ಪ್ರಶಂಸೆಯಲ್ಲಿ ಸಿಲುಕದೆ ಸಾಧನೆಯಲ್ಲಿ ಮುಂದುವರಿಯಲು ಮಾರ್ಗದರ್ಶಕ ವಿಚಾರಗಳು

ಸೌ. ಸುಪ್ರಿಯಾ ಮಾಥುರ
ಸೌ. ಸುಪ್ರಿಯಾ ಮಾಥುರ

ಯಾರಾದರೊಬ್ಬರು ನಮ್ಮನ್ನು ಹೊಗಳಿದರೆ ಅದನ್ನು ಹೇಗೆ ವೀಕ್ಷಿಸುವುದರಿಂದ ಸಾಧನೆಯಲ್ಲಿ ಪ್ರಯೋಜನವಾಗುತ್ತದೆ ಮತ್ತು ಪ್ರಶಂಸೆಯಲ್ಲಿ ಸಿಲುಕದೆ ನಾವು ಸಾಧನೆಯಲ್ಲಿ ಹೇಗೆ ಮುನ್ನಡೆಯಬಹುದು ಎಂಬುವುದರ ಬಗ್ಗೆ ಸೌ. ಸುಪ್ರಿಯಾ ಸುರ್ಜಿತ ಮಾಥುರ ಅವರಿಂದ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮುಂದೆ ನೀಡಲಾಗಿದೆ. – ಸೌ. ಸಮಿಧಾ ಸಂಜಯ ಪಾಲಶೇತಕರ

1. ಯಾರೋ ನಮ್ಮನ್ನು ಹೊಗಳಿದರೆ ಅಹಂಕಾರ ಹೆಚ್ಚಾಗುತ್ತದೆ ಎಂಬುದು ತಪ್ಪು ತಿಳುವಳಿಕೆ

ಸೌ. ಸುಪ್ರಿಯಾ ಅವರು ಹೇಳಿದ್ದು – ಗುಣವು ದೇವರ ಕೊಡುಗೆಯಾಗಿದೆ. ಆದ್ದರಿಂದ ಆ ಸಂದರ್ಭದಲ್ಲಿ ಬರುವ ಅನುಭೂತಿ, ಕಲಿಯಲು ಸಿಕ್ಕಿದ ಅಂಶಗಳು ಅಥವಾ ಆ ಸಂದರ್ಭದಲ್ಲಾದ ಉತ್ತಮ ಪ್ರಯತ್ನಗಳನ್ನು ಬರೆದು ಕೊಟ್ಟರೆ ಇತರ ಸಾಧಕರಿಗೆ ಅದೇ ರೀತು ಪ್ರಯತ್ನಿಸಲು ಸುಲಭವಾಗುತ್ತದೆ. ನಾನು ಬರೆದು ಕೊಟ್ಟರೆ, ನನ್ನ ಅಹಂಕಾರವು ಹೆಚ್ಚಾಗುತ್ತದೆ ಎಂದು ಅನೇಕ ಬಾರಿ ಸಾಧಕರ ಮನಸ್ಸಿನಲ್ಲಿ ಯಾರೋ ನಮ್ಮನ್ನು ಹೊಗಳಿದರೆಂದರೆ ನಮ್ಮ ಅಹಂಕಾರ ಹೆಚ್ಚಾಗುತ್ತದೆ ಎಂಬ ಭೀತಿಯಿರುತ್ತದೆ. ಇದು ತಪ್ಪು ತಿಳುವಳಿಕೆಯಾಗಿದೆ.

2. ನಮ್ಮ ಪ್ರಶಂಸೆಯನ್ನು ಸ್ವಕರ್ತೃತ್ವದ ಭಾವನೆಯಿಂದ ಕೇಳುವುದರಿಂದಾಗುವ ಪರಿಣಾಮ

ನಾವು ಎಲ್ಲಿ ತಪ್ಪುತ್ತೇವೆ ಎಂದರೆ ನಾವು ನಮ್ಮ ಸ್ವಕರ್ತೃತ್ವದ ವಿಚಾರದಿಂದ ಕೇಳುತ್ತೇವೆ ಮತ್ತು ಮನೋರಾಜ್ಯದಲ್ಲಿ ವಿಹರಿಸಿ ‘ನಾನು ಹೇಗೆ ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ವಿಚಾರ ಮಾಡುತ್ತಿರುತ್ತೇವೆ. ಇದರಿಂದ ಸ್ವಯಂ-ಕೇಂದ್ರಿತ ಕೋಶ ರಚನೆಯಾಗುತ್ತದೆ. ಅದರ ಪರಿಣಾಮವಾಗಿ ಯಾರೇ ಆಗಲಿ ನಮಗೆ ಏನನ್ನಾದರೂ ಕಲಿಸುವುದು ಕನಿಷ್ಠವೆಂದು ಅನಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ನಮಗೆ ತಪ್ಪು ಹೇಳಿದರೆ ಕೋಪ ಬರುತ್ತದೆ ಮತ್ತು ಮನಸ್ಸು ನಿರಾಶವಾಗುತ್ತದೆ. ಈ ಚಕ್ರದಲ್ಲಿ ಸಿಲುಕಿಕೊಂಡು ನಾವು ಸಾಧನೆಯಿಂದ ದೂರ ಹೋಗುತ್ತೇವೆ. ಪ್ರಯತ್ನಗಳ ದಿಶೆ ಯೋಗ್ಯವಿಲ್ಲದ ಕಾರಣ ‘ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ’ ಎಂಬ ಭ್ರಮೆಯಲ್ಲಿ ಸಾಧನೆಯ ಅನೇಕ ವರ್ಷಗಳು ವ್ಯರ್ಥವಾಗುತ್ತವೆ.

3. ಕೃತಿಯ ಸ್ತರದಲ್ಲಿ ಹೇಗೆ ಪ್ರಯತ್ನಿಸುವುದು?

ಪ್ರಶಂಸೆ ಕೇಳಿದ ನಂತರ ‘ದೇವರಿಗೆ ಕೊಡಲು ನಮ್ಮ ಬಳಿ ಏನಿದೆ ಹಾಗೂ ಗುರುಗಳಿಗೆ ಏನು ಇಷ್ಟವಾಗುತ್ತದೆ’ ಎಂಬ ರಹಸ್ಯ ಬಹಿರಂಗವಾಗುತ್ತದೆ. ‘ನಮ್ಮಲ್ಲಿರುವಂತಹ, ಗುರುಗಳಿಗೆ ಇಷ್ಟವಾಗುವ, ಗುಣಗಳನ್ನು ಇನ್ನೂ ನಾವು ಹೇಗೆ ಗುರುಗಳಿಗೆ ಅರ್ಪಿಸಬಹುದು ಮತ್ತೆ ಹೇಗೆ ಗುಣವೃದ್ಧಿ ಮಾಡಬಹುದು ಎಂದು ವಿಚಾರ ಮಾಡಿ ಪ್ರಯತ್ನಗಳನ್ನು ತಳಮಳದಿಂದ ಮಾಡಿದರೆ, ವೇಗವಾಗಿ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಪ್ರಯಾಣವಾಗುತ್ತದೆ.

ನಾವು ಪ್ರಶಂಸಿಸುವ ವ್ಯಕ್ತಿಗೆ ಇದು ಈಶ್ವರನ ಅಥವಾ ಗುರುಗಳ ಸಹಾಯದಿಂದಲೇ ಆಗಿದೆ, ಎಂದು ಸಹಜವಾಗಿ ಹೇಳಬಹುದು. ಇದರಿಂದ ಅದರ ಕರ್ತೃತ್ವದ ಭಾವನೆ ನಮ್ಮಲ್ಲಿರುವುದಿಲ್ಲ.

4. ವೈಚಾರಿಕ ಸ್ತರದಲ್ಲಿ ಹೇಗೆ ಪ್ರಯತಿಸಬೇಕು?

ಅ. ಎದುರಿನ ವ್ಯಕ್ತಿ ನಮ್ಮಲ್ಲಿರುವ ಗುಣಗಳನ್ನು ಪ್ರಶಂಸಿದಾಗ ನಮಗೆ ನಮ್ಮ ಕ್ಷಮತೆ ಗೊತ್ತಿರುತ್ತದೆ. ಆಗ ನಮ್ಮತ್ತ ವಸ್ತುನಿಷ್ಠವಾಗಿ ನೋಡುವಂತಿರಬೇಕು.

ಆ. ನಾವು ಮಾಡುತ್ತಿರುವ ಪ್ರಯತ್ನಗಳು; ಹಾಗೆಯೇ ನಮ್ಮಲ್ಲಿರುವ ಗುಣಗಳು, ಇವು ಈಶ್ವರನ ಕೊಡುಗೆಗಳಾಗಿವೆ, ಇದು ಅವರ ಕೃಪೆಯಾಗಿದೆ, ಎಂಬುದು ಗಮನದಲ್ಲಿರಬೇಕು.

ಇ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿರುವ ಸ್ವಭಾವದೋಷ ಹಾಗೂ ಅಹಂ ತೆಗೆದು ಹಾಕಲು ನಾವು ಅಸಮರ್ಥರಾಗಿದ್ದೇವೆ, ಎಂಬುದು ಮನಸ್ಸಿಗೆ ಅರಿವಾದರೆ, ನಮ್ಮಲ್ಲಿರುವ ಅಹಂ ಹೆಚ್ಚಾಗದೆ ನಾವು ಸಹಜಾವಸ್ಥೆಯಲ್ಲಿರಬಹುದು.

ಸೌ. ಸಮಿಧಾ ಪಾಲಶೇತಕರ
ಸೌ. ಸಮಿಧಾ ಪಾಲಶೇತಕರ

ಪ.ಪೂ. ಭಕ್ತರಾಜ ಮಹಾರಾಜರು ಒಂದು ಭಜನೆಯಲ್ಲಿ ಮುಂದಿನಂತೆ ಹೇಳಿದ್ದಾರೆ – ಧನವೆಲ್ಲವನ್ನೂ ಒಂದು ವೇಳೆ ಸಮರ್ಪಿಸಿದರೂ ಯಾರ ಕೃಪೆಯಿಂದ ಅದು ಪ್ರಾಪ್ತವಾಯಿತು ಎಂದು ಇಂದಿಗೂ ನನಗೆ ಏಕೆ ಅರ್ಥವಾಗಿಲ್ಲ, ನಿನಗೆ ಅದನ್ನು ಹೇಗೆ ಅರ್ಪಿಸಲಿ? ನಿಮ್ಮ ಸೇವೆಯನ್ನು ಹೇಗೆ ಮಾಡಲಿ ನಾಥಾ ಹೇಗೆ ಸೇವೆಯನ್ನು ಮಾಡಲಿ!

ಹೇ ಗುರುದೇವಾ, ಇದೆಲ್ಲವು ನನಗೆ ಕಲಿಯಲು ಸಿಕ್ಕಿತು ಹಾಗೂ ನೀವೇ ನನ್ನಿಂದ ಇದನ್ನು ಬರೆಯಿಸಿಕೊಂಡಿದ್ದೀರಿ, ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ!

– ಸೌ. ಸಮಿಧಾ ಸಂಜಯ ಪಾಲಶೇತಕರ, ಪನವೆಲ

Leave a Comment