ಹೃದಯಕ್ಕೆ ಸಂಬಂಧಿಸಿದಂತೆ ತೊಂದರೆ ಆಗುತ್ತಿದ್ದರೆ ಈ ಮುಂದಿನ ಉಪಾಯ ಮಾಡಿ !
ಎದೆಯ ಮೇಲೆ ಒತ್ತಡದ ಅರಿವಾಗುವುದು, ಉಸಿರಾಡಲು ತೊಂದರೆಯಾಗುವುದು, ಅಸ್ವಸ್ಥತೆ ಅನಿಸುವುದು, ಎದೆಯಲ್ಲಿ ನೋವು ಬರುವುದು, ಈ ರೀತಿಯ ತೊಂದರೆಗಳು ಆಗುತ್ತಿವೆ. ಪ್ರಾಣಶಕ್ತಿ ಸಂವಹನ ಪದ್ದತಿಯಿಂದ ನಾಮಜಪ ಹುಡುಕಿ ತೆಗೆಯುವ ತನಕ ಈ ಮುಂದಿನ ಆಧ್ಯಾತ್ಮಿಕ ಉಪಾಯವನ್ನು ಮಾಡಬಹುದು.
ಅ. ಸಾಪ್ತಾಹಿಕ ‘ಸನಾತನ ಪ್ರಭಾತ’ದಿಂದ ಎದೆಯ ಮೇಲಿನ ಆವರಣವನ್ನು ತೆಗೆಯುವುದು
ಆ. ಖಾಲಿ ಪೆಟ್ಟಿಗೆಯ ಎದುರಿನ ಭಾಗವನ್ನು ಎದೆಯ ದಿಕ್ಕಿನತ್ತ ಇಡುವುದು
ಇ. ಎದೆಗೆ ಕರ್ಪೂರದ ಪುಡಿ ಅಥವಾ ವಿಭೂತಿಯನ್ನು ಹಚ್ಚುವುದು
ಈ. ಸೂರ್ಯದೇವರಿಗೆ ಹೃದಯದ ರಕ್ಷಣೆಯನ್ನು ಮಾಡಲು ಪ್ರಾರ್ಥನೆಯನ್ನು ಮಾಡುವುದು
ಉ. ‘ಆದಿತ್ಯ ಹೃದಯ ಸ್ತೋತ್ರ’ ಆಡಿಯೋ ಹಾಕಿ ಆ ಸ್ತೋತ್ರದ ಚೈತನ್ಯದಿಂದಾಗಿ ತನ್ನ ಹೃದಯದ ಸುತ್ತಲು ರಕ್ಷಣಾ ಕವಚ ನಿರ್ಮಾಣ ಮಾಡುವಂತೆ ಸೂರ್ಯ ದೇವರಿಗೆ ಪ್ರಾರ್ಥನೆಯನ್ನು ಮಾಡಿ ಈ ಸ್ತೋತ್ರವನ್ನು ಒಮ್ಮೆಲೆ ೩ ಸಲ ಕೇಳಬೇಕು, ಆದರೂ ತೊಂದರೆ ಕಡಿಮೆಯಾಗದಿದ್ದಲ್ಲಿ ೭ ಸಲ ಕೇಳಬೇಕು ಹಾಗೂ ಅದರಿಂದಲೂ ಆಗದಿದ್ದಲ್ಲಿ ೧೧ ಸಲ ಕೇಳಬೇಕು.
ಆದಿತ್ಯ ಹೃದಯ ಸ್ತೋತ್ರ
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೧೭.೭.೨೦೧೯, ರಾತ್ರಿ ೧೧.೩೫)
ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…
ಸಾಧನೆಯಲ್ಲಿ ಅಡಚಣೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವ’ ಉಪಾಯ
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!
ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’