ಆಡುಸೋಗೆ ಚೂರ್ಣ

Article also available in :

ಆಡುಸೋಗೆ ಚೂರ್ಣ

ಅ. ಗುಣಧರ್ಮ ಮತ್ತು ಉಪಯೋಗ

ಆಡುಸೋಗೆ, ಆಡು ಮುಟ್ಟದ ಸೋಗೆ, aadusoge

ಈ ಔಷಧಿಯು ತಂಪು ಗುಣಧರ್ಮದ್ದಾಗಿದ್ದು ಪಿತ್ತ ಮತ್ತು ಕಫ ನಾಶಕವಾಗಿದೆ. ಇವುಗಳ ರೋಗಗಳಲ್ಲಿನ ಉಪಯೋಗವನ್ನು ಮುಂದೆ ನೀಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
1. ಮೂಗಿನಿಂದ ರಕ್ತ ಬರುವುದು, ಉಷ್ಣತೆಯ ರೋಗಗಳು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ಮತ್ತು ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) 1 ಚಮಚ ಆಡುಸೋಗೆಯ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯ ಮಿಶ್ರಣವನ್ನು ದಿನಕ್ಕೆ 2 – 3 ಸಲ ನೀರಿನೊಂದಿಗೆ ಸೇವಿಸಬೇಕು. 7 ದಿನಗಳು
2. ಕಫದೊಂದಿಗೆ ಕೆಮ್ಮು ಮತ್ತು ಉಬ್ಬಸ (ಅಸ್ಥಮಾ) 1 ಚಮಚ ಆಡುಸೋಗೆಯ ಚೂರ್ಣ, ಅರ್ಧ ಚಮಚ ಶುಂಠಿ ಅಥವಾ ಪಿಪ್ಪಲಿಯ ಚೂರ್ಣ, 2 ಚಮಚ ಜೇನು ತುಪ್ಪ ಇವುಗಳನ್ನು ಬೆರೆಸಿ ದಿನದಲ್ಲಿ 5 – 6 ಸಲ ಈ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು 7 ದಿನಗಳು
3. ಕ್ಷಯರೋಗದ (ಟಿ.ಬಿ) ಉಪಚಾರಕ್ಕೆ ಸಹಾಯಕ ಬೆಳಗ್ಗೆ ಮತ್ತು ಸಾಯಂಕಾಲ 1 ಚಮಚ ಆಡುಸೋಗೆಯ ಚೂರ್ಣ, 1 ಚಮಚ ತುಪ್ಪ ಮತ್ತು 1 ಚಮಚ ಸಕ್ಕರೆಯ ಮಿಶ್ರಣವನ್ನು ಮಾಡಿ ಸೇವಿಸಬೇಕು, ನಂತರ ಒಂದು ಬಟ್ಟಲು ಬಿಸಿನೀರು ಕುಡಿಯಬೇಕು. 1 ರಿಂದ 3 ತಿಂಗಳು
4. ದಡಾರ ಮತ್ತು ಸಿಡಬು ಹಾಗೆಯೇ ಜ್ವರಬರಿಸುವ ಇತರ ಸೋಂಕು ರೋಗಗಳು ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ಆಡುಸೋಗೆಯ ಚೂರ್ಣ ಮತ್ತು ಅರ್ಧ ಚಮಚ ಜೇಷ್ಟಮಧು ಚೂರ್ಣ ಇವುಗಳ ಮಿಶ್ರಣವನ್ನು ಮಾಡಿ ನೀರಿನೊಂದಿಗೆ ಸೇವಿಸಬೇಕು 7 ದಿನಗಳು
5. ಯಾವುದೇ ರೀತಿಯ ಗಾಯ (ಹುಣ್ಣು) ದಿನದಲ್ಲಿ 2 ಸಲ ಬಿಸಿಮಾಡಿ ಆರಿಸಿದ ನೀರಿನಲ್ಲಿ ಆಡುಸೋಗೆಯ ಚೂರ್ಣವನ್ನು ಕಲಿಸಿ ಗಾಯಕ್ಕೆ ಹಚ್ಚಬೇಕು. 7 ದಿನಗಳು

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

 

Leave a Comment