ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು – 4

Article also available in :

ಸದ್ಗುರು (ಡಾ.) ಮುಕುಲ ಗಾಡಗೀಳ

ಯಾವುದಾದರೂ ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?, ಎಂಬುದನ್ನು ಧ್ಯಾನದಲ್ಲಿ ಶೋಧಿಸಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಕೊರೋನಾ ವಿಷಾಣುಗಳ ವಿರುದ್ಧ ಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಲು ನಾನು ಮೊದಲ ಬಾರಿಗೆ ಇಂತಹ ಜಪವನ್ನು ಶೋಧಿಸಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಶೋಧಿಸಲು ಸ್ಫೂರ್ತಿ ದೊರಕಿತು. ಕಳೆದ ಒಂದು ವರ್ಷದಿಂದ ಸಾಧಕರಿಗೆ ನಾನು ಶೋಧಿಸಿದ ಜಪಗಳನ್ನು ಅವರ ರೋಗಗಳಿಗಾಗಿ ನೀಡುತ್ತಿದ್ದೇನೆ. ‘ಆ ಜಪಗಳಿಂದ ಉತ್ತಮ ಲಾಭವಾಗುತ್ತಿದೆ’ ಎಂದು ಅವರು ಹೇಳಿದಾಗ ಇದು ನನ್ನ ಗಮನಕ್ಕೆ ಬಂದಿತು. ಆ ರೋಗಗಳು ಮತ್ತು ಅವುಗಳ ಶಮನಕ್ಕಾಗಿ ಜಪಗಳನ್ನು ಇಲ್ಲಿ ಕೊಡಲಾಗಿದೆ. ಈ ಜಪಗಳೆಂದರೆ ಅಗತ್ಯವಿರುವ ವಿವಿಧ ದೇವತೆಗಳ ಒಟ್ಟು ಜಪಗಳಾಗಿವೆ.

ಸೂಚನೆ : ಇಲ್ಲಿ ಪ್ರತಿಯೊಂದು ಸಮಸ್ಯೆಯ ಮುಂದೆ ನೀಡಿರುವ ಎಲ್ಲ ದೇವತೆಗಳ ಹೆಸರು ಸೇರಿ ‘ಒಂದು’ ಜಪ ಆಗುತ್ತದೆ.

ಸಮಸ್ಯೆ ಅನ್ವಯಿಸುವ ೫ ನಾಮಜಪಗಳು ಸೇರಿಸಿ ಆಗುವ ನಾಮಜಪ
 ೧. ಕಾಲುಗಳಲ್ಲಿ ಊತ ಶ್ರೀ ಗಣೇಶಾಯ ನಮಃ । ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ |
೨. ಮೂತ್ರದಲ್ಲಿ ಪ್ರೊಟೀನ್ ಹೋಗುವುದು (ನೆಫ್ರಾಟಿಕ್ ಸಿಂಡ್ರೋಮ್) ಶ್ರೀ ಗುರುದೇವ ದತ್ತ । ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ । ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೩. ಸ್ಕ್ಲೆರೋಡರ್ಮಾ (ಲಕ್ಷಣಗಳು – ತ್ವಚೆ ದಪ್ಪ ಮತ್ತು ಗಟ್ಟಿಯಾಗುವುದು, ರಕ್ತದ ಪ್ರವಾಹ ಕಡಿಮೆಯಾಗುವುದು, ದಣಿವು, ಸ್ನಾಯುಗಳು ಗಟ್ಟಿಯಾಗುವುದು ಇತ್ಯಾದಿ) ಶ್ರೀ ಗುರುದೇವ ದತ್ತ | ಶ್ರೀರಾಮ ಜಯ ರಾಮ ಜಯ ಜಯ ರಾಮ । ಓಂ ನಮೋ ಭಾಗವತೇ ವಾಸುದೇವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೪. ತಲೆಯಲ್ಲಿ ದದ್ದುಗಳಾಗಿ ತುರಿಸುವುದು ಓಂ ನಮೋ ಭಗವತೇ ವಾಸುದೇವಾಯ | ಶ್ರೀ ಗುರುದೇವ ದತ್ತ | ಶ್ರೀ ಹನುಮತೇೆ ನಮಃ | ಓಂ ನಮ ಶಿವಾಯ | ಓಂ ನಮಃ ಶಿವಾಯ |
೫. ಸಲಿಂಗ ಆಕರ್ಷಣೆ ಶ್ರೀ ಗುರುದೇವ ದತ್ತ | ಶ್ರೀ ಗುರುದೇವ ದತ್ತ | ಓಂ ನಮೋ ಭಗವತೇ ವಾಸುದೇವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೬. ಯೌವನದಲ್ಲಿ ಲೈಂಗಿಕ ವಿಚಾರಗಳು ಹೆಚ್ಚು ಪ್ರಮಾಣದಲ್ಲಿ ಬರುವುದು ಶ್ರೀ ಗುರುದೇವ ದತ್ತ | ಓಂ ನಮೋ ಭಗವತೇ ವಾಸುದೇವಾಯ । ಓಂ ನಮೋ ಭಗವತೇ ವಾಸುದೇವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ ।
೭. ಶರೀರದಲ್ಲಿ ‘ಇನ್ಸುಲಿನ್‌’ ತಯಾರಾಗದಿರುವುದು (ಡೈಬಿಟೀಸ್) ಓಂ ನಮೋ ಭಗವತೇ ವಾಸುದೇವಾಯ । ಶ್ರೀ ಗಣೇಶಾಯ ನಮಃ | ಶ್ರೀ ದುರ್ಗಾದೇವ್ಯೈ ನಮಃ । ಶ್ರೀ ಹನುಮತೇೆ ನಮಃ | ಶ್ರೀ ಹನುಮತೇೆ ನಮಃ |
೮. ಮಲಗಿದಾಗ ಬಡಬಡಿಕೆ, ಕೂಗುವುದು, ಹತ್ತಿರದ ವ್ಯಕ್ತಿಯ ಮೈಮೇಲೇರಿ ಹೋಗುವುದು ಶ್ರೀ ಗುರುದೇವ ದತ್ತ | ಓಂ ನಮೋ ಭಗವತೇ ವಾಸುದೇವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೯. ಸ್ನಾಯುಗಳ ಗಂಟುಗಳಾಗುವುದು ಓಂ ನಮೋ ಭಾಗವತೇ ವಾಸುದೇವಾಯ | ಓಂ ನಮಃ ಶಿವಾಯ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೦. ಮೈಸ್ತೇನಿಯಾ ಗ್ರಾವಿಸ್ (ಮೆದುಳಿನಿಂದ ವಿಶಿಷ್ಟ ಸ್ನಾಯುಗಳೊಂದಿಗೆ ಸಂಬಂಧಪಟ್ಟ ನರತಂತುಗಳವರೆಗೆ (ನರ್ವ್ ವರೆಗೆ) ಬಂದಿರುವ ಸಂವೇದನೆಯು ಆ ಸ್ನಾಯುಗಳಲ್ಲಿ  ಹೋಗಲು ನಿರ್ಬಂಧವಿರುವುದರಿಂದ ಆ ಸ್ನಾಯುಗಳು ಕಾರ್ಯವನ್ನು ಮಾಡದಿರುವುದು) ಓಂ ನಮೋ ಭಾಗವತೇ ವಾಸುದೇವಾಯ । ಶ್ರೀ ಗಣೇಶಾಯ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ । ಓಂ ನಮಃ ಶಿವಾಯ |
೧೧. ಜಠರದಲ್ಲಿ ಪಿತ್ತವು ಹೆಚ್ಚಾಗಿದ್ದರಿಂದ ತಿಂದ ಆಹಾರವು ವಾಂತಿಯಾಗುವುದು ಮತ್ತು ಅದರಿಂದ ದಣಿವಾಗುವುದು ಶ್ರೀ ದುರ್ಗಾದೇವ್ಯೈ ನಮಃ । ಶ್ರೀ ಹನುಮತೇೆ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೧೨. ರಕ್ತದಲ್ಲಿ ಕೊಲೆಸ್ಟರಾಲ್‌ ಹೆಚ್ಚಾಗುವುದು ಶ್ರೀ ಗುರುದೇವ ದತ್ತ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೇೆ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೧೩. ಫ್ರೋಜನ್ ಶೋಲ್ಡರ್ ಶ್ರೀ ಗಣೇಶಾಯ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೧೪. ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌ ಪ್ರಮಾಣ ಹೆಚ್ಚಾಗುವುದು ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ |
೧೫. ಮೂತ್ರಪಿಂಡದಲ್ಲಿ (ಕಿಡ್ನಿಯಲ್ಲಿ) ಬಾವು ಬರುವುದು ಓಂ ನಮೋ ಭಾಗವತೇ ವಾಸುದೇವಾಯ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ | ಓಂ ನಮಃ ಶಿವಾಯ |
೧೬ ಮಾಸಿಕ ಸರದಿಯ ಸಮಯದಲ್ಲಿ ತೀವ್ರ ಹೊಟ್ಟೆ ನೋವು ಶ್ರೀ ಗಣೇಶಾಯ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ |
೧೭. ದೊಡ್ಡ ಕರುಳಿನ ವ್ರಣ (ಅಲ್ಸರ್) ಶ್ರೀ ಗಣೇಶಾಯ ನಮಃ । ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೧೮. ಹೊರಗಿನ ಪರಿಸ್ಥಿತಿಯಿಂದ ಮಾನಸಿಕ ಸಮತೋಲನ ಹಾಳಾಗುವುದು ಶ್ರೀ ಗುರುದೇವ ದತ್ತ | ಶ್ರೀ ಗಣೇಶಾಯ ನಮಃ | ಓಂ ನಮಃ ಶಿವಾಯ । ಓಂ ನಮಃ ಶಿವಾಯ । ಓಂ ನಮಃ ಶಿವಾಯ |
೧೯. ಕೊರೋನಾ (ಕೋವಿಡ್ 19) ಆಗಿರುವ ವ್ಯಕ್ತಿಯ ರಕ್ತವು ಗಟ್ಟಿಯಾಗಿರುವುದು, ಅದು ತೆಳುವಾಗಲು ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಗುರುದೇವ ದತ್ತ | ಶ್ರೀ ಹನುಮತೇೆ ನಮಃ | ಓಂ ನಮಃ  ಶಿವಾಯ | ಓಂ ನಮಃ ಶಿವಾಯ |
೨೦. ‘ಸ್ಟೆರೋಯಿಡ್‌’ಗಳ ದುಷ್ಪರಿಣಾಮವಾಗುವುದು ಶ್ರೀ ಗಣೇಶಾಯ ನಮಃ | ಶ್ರೀ ಗಣೇಶಾಯ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೇ ನಮಃ | ಓಂ ನಮಃ ಶಿವಾಯ |

೧. ಜಪದಿಂದ ಸಾಧಕರಿಗೆ ಬಂದ ಅನುಭೂತಿಗಳು

೧ ಅ. ಮೂತ್ರದಲ್ಲಿ ಪ್ರೊಟೀನ್ ಹೋಗುವುದು (ನೆಫ್ರಾಟಿಕ್ ಸಿಂಡ್ರೋಮ್)

ಇದು ಮೂತ್ರಪಿಂಡದ (ಕಿಡ್ನಿಯ) ಸಮಸ್ಯೆಯಾಗಿದೆ. ಇದರಲ್ಲಿ ಮೂತ್ರದ ಮೂಲಕ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ಸ ಹೋಗುತ್ತವೆ. ಓರ್ವ ಸಾಧಕಿಯ ೯ ವರ್ಷದ ಮಗನಿಗೆ ೨೦೧೫ ರಿಂದ ಈ ಕಾಯಿಲೆಯಾಗಿತ್ತು. ಈ ಸಮಸ್ಯೆ ಅವನಿಗೆ ೩-೪ ತಿಂಗಳಿಗೊಮ್ಮೆ ಆಗುತ್ತಿತ್ತು. ಆಗ ಅವನಿಗೆ ‘ಸ್ಟೆರೋಯಿಡ್‌’ ಕೊಡಬೇಕಾಗುತ್ತಿತ್ತು. ‘ಸ್ಟೆರೋಯಿಡ್‌’ನಿಂದ ಆ ಹುಡುಗನಿಗೆ ಶರೀರದಲ್ಲಿ ಬಾವು ಬರುತ್ತಿತ್ತು. ಅವನ ಈ ಕಾಯಿಲೆಗಾಗಿ ನಾನು ೨೧ ಡಿಸೆಂಬರ್ ೨೦೨೧ ರಂದು ನಾಮಜಪವನ್ನು ಕೊಟ್ಟೆ. ಮಗನಿಗೋಸ್ಕರ ಸಾಧಕಿಯು ಆ ಜಪವನ್ನು ಪ್ರತಿದಿನ ೧ ಗಂಟೆ ಮಾಡಿದಳು. ಜಪ ಮಾಡಲು ಆರಂಭಿಸಿದ ನಂತರ ೭ ದಿನಗಳಲ್ಲಿ ಹುಡುಗನಿಗೆ ಮೂತ್ರದ ಮೂಲಕ ಪ್ರೋಟಿನ್ಸ್ ಹೋಗುವುದು ನಿಂತಿತು. ಹುಡುಗನಿಗೆ ಪ್ರತಿ ೩-೪ ತಿಂಗಳಿಗೊಮ್ಮೆ ಬರುವ ಈ ನಿಂತುಹೋಯಿತು ನಾಮಜಪದಿಂದ ಸಂಪೂರ್ಣ ನಿಂತಿತು, ಆದರೂ ಹುಡುಗನ ತಾಯಿಯು ಇಂದಿಗೂ ಮಗನಿಗಾಗಿ ನಾಮಜಪವನ್ನು ಮಾಡುವುದು ಮುಂದುವರೆಸಿದ್ದಾಳೆ.

೧ ಆ. ಸಲಿಂಗ ಆಕರ್ಷಣೆಯಾಗುವುದು

ಓರ್ವ ಜಿಜ್ಞಾಸುವಿಗೆ ಸಲಿಂಗ ಆಕರ್ಷಣೆಯಾಗುತ್ತಿತ್ತು. ಅವನು ಮನಮುಕ್ತವಾಗಿ ಈ ಸಮಸ್ಯೆಯನ್ನು ಮಂಡಿಸಿದ ನಂತರ ಅವನಿಗೆ ನಾನು ನಾಮಜಪ ಹೇಳಿದೆನು. ಅವನು ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡತೊಡಗಿದ ನಂತರ ಆ ತೊಂದರೆಯು ೨೦ ದಿನಗಳಲ್ಲಿ ತುಂಬಾ ಕಡಿಮೆಯಾಯಿತು.

೧ ಇ. ಯೌನದಲ್ಲಿ ಲೈಂಗಿಕ ವಿಚಾರವು ಹೆಚ್ಚು ಪ್ರಮಾಣದಲ್ಲಿ ಬರುವುದು

ಓರ್ವ ಯುವ ಜಿಜ್ಞಾಸುವಿಗೆ ಸ್ತ್ರೀಯರ ಬಗ್ಗೆ ತೀವ್ರ ಪ್ರಮಾಣದಲ್ಲಿ ಲೈಂಗಿಕ ಆಕರ್ಷಣೆಯಾಗುತ್ತಿತ್ತು ಮತ್ತು ಸತತವಾಗಿ ಆ ವಿಚಾರಗಳು ಬರುತ್ತಿದ್ದವು. ಆದುದರಿಂದ ಅವನಿಗೆ ಸಾಧನೆಯಲ್ಲಿ ಅಡಚಣೆ ಬರುತ್ತಿದ್ದವು. ಅವನು ಆ ಕುರಿತು ಕೇಳಿದಾಗ ನಾಮಜಪ ಕೊಡಲಾಯಿತು. ಅವನು ಆ ಜಪವನ್ನು ೧೫ ದಿನ ಮಾಡಿದ ನಂತರ ಅವನ ಆ ತೊಂದರೆಯು ಬಹಳ ಕಡಿಮೆಯಾಯಿತು.

೧ ಈ. ಶರೀರದಲ್ಲಿ ‘ಇನ್ಸುಲಿನ್’ ತಯಾರಾಗದಿರುವುದು (ಡೈಬಿಟೀಸ್)

ಓರ್ವ ಸಾಧಕ ಡಾಕ್ಟರರ ೧೬ ವರ್ಷದ ಮಗನಿಗೆ ಶರೀರದಲ್ಲಿ ‘ಇನ್ಸುಲಿನ್’ ತಯಾರಾಗುತ್ತಿರಲೇ ಇಲ್ಲ. ಇಂತಹವರು ಲಕ್ಷದಲ್ಲಿ ಒಬ್ಬರಂತೆ ಇರುತ್ತಾರೆ. ಆದುದರಿಂದ ಇಂತಹ ವ್ಯಕ್ತಿಗೆ ಮೂರು ತಿಂಗಳಿಗೊಮ್ಮೆ ‘ರಕ್ತದಲ್ಲಿನ ‘ಇನ್ಸುಲಿನ್ನ ಪ್ರಮಾಣವು ಎಷ್ಟಿದೆ ?’, ಎಂಬುದನ್ನು ಪರಿಶೀಲಿಸಿ ಅದರಂತೆ ಚಿಕಿತ್ಸೆ ಮಾಡಬೇಕಾಗುತ್ತದೆ. ಈ ಸಾಧಕನ ಮಗನಿಗೆ ನಾನು ಈ ಕಾಯಿಲೆಗಾಗಿ ಜನವರಿ ೨೦೨೨ ರಲ್ಲಿ ನಾಮಜಪ ಕೊಟ್ಟೆ. ಅವನು ಕಳೆದ ೪ ತಿಂಗಳಿಂದ ಪ್ರತಿದಿನ ೧ ಗಂಟೆ ಆ ನಾಮಜಪವನ್ನು ಮಾಡುತ್ತಿರುವುದರಿಂದ ಅವನ ರಕ್ತದಲ್ಲಿನ ‘ಇನ್ಸುಲಿನ್’ನ ಪ್ರಮಾಣವು ಕಡಿಮೆಯಾಗದೇ ಅದು ೧ ನ್ಯಾನೋಗ್ರಾಮ್/೧ ಮಿಲಿಲೀಟರ್ ಅಷ್ಟು ಉಳಿಯಿತು. ರಕ್ತದಲ್ಲಿನ ‘ಇನ್ಸುಲಿನ್’ನ ಸಾಮಾನ್ಯ ಮಟ್ಟವು ೨ ನ್ಯಾನೋಗ್ರಾಮ್/೧ ಮಿಲಿಲೀಟರ್ ಇರುತ್ತದೆ. ಆದುದರಿಂದ ಈಗ ಅವನಿಗೆ ನಾಮಜಪವನ್ನು ಪ್ರತಿದಿನ ೨ ಗಂಟೆ ಮಾಡಲು ಹೇಳಿದ್ದೇನೆ.

೧ ಉ. ಸ್ನಾಯುಗಳ ಗಂಟುಗಳಾಗುವುದು

೨೦೨೨ ರಲ್ಲಿ ಓರ್ವ ಸಾಧಕಿಯ ಅತ್ತಿಗೆಯ ಹೊಟ್ಟೆಯಲ್ಲಿ ಸ್ನಾಯುಗಳಲ್ಲಿ ಗಂಟು ನಿರ್ಮಾಣವಾಗಿತ್ತು. ಅವಳಿಗೆ ನಾನು ಈ ಕಾಯಿಲೆಗಾಗಿ ನಾಮಜಪವನ್ನು ಕೊಟ್ಟೆ. ಅವಳು ಅದನ್ನು ೧ ತಿಂಗಳು ಪ್ರತಿ ದಿನ ೧ ಗಂಟೆ ಮಾಡಿದಳು. ನಂತರ ಅವಳಿಗೆ ‘ಆ ಗಂಟು ಚಪ್ಪಟೆಯಾಗಿದೆ’, ಎಂದರಿವಾಯಿತು. ಅವಳು ಡಾಕ್ಟರರ ಬಳಿಗೆ ಪರಿಶೀಲಿಸಲು ಹೋದಾಗ ಡಾಕ್ಟರರು ‘ಸ್ಕ್ಯಾನಿಂಗ್’ ಮಾಡಿದ ನಂತರ ಅವರಿಗೆ, ‘ಆ ಗಂಟು ವಿಘಟನೆಯಾಗಿದೆ ಎಂದು ಕಂಡುಬಂತು’. ಡಾಕ್ಟರರು ಆ ಸಾಧಕಿಗೆ, “ಸ್ನಾಯುಗಳ ಗಂಟು ಈ ರೀತಿ ವಿಘಟನೆಯಾಗಿರುವುದು ನಾನು ಮೊದಲ ಸಲ ನೋಡುತ್ತಿದ್ದೇನೆ. ಹೀಗೆ ಆಗಲು ಸಾಧ್ಯವೇ ಇಲ್ಲ. ಗಂಟು ಕಣ್ಮರೆಯಾಗುವ ಪ್ರಕ್ರಿಯೆಯಲ್ಲಿ ಇದು ಉತ್ತಮ ಲಕ್ಷಣವಾಗಿದೆ” ಎಂದರು.

೧ ಊ. ಮೈಸ್ತೇನಿಯಾ ಗ್ರಾವಿಸ್

ಇದೊಂದು ಗಂಭೀರ ಸ್ವರೂಪದ ರೋಗವಾಗಿದ್ದು ಅದು ನರತಂತು ಮತ್ತು ಸ್ನಾಯುಗಳ ಸಂಧಿಗಳೊಂದಿಗೆ (ನ್ಯುರೋಮಸ್ಕ್ಯೂಲರ್ ಜಂಕ್ಶನ್ ದೊಂದಿಗೆ) ಸಂಬಂಧಪಟ್ಟಿದೆ. ಈ ರೋಗವು ಆಟೋಇಮ್ಯೂನ್ ಡಿಸಾರ್ಡರ್ (ಪ್ರತಿರಕ್ಷಣೆ ವ್ಯವಸ್ಥೆಯು ಸ್ವಂತ ಶರೀರದ ಮೇಲೆಯೇ ಅಥವಾ ಶರೀರದ ಅವಯವಗಳ ಮೇಲೆ ಆಕ್ರಮಣ ಮಾಡುವುದು) ರೋಗಗಳ ವರ್ಗಕ್ಕೆ ಸೇರುತ್ತದೆ. ಮೈಸ್ತೇನಿಯಾ ಗ್ರಾವಿಸ್ ಕಾಯಿಲೆಯಲ್ಲಿ ಮೂಳೆಗಳಿಗೆ ಅಂಟಿಕೊಂಡಿರುವ ಸ್ನಾಯುಗಳು ರೋಗಗ್ರಸ್ತವಾಗುತ್ತವೆ. ಇದರಿಂದ ಅವಯವಗಳ ಚಲನೆಗೆ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸ್ನಾಯುಗಳು ದುರ್ಬಲವಾಗುತ್ತವೆ.

ಓರ್ವ ಸಾಧಕಿಗೆ ಈ ರೋಗವಾಗಿತ್ತು. ಆದುದರಿಂದ ಅವರಿಗೆ ಯಾವುದೇ ಕೆಲಸ ಮಾಡಲು, ಉದಾ. ಬೆರಳುಗಳಿಂದ ಪೆನ್ನು ಹಿಡಿಯಲು ಕೂಡ ಆಗುತ್ತಿರಲಿಲ್ಲ. ಅವರು ದಣಿಯುತ್ತಿದ್ದರು. ಆದುದರಿಂದ ಅವರಿಗೆ ಮಲಗಿಯೇ ಇರಬೇಕಾಗುತ್ತಿತ್ತು. ಇದಕ್ಕೆ ಸ್ಟೆರೋಯಿಡ್‌ ಗಳನ್ನು ಔಷಧಿ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ; ಆದರೆ ಅದರಿಂದಲೂ ಬಾವು ಬರುವಂತಹ ದುಷ್ಪರಿಣಾಮವಾಗುತ್ತದೆ. ನಾನು ಅವರಿಗೆ ಈ ರೋಗಕ್ಕೆ ಫೆಬ್ರವರಿ ೨೦೨೨ ರಲ್ಲಿ ನಾಮಜಪವನ್ನು ಹುಡುಕಿ ಕೊಟ್ಟೆ. ಅವರು ಈ ನಾಮಜಪವನ್ನು ಪ್ರತಿದಿನ ೨ ಗಂಟೆ ಮಾಡತೊಡಗಿದರು. ಅವರಿಗೆ ಒಂದೇ ತಿಂಗಳಿನಲ್ಲಿ ಈ ನಾಮಜಪದಿಂದ ಒಳ್ಳೆಯ ಲಾಭವಾಯಿತು. ಅವರು ದೈನಂದಿನ ಕೆಲಸಗಳನ್ನು ಮಾಡತೊಡಗಿದರು. ಅವರಿಗೆ ಡಾಕ್ಟರರು, ‘ಇದರಲ್ಲಿ ಒಳ್ಳೆಯ ಬದಲಾವಣೆಯಾಗಿದೆ ಮತ್ತು ರೋಗವು ನಿಯಂತ್ರಣದಲ್ಲಿದೆ’, ಎಂದು ಹೇಳಿ ಅವರ ಔಷಧಗಳ ಸ್ಟೆರೋಯಿಡ್‌ ಪ್ರಮಾಣವನ್ನೂ ಕಡಿಮೆ ಮಾಡಿದರು. ಹಾಗೆಯೇ ಡಾಕ್ಟರರು, ‘ಈ ರೋಗವು ಉಸಿರಾಟದ ಮೇಲೆ ಪರಿಣಾಮ ಬೀರಲಿಲ್ಲ, ಇದು ಮಹತ್ವದ್ದಾಗಿದೆ’ ಎಂದರು.

೧ ಎ. ‘ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌’ನ ಪ್ರಮಾಣವು ಹೆಚ್ಚಳವಾಗುವುದು

ಫೆಬ್ರುವರಿ ೨೦೨೨ ರಲ್ಲಿ ಓರ್ವ ಸಾಧಕಿಯ ಶರೀರದಲ್ಲಿನ ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌ ಪ್ರಮಾಣವು ಹೆಚ್ಚಾಗಿರುವುದು ಕಂಡುಬಂದಿತು. ರಕ್ತದೊತ್ತಡವು ಕಡಿಮೆ ಇರುತ್ತಿತ್ತು. (ರಕ್ತದಲ್ಲಿನ ಕಾರ್ಟಿಸಾಲ್ ಹಾರ್ಮೋನಿನ ಪ್ರಮಾಣ ಕಡಿಮೆಯಾದಾಗ ‘ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌’ನ ಪ್ರಮಾಣವು ಹೆಚ್ಚಾಗುತ್ತದೆ. ರಕ್ತದೊತ್ತಡ ಕಡಿಮೆಯಾಗಲು ‘ಕಾರ್ಟಿಸಾಲ್’ ಎಂಬ ಹಾರ್ಮೊನಿನ ಪ್ರಮಾಣವು ಕಡಿಮೆಯಾಗುವುದೇ, ಕಾರಣವಾಗಿದೆ.) ಅವಳಿಗೆ ದಣಿವು ಇರುತ್ತಿತ್ತು, ಹಾಗೆಯೇ ಅವಳ ಪಚನಕ್ರಿಯೆಯ (ಮೆಟಾಬಲಿಸಮ್‍) ಮೇಲೆಯೂ ಪರಿಣಾಮವಾಗಿತ್ತು. ಇದರಿಂದ ಅವಳ ಶರೀರದ ರೋಗನಿರೋಧಕ ಕ್ಷಮತೆಯೂ ಕಡಿಮೆಯಾಗಿತ್ತು. ಅವಳ ಈ ರೋಗಕ್ಕೆ ನಾನು ಅವಳಿಗೆ ಮಾರ್ಚ ೨೦೨೨ ರಲ್ಲಿ ನಾಮಜಪ ಕೊಟ್ಟು ಅದನ್ನು ಪ್ರತಿದಿನ ೧ ಗಂಟೆ ಮಾಡಲು ಹೇಳಿದೆನು. ಅವಳು ಅದನ್ನು ೩ ತಿಂಗಳು ಮಾಡಿದಳು. ಅವಳು ಈ ರೋಗಕ್ಕೆ ಡಾಕ್ಟರರು ಹೇಳಿದಂತೆ ೧ ತಿಂಗಳು ‘ಸ್ಟೆರೋಯಿಡ್‌’ ತೆಗೆದುಕೊಂಡಳು. ಜೂನ್ ೨೦೨೨ ರಲ್ಲಿ ಅವಳ ಶಾರೀರಿಕ ಸ್ಥಿತಿಯು ಸ್ವಲ್ಪ ಸುಧಾರಿಸಿತು. ಅವಳಿಗೆ ದಣಿವಿನ ಪ್ರಮಾಣವು ಕಡಿಮೆಯಾಯಿತು, ಈ ಮೊದಲು ಕಡಿಮೆಯಾಗಿರುವ ರಕ್ತದೊತ್ತಡ ಹೆಚ್ಚಿತು, ಹಾಗೆಯೇ ಅವಳಿಗೆ ಆಹಾರವು ಪಚನವಾಗತೊಡಗಿತು. ಅವಳಲ್ಲಿ ‘ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌’ನ ಪ್ರಮಾಣವು ಈ ಮೊದಲು ೭೨.೬ ಪಿಕೋಗ್ರಾಮ್/೧ ಮಿಲಿಲೀಟರ್ ಇತ್ತು, ಅದು ಈಗ ೬೪.೧ ಪಿಕೋಗ್ರಾಮ್/೧ ಮಿಲಿಲಿಟರ್ ಆಯಿತು. (‘ಅಡ್ರಿನೊಕೊರ್ಟಿಕೋಟ್ರಾಪಿಕ್ ಹಾರ್ಮೋನ್‌’ನ ಸಾಮಾನ್ಯ ಪ್ರಮಾಣ ೪೬ ಪಿಕೋಗ್ರಾಮ್/೧ ಮಿಲಿಲೀಟರ್‌ಗಿಂತ ಕೆಳಗಿರಬೇಕು).

೨. ಜಪಗಳ ಮಹತ್ವ

ಆಪತ್ಕಾಲದಲ್ಲಿ ಔಷಧಿಗಳು, ಡಾಕ್ಟರರ ಅಭಾವದ ಅರಿವಾಗುವುದು, ಆಗ ಈ ಜಪಗಳು ಉತ್ತಮವಾಗಿ ಉಪಯೋಗವಾಗುವುವು.

೩. ಕೃತಜ್ಞತೆಗಳು

ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನಾನು ಈ ಜಪಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತು ಮತ್ತು ಆ ಜಪಗಳ ಉತ್ತಮ ಪರಿಣಾಮವೂ ಗಮನಕ್ಕೆ ಬಂದಿತು. ಇದಕ್ಕಾಗಿ ನಾನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞನಾಗಿದ್ದೇನೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೬.೨೦೨೨)

ಸಾಧಕರಿಗೆ ಇಲ್ಲಿ ನಮೂದಿಸಲಾದ ರೋಗಗಳ ಪೈಕಿ ಯಾವುದಾದರೊಂದು ರೋಗವಿದ್ದರೆ ಅದನ್ನು ದೂರ ಮಾಡಲು ‘ಆ ಸಂದರ್ಭದಲ್ಲಿ ನೀಡಿದ ನಾಮಜಪವನ್ನು ಮಾಡಿ ನೋಡಬೇಕು’, ಎಂದೆನಿಸದರೆ ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿ ದಿನ ೧ ಗಂಟೆ ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳಿಗೆ ಸಂಬಂಧಿಸಿದಂತೆ ಬರುವ ಅನುಭೂತಿಗಳನ್ನು ಸಾಧಕರು [email protected] ಈ ವಿ-ಅಂಚೆ ವಿಳಾಸಕ್ಕೆ ಅಥವಾ ಮುಂದಿನ ಅಂಚೆ ವಿಳಾಸಕ್ಕೆ ಕಳುಹಿಸಬೇಕು. ಸಾಧಕರ ಈ ಅನುಭೂತಿಗಳು ಗ್ರಂಥಗಳಲ್ಲಿ ತೆಗೆದುಕೊಳ್ಳುವ ದೃಷ್ಟಿಯಿಂದ, ಹಾಗೆಯೇ ನಾಮಜಪದ ಯೋಗ್ಯತೆ ಸಿದ್ಧವಾಗಲು ಸಹ ಉಪಯುಕ್ತವಾಗುವುದು.
ಅಂಚೆ ವಿಳಾಸ : ಸನಾತನ ಆಶ್ರಮ, ೨೪/ಬಿ ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ. ಪಿನ್‌ಕೋಡ್ ೪೦೩೪೦೧

Leave a Comment