ಅನೇಕ ಸಾಧಕರಿಗೆ ನಾಮಜಪ ಮಾಡುವಾಗ ಅಥವಾ ಇತರ ಸಮಯದಲ್ಲಿ ‘ನನ್ನ ಮೃತ್ಯುವಾಗುತ್ತದೆ’, ಈ ರೀತಿಯ ದೃಶ್ಯ ಕಾಣಿಸುತ್ತದೆ ಅಥವಾ ಮನಸ್ಸಿನಲ್ಲಿ ಆ ರೀತಿಯ ವಿಚಾರ ಬರುತ್ತದೆ. ಕೆಲವರಿಗೆ ‘ನನ್ನ ಮೃತ್ಯುವಿನ ಮೊದಲು ಅಪೇಕ್ಷಿತ ರೀತಿಯಲ್ಲಿ ಸಾಧನೆಯಲ್ಲಿ ನನ್ನ ಪ್ರಗತಿ ಆಗದಿದ್ದರೆ ನನ್ನ ಜನ್ಮ ವ್ಯರ್ಥವಾಗಬಹುದು’, ಎಂದೆನಿಸುತ್ತದೆ ಮತ್ತು ಈ ವಿಚಾರದಿಂದ ಅಸ್ವಸ್ಥರಾಗುತ್ತಾರೆ.
‘ಈ ರೀತಿಯ ದೃಶ್ಯ ಕಾಣಿಸುವುದು ಅಥವಾ ಮನಸ್ಸಿನಲ್ಲಿ ವಿಚಾರ ಬರುವುದು’, ಇದು ಆಧ್ಯಾತ್ಮಿಕ ತೊಂದರೆಯ ಲಕ್ಷಣವಾಗಿದೆ. ಈ ವಿಚಾರದ ತೀವ್ರತೆ ಹೆಚ್ಚಾಗಿದ್ದರೆ, ದಿನದಲ್ಲಿ ಹೆಚ್ಚು ಸಮಯ ಮುಂದೆ ನೀಡಿದ ಸ್ವಯಂಸೂಚನೆಯನ್ನು ಕೊಡಿ,
ಯಾವಾಗ ನನಗೆ ನನ್ನ ಮೃತ್ಯುವಿನ ಬಗ್ಗೆ ದೃಶ್ಯ ಕಾಣಿಸುವುದೋ ಅಥವಾ ನನ್ನ ಮನಸ್ಸಿನಲ್ಲಿ ಇದರ ಬಗ್ಗೆ ವಿಚಾರ ಬರುವುದೋ ಅಥವಾ ‘ನನ್ನಿಂದ ಅಪೇಕ್ಷಿತ ರೀತಿಯಲ್ಲಿ ಸಾಧನೆಯಾಗದೇ ಈ ಜನ್ಮ ವ್ಯರ್ಥವಾಗುವುದು, ಎಂದೆನಿಸುವುದೋ, ಆಗ ಇವೆಲ್ಲವು ಆಧ್ಯಾತ್ಮಿಕ ತೊಂದರೆಯ ಲಕ್ಷಣವಾಗಿದೆ ಎಂದು ನನಗೆ ಅರಿವಾಗುವುದು; ಅದಕ್ಕಾಗಿ ನಾನು ಅಧ್ಯಾತ್ಮಿಕ ಉಪಾಯದ ಕಡೆ ಹೆಚ್ಚು ಒತ್ತು ಕೊಡುವೆನು ಅಥವಾ ಇದರ ಬಗ್ಗೆ ಕೂಡಲೇ ಜವಾಬ್ದಾರ ಸಾಧಕರಲ್ಲಿ ಮಾತನಾಡುವೆನು.
ಈ ಸೂಚನೆಯೊಂದಿಗೆ ಸಾಧಕರು ಆಧ್ಯಾತ್ಮಿಕ ಉಪಾಯವನ್ನೂ ಹೆಚ್ಚಿಸಿರಿ, ಇಷ್ಟು ಮಾಡಿಯೂ ವಿಚಾರ ಕಡಿಮೆ ಆಗದೇ ಇದ್ದರೆ, ಆಗ ಜವಾಬ್ದಾರ ಸಾಧಕರಿಗೆ ವಿಚಾರಿಸಿರಿ. ಮೃತ್ಯುವಿನ ವಿಚಾರ ಅಥವಾ ದೃಶ್ಯದಲ್ಲಿ ಸಿಲುಕದೇ ಸಾಧನೆಯಲ್ಲಿನ ಪ್ರಯತ್ನವನ್ನು ಮುಂದುವರಿಸಿರಿ. ಈ ವಿಚಾರಗಳು ಕಡಿಮೆಯಾದ ನಂತರ ಪ್ರಕ್ರಿಯೆಗಾಗಿ ಆರಿಸಿದ ಸ್ವಭಾವದೋಷ ಅಥವಾ ಅಹಂವ ಲಕ್ಷಣದ ಮೇಲೆ ಸ್ವಯಂಸೂಚನೆಯನ್ನು ಆರಂಭಿಸಿರಿ.
ಸಾಧಕರೇ, ‘ನಮಗೆ ಕೇವಲ ಈ ಜನ್ಮದಲ್ಲಿ ಮಾತ್ರವಲ್ಲ ಜನ್ಮ-ಜನ್ಮಾಂತರದ ಹಾಗೂ ಮೃತ್ಯುವಿನ ನಂತರವೂ ಸಾಧಕರ ಅಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಮಹಾನ್ ಗುರುಗಳು ಲಭಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಸಾಧನೆಯ ಪ್ರಯತ್ನವನ್ನು ಮಾಡಿರಿ !
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧೭.೧೧.೨೦೧೭)
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಪೂರ್ವಗ್ರಹ ಎಂಬ ಸ್ವಭಾವದೋಷದ ಬಗ್ಗೆ…
ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಅಂಶಗಳು
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !