ಯೋಗರಾಜ ಗುಗ್ಗುಲು (ಮಾತ್ರೆಗಳು)

Article also available in :

ಯೋಗರಾಜ ಗುಗ್ಗುಲು (ಮಾತ್ರೆಗಳು)

ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ

ಇದು ಉತ್ತಮ ವಾತನಾಶಕ ಔಷಧಿಯಾಗಿದೆ. ಇದರ ರೋಗಗಳಲ್ಲಿ ಆಗಬಹುದಾದ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
ವಾತದ ರೋಗಗಳು, ಅರ್ಧಾಂಗವಾಯು, ಕೈಗಳು ನಡಗುವುದು, ತಲೆತಿರುಗುವುದು, ಉಚ್ಚ ರಕ್ತದೊತ್ತಡ, ಬೊಜ್ಜು (ಸ್ಥೂಲಕಾಯ), ಸಂಧಿವಾತ (ಸಂಧಿಗಳಿಗೆ ಬಾವು ಬರುವುದು ಮತ್ತು ಸಂಧಿಗಳು ನೋಯಿಸುವುದು) ಮತ್ತು ಕೈಕಾಲುಗಳು ನೋಯಿಸುವುದು. ದಿನದಲ್ಲಿ 2 ಮಾತ್ರೆಗಳನ್ನು 2 – 3 ಸಲ ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು 1 ರಿಂದ 3 ತಿಂಗಳು
ವೈದ್ಯ ಮೇಘರಾಜ ಮಾಧವ ಪರಾಡಕರ

ಆ. ಸೂಚನೆ

1. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ (ಹುಡಿ) ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುತ್ತದೆ.

2. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ ಗೋವಾ. (11.6.2021)

Leave a Comment