ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಕಲಿಯಲು ಸಿಕ್ಕಿದ ಅಂಶಗಳು

ಪ.ಪೂ. ಡಾ. ಆಠವಲೆಯೆಂದರೆ ಪರಿಪೂರ್ಣತೆ ಹಾಗೂ ಪ್ರೀತಿಯ ಮೂರ್ತಿ ಸ್ವರೂಪ ! ಸರ್ವಜ್ಞರಾದ ಪರಾತ್ಪರ ಗುರು ಡಾಕ್ಟರರು ಸ್ಪರ್ಶಿಸದಿರುವ ವಿಷಯವೇ ಇಲ್ಲ. ಅವತಾರತ್ವದ ಮಾನವೀ ಶರೀರಕ್ಕೆ ಸೀಮಿತ ನಿರ್ಬಂಧವಿದ್ದರೂ ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ, ಅಂದರೆ ಕಟ್ಟಡ ನಿರ್ಮಾಣ ಕಾರ್ಯದಿಂದ ಸಂಗೀತದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅವರು ತಮ್ಮ ಸರ್ವಜ್ಞತೆಯ ಮುದ್ರೆಯನ್ನೊತ್ತಿದ್ದಾರೆ. ಅಧ್ಯಾತ್ಮದ ಕ್ಷೇತ್ರದಲ್ಲಿನ ಅವರ ಸ್ಥಾನವಂತೂ ಸರ್ವೋಚ್ಚ ಹಾಗೂ ಅದ್ವಿತೀಯವಾಗಿದೆ. ತನ್ನ ಜೊತೆಯಲ್ಲಿಯೆ ಸಾಧಕರನ್ನೂ ತಯಾರಿಸುವ ಈ ವಿಭೂತಿ ಕಲಿಯುಗದಲ್ಲಿ ಅಮೂಲ್ಯವಾದುದು ! ಸಾಧಕರಿಗೆ ಅಪೂರ್ಣತೆಯ ಅರಿವು ಮೂಡಿಸಿ ಹಾಗೂ ಅವರಲ್ಲಿ ಪರಿಪೂರ್ಣತೆಯ ಧ್ಯಾಸವನ್ನು ನಿರ್ಮಾಣ ಮಾಡಿ ಪ್ರತಿಯೊಂದು ಕೃತಿಯನ್ನು ಪರಿಪೂರ್ಣಗೊಳಿಸಲು ಪ್ರೋತ್ಸಾಹಿಸುವ ಹಾಗೂ ಪ್ರಸಂಗಾನುಸಾರ ತನ್ನ ಕೃತಿಯಿಂದ ಕಲಿಸುವ ಪ.ಪೂ. ಡಾಕ್ಟರರ ಬಗ್ಗೆ ಎಷ್ಟು ಕೃತಜ್ಞತೆಯ ಪುಷ್ಪಗಳನ್ನು ಅರ್ಪಿಸಬೇಕು ! ತಾವು ನಿರಂತರ ಕಲಿಯುವ ಸ್ಥಿತಿಯಲ್ಲಿದ್ದು ಸಾಧಕರಿಗೆ ಸಾಧನೆಯ ಸೂಕ್ಷ್ಮತ್ವವನ್ನು ಕಲಿಸಿ ಪರಿಪೂರ್ಣತೆಯ ಕಡೆಗೆ ಒಯ್ಯುವ ಪ.ಪೂ. ಡಾಕ್ಟರರ ವಿಷಯದಲ್ಲಿ ‘ಕೃತಜ್ಞತೆ’ ಎಂಬ ಶಬ್ದವೂ ಅಪೂರ್ಣವೆನಿಸುತ್ತದೆ !
ಶ್ರೀ. ರಾಹುಲ ಕುಲಕರ್ಣಿ

ಸಾಧಕರ ಈಶ್ವರಪ್ರಾಪ್ತಿಯ ವ್ಯಷ್ಟಿ ಧ್ಯೇಯ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಸಮಷ್ಟಿ ಧ್ಯೇಯವು ಪರಸ್ಪರ ಪೂರಕ ಧ್ಯೇಯವಾಗಿದೆ, ಎಂಬುದು ಕೂಡ ಇಲ್ಲಿ ಅರಿವಾಗುತ್ತದೆ. ಅವರ ಸತ್ಸಂಗದಲ್ಲಿ ಅವರಿಂದ ಸಿಕ್ಕಿದ ಅಮೂಲ್ಯವಾದ ವಿಷಯಗಳನ್ನು ಅವರ ಶಬ್ದಗಳಲ್ಲಿಯೇ ನೀಡುತ್ತಿದ್ದೇವೆ. – ಶ್ರೀ. ರಾಹುಲ ಕುಲಕರ್ಣಿ

೧. ೨೦೦೩ – ಮೀರಜ್ ಆಶ್ರಮದ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ವಿಷಯಗಳು

೧ ಅ. ಮಾಯೆಯ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವುದು

೨೦೦೩ ರ ಮಳೆಗಾಲದ ಸಮಯದಲ್ಲಿ ಮಿರಜ್ ಆಶ್ರಮದಲ್ಲಿ ಪ.ಪೂ. ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಕ್ಕದ ಕೋಣೆಯ ಬಾಗಿಲು ಮಳೆಯಿಂದಾಗಿ ಉಬ್ಬಿಕೊಂಡಿತ್ತು. ಆಗ ದುರಸ್ತಿ ವ್ಯವಸ್ಥಾಪನೆ ವಿಭಾಗದಲ್ಲಿ ಬಡಗಿ (ಕಾರ್ಪೆಂಟರ್) ಕೆಲಸ ಮಾಡುವ ಸಾಧಕರು ಇಲ್ಲದ ಕಾರಣ ನಾನು ಆ ಬಾಗಿಲನ್ನು ತೆರೆದಾಗ ಅದು ಎಲ್ಲಿವರೆಗೆ ಬಂದು ನಿಲ್ಲುತ್ತದೆ, ಎಂದು ನೋಡಿಕೊಂಡು ಬಾಗಿಲು ಎಷ್ಟು ಉಬ್ಬಿಕೊಂಡಿದೆಯೋ, ಅಷ್ಟೇ ಭಾಗವನ್ನು ಕತ್ತರಿಸಲು ಪ್ರಾರಂಭಿಸಿದೆ. ಆಗ ಪ.ಪೂ. ಡಾಕ್ಟರರು ಹೊರಗೆ ಬಂದು, “ಜಾಗರೂಕತೆಯಿಂದ ಮಾಡು, ಬಾಗಿಲು ಅವಶ್ಯಕತೆಯಿಂದ ಹೆಚ್ಚು ಕತ್ತರಿಸಬಾರದು”, ಎಂದರು. “ಈ ಹಲಗೆಯ ಅಡ್ಡಪಟ್ಟಿಗಳು ಒಂದಾಗಿರುವಂತೆಯೇ ನಮ್ಮ ಎಲ್ಲ ಸಾಧಕರು ಒಟ್ಟಾಗಿದ್ದಾರೆ”, ಎಂದು ಪುನಃ ಹೇಳಿದರು.

೧ ಆ. ಪ್ರತಿಯೊಂದು ಕೃತಿಯನ್ನು ಮಾಡುವ ಮೊದಲು ಅದರ ಹಿಂದಿನ ಕಾರಣವನ್ನು ತಿಳಿದುಕೊಂಡು ‘ಪರಿಪೂರ್ಣ ಕೃತಿಯನ್ನು ಹೇಗೆ ಮಾಡಬೇಕು’, ಎಂಬುದನ್ನು ಕಲಿಸುವುದು

ಮೀರಜ್ ಆಶ್ರಮದಲ್ಲಿ ಒಂದು ಕಪಾಟಿಗೆ ಪರದೆಯನ್ನು ಹಾಕಲು ನಾನು ಸ್ಲ್ಯಾಬ್‌ಗೆ ತೂತು ಮಾಡುತ್ತಿದ್ದೆ. ಆ ತೂತು ಕಪಾಟಿನಿಂದ ಒಂದು ಅಡಿ ದೂರದಲ್ಲಿತ್ತು. ಆಗ ಪ.ಪೂ. ಡಾಕ್ಟರರು ಅಲ್ಲಿಗೆ ಬಂದರು ಹಾಗೂ ನಮ್ಮ ನಡುವೆ ಮುಂದಿನ ಸಂಭಾಷಣೆಯಾಯಿತು.

ಪ.ಪೂ. ಡಾಕ್ಟರ್ : ಏನು ಮಾಡುತ್ತಿದ್ದೀ? ಪರದೆಯನ್ನು ಹಾಕುವುದರಿಂದ ಕಪಾಟು ಚೆನ್ನಾಗಿ ಕಾಣಿಸಬೇಕೆಂದು ಹಾಕುತ್ತಿದ್ದಿಯಾ ಅಥವಾ ಕಪಾಟಿಗೆ ಧೂಳು ಹೋಗಬಾರದೆಂದು ಹಾಕುತ್ತಿದ್ದಿಯಾ ?

ಸಾಧಕ : ಕಪಾಟು ಚೆನ್ನಾಗಿ ಕಾಣಿಸಬೇಕೆಂದು ಹಾಕುತ್ತಿದ್ದೇನೆ.

ಪ.ಪೂ. ಡಾಕ್ಟರ್ : ನಮ್ಮ ೫ ಅಡಿ ಸ್ಥಳ ವ್ಯರ್ಥವಾಯಿತು. ಕಪಾಟಿಗೆ ಧೂಳು ತಗಲಬಾರದೆಂದು ಪರದೆಯನ್ನು ಹಾಕಲಾಗುತ್ತದೆ.

ನಂತರ ಅವರು ಈ ತಪ್ಪನ್ನು ಆಶ್ರಮ ಸೇವಕರಿಗೂ ಹೇಳಿದರು ಹಾಗೂ ಪ್ರತಿ ಬುಧವಾರ ಆಶ್ರಮದಲ್ಲಿ ನಡೆಯುವ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಸತ್ಸಂಗದಲ್ಲಿಯೂ ಹೇಳಿದರು.

೧ ಇ. ಸೇವೆ ಮಾಡುವಾಗ ಶಕ್ತಿ ಹಾಗೂ ಸಮಯವನ್ನು ಉಳಿಸಲು ಉಪಲಬ್ದವಿರುವ ಯಂತ್ರವನ್ನು ಉಪಯೋಗಿಸಲು ಹೇಳುವುದು

೨೦೦೩ ರಲ್ಲಿ ಮೀರಜ್ ಆಶ್ರಮದಲ್ಲಿ ಬಡಗಿ ಕೆಲಸದ ನಡೆಯುತ್ತಿತ್ತು. ಈ ಸೇವೆಯನ್ನು ಮಾಡುವ ಸಾಧಕರು ಗರಗಸದಿಂದ ಪ್ಲೈವುಡ್ ಕತ್ತರಿಸುವುದನ್ನು ನೋಡಿ ಪ.ಪೂ. ಡಾಕ್ಟರರು ಅದನ್ನು ‘ಪ್ಲೈವುಡ್ ಕತ್ತರಿಸುವ ಯಂತ್ರ’ದಿಂದ (‘ಕಟ್ಟರ್ ಮಶೀನ್’ನಿಂದ) ಕತ್ತರಿಸಲು ಹೇಳಿದರು. “ಆ ಯಂತ್ರ ನಮ್ಮಲ್ಲಿದೆಯಲ್ಲ”, ಎಂಬುದನ್ನು ಕೇಳಿಕೊಂಡರು ಹಾಗೂ ಇದ್ದರೆ ಅದನ್ನು ಉಪಯೋಗಿಸೋಣ”, ಎಂದು ಹೇಳಿದರು. ಅದೇ ಪದ್ಧತಿಯಲ್ಲಿ ರಾಮನಾಥಿ ಆಶ್ರಮದ ನಿರ್ಮಾಣದ ಸಮಯದಲ್ಲಿ ಕಿಟಕಿಯನ್ನು ತಯಾರಿಸುವಾಗ ಮರವನ್ನು ಕತ್ತರಿಸಲು ಯಾರಾದರೂ ಬಡಗಿ ಅಥವಾ ಸಾಧಕರು ಗರಗಸವನ್ನು ಉಪಯೋಗಿಸುವುದು ಕಾಣಿಸಿದರೆ ಪ.ಪೂ.ಡಾಕ್ಟರರು ಆ ಯಂತ್ರವನ್ನು ಉಪಯೋಗಿಸಲು ಹೇಳುತ್ತಿದ್ದರು. ‘ಯಂತ್ರದಿಂದ ಮರವನ್ನು ಕತ್ತರಿಸಿದರೆ ನಮ್ಮ ಶಕ್ತಿ ಹಾಗೂ ಸಮಯ ಉಳಿಯುತ್ತದೆ’, ಎಂದು ಅವರು ಹೇಳುತ್ತಿದ್ದರು.

೧ ಈ. ಚಿಕ್ಕಪುಟ್ಟ ದುರಸ್ತಿಗಾಗಿ ಹೊರಗಿನ ಕಾರ್ಮಿಕರನ್ನು ಕರೆಯುವ ಬದಲು ಸಾಧಕರು ಅದನ್ನು ಕಲಿತುಕೊಳ್ಳಲು ಹೇಳುವುದು

ಮೀರಜ್ ಆಶ್ರಮದಲ್ಲಿ ಒಂದು ಸಣ್ಣ ದುರಸ್ತಿಗಾಗಿ ಹೊರಗಿನಿಂದ ಕಾರ್ಮಿಕರನ್ನು ಕರೆಯಲಾಗಿತ್ತು. ಆ ವಿಷಯದಲ್ಲಿ ಮಾತನಾಡುವಾಗ ಪ.ಪೂ.ಡಾಕ್ಟರರು, “ಆ ದುರುಸ್ತಿಯನ್ನು ನಾವೇ ಕಲಿತುಕೊಳ್ಳಬೇಕು. ಆ ಕಾರ್ಮಿಕರ ಜೊತೆಗೆ ಯಾರಾದರೂ ನಿಂತು ಅದನ್ನು ಕಲಿತುಕೊಳ್ಳಬೇಕು”, ಎಂದರು.

೧ ಉ. ಸಾಧಕರು ಮಾಡುತ್ತಿದ್ದ ಕಷ್ಟದ ಕೆಲಸವನ್ನು ಸ್ವತಃ ಮಾಡಿ ನೋಡುವುದು

ಮೀರಜ್ ಆಶ್ರಮದಲ್ಲಿ ನೀರಿನ ಟಾಂಕಿಯ ಮೇಲೆ ಹತ್ತಲು ಒಂದು ಮರದ ಕಂಬಕ್ಕೆ ಸಣ್ಣ ಸಣ್ಣ ಕಟ್ಟಿಗೆಯ ತುಂಡುಗಳನ್ನು ಜೋಡಿಸಲಾಗಿತ್ತು. ಟಾಂಕಿಯಲ್ಲಿರುವ ನೀರಿನ ಮಟ್ಟವನ್ನು ನೋಡಲು ಸಾಧಕರು ಈ ಕಟ್ಟಿಗೆಗಳಿಗೆ ಕಾಲಿಟ್ಟು ಮೇಲೆ ಹೋಗಬೇಕಾಗುತ್ತಿತ್ತು. ಒಮ್ಮೆ ಇದರ ಮೇಲೆ ಕಾಲಿಟ್ಟು ನೀರಿನ ಮಟ್ಟವನ್ನು ನೋಡಲು ಶ್ರೀ. ಶಂಕರ ನರುಟೆ ಹೋಗುತ್ತಿರುವಾಗ ಪ.ಪೂ. ಡಾಕ್ಟರರು ಅವನನ್ನು ನೋಡಿದರು. ಅನಂತರ ಅವರು ಸ್ವತಃ ಆ ಕಟ್ಟಿಗೆಯ ಮೇಲೆ ಕಾಲಿಟ್ಟು ಮೇಲೆ ಹತ್ತಲು ಪ್ರಾರಂಭಿಸಿದರು. ಸಾಧಕರು ಮಾಡುತ್ತಿದ್ದ ಕಷ್ಟದ ಕೆಲಸಗಳನ್ನು ಪ.ಪೂ.ಡಾಕ್ಟರರು ಸ್ವತಃ ಮಾಡಿ ನೋಡುತ್ತಿದ್ದರು.

೧ ಊ. ವಸ್ತುಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಲು ಹೇಳುವುದು

ಒಮ್ಮೆ ನಾನು ಕನ್ಸೀಲ್ಡ್ ಪೈಪಿಂಗ್ (ಗೋಡೆಯ ಒಳಗೆ ವಿದ್ಯುತ್ ತಂತಿಗಳನ್ನು ಹಾಕಲು ಇರುವ ಪೈಪ್) ಮಾಡಲು ಗೋಡೆಯನ್ನು ಒಡೆಯುತ್ತಿದ್ದೆನು. ಗೋಡೆಯ ಇಟ್ಟಿಗೆಯ ತುಂಡು ಕೆಳಗೆ ಬಿದ್ದಾಗ ಅದನ್ನು ಒಟ್ಟುಮಾಡಲು ಕೆಳಗೆ ಗೋಣಿಗಳನ್ನು ಹಾಕಿದ್ದೆವು. ಆಗ ಪ.ಪೂ.ಡಾಕ್ಟರರು ಅಲ್ಲಿಗೆ ಬಂದರು ಹಾಗೂ ನಮ್ಮಲ್ಲಿ ಈ ಮುಂದಿನ ಸಂಭಾಷಣೆ ನಡೆಯಿತು.

ಪ.ಪೂ. ಡಾಕ್ಟರ್ : ಒಳ್ಳೆಯ ಗೋಣಿಗಳನ್ನು ಕೆಳಗೆ ಏಕೆ ಹಾಸಿದ್ದೀರಿ ?

ನಾನು : ಅದು ಹರಿದಿರುವ ಗೋಣಿ; ಆದರೆ ಅದರ ಮೇಲಿನ ಭಾಗ ಚೆನ್ನಾಗಿದೆ.

ಪ.ಪೂ.ಡಾಕ್ಟರ್ : ಅದರ ಮೇಲಿನ ಭಾಗ ಚೆನ್ನಾಗಿರುವುದರಿಂದ ನಾವು ಅದನ್ನು ಕುಳಿತುಕೊಳ್ಳಲು ಉಪಯೋಗಿಸಬಹುದು.

೨. ೨೦೦೫ (ರಾಮನಾಥಿ ಆಶ್ರಮದ ಕಾಮಗಾರಿಯ ಬಗೆಗಿನ ಅಂಶಗಳು)

೨ ಅ. ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿರುವ ಶಕ್ತಿಗಳಿಗೆ ಪಾರ್ಥಿಸಲು ಹೇಳುವುದು

೨೦೦೫-೨೦೦೬ ರಲ್ಲಿ ರಾಮನಾಥಿ ಆಶ್ರಮದ ಪಕ್ಕದ ರಸ್ತೆಯ ಕೆಲಸ ನಡೆದಿತ್ತು. ಆ ಕೆಲಸದ ಅನುಭವವಿರುವ ಓರ್ವ ಸಾಧಕನು ರಸ್ತೆಯ ಕೆಲಸದ ಮೇಲ್ವಿಚಾರಣೆಯನ್ನು (Supervision) ಮಾಡುತ್ತಿದ್ದನು. ಮರುದಿನ ಅವನ ಕಾಲು ಊದಿಕೊಂಡಿತು. ಅವನು ತನ್ನ ಊದಿಕೊಂಡ ಕಾಲನ್ನು ಪ.ಪೂ. ಡಾಕ್ಟರರಿಗೆ ತೋರಿಸಿದಾಗ, ಅವರು ಅವನಿಗೆ, ರಸ್ತೆಯ ಕೆಲಸವನ್ನು ಮಾಡುವಾಗ ಗಿಡಗಳನ್ನು ಕತ್ತರಿಸುವ ಮೊದಲು ಗಿಡಗಳಲ್ಲಿ ವಾಸಿಸುವ ಶಕ್ತಿಗಳಿಗೆ ಪ್ರಾರ್ಥನೆ ಮಾಡಬೇಕು. ಇಲ್ಲದಿದ್ದರೆ, ತಮ್ಮ ಮನೆ ಬೀಳುತ್ತಿರುವಾಗ ಯಾರಿಗಾದರೂ ಸರಿ ಕೋಪ ಬಂದೇ ಬರುತ್ತದೆ ಎಂದರು.

೨ ಆ. ಸಾಮಾನುಗಳನ್ನು ಸಾಗಿಸಲು ಕಟ್ಟಿಗೆ ಹಲಗೆಗಳ ಸೇತುವೆಯನ್ನು ಕಟ್ಟಿದ ಸಾಧಕನನ್ನು ಪ್ರಶಂಸಿಸುವುದು

ರಾಮನಾಥಿ ಆಶ್ರಮದ ಕಾಮಗಾರಿಯ ಸಮಯದಲ್ಲಿ ಮೂರನೇ ಮಹಡಿಯಿಂದ ಕಲಾಮಂದಿರದ ಗೋಡೆ ಇವುಗಳ ನಡುವೆ ಒಂದು ದೊಡ್ಡ ತಗ್ಗು ಇತ್ತು. ಅಲ್ಲಿನ ಕಾಮಗಾರಿ ಅಪೂರ್ಣವಿತ್ತು. ಅಲ್ಲಿಂದ ಕೆಲಸಗಾರರಿಗೆ ಸಾಹಿತ್ಯಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಬೇಕೆಂದು ಶ್ರೀ. ಘನಶ್ಯಾಮ ಗಾವಡೆ ಇವರು ಮರದ ಹಲಗೆಗಳಿಂದ ಒಂದು ಸೇತುವೆಯನ್ನು ಕಟ್ಟಿದ್ದರು. ಪ.ಪೂ. ಡಾಕ್ಟರರು ನನಗೆ, ‘ಈ ಸೇತುವೆಯನ್ನು ಯಾರು ಕಟ್ಟಿದರು’ ಎಂದು ಕೇಳಿದರು. ನಾನು ಘನಶ್ಯಾಮನ ಹೆಸರು ಹೇಳಿದಾಗ ಅವರು ನನಗೆ, ‘ಕಾಮಗಾರಿ ವಿಭಾಗದ ಘನಶ್ಯಾಮರು ಪರಿಪೂರ್ಣ ಸಾಧಕರಾಗಿದ್ದಾರೆ’ ಎಂದರು.

೨ ಇ. ಪ್ರತಿಯೊಂದು ಕೃತಿ ಸ್ಥೂಲದಲ್ಲಿಯೂ ಚೆನ್ನಾಗಿರಬೇಕು ಎಂದು ಕಲಿಸುವುದು

ರಾಮನಾಥಿ ಆಶ್ರಮದ ಮೊದಲನೆಯ ಮಹಡಿಯ ಕಾಲುದಾರಿಯಲ್ಲಿ ಕೊಟಾ ಹಾಸುಗಲ್ಲುಗಳನ್ನು ಹಾಕಲಾಗಿತ್ತು. ಅವುಗಳ ಪೈಕಿ ಒಂದು ಹಾಸುಗಲ್ಲು ಗಾಢ ಕಪ್ಪು ಬಣ್ಣದ್ದಾಗಿತ್ತು ಮತ್ತು ಅದು ಇತರ ಹಾಸುಗಲ್ಲುಗಳಿಗಿಂತ ಬೇರೆಯೇ ಕಾಣಿಸುತ್ತಿತ್ತು. ಪ.ಪೂ. ಡಾಕ್ಟರರು ಅದನ್ನು ತೆಗೆಯಲು ಹೇಳಿದರು ಮತ್ತು ‘ಸ್ಥೂಲದ ವಿಷಯ ತಿಳಿಯದಿದ್ದರೆ ಸೂಕ್ಷ್ಮದ ವಿಷಯ ಹೇಗೆ ತಿಳಿಯಲು ಸಾಧ್ಯ’ ಎಂದು ಹೇಳಿದರು.

೨ ಈ. ಇತರರನ್ನು ಸಿದ್ಧಪಡಿಸುವುದು, ಇದು ಒಳ್ಳೆಯ ಸಾಧನೆ ಇರುವುದಾಗಿ ಹೇಳುವುದು

ಆಶ್ರಮದ ಎರಡನೇ ಮಹಡಿಯ ಸ್ಲ್ಯಾಬ್ ಕೆಲಸ ನಡೆಯುತ್ತಿರುವಾಗ ಪ.ಪೂ. ಡಾಕ್ಟರರು ಆ ಕೆಲಸವನ್ನು ಮಾಡುವ ಸಾಧಕರಾದ ಶ್ರೀ. ಪಾಡಳೆಕಾಕಾ ಇವರಿಗೆ, “ನೀವು ಈ ಕೆಲಸವನ್ನು ಯಾರಿಗಾದರೂ ಕಲಿಸಿದ್ದೀರಾ ತಾನೇ? ಯಾರನ್ನಾದರೂ ತಯಾರು ಮಾಡಿದ್ದೀರಾ ತಾನೇ? ಇತರರನ್ನು ತಯಾರು ಮಾಡುವುದು, ಇದು ಒಳ್ಳೆಯ ಸಾಧನೆಯಾಗಿದೆ” ಎಂದು ಹೇಳಿದರು. ಆ ಸಮಯದಲ್ಲಿ ಶ್ರೀ. ಪಾಡಳೆಕಾಕಾರವರು, ‘ರಾಹುಲ ಕುಲಕರ್ಣಿ ಮತ್ತು ಶ್ರೀ. ಸಂಭಾಜಿ ಮಾನೆ ಇವರನ್ನು ಸಿದ್ಧಪಡಿಸಿದ್ದೇನೆ’ ಎಂದು ಹೇಳಿದರು. ಇದನ್ನು ಕೇಳಿ ಪ.ಪೂ. ಡಾಕ್ಟರರಿಗೆ ಆನಂದವಾಯಿತು.

೩. ಇತರ ಅಂಶಗಳು

೩ ಅ. ಸಾಧಕರ ನಿದ್ದೆಯ ಬಗ್ಗೆ ಕಾಳಜಿ ವಹಿಸುವ ವಾತ್ಸಲ್ಯಮೂರ್ತಿ

೧. ೨೦೦೩ ರಲ್ಲಿ ಮೀರಜ ಆಶ್ರಮಕ್ಕೆ ಮುದ್ರಣಾಲಯಕ್ಕೆ ಹೋಗುವ ಸಾಧಕರು ರಾತ್ರಿ ಆಶ್ರಮಕ್ಕೆ ಬಂದ ನಂತರ ಮೆಟ್ಟಿಲುಗಳ ಕೆಳಗಿರುವ ಖಾಲಿ ಜಾಗದಲ್ಲಿ ಮಲಗುತ್ತಿದ್ದರು. ಪ.ಪೂ. ಡಾಕ್ಟರರು ಬೆಳಗ್ಗೆ ಮೆಟ್ಟಿಲುಗಳನ್ನು ಹತ್ತುವಾಗ ತಮ್ಮ ಚಪ್ಪಲಿಗಳ ಅಥವಾ ಹೆಜ್ಜೆಗಳ ಶಬ್ದವಾಗದಂತೆ ನೋಡುತ್ತಿದ್ದರು. ಅವರು ಸಾಧಕರ ನಿದ್ದೆಗೆ ಅಡಚಣೆ ಬರದಂತೆ ಕಾಳಜಿ ವಹಿಸುತ್ತಿದ್ದರು.

೨. ೨೦೦೫ ರಲ್ಲಿ ರಾಮನಾಥಿ ಆಶ್ರಮದಲ್ಲಿ ಸಾಧಕರು ಸ್ವಾಗತಕಕ್ಷೆಯ ಹಾಲ್‌ನಲ್ಲಿ ಮಲಗುತ್ತಿದ್ದರು. ಅವರಿಗೆ ಚಳಿಯಾಗಬಾರೆಂದು ಪ.ಪೂ. ಡಾಕ್ಟರರು ರಾತ್ರಿ ಕಿಟಕಿಗಳನ್ನು ಮುಚ್ಚಲು ಹೇಳಿದರು.

೩ ಆ. ಸಾಧಕನಿಗೆ ಮಾರ್ಗದರ್ಶನ ಮಾಡಿ ಚಿಂತಾಮುಕ್ತರನ್ನಾಗಿ ಮಾಡುವ ಪ್ರೇಮಮಯಿ ಗುರುದೇವರು !

೧. ಪ.ಪೂ. ಡಾಕ್ಟರರು ಸಾಧಕನಿಗೆ ಇತರರಿಂದ ಪಡೆದ ಹಣವನ್ನು ಇದೇ ಜನ್ಮದಲ್ಲಿ ಹಿಂದಿರುಗಿಸಲು ಹೇಳುವುದು : ಡಿಸೆಂಬರ್ ೨೦೦೫ ರಲ್ಲಿ ನಾನು ಪ.ಪೂ. ಡಾಕ್ಟರರನ್ನು, ‘ನಾನು ಮನೆಗೆ ಹೋದ ನಂತರ ಹಿಂದೆ ನಾನು ಮಾಡಿದ ಕೆಲಸದಲ್ಲಿ ಕೆಲವು ಜನರಿಂದ ಹೆಚ್ಚು ಹಣ ಪಡೆದಿರುವುದು ನೆನಪಾಗಿ ನನಗೆ ಕೆಟ್ಟದೆನಿಸುತ್ತದೆ. ಹಾಗಾದರೆ ನಾನು ಈಗ ಅದಕ್ಕೆ ಏನಾದರೂ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬಹುದೇ ?’ ಎಂದು ಕೇಳಿದೆನು. ಇದಕ್ಕೆ ಅವರು ನನಗೆ, ‘ಅದಕ್ಕೆ ಯಾವುದೇ ಪ್ರಾಯಶ್ಚಿತ್ತವಿಲ್ಲ; ಏಕೆಂದರೆ ನೀನು ಯಾರಿಗೆಲ್ಲ ಕೊಡುವುದಿದೆಯೋ ಅದರ ನೋಂದಣಿ ನಿನ್ನ ಅಂತರ್ಮನದಲ್ಲಿ ಆಗಿ ಹೋಗಿದೆ. ಅದಕ್ಕಾಗಿ ಯಾರಿಗೆಲ್ಲ ಕೊಡುವುದಿದೆಯೋ ಅವರಿಗೆ ಅದನ್ನು ಹಿಂದಿರುಗಿಸು’, ಎಂದು ಹೇಳಿದರು.

೨. ಪ.ಪೂ. ಡಾಕ್ಟರರು ಊದುಬತ್ತಿಯನ್ನು ಒದ್ದೆಮಾಡಿ ಬೆಳಗಿಸಲು ನಿರಾಕರಿಸಿ ಅದರ ಕಾರಣ ಹೇಳುವುದು : ೨೦೦೫ ರಲ್ಲಿ ಒಂದು ಸಲ ನಾನು ಪ.ಪೂ. ಡಾಕ್ಟರರ ಬಳಿ, ‘ಊದುಬತ್ತಿಯನ್ನು ಒದ್ದೆ ಮಾಡಿ ಬೆಳಗಿಸಿದರೆ ಅದು ಹೆಚ್ಚು ಸಮಯ ಉರಿಯುತ್ತಿರುತ್ತದೆ. ನಾನು ಆ ರೀತಿ ಮಾಡಬಹುದೇ ?’ ಎಂದು ಕೇಳಿದೆನು. ಆಗ ಅವರು ನನಗೆ ‘ಬೇಡ. ಏಕೆಂದರೆ ಪರಿಸರದ ಮೇಲೆ ಪಂಚಮಹಾಭೂತಗಳ ಸಂಯೋಜಿತ ಪರಿಣಾಮವು ನಕಾರಾತ್ಮಕ ರೀತಿಯಲ್ಲಿ ಆಗುತ್ತದೆ’, ಎಂದು ಹೇಳಿದರು.

೩. ಪ.ಪೂ. ಡಾಕ್ಟರರು ಸಾಧಕನಿಗೆ ಸಿಟ್ಟಿನ ಮೂಲ ಅವನ ಸ್ವಭಾವದೋಷದಲ್ಲಿದೆ ಎಂದು ಹೇಳುವುದು : ೨೦೦೫ ರಲ್ಲಿ ಓರ್ವ ಸಾಧಕನಲ್ಲಿ ನನಗೆ ಪ್ರಾಪ್ತವಾಗುತ್ತಿರುವ ಜ್ಞಾನದ ಬಗ್ಗೆ ಹೇಳುವಾಗ, ಅವನು ‘ಆ ಜ್ಞಾನವನ್ನು ದೊಡ್ಡ ಕೆಟ್ಟ ಶಕ್ತಿಯು ಕೊಡುತ್ತದೆ’, ಎಂದು ಹೇಳಿದನು. ಆಗ ನನಗೆ ಅವನ ಮೇಲೆ ಸಿಟ್ಟು ಬಂದಿತು. ನಾನು ಈ ಬಗ್ಗೆ ಪ.ಪೂ. ಡಾಕ್ಟರರಿಗೆ ಹೇಳಿದೆನು. ಆಗ ಅವರು, ‘ಇದಕ್ಕೆ ಸ್ವಯಂಸೂಚನೆಯನ್ನು ಕೊಡು. ನಿನ್ನ ಸಿಟ್ಟಿನ ಮೂಲ ನಿನ್ನಲ್ಲಿಯೇ ಇದೆ’, ಎಂದು ಹೇಳಿದರು.

೩ ಇ. ಸಾಧಕನಿಗೆ ಮಾತುಕತೆ ನಡೆಸುವಲ್ಲಿನ ದೋಷ ತೆಗೆಯುವ ಮಹತ್ವವನ್ನು ಹೇಳಿ ಅದಕ್ಕಾಗಿ ಪ್ರಯತ್ನಿಸಲು ಹೇಳುವುದು

ಒಮ್ಮೆ ಪ.ಪೂ. ಡಾಕ್ಟರರು ನನಗೆ, “ನೀನು ಎಲ್ಲರೊಂದಿಗೆ ಮಾತನಾಡುತ್ತೀಯಾ” ಎಂದು ಕೇಳಿದರು. ಆಗ ನಮ್ಮಿಬ್ಬರಲ್ಲಿ ಮುಂದಿನ ಸಂಭಾಷಣೆ ಆಯಿತು.

ನಾನು : ನನಗೆ ಸರಿ ಮಾತನಾಡಲು ಬರುವುದಿಲ್ಲ. ನನಗೆ, ‘ನನ್ನ ಮಾತಿನಿಂದ ಇತರರಿಗೆ ಅಡಚಣೆ ಬರುವುದು’, ಎಂದೆನಿಸುತ್ತದೆ.

ಪ.ಪೂ. ಡಾಕ್ಟರ್ : ನೀನು ಎಲ್ಲರೊಂದಿಗೆ ಮಾತನಾಡಬೇಕು. ಆವಾಗಲೇ ನಿನ್ನಲ್ಲಿನ ಮಾತನಾಡದಿರುವ ಅಡತಡೆಗಳು ಹೊರಟು ಹೋಗುವುದು. ಒಂದು ವೇಳೆ ನೀನು ಮಾತನಾಡುವಾಗ ತಪ್ಪಾದರೆ, ಏನಾಗುವುದು? ಹೆಚ್ಚೆಂದರೆ ನಿನಗೆ ಅದರ ಅರಿವು ಮಾಡಿ ಕೊಡಲಾಗುವುದು; ಆದರೆ ಆ ದೋಷವು ನಿನ್ನಲ್ಲಿ ಇರಬಾರದು.

೩ ಈ. ಸಾಧಕನ ಅಹಂನ ನಿರ್ಮೂಲನೆ ಮಾಡುವುದು

ಒಮ್ಮೆ ರಾಮನಾಥಿ ಆಶ್ರಮದಲ್ಲಿನ ನಾಲ್ಕನೇ ಮಹಡಿಯ ಮೇಲೆ ಕಟ್ಟಡ ಕಾಮಗಾರಿಯ ಕೆಲಸ ನಡೆಯುತ್ತಿರುವಾಗ ಸಾಯಂಕಾಲ ಅಲ್ಲಿ ಉಳಿದಿರುವ ಸಿಮೆಂಟನ್ನು ಕೆಲಸಗಾರರು ಬೇರೆಡೆ ಎಲ್ಲಿಯೂ ಚೆಲ್ಲಬಾರದೆಂದು ನಾನು ಅದನ್ನು ಮೊದಲನೇ ಮಹಡಿಗೆ ತೆಗೆದುಕೊಂಡು ಹೋಗುತ್ತಿದ್ದೆನು. ಆಗ ಪ.ಪೂ. ಡಾಕ್ಟರರು ಅಲ್ಲಿಂದ ಹೋಗುತ್ತಿದ್ದರು. ಆಗ ನನ್ನ ಮನಸ್ಸಿನಲ್ಲಿ ‘ಈಗ ನನಗೆ ‘ಏನು ಮಾಡುತ್ತಿದ್ದೀಯಾ’ ಎಂದು ಕೇಳಿ ನನ್ನನ್ನು ಪ್ರಶಂಶಿಸಬಹುದು’, ಎಂಬ ತೀವ್ರ ಅಪೇಕ್ಷೆಯ ವಿಚಾರ ಬರತೊಡಗಿತು. ಅಷ್ಟರಲ್ಲಿ ಪ.ಪೂ. ಡಾಕ್ಟರರು ಅಲ್ಲಿ ಪಕ್ಕದಲ್ಲಿ ಬಿದ್ದಿರುವ ರಟ್ಟಿನ ಒಂದು ತುಂಡನ್ನು ತೋರಿಸಿ “ಇದನ್ನು ತೆಗೆಯಬೇಕೆಂದು ಗಮನಕ್ಕೆ ಬರಲಿಲ್ಲವೇ ?” ಎಂದು ನನಗೆ ಕೇಳಿದರು.

೩ ಉ. ಅನುಸಂಧಾನದಲ್ಲಿದ್ದರೆ ಮಾತ್ರ ದೇವರು ತಪ್ಪುಗಳನ್ನು ಗಮನಕ್ಕೆ ತಂದುಕೊಡುವುದಾಗಿ ಹೇಳುವುದು

ಒಮ್ಮೆ ನಾನು ಪ.ಪೂ. ಡಾಕ್ಟರರ ಕೋಣೆಯಲ್ಲಿ ಅವರೊಂದಿಗೆ ಮಾತನಾಡುತ್ತಿದ್ದೆ. ಆಗ ಅಲ್ಲಿ ಇಬ್ಬರು ಸಾಧಕರು ಮಂತ್ರಪಠಣವನ್ನು ಮಾಡುತ್ತಿದ್ದರು. ಆ ಸಮಯದಲ್ಲಿ ಪ.ಪೂ. ಡಾಕ್ಟರರು ನನಗೆ, “ನಾವು ಮಾತನಾಡುತ್ತಿರುವಾಗ ನಮ್ಮ ಮಾತಿನಿಂದ ಮಂತ್ರಪಠಣದಲ್ಲಿ ಅಡಚಣೆ ಬಂದೀತು. ಮಂತ್ರಪಠಣವನ್ನು ಮಾಡುವ ಇಬ್ಬರು ಸಾಧಕರಲ್ಲಿ ಒಬ್ಬನು ಹಿಂದೆ ತಿರುಗಿ ನೋಡಿದನು”, ಎಂದು ಹೇಳಿದರು. ಅವರು ಹೇಳಿದ ನಂತರ ಇದು ನನ್ನ ಗಮನಕ್ಕೆ ಬಂದಿತು. ಆಗ ಅವರು, “ನಾವು ಅನುಸಂಧಾನದಲ್ಲಿದ್ದರೆ, ದೇವರೇ ನಮಗೆ ನಮ್ಮ ತಪ್ಪುಗಳನ್ನು ಗಮನಕ್ಕೆ ತಂದುಕೊಡುತ್ತಾನೆ” ಎಂದು ಹೇಳಿದರು.

೩ ಊ. ಸಾಧಕನಿಗೆ ಆಗುವ ತೊಂದರೆಯು ಕಡಿಮೆಯಾಗುವುದರ ಬಗ್ಗೆ ಭರವಸೆ ನೀಡುವುದು

೨೦೧೦ ರಲ್ಲಿ ನಾನು ಮನೆಗೆ ಹೋಗಿದ್ದೆ. ಅಲ್ಲಿಂದ ಮರಳಿ ಬಂದ ನಂತರ ನಾನು ಪ.ಪೂ. ಡಾಕ್ಟರರ ಕೋಣೆಯಲ್ಲಿ ಸೇವೆಯನ್ನು ಮಾಡುತ್ತಿರುವಾಗ ಅವರು, “ಕೆಟ್ಟ ಶಕ್ತಿಗಳೊಂದಿಗೆ ಪ್ರತಿದಿನ ನಿನ್ನ ಸೂಕ್ಷ್ಮಯುದ್ಧ ನಡೆದಿರುತ್ತದೆ. ಒಮ್ಮೆ ಅವರು ಗೆದ್ದರೆ, ಒಮ್ಮೆ ನೀನು ಗೆಲ್ಲುವೆ. ಯಾವಾಗ ಅವರು ಗೆಲ್ಲುತ್ತಾರೆಯೋ, ಆಗ ನೀನು ಮನೆಗೆ ಹೋಗುವೆ ಮತ್ತು ಯಾವಾಗ ನೀನು ಗೆಲ್ಲುತ್ತಿಯೋ, ಆಗ ನೀನು ಆಶ್ರಮದಲ್ಲಿರುವೆ. ಕೊನೆಗೆ ಸೂಕ್ಷ್ಮಯುದ್ಧದಲ್ಲಿ ನೀನೇ ಗೆಲ್ಲುವೆ”, ಎಂದು ಹೇಳಿದರು.

೩ ಎ. ತೊಂದರೆಗಳ ಬಗ್ಗೆ ಸಾಧಕನಿಗಾದ ಅನುಭೂತಿ

೨೦೧೩ ರಲ್ಲಿ ನನಗೆ ಗೋಡೆಯ ಮೇಲೆ ಅನೇಕ ಚಿತ್ರವಿಚಿತ್ರ ಆಕಾರಗಳು ಕಾಣಿಸುತ್ತಿದ್ದವು. ಅವು ಕೆಲವೊಮ್ಮೆ ಸ್ತ್ರೀಯರ ಅಥವಾ ಭೂತಗಳ ಆಕಾರಗಳಿರುತ್ತಿದ್ದವು. ಕೆಲವು ದಿನಗಳ ನಂತರ ಈ ಆಕಾರಗಳು ಕಾಣುವುದು ನಿಂತು ದೇವತೆಗಳ ಆಕಾರ, ಉದಾ. ಶ್ರೀಕೃಷ್ಣ-ಅರ್ಜುನ ರಥ ಈ ರೀತಿ ಚಿತ್ರಗಳು ಆಕಾಶದಲ್ಲಿ ಅಥವಾ ಗೋಡೆಯ ಮೇಲೆ ಕಾಣಿಸತೊಡಗಿದವು. (ಈ ಅನುಭೂತಿಯನ್ನು ಪರಮಪೂಜ್ಯ ಡಾಕ್ಟರರಿಗೆ ಹೇಳಿದಾಗ ಅವರು, “ಅನುಭೂತಿ ಚೆನ್ನಾಗಿದೆ. ಬರೆದು ಕೊಡು” ಎಂದು ಹೇಳಿದರು. ನನಗೆ ಅದನ್ನು ಬರೆದು ಕೊಡಲು ತಡವಾಯಿತು. ನಂತರ ಕಾಣಿಸುವುದು ನಿಂತಿತು ಮತ್ತು ನಾನು ಬರೆದು ಕೊಡಲಿಲ್ಲ.)

೩ ಏ. ಸಾಧಕನ ಆಧ್ಯಾತ್ಮಿಕ ತೊಂದರೆಯಿಂದ ಶೇ. ೭೦ ರಿಂದ ೮೦ ರಷ್ಟು ಸಾಧನೆ ಖರ್ಚಾಗುತ್ತಿದ್ದರೂ, ಅವನ ಪ್ರಗತಿ ಆಗುತ್ತಿರುವುದಾಗಿ ಹೇಳಿ ಚಿಂತೆ ಮಾಡಬಾರದು ಎಂದು ಹೇಳುವುದು

ಡಿಸೆಂಬರ್ ೨೦೧೪ ರಲ್ಲಿ ಪ.ಪೂ. ಡಾಕ್ಟರರು ನನಗೆ, “ನಿನ್ನ ಪ್ರಗತಿ ಆಗುತ್ತಿದೆ. ನಿನಗೆ ಏನಾದರೂ ಅದರೆ ಅರಿವಾಗುತ್ತಿದೆಯೇ” ಎಂದು ಕೇಳಿದರು. ನಾನು ಅವರಿಗೆ, “ಅಧೋಗತಿಯೇ ಆಗುತ್ತಿರುವಂತೆ ಎನಿಸುತ್ತಿದೆ”, ಎಂದು ಹೇಳಿದೆನು. ಆಗ ಅವರು  “ಪ್ರಗತಿ ಆಗುತ್ತಿದೆ. ತೊಂದರೆಯಿಂದ ಇದುವರೆಗೆ ನಿನ್ನ ಸಾಧನೆ ಶೇ. ೭೦ ರಿಂದ ೮೦ ರಷ್ಟು ಖರ್ಚಾಯಿತು. ಇತರರಂತೆ ನಿನ್ನ ಪ್ರಗತಿಯೂ ಆಗಿರುವುದು ಕಂಡುಬರುತ್ತಿತ್ತು; ಆದರೆ ಚಿಂತೆ ಮಾಡಬೇಡ”, ಎಂದು ನನಗೆ ಹೇಳಿದರು.

೩ ಐ. ಮಕ್ಕಳ ಮದುವೆ ಮಾಡದಿರುವುದರ ಬಗ್ಗೆ ಸಾಧಕನ ತಾಯಿಯ ವಿಚಾರವನ್ನು ಕೇಳಿದಾಗ ಪ್ರಶಂಸೆ ಮಾಡುವುದು

೨೦೦೬ ರಲ್ಲಿ ನನ್ನ ತಾಯಿಯು ಮೀರಜ್ ಆಶ್ರಮದಿಂದ ರಾಮನಾಥಿ ಆಶ್ರಮಕ್ಕೆ ಕೆಲವು ದಿನ ಉಳಿಯಲು ಬಂದಿದ್ದಳು. ಆ ಸಮಯದಲ್ಲಿ ಅವಳು ನನಗೆ ಮದುವೆಯ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿದಳು ಮತ್ತು ನನಗೆ, “ಮದುವೆ ಆಗದಿರುವುದೇ ಒಳ್ಳೆಯದು. ಮದುವೆ ಮಾಡಿಕೊಂಡು ಏನು ಲಾಭವಾಗುವುದಿಲ್ಲ”, ಎಂದು ಹೇಳಿದಳು. ಮರುದಿನ ಪ.ಪೂ. ಡಾಕ್ಟರರು ನನಗೆ, “ನಿನ್ನ ತಾಯಿ ನಿನಗೆ ಏನು ಹೇಳಿದರು” ಎಂದು ಕೇಳಿದರು. ಆಗ ನಾನು ಅವರಿಗೆ ತಾಯಿ ಹೇಳಿದ ವಾಕ್ಯವನ್ನು ಹೇಳಿದೆ. ಆಗ ಅವರು ನನಗೆ, “ಪ್ರತಿದಿನ ಬೆಳಗ್ಗೆ ನನಗೆ ತಪ್ಪುಗಳನ್ನು ಕೇಳಲು ಸಿಗುತ್ತವೆ; ಆದರೆ ಇಂದು ನೀನು ನನಗೆ ಆನಂದದ ಸುದ್ದಿಯನ್ನು ಕೊಟ್ಟಿರುವೆ. ಇಂತಹ ತಾಯಿ ಸಿಕ್ಕಿರುವುದರಿಂದ ನೀವಿಬ್ಬರು (ನಾನು ಮತ್ತು ನನ್ನ ಸಹೋದರಿ ಕು. ರೂಪಾಲಿ) ಭಾಗ್ಯವಂತರಾಗಿದ್ದೀರಿ. ಇತರರ ತಾಯಿ-ತಂದೆ ಮಾತ್ರ ‘ಯಾವಾಗ ಒಮ್ಮೆ ಮಕ್ಕಳ ಮದುವೆ ಮಾಡಿ ಅವರನ್ನು ಮಾಯೆಯಲ್ಲಿ ಸಿಲುಕಿಸುತ್ತೇವೆಯೋ’, ಎಂಬ ವಿಚಾರ ಮಾಡುತ್ತಾರೆ !”ಎಂದು ಹೇಳಿದರು.

ಅನಂತರ ಕೆಲವು ದಿನಗಳ ನಂತರ ನಾನು ಸೇವೆಗಾಗಿ ದೇವದ ಆಶ್ರಮಕ್ಕೆ ಹೋದಾಗ ಅಲ್ಲಿ ಪ.ಪೂ. ಪಾಂಡೆ ಮಹಾರಾಜರು ನನಗೆ “ನಿನ್ನ ಮುಂದಿನ ವಿಚಾರವೇನಿದೆ” ಎಂದು ಕೇಳಿದಾಗ ನಾನು ಅವರಿಗೆ ಮೇಲಿನ ಪ್ರಸಂಗವನ್ನು ಹೇಳಿದೆನು. ಆಗ ಅವರು ನನಗೆ, “ನಿಜವಾದ ಸಾಧನೆ ನಿನ್ನ ತಾಯಿಗೆ ತಿಳಿದಿದೆ. ಅವಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಹೇಳು”, ಎಂದು ಹೇಳಿದರು.

– ಶ್ರೀ. ರಾಹುಲ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೮.೨೦೨೦)

Leave a Comment