ಲಘುಮಾಲಿನಿ ವಸಂತ (ಮಾತ್ರೆಗಳು)

Article also available in :

ಲಘುಮಾಲಿನಿ ವಸಂತ (ಮಾತ್ರೆಗಳು)

ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ

ಈ ಔಷಧವು ಶರೀರದಲ್ಲಿರುವ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
ಶರೀರದೊಳಗಿರುವ ಜ್ವರ, ಸ್ಪ್ಲೀನ ದೊಡ್ಡದಾಗುವುದು, ಪದೇ ಪದೇ ಕಾಡುವ ಅತಿಸಾರ, ಶರೀರ ಕ್ಷೀಣವಾಗುವುದು, ಮೂಲವ್ಯಾಧಿ, ಹಸಿವಾಗದಿರುವುದು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು, ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು, ಮತ್ತು ಕಣ್ಣುಗಳ ರೋಗ ಬೆಳಗ್ಗೆ ಮತ್ತು ಸಾಯಂಕಾಲ 1-2 ಮಾತ್ರೆಗಳನ್ನು 1 ಚಿಟಿಕೆ ಪಿಪ್ಪಲಿ ಚೂರ್ಣ ಮತ್ತು 1 ಚಮಚ ಜೇನುತುಪ್ಪದೊಂದಿಗೆ / 1 ಚಿಕ್ಕ ಬಟ್ಟಲು ಹಾಲಿನೊಂದಿಗೆ  ಸೇವಿಸಬೇಕು. ಈ ಔಷಧಿ ಸೇವಿಸುವ ಮೊದಲು ಮತ್ತು ನಂತರ ಸಾಧಾರಣ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು-ಕುಡಿಯಬಾರದು. 1 ರಿಂದ 3 ತಿಂಗಳು
ಮಳೆಗಾಲ ಮತ್ತು ಬೇಸಿಗೆಯಲ್ಲಿ ತಂಪು ಗಾಳಿಯ ಸ್ಪರ್ಶದಿಂದ ಮೈಯಲ್ಲಿ ಪಿತ್ತವೃದ್ಧಿಯಾಗುವುದು ಮತ್ತು ಮೈ ತುರಿಕೆ ದಿನದಲ್ಲಿ 2-3 ಬಾರಿ 2-4 ಮಾತ್ರೆಗಳನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಸೇವಿಸಬೇಕು.
ಇದರೊಂದಿಗೆ ರಾತ್ರಿ ಮಲಗುವಾಗ ಸ್ವಲ್ಪ ನೀರಿನಲ್ಲಿ 1 ಚಮಚ ತ್ರಿಫಲಾ ಚೂರ್ಣವನ್ನೂ ಸೇವಿಸಬೇಕು.
ಬೆಳಗ್ಗೆ ಸ್ನಾನದ ಮೊದಲು ಕಾಲು ಚಮಚ ಕಾಳು ಮೆಣಸಿನ ಚೂರ್ಣವನ್ನು ತುಪ್ಪದಲ್ಲಿ ಕಲಸಿ ಇಡೀ ಶರೀರಕ್ಕೆ ಹಚ್ಚಿಕೊಳ್ಳಬೇಕು.
7 – 15 ದಿನಗಳು
ಚಿಕ್ಕ ಮಕ್ಕಳ ಜ್ವರ 3 ವರ್ಷಗಳ ವರೆಗಿನ ಮಕ್ಕಳಿಗೆ ಅರ್ಧ ಮಾತ್ರೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 1 ಮಾತ್ರೆಯನ್ನು ದಿನದಲ್ಲಿ 2-3 ಬಾರಿ ಅರ್ಧ ಚಮಚ ಜೇನುತುಪ್ಪದೊಂದಿಗೆ ನೀಡಬೇಕು. 5 ದಿನ

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.

3. ಬಾಯಿ ಹುಣ್ಣು ಮತ್ತು ಮೈ ಉರಿ ಈ ಲಕ್ಷಣಗಳಿರುವಾಗ ಈ ಔಷಧವನ್ನು ಸೇವಿಸಬಾರದು

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

Leave a Comment