತ್ತದೆ. ಪ್ರತಿದಿನ ಮನೆಯಲ್ಲಿ ಅಗ್ನಿಹೋತ್ರವನ್ನು ಮಾಡಿದರೆ ನಮ್ಮ ಮನೆಯಲ್ಲಿ ಎಲ್ಲರ ಆರೋಗ್ಯವೂ ಚೆನ್ನಾಗಿರುತ್ತದೆ, ಯಾರಿಗೂ ರೋಗರುಜಿನಗಳು ತಗಲುವುದಿಲ್ಲ, ಹಾಗೆಯೇ ಪ್ರಕ್ಷೇಪಿತವಾದ ಚೈತನ್ಯದಿಂದ ಎಲ್ಲರಿಗೂ ಆಧ್ಯಾತ್ಮಿಕ ದೃಷ್ಟಿಯಿಂದಲೂ ಲಾಭವಾಗುತ್ತದೆ. ಕೊರೊನಾ ಮಹಾಮಾರಿಯ ಅವಧಿಯಲ್ಲಿ ಅಗ್ನಿಹೋತ್ರ ಮಾಡುತ್ತಿರುವ ವ್ಯಕ್ತಿಗೆ ಕೊರೊನಾ ತಗಲದಿರುವುದು ಗಮನಕ್ಕೆ ಬಂದಿದೆ. ಸದ್ಯ ಅನೇಕ ರಾಷ್ಟ್ರಗಳ ಬಳಿ ರೋಗರುಜಿನಗಳನ್ನು ಹರಡುವ ಜೈವಿಕ ಅಸ್ತ್ರಗಳೂ ಇವೆ. ಅಗ್ನಿಹೋತ್ರ ಮಾಡುವುದರಿಂದ ಯುದ್ಧದಲ್ಲಿ ಇಂತಹ ಅಸ್ತ್ರಗಳ ಬಳಕೆಯಾದರೆ ಹರಡುವ ಮಹಾಮಾರಿಗಳಿಂದ, ಹಾಗೆಯೇ ಅಣುಬಾಂಬ್‌ನ ಸ್ಫೋಟ್‌ನಿಂದ ಹರಡುವ ಘಾತಕ ಕಿರಣಗಳಿಂದಲೂ ರಕ್ಷಣೆಯಾಗಲಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸನಾತನದ ಅಗ್ನಿಹೋತ್ರ ಈ ಗ್ರಂಥವನ್ನು ಓದಬೇಕು.

ಇ. ದೇವರ ಕೃಪಾಶೀರ್ವಾದವನ್ನು ಪಡೆಯಲು ಪ್ರತಿದಿನ ಕನಿಷ್ಠ ೨ ಗಂಟೆಗಳ ಕಾಲ ತಮ್ಮ ಉಪಾಸ್ಯದೇವತೆಯ ನಾಮಜಪವನ್ನು ಮಾಡಬೇಕು. ಹಾಗೆ ಯಾವುದೇ ಉಪಾಸ್ಯದೇವತೆ ಇಲ್ಲದಿದ್ದರೆ, ಭಗವಾನ ಶ್ರೀಕೃಷ್ಣನ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವನ್ನು ಮಾಡಬೇಕು. ದುಃಖದ, ಹಾಗೆಯೇ ಆನಂದದ ಪ್ರಸಂಗಗಳಲ್ಲಿಯೂ ದೇವರ ಸ್ಮರಣೆಯನ್ನು ಮಾಡಬೇಕು; ಏಕೆಂದರೆ ಕಠಿಣ ಪ್ರಸಂಗದಲ್ಲಿ ಅವನೇ ನಮ್ಮನ್ನು ರಕ್ಷಿಸುವನು, ಎಂಬುದನ್ನು ಗಮನದಲ್ಲಿಡಬೇಕು. ದೇವರ ಸ್ಮರಣೆಯನ್ನು ಮಾಡದಿದ್ದರೆ, ಅವನಿಗೆ ಮೊರೆಯಿಡದಿದ್ದರೆ, ನಮ್ಮ ಸಹಾಯಕ್ಕೆ ಅವನು ಏಕೆ ತಾನೆ ಧಾವಿಸಿ ಬರುವನು ! ದೇವರ ಭಕ್ತರಾದರೆ, ಅವನು ನಮ್ಮ ರಕ್ಷಣೆಯನ್ನು ಮಾಡುವನು, ಎಂಬ ದೃಢ ಶ್ರದ್ಧೆ ನಮ್ಮಲ್ಲಿ ನಿರ್ಮಾಣವಾಗುತ್ತದೆ ಮತ್ತು ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಸಾಧ್ಯವಾಗುತ್ತದೆ. ‘ನನ್ನ ಭಕ್ತನು ನಾಶವಾಗಲಾರನು’, ಎಂದು ದೇವರು ಹೇಳಿದ್ದಾರೆ ಅಲ್ಲವೆ !

ಈ. ಧರ್ಮದ ರಕ್ಷಣೆಯನ್ನು ಮಾಡಿರಿ! ‘ಧರ್ಮದ ವಿನಾಶವನ್ನು ತೆರೆದ ಕಣ್ಣುಗಳಿಂದ ನೋಡುವವನು ಮಹಾಪಾಪಿಯಾಗಿರುತ್ತಾನೆ ಮತ್ತು ಧರ್ಮರಕ್ಷಣೆಗಾಗಿ ಪರಿಶ್ರಮ ಪಡುವವನು ಮುಕ್ತಿಯ ಅಧಿಕಾರಿಯಾಗುತ್ತಾನೆ’ ಎಂಬ ಧರ್ಮವಚನವಿದೆ. ಹಾಗೆಯೇ ‘ಯಾರು ಧರ್ಮದ ರಕ್ಷಣೆಯನ್ನು ಮಾಡುವರೋ, ಅವರ ರಕ್ಷಣೆಯನ್ನು ಸ್ವತಃ ಧರ್ಮವು (ಈಶ್ವರನು) ಮಾಡುತ್ತದೆ’, ಎಂಬ ಧರ್ಮವಚನವು ಸಹ ಇದೆ. ಧರ್ಮರಕ್ಷಣೆ ಮಾಡುವುದು, ಇದು ಸದ್ಯದ ಕಾಲಕ್ಕನುಸಾರ ಆವಶ್ಯಕವಾಗಿರುವ ಧರ್ಮ ಪಾಲನೆಯೇ ಆಗಿದೆ. ಧರ್ಮರಕ್ಷಣೆಗಾಗಿ ಕೌರವರೊಂದಿಗೆ ಹೋರಾಡಿದುದರಿಂದ ಶಿಷ್ಯ ಅರ್ಜುನನು ಗುರು ಶ್ರೀಕೃಷ್ಣನಿಗೆ ಪ್ರಿಯನಾದನು. ಸಂಕ್ಷಿಪ್ತವಾಗಿ ಹೇಳುವುದಾದರೆ ಧರ್ಮರಕ್ಷಣೆಗಾಗಿ ಕೃತಿ ಮಾಡಿದರೆ, ನಮ್ಮ ಮೇಲೆ ಈಶ್ವರನ ಕೃಪೆಯಾಗುತ್ತದೆ. ಸದ್ಯ ಧರ್ಮದ್ರೋಹಿ ಮತ್ತು ಹಿಂದೂದ್ವೇಷಿಗಳು ರಾಜಾರೋಷವಾಗಿ ಸನಾತನ ಹಿಂದೂ ಧರ್ಮದ ಮೇಲೆ ಆಘಾತವನ್ನು ಮಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿದ್ದು ಮೊದಲಿಗೆ ಅವರಿಗೆ ಪ್ರಬೋಧನೆ ಮಾಡಿ. ಆದರೂ ಅವರು ಕೇಳದಿದ್ದರೆ ಅವರನ್ನು ನಿಷೇಧಿಸುತ್ತಾ ಅವರನ್ನು ಕಾನೂನುರೀತ್ಯಾ ವಿರೋಧಿಸಿ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೬.೩.೨೦೨೨)

Leave a Comment