ಸಾಧನೆಯ ಪ್ರವಾಸದಲ್ಲಿ ಸಾಧಕರನ್ನು ಲೀಲಾಜಾಲವಾಗಿ ಸಗುಣದಿಂದ ನಿರ್ಗುಣದ ಕಡೆಗೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ !

Article also available in :

ಸಾಧಕರನ್ನು ಸಾಧನೆಯ ಪ್ರವಾಸದಲ್ಲಿ ಎಲ್ಲಿಯೂ ಅನುಭೂತಿಗಳಲ್ಲಿ ಅಥವಾ ಸಿದ್ಧಿಗಳಲ್ಲಿ ಸಿಲುಕಿಸದೇ ಲೀಲಾಜಾಲವಾಗಿ ಸಗುಣದಿಂದ ನಿರ್ಗುಣದ ಕಡೆಗೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

1. ಸಂತರೊಬ್ಬರಿಗೆ ‘ಕುಂಡಲಿನಿಶಕ್ತಿಯ ಜಾಗೃತಿ’ಯ ಬಗ್ಗೆ ಬಂದ ಅನುಭೂತಿ

ನಾಲ್ಕು-ಐದು ವರ್ಷಗಳ ಹಿಂದೆ ನಾವು ಪ್ರವಾಸದಲ್ಲಿರುವಾಗ ನಾನು ಒಂದು ರಾಜ್ಯದ ಓರ್ವ ಸಂತರನ್ನು ಭೇಟಿಯಾಗಿದ್ದೆ. ಆಗ ಆ ಸಂತರು, ಅವರು ಅನುಭವಿಸುತ್ತಿರುವ ಆಧ್ಯಾತ್ಮಿಕ ಸ್ಥಿತಿಯ ಬಗ್ಗೆ ನನಗೆ ಹೇಳಿದರು. ಅವರು, “ಈಗ ನನಗೆ ಅಧ್ಯಾತ್ಮದಲ್ಲಿನ ಮುಂದಿನ ಹಂತದ, ಅಂದರೆ ‘ಉನ್ಮನಿ’ ಸ್ಥಿತಿಯ ಅನುಭೂತಿಯು ಬರುತ್ತಿದೆ. ಆದುದರಿಂದ ನಾನು ಸದ್ಯ ಹೆಚ್ಚು ಸಮಯ ಮನೆಯ ಹೊರಗಡೆ ಹೋಗುವುದನ್ನು ಮತ್ತು ಸಮಾಜದ ಜನರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದ್ದೇನೆ. ಏಕೆಂದರೆ ಈ ಅವಸ್ಥೆಯಲ್ಲಿ ನಮ್ಮ ಮನಸ್ಸು ಈಶ್ವರನೊಂದಿಗೆ ಸಂಪೂರ್ಣ ಏಕರೂಪವಾಗುತ್ತದೆ. ಈ ಅವಸ್ಥೆಯನ್ನು ಪ್ರಾಪ್ತಮಾಡಿಕೊಂಡ ವ್ಯಕ್ತಿಯು ತನ್ನ ದೇಹಬುದ್ಧಿಯನ್ನು ಕಳೆದುಕೊಳ್ಳುತ್ತಾನೆ. ಕೆಲವೊಮ್ಮೆ ಇಂತಹ ವ್ಯಕ್ತಿಯು ಇತರರ ದೃಷ್ಟಿಯಿಂದ ಯಾವುದಾದರೊಂದು ಅಸಂಬದ್ಧ ಕೃತಿಯನ್ನು ಮಾಡುತ್ತಾನೆ, ಅವನು ಒಂದು ಬೇರೆಯೇ ರೀತಿಯಲ್ಲಿ ವರ್ತಿಸುತ್ತಾನೆ. ಅವನ ವರ್ತನೆಗೆ ಸಾಮಾನ್ಯ ಮನುಷ್ಯರ ಭಾಷೆಯಲ್ಲಿ ‘ಹುಚ್ಚುತನ’ ಎಂದು ಹೇಳಬಹುದು. ‘ನನ್ನಿಂದ ಹೀಗೆ ಯಾವುದೇ ತಪ್ಪಾಗಬಾರದು ಎಂಬ ಭಯದಿಂದ ನಾನು ಈಗ ಮನೆಯ ಹೊರಗಡೆ ಹೋಗುವುದನ್ನು ಮತ್ತು ಜನರನ್ನು ಭೇಟಿಯಾಗುವುದನ್ನು ತಪ್ಪಿಸುತ್ತಿದ್ದೇನೆ”, ಎಂದು ಹೇಳಿದರು.

2. ಈ ರೀತಿಯ ‘ಕುಂಡಲಿನಿಶಕ್ತಿಯ ಜಾಗೃತಿ’ಯ ಅನುಭೂತಿಯ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ 

ಇದರ ಸಂದರ್ಭದಲ್ಲಿನ ನನಗೆ ಬಂದ ಒಂದು ಅನುಭೂತಿಯನ್ನು ಇಲ್ಲಿ ಹೇಳಬೇಕೆಂದು ಅನಿಸುತ್ತದೆ. 2001 ರಲ್ಲಿ ಪ.ಪೂ. ಡಾಕ್ಟರರು ಹೇಳಿದಂತೆ ಸಂಗೀತದ ಪ್ರಯೋಗಗಳು ನಡೆಯುತ್ತಿರುವಾಗ ಒಮ್ಮೆ ನಾನು ಧ್ಯಾನಕ್ಕೆ ಕುಳಿತಿದ್ದೆನು. ಆಗ ನನಗೆ ಇದ್ದಕ್ಕಿದ್ದಂತೆಯೇ ಸ್ಥೂಲದಲ್ಲಿ, ‘ನನ್ನ ಮೂಲಾಧಾರಚಕ್ರದಿಂದ ವಿಶುದ್ಧಚಕ್ರದ ವರೆಗೆ ಊರ್ಜಾಶಕ್ತಿಯ ಒಂದು ಪ್ರವಾಹ ಬೆನ್ನುಮೂಳೆಗಳ ಒಳಗಿನಿಂದ ನೇರವಾಗಿ ಮೇಲಿನ ದಿಕ್ಕಿನಲ್ಲಿ ಹೋಗಿ ಕುತ್ತಿಗೆಯಲ್ಲಿ ಸಿಲುಕಿಕೊಂಡಿತು’ ಎಂದು ಅರಿವಾಯಿತು. ಇದಕ್ಕೂ ಮೊದಲು ನಾನು ಈ ರೀತಿಯ ಅನುಭವವನ್ನು ಎಂದಿಗೂ ಪಡೆದಿರಲಿಲ್ಲ. ನಾನು ಪರಾತ್ಪರ ಗುರು ಡಾ. ಆಠವಲೆಯವರಿಗೆ ಈ ಬಗ್ಗೆ ಕೇಳಿದಾಗ ಅವರು, “ನಿಮಗೆ ಬಂದ ಈ ಅನುಭೂತಿಯು ‘ಕುಂಡಲಿನಿಶಕ್ತಿಯ ಜಾಗೃತಿ’ಯದ್ದಾಗಿದೆ. ಹಠಯೋಗಿ, ಧ್ಯಾನಯೋಗಿ, ಶಕ್ತಿಪಾತಯೋಗಿಗಳಿಗೆ ಇದು ಒಂದು ಉಚ್ಚ ಸ್ತರದಲ್ಲಿನ ಅನುಭೂತಿಯಾಗಿದೆ; ಆದರೆ ನಮಗೆ ಇಂತಹ ಯಾವುದೇ ಶಕ್ತಿಯ ಸ್ತರದ ಅನುಭೂತಿಗಳಲ್ಲಿ ಸಿಲುಕಿಕೊಳ್ಳಲಿಕ್ಕೆ ಇಲ್ಲ’ ಎಂದು ಹೇಳಿದರು.

3. ಪರಾತ್ಪರ ಗುರು ಡಾ. ಆಠವಲೆಯವರು ಇಂತಹ ಅನುಭೂತಿಗಳಲ್ಲಿ ಸಿಲುಕುವುದು ಬೇಡ ಎಂದು ಹೇಳಿದುದರ ಕಾರಣಗಳು

ಅ. ಮನುಷ್ಯ ಜನ್ಮವು ಅತ್ಯಂತ ಕಡಿಮೆ ಕಾಲಾವಧಿಯದ್ದಾಗಿದೆ. ನಾವು ಬೇಗನೆ ಅಧ್ಯಾತ್ಮದಲ್ಲಿನ ಮುಂದಿನ ಮುಂದಿನ ಹಂತಗಳಿಗೆ ಹೋಗಬೇಕಾಗಿದೆ. ಸಾಧನೆಯ ವಿವಿಧ ಹಂತಗಳನ್ನು ಅನುಭವಿಸಿ ಅವುಗಳಿಂದ ಕಲಿತು ಮುಂದೆ ಹೋಗಬೇಕಾಗಿದೆ.

ಆ. ಸಾಧನೆಯ ವಿವಿಧ ಹಂತಗಳಾದ ‘ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ’ ಇವುಗಳ ಅನುಭವವನ್ನು ಪಡೆದುಕೊಂಡು ಮುಂದೆ ಹೋಗುವುದು ಮತ್ತು ಬೇಗನೆ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದೇ ನಮ್ಮ ಧ್ಯೇಯವಾಗಿದೆ.

ಇ. ಶಕ್ತಿಯ ಸ್ತರದ ಇಂತಹ ಅನುಭೂತಿಗಳಲ್ಲಿ ಸಿಲುಕಿದರೆ, ನಮಗೆ ಸಮಾಜದಲ್ಲಿದ್ದು ಸಮಷ್ಟಿ ಸಾಧನೆಯನ್ನು ಮಾಡಲು ಕಠಿಣವಾಗುವುದು. ಸಮಷ್ಟಿ ಸಾಧನೆಯಿಂದ ಬೇಗನೆ ಮನೋಲಯ ಮತ್ತು ಬುದ್ಧಿಲಯವಾಗುತ್ತದೆ.

4. ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಕಾಲಾನುಸಾರ ಸಾಧನೆಯ ಮಹತ್ವ 

‘ಕಾಲಾನುಸಾರ ಸಾಧನೆಯನ್ನು ಮಾಡುವುದಕ್ಕೆ’ ಸದ್ಯ ಬಹಳ ಮಹತ್ವವಿದೆ. ಇಂದು ಸಮಾಜದ ಸ್ಥಿತಿ ಬಹಳ ಕೆಟ್ಟಿದೆ. ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡುವುದು ಮಹತ್ವದ್ದಾಗಿದೆ. ಅಧ್ಯಾತ್ಮ ಪ್ರಸಾರ ಮಾಡುವುದಕ್ಕೆ ಶೇ. 80 ರಷ್ಟು ಮಹತ್ವವಿದೆ. ನೀವು ಇಂತಹ ಶಕ್ತಿಯ ಸ್ತರದಲ್ಲಿನ ಅನುಭೂತಿಗಳನ್ನು ದುರ್ಲಕ್ಷಿಸಿ, ಅಂದರೆ ನೀವು ಅವುಗಳಲ್ಲಿ ಸಿಲುಕಿಕೊಳ್ಳುವುದಿಲ್ಲ. ಶಕ್ತಿಯ ಸ್ತರದಲ್ಲಿನ ಹಂತವನ್ನು ಜೀವನದಲ್ಲಿ ಬೇಗನೆ ಮುಗಿಸಿ ಮುಂದೆ ನಡೆಯಿರಿ’.

ಅನಂತರ ನಾನು ಇಂತಹ ಅನುಭೂತಿಗಳ ಕಡೆಗೆ ಗಮನ ನೀಡಲಿಲ್ಲ. ಕೆಲವು ದಿನಗಳ ನಂತರ ನನಗೆ ಇಂತಹ ಅನುಭೂತಿಗಳು ಬರುವುದು ತಾನಾಗಿಯೇ ನಿಂತುಹೋಯಿತು. ಪ.ಪೂ. ಡಾಕ್ಟರರು ಬೇಗನೆ ನನ್ನನ್ನು ಇಂತಹ ಅನುಭೂತಿಗಳ ಹಂತದಿಂದ ಮುಂದೆ ಕರೆದುಕೊಂಡು ಹೋದರು.

5.  ವ್ಯಷ್ಟಿ ಸ್ತರದ ‘ಕುಂಡಲಿನಿಶಕ್ತಿಯ ಜಾಗೃತಿ’ಯ ಅನುಭೂತಿಯಲ್ಲಿ ಸಿಲುಕಿಕೊಂಡರೆ ಆಗುವ ಹಾನಿ

5 ಅ. ‘ಕುಂಡಲಿನಿಶಕ್ತಿಯ ಜಾಗೃತಿ’ ಇದುವೇ ಅಧ್ಯಾತ್ಮದಲ್ಲಿನ ಅಂತಿಮ ಸತ್ಯವಾಗಿದೆ ಎಂದು ತಿಳಿದು ವ್ಯಕ್ತಿಯ ಜೀವನ (ಸಾಧನೆ) ಒಂದು ಹಂತಕ್ಕೆ ಬಂದು ನಿಲ್ಲುವುದು : ‘ಕುಂಡಲಿನಿ ಶಕ್ತಿಯ ಜಾಗೃತಿಯಾಗುವುದು’, ವ್ಯಷ್ಟಿ ಅನುಭೂತಿಗಳ ಜಗತ್ತಾಗಿದೆ. ಇದರಲ್ಲಿ ‘ನಾನು ಮತ್ತು ನನ್ನ ಅನುಭೂತಿಗಳು’ ಇಷ್ಟೇ ವಿಶ್ವವು ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಜನರು ಹೆಚ್ಚಿನ ಸಲ ಇಂತಹ ಅನುಭೂತಿಗಳಿಗೆ ಮರುಳಾಗುತ್ತಾರೆ ಮತ್ತು ಅವರಿಗೆ ‘ಇದೇ ಅಂತಿಮ ಸತ್ಯವಾಗಿದೆ’ ಎಂದು ಅನಿಸುತ್ತದೆ. ನನಗೆ ಈಗ ಅಧ್ಯಾತ್ಮದಲ್ಲಿನ ಉಚ್ಚ ಸ್ತರದ ಅನುಭೂತಿಯು ಬಂದುದರಿಂದ ನನಗೆ ಸಂಪೂರ್ಣ ಜ್ಞಾನ ಪ್ರಾಪ್ತವಾಗಿದೆ’, ಎಂದು ಅನಿಸುತ್ತದೆ. ಈ ಭ್ರಮೆಯಿಂದಾಗಿ ಅವರ ಜೀವನವು ಒಂದು ಹಂತಕ್ಕೆ ಬಂದು ನಿಲ್ಲುತ್ತದೆ.

5 ಆ. ಮುಂದಿನ ಹಂತಕ್ಕೆ ಹೋಗುವ ಜಿಜ್ಞಾಸೆ ಉಳಿಯದಿರುವುದರಿಂದ ಸಾಧನೆಯಲ್ಲಿ ಅಧೋಗತಿಯಾಗುವುದು : ‘ಅಧ್ಯಾತ್ಮದಲ್ಲಿ ಮುಂದಿನ ಹಂತದಲ್ಲಿಯೂ ಏನಾದರೂ ಇರುತ್ತದೆ’, ಎಂಬ ಜಿಜ್ಞಾಸೆಯೇ ಅವರಲ್ಲಿ ಇರದಿರುವುದರಿಂದ ಈಶ್ವರನ ವ್ಯಾಪಕ ರೂಪದವರೆಗೆ ಅವರಿಗೆ ತಲುಪಲು ಸಾಧ್ಯವಾಗುವುದಿಲ್ಲ. ತದ್ವಿರುದ್ಧ ಅವರ ಅಹಂ ಹೆಚ್ಚಾಗಿ ಸಾಧನೆಯಲ್ಲಿ ಅಧೋಗತಿಯಾಗುತ್ತದೆ.

5 ಇ. ಇಂತಹ ಅನುಭೂತಿಗಳ ಯೋಗ್ಯ ಮಾಹಿತಿ ಇಲ್ಲದಿರುವುದರಿಂದ ಕೆಲವು ಜನರು ಹೆದರಿ ಸಾಧನೆಯನ್ನು ನಿಲ್ಲಿಸುತ್ತಾರೆ : ಕೆಲವು ಜನರಿಗೆ ಇಂತಹ ಅನುಭೂತಿಗಳ ಯೋಗ್ಯ ಮಾಹಿತಿ ಇಲ್ಲದಿರುವುದರಿಂದ, ಹೀಗೆನಾದರೂ ಆದರೆ ಅವರು ಹೆದರುತ್ತಾರೆ ಮತ್ತು ‘ಇನ್ನು ಮುಂದೆ ಇನ್ನೂ ಏನಾದರೂ ವಿಚಿತ್ರವಾಗುವುದು ಬೇಡ’, ಎಂದು ಸಾಧನೆ ಮಾಡುವುದನ್ನೇ ನಿಲ್ಲಿಸುತ್ತಾರೆ.

6. ಇಂತಹ ಅನುಭೂತಿಗಳಲ್ಲಿ ಸಿಲುಕದೇ ಅವುಗಳಿಂದ ಕಲಿತು ಸಾಧನೆಯಲ್ಲಿ ಮುಂದೆ ಹೋಗಲು ಅವುಗಳ ಲಾಭವನ್ನು ಪಡೆದುಕೊಳ್ಳುವುದು ಆವಶ್ಯಕವಾಗಿದೆ !

ಕೊನೆಗೆ ಎಲ್ಲವೂ ಮಾಯೆಯೇ ಆಗಿದೆ. ಕೇವಲ ‘ನಿರ್ಗುಣ ನಿರಾಕಾರ ಈಶ್ವರ’ ಇದುವೇ ಏಕೈಕ ಸತ್ಯವಾಗಿದೆ; ನಾವು ಸಾಧಕರಾಗಿರುವುದರಿಂದ ನಮಗೆ ಈ ಎಲ್ಲವುಗಳಿಂದ ಕಲಿತು ಅವುಗಳಲ್ಲಿ ಸಿಲುಕದೇ ಸಾಧನೆಯಲ್ಲಿ ಮುಂದೆ ಮುಂದೆ ಹೋಗಲು ಅವುಗಳ ಲಾಭ ಮಾಡಿಕೊಳ್ಳಬೇಕು. ‘ಯಾವುದಾದರೊಂದು ಸಿದ್ಧಿಯು ಪ್ರಾಪ್ತವಾದರೆ ಅಥವಾ ಯಾವುದಾದರೊಂದು ಸ್ಥಿತಿಯನ್ನು ಅನುಭವಿಸಿದರೆ ಅಥವಾ ಯಾವುದಾದರೊಂದು ವೈಶಿಷ್ಟ್ಯಪೂರ್ಣ ಅನುಭೂತಿ ಬಂದರೆ’, ಅವು ವರ್ತಮಾನದಲ್ಲಿ ಕಲಿಯುವುದಕ್ಕಾಗಿಯೇ ಇವೆ. ಇದರಿಂದ ನಮಗೆ ಸಾಧನೆಯ ಮಹತ್ವ ತಿಳಿಯುತ್ತದೆ. ನಮ್ಮ ಉತ್ಸಾಹವು ಹೆಚ್ಚಾಗುತ್ತದೆ.

7. ಇಂತಹ ಅನುಭವಗಳಿಂದ ಹೊಸ ಪೀಳಿಗೆಗೆ ಸಾಧನೆಯಲ್ಲಿ ಯೋಗ್ಯ ದಿಶೆ ದೊರಕಿ ಅವರ ಪ್ರಗತಿ ಬೇಗನೆ ಆಗುವುದು

ನಮ್ಮ ಅನುಭವಗಳಿಂದ ಮುಂದೆ ಜನ್ಮ ಪಡೆಯುವ ಹೊಸ ಪೀಳಿಗೆಗೆ ಕಲಿಯಲು ಸಿಗುವುದು. ಅವರಿಗೆ ಸಾಧನೆಯಲ್ಲಿ ಯೋಗ್ಯ ದಿಶೆ ಸಿಗುವುದು ಮತ್ತು ನಮ್ಮಿಂದಾದ ತಪ್ಪುಗಳು ಅವರಿಂದಾಗಲಾರವು. ಇದರಿಂದ ಸಾಧನೆಯಲ್ಲಿ ಶೀಘ್ರ ಪ್ರಗತಿಯನ್ನು ಮಾಡಿಕೊಳ್ಳಲು ಅವರಿಗೆ ಸಹಾಯವಾಗುವುದು.

8. ಸನಾತನ ಸಂಸ್ಥೆಯ ಸಾಧಕರಿಗಾಗಿ ಏಕಮೇವ ‘ಅವಸ್ಥೆ’ ಎಂದರೆ ‘ಸತತವಾಗಿ ಕಲಿಯುವ ಸ್ಥಿತಿಯಲ್ಲಿಡುವ ಶಿಷ್ಯಾವಸ್ಥೆ !’

ಸಾಧಕರು ಇಂತಹ ಯಾವುದೇ ವಿಷಯಗಳಲ್ಲಿ ಸಿಲುಕಿಕೊಳ್ಳದಿರುವುದರಿಂದ ಅವರು ಎಲ್ಲ ಅವಸ್ಥೆಗಳಲ್ಲಿ ಸ್ಥಿರವಾಗಿದ್ದು ತಮ್ಮ ನಿತ್ಯ ಕರ್ಮಗಳನ್ನೂ ಅಷ್ಟೇ ಜವಾಬ್ದಾರಿಯಿಂದ ಪೂರ್ಣಗೊಳಿಸುತ್ತಾರೆ. ‘ಸನಾತನ ಸಂಸ್ಥೆಯ ಸಾಧಕರ ಏಕಮೇವ ಅವಸ್ಥೆಯೆಂದರೆ ‘ಸತತವಾಗಿ ಕಲಿಯುವ ಸ್ಥಿತಿಯಲ್ಲಿಡುವ ಶಿಷ್ಯಾವಸ್ಥೆ’. ಕೊನೆಯವರೆಗೆ ಪ್ರತಿಯೊಬ್ಬರಿಂದ ಕಲಿಯುವುದು ಮತ್ತು ತಮ್ಮಲ್ಲಿ ಯಾವುದೇ ಪ್ರಕಾರದ ಸಂಪ್ರದಾಯಕತ್ವ ಬರಲು ಬಿಡದೇ ವ್ಯಾಪಕವಾಗಲು ಪ್ರಯತ್ನಿಸುವುದೇ ನಿಜವಾದ ಶೀಘ್ರ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವ ಸಾಧನವಾಗಿದೆ.

ಗುರುಗಳ ಕಲಿಕೆಗನುಸಾರ ಸಾದಾ ಸರಳ ರೀತಿಯಿಂದ ಕೊನೆಯವರೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದು ಮತ್ತು ಅದಕ್ಕನುಸಾರ ಸಂಪೂರ್ಣ ಸಮರ್ಪಿಸಿಕೊಂಡು ಸಮಷ್ಟಿ ಸೇವೆಯನ್ನು ಮಾಡುವುದು, ಇಷ್ಟೇ ಸಾಧಕರಿಗೆ ಗೊತ್ತಿದೆ ಮತ್ತು ಇದರಲ್ಲಿಯೇ ಅವರಿಗೆ ಆನಂದವೂ ಇದೆ.

9. ಸಾಧಕರಿಗೆ ‘ತನು, ಮನ ಮತ್ತು ಧನ’ದ ತ್ಯಾಗ ಮಾಡಲು ಕಲಿಸಿ ಮೋಕ್ಷಪ್ರಾಪ್ತಿಯ ಶೂನ್ಯದಲ್ಲಿ ಸುಲಭವಾಗಿ ಹೋಗುವ ಪ್ರಾಯೋಗಿಕ ಮಾರ್ಗ ಕಲಿಸುವ ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಸಹಜ ರೀತಿಯಿಂದ ಸಗುಣದಿಂದ ನಿರ್ಗುಣದ ಕಡೆಗೆ ಕರೆದೊಯ್ಯಲು ಆರಂಭಿಸಿದ್ದಾರೆ. ನಿರ್ಗುಣದಲ್ಲಿ ಕೊನೆಗೆ ಏನೂ ಇರುವುದಿಲ್ಲ. ಪ.ಪೂ. ಡಾಕ್ಟರರು ತನು, ಮನ ಮತ್ತು ಧನದ ತ್ಯಾಗವನ್ನು ಕಲಿಸಿ ಸಾಧಕರಿಗೆ ಒಂದು ರೀತಿಯಲ್ಲಿ ಪ್ರಾಯೋಗಿಕ ಸ್ತರದ ‘ಸ್ವತಃ ಶೂನ್ಯವಾಗುವ’ ತರಬೇತಿಯನ್ನೇ ನೀಡಿದುದರಿಂದ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳುವಾಗ ಸಾಧಕರಿಗೆ ‘ಶೂನ್ಯದಲ್ಲಿ ಹೋಗುವುದು’ ಕಠಿಣವಾಗಲಾರದು, ಎಂಬುದು ಅಷ್ಟೇ ನಿಜ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (11.4.2020)

ಇಲ್ಲಿ ಪ್ರಕಟಪಡಿಸಲಾದ ಅನುಭೂತಿಗಳು ‘ಭಾವವಿದ್ದಲ್ಲಿ ದೇವರು’ ಈ ಉಕ್ತಿಗನುಸಾರ ಸಾಧಕರ ವೈಯಕ್ತಿಕ ಅನುಭೂತಿಗಳಾಗಿವೆ. ಅವು ಎಲ್ಲರಿಗೂ ಬರುತ್ತವೆ ಎಂದೇನಿಲ್ಲ.

Leave a Comment