ವಿವಿಧ ಕಠಿಣ ಪ್ರಸಂಗಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬೇಕು ಎಂದು ಪ್ರಸಂಗಗಳ ಅವಲೋಕನೆಗಾಗಿ ಉಪಯೋಗಿಸುವ ಅ ೩ ಸ್ವಯಂಸೂಚನೆ ಪದ್ಧತಿ !

ದೈನಂದಿನ ಜೀವನದಲ್ಲಿ ವಿವಿಧ ಪ್ರಸಂಗಗಳನ್ನು ಎದುರಿಸುವಾಗ ಕೆಲವರ ಮನಸ್ಸಿನಲ್ಲಿ ಒತ್ತಡ ನಿರ್ಮಾಣವಾಗುತ್ತದೆ. ಜನಸಂದಣಿಯಿರುವ ಸ್ಥಳದಲ್ಲಿ ಒಬ್ಬಂಟಿಯಾಗಿ ಪ್ರವಾಸ ಮಾಡಲು ಭಯವೆನಿಸುವುದು, ಹೆದ್ದಾರಿಯಲ್ಲಿ ವಾಹನವನ್ನು ಓಡಿಸಲು ಆತ್ಮವಿಶ್ವಾಸವಿಲ್ಲದಿರುವುದು ಇತ್ಯಾದಿ ಸಂದರ್ಭಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅನೇಕ ಸಾಧಕರಿಗೆ ಭಯವೆನಿಸುವುದು, ಮನಸ್ಸುಬಿಚ್ಚಿ ಮಾತನಾಡಲು ಹಿಂಜರಿಕೆ ಈ ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ವೇದಿಕೆಯ ಮೇಲೆ ಮಾತನಾಡಲು ಭಯ ಇರುವುದರಿಂದ ಕಾರ್ಯಕ್ರಮದ ನಿರೂಪಣೆ ಮಾಡುವುದು, ಸಭೆ ಅಥವಾ ಬೈಠಕಗಳಲ್ಲಿ ವಿಷಯಗಳನ್ನು ಮಂಡಿಸುವುದು, ಸಾಧಕರಿಗೆ ಸತ್ಸಂಗವನ್ನು ತೆಗೆದುಕೊಳ್ಳುವುದು, ಮುಂತಾದ ಸೇವೆಗಳನ್ನು ಮಾಡಲು ಭಯವಾಗುತ್ತದೆ. ಕೆಲವರಿಗೆ ಬೈಠಕದಲ್ಲಿ … Read more

ವ್ಯಕ್ತವಾಗುವ ಅಥವಾ ಮನಸ್ಸಿನಲ್ಲಿ ಮೂಡುವ ಅಯೋಗ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಲು ಉಪಯೋಗಿಸಲ್ಪಡುವ ಸ್ವಯಂಸೂಚನೆಯ ಪದ್ಧತಿ ಅ ೨

‘ಮನಸ್ಸಿನಲ್ಲಿರುವ ಅಯೋಗ್ಯ ಪ್ರತಿಕ್ರಿಯೆಯಿಂದ ನಿರ್ಮಾಣವಾಗುವ ಅಸ್ವಸ್ಥತೆಯು ದೂರಗೊಂಡು ಯೋಗ್ಯ ಪ್ರತಿಕ್ರಿಯೆ ನಿರ್ಮಾಣವಾಗಬೇಕೆಂದು’, ‘ಅ ೨’ ಈ ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಲು ವಿವಿಧ ಸ್ವಯಂಸೂಚನೆ ಪದ್ಧತಿಗಳ ಅಸಾಧಾರಣ ಮಹತ್ವ !

ನಮ್ಮಿಂದ ನಡೆದ ಅಯೋಗ್ಯ ಕೃತಿ, ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಅಥವಾ ಭಾವನೆ ಮತ್ತು ವ್ಯಕ್ತಗೊಂಡ ಅಥವಾ ನಮ್ಮ ಮನಸ್ಸಿನಲ್ಲಿ ಬಂದ ಅಯೋಗ್ಯ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ನಾವೇ ನಮ್ಮ ಅಂತರ್ಮನಸ್ಸಿಗೆ (ಚಿತ್ತಕ್ಕೆ) ಸೂಚನೆ ನೀಡುವುದು ಎಂದರೆ ‘ಸ್ವಯಂಸೂಚನೆ’ ಎಂದರ್ಥ.

ಸಾಧನೆಗೆ ಸ್ವಭಾವದೋಷ ನಿರ್ಮೂಲನೆಯ ಪ್ರಯತ್ನವನ್ನು ಜೊತೆಗೂಡಿಸುವುದು ಅನಿವಾರ್ಯ

ಸ್ವಭಾವದೋಷಗಳು ವ್ಯಕ್ತಿಯ ಸುಖ-ಸಮಾಧಾನಕ್ಕೆ ಅಡಚಣೆಯಾಗಿರುತ್ತವೆ ಮತ್ತು ಸ್ವಭಾವದೋಷಗಳಿಂದ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಒತ್ತಡ ನಿರ್ಮಾಣವಾಗುತ್ತದೆ. 

ಸ್ವಭಾವದೋಷ (ಷಡ್ವೈರಿಗಳ) ನಿರ್ಮೂಲನ ಪ್ರಕ್ರಿಯೆ

ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಒಳ್ಳೆಯ ಗುಣಗಳ ಸಂಸ್ಕಾರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ವೈರಿ) ನಿರ್ಮೂಲನ ಪ್ರಕ್ರಿಯೆ’ ಎನ್ನುತ್ತಾರೆ.

ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು ಕಲಿಸುವ ಆ ೨ ಈ ಸ್ವಯಂಸೂಚನೆ ಪದ್ಧತಿ !

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಠಿಣ ಪ್ರಸಂಗಗಳು ಘಟಿಸುತ್ತವೆ. ಇಂತಹ ಪ್ರಸಂಗದಲ್ಲಿ ಅಸಹಾಯಕರಾದರೆ ಮನಸ್ಸು ದುರ್ಬಲವಾಗುತ್ತದೆ. ತೀವ್ರ ವೇದನೆ ಅಥವಾ ತೀವ್ರ ಅನಾರೋಗ್ಯ, ಅಪಘಾತ, ನಿಧನ, ನೈಸರ್ಗಿಕ ವಿಪತ್ತುಗಳು, ಅಸಹಾಯಕತೆ ಇತ್ಯಾದಿ ಕಠಿಣ ಪ್ರಸಂಗಗಳನ್ನು ಅಥವಾ ಒತ್ತಡವನ್ನು ನಿರ್ಮಿಸುವ ಕೆಲವು ಪ್ರಸಂಗಗಳಲ್ಲಿ ನಮ್ಮಿಂದ ಏನೂ ಮಾಡಲು ಆಗದಿದ್ದಾಗ, ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಆ ಸಮಸ್ಯೆಗಳನ್ನು ನೋಡುವುದೇ ಉಪಾಯವಾಗಿರುತ್ತದೆ. ಇದಕ್ಕಾಗಿ ‘ಆ ೨ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡುವುದು ಆವಶ್ಯಕವಾಗಿದೆ. ಈ ಸ್ವಯಂಸೂಚನೆ ಪದ್ಧತಿಯಿಂದ ಸಿದ್ಧಪಡಿಸಲಾಗಿರುವ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ … Read more

ಅಧಿಕಾರ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಸ್ವಭಾವದೋಷ ದೂರಗೊಳಿಸಿ ಅಥವಾ ಪರಿಸ್ಥಿತಿಯನ್ನು ಬದಲಾಯಿಸಿ ಅಧಿಕಾರಿ ವ್ಯಕ್ತಿಗೆ ಬರುವ ಒತ್ತಡವನ್ನು ದೂರಗೊಳಿಸಲು ಸಹಾಯ ಮಾಡುವ ಆ ೧ ಈ ಸ್ವಯಂಸೂಚನಾ ಪದ್ಧತಿ

ಇತರ ವ್ಯಕ್ತಿಗಳ ತಪ್ಪುಗಳಿಂದಾಗಿ ಮನಸ್ಸಿನಲ್ಲಿ ಮೂಡುವ ಒತ್ತಡ ಅಥವಾ ಚಿಂತೆ ಮುಂತಾದ ಅಯೋಗ್ಯ ಪ್ರತಿಕ್ರಿಯೆಗಳನ್ನು ಎದುರಿಸಲು ಸ್ವತಃ ಯೋಗ್ಯ ದೃಷ್ಟಿಕೋನ ತೆಗೆದುಕೊಳ್ಳುವುದರೊಂದಿಗೆ ಎದುರಿನ ವ್ಯಕ್ತಿಯಲ್ಲಿಯೂ ಸುಧಾರಣೆಯಾಗುವುದು ಆವಶ್ಯಕವಿರುತ್ತದೆ

ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು ಉಪಯೋಗಿಸುವ ‘ಅ ೧’ ಸ್ವಯಂಸೂಚನಾ ಪದ್ಧತಿ !

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳಿಗೆ ಕಾಲಾನುಸಾರ ಅತ್ಯಧಿಕ ಮಹತ್ವವಿದೆ. ಈ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಮಾಡಲು ನಿಯಮಿತ ಪ್ರಯತ್ನಗಳ ಪೈಕಿ ಮಹತ್ವದ ಘಟಕವೆಂದರೆ ಸ್ವಯಂಸೂಚನೆಗಳನ್ನು ತಯಾರಿಸುವುದು ! ಸ್ವಯಂಸೂಚನೆಗಳನ್ನು ಯೋಗ್ಯ ಸ್ವಯಂಸೂಚನಾ ಪದ್ಧತಿಯಂತೆ ನೀಡಿದರೆ ಸ್ವಭಾವದೋಷ ಮತ್ತು ಅಹಂಗಳ ತೀವ್ರತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಆನಂದ ಹೆಚ್ಚಾಗುತ್ತದೆ. ಅದಕ್ಕಾಗಿ ವಿವಿಧ ಸ್ವಯಂಸೂಚನಾ ಪದ್ಧತಿಗಳ ಸವಿಸ್ತಾರ ಮಾಹಿತಿ ಮತ್ತು ಮಾರ್ಗದರ್ಶಕ ಅಂಶಗಳನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನದಲ್ಲಿ ಅ ೧ ಈ ಸ್ವಯಂಸೂಚನಾ ಪದ್ಧತಿಯನ್ನು ನೋಡೋಣ. ಅನೇಕ ಸಾಧಕರು ಅ ೧ ಈ … Read more

ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !

ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗೆ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂ ಹೇಗೆ ಅಡಚಣೆಯಾಗಿದೆ. ಮತ್ತು ಸಾಧಕನು ಅದನ್ನು ಹೋಗಲಾಡಿಸಲು ಯಾವ ರೀತಿಯ ಪ್ರಯತ್ನ ಮಾಡಬೇಕೆಂದು ಶ್ರೀ. ದೇಯಾನ್ ಗ್ಲೇಶ್ಚಿಚ್ ಇವರ ಆಧ್ಯಾತ್ಮಿಕ ಸ್ತರದ ಲೇಖನದಲ್ಲಿ ತಿಳಿಯುತ್ತದೆ.