ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ 81ನೇ ಜನ್ಮೋತ್ಸವ ಸಪ್ತರ್ಷಿಗಳ ಆಜ್ಞೆಯಂತೆ ಬ್ರಹ್ಮೋತ್ಸವವೆಂದು ಆಚರಿಸಲಾಯಿತು. ಸನಾತನ ಸಂಸ್ಥೆಯ ಗೋವಾ, ಮಹಾರಾಷ್ಟ್ರ, ಕರ್ನಾಟಕ ಹಾಗೆಯೇ ಇತರ ರಾಜ್ಯಗಳ 10,000 ಕ್ಕೂ ಹೆಚ್ಚು ಸಾಧಕರ ಸಮ್ಮುಖದಲ್ಲಿ ಅತ್ಯಂತ ಭಾವಭಕ್ತಿಯ ವಾತಾವರಣದಲ್ಲಿ ಗೋವಾದ ಫಾರ್ಮಾಗುಡಿಯ ಇಂಜಿನಿಯರಿಂಗ್ ಕಾಲೇಜ ಮೈದಾನದಲ್ಲಿ ಈ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಆಂಧ್ರಪ್ರದೇಶದ ತಿರುಪತಿಯಲ್ಲಿ ಶ್ರೀ ಬಾಲಾಜಿ ದೇವಸ್ಥಾನದಲ್ಲಿ ನೆಡಸಲಾಗುವ ಮೆರವಣಿಗೆಗೆ ‘ಬ್ರಹ್ಮೋತ್ಸವ’ ಎಂದು ಕರೆಯಲಾಗುತ್ತದೆ. ಅದೇ ರೀತಿ ಈ ಬಾರಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ರಥಯಾತ್ರೆಯನ್ನು ಮರದಿಂದ ತಯಾರಿಸಲಾದ ಸುವರ್ಣ ವರ್ಣದ ರಥದಲ್ಲಿ ಮಾಡಲಾಯಿತು.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಜನ್ಮೋತ್ಸವ

ಈ ಸಮಾರಂಭದಲ್ಲಿ ಝಾರ್ಖಂಡ್ ನಿಂದ ಪೂ. ಪ್ರದೀಪ್ ಖೇಮ್ಕಾ, ಪೂ. (ಸೌ.) ಸುನೀತಾ ಖೇಮ್ಕಾ, ದೆಹಲಿಯಿಂದ ಪೂ. ಸಂಜೀವ್ ಕುಮಾರ್, ‘ಪೀತಾಂಬರಿ’ ಉದ್ಯೋಗ ಸಮೂಹದ ಶ್ರೀ. ರವೀಂದ್ರ ಪ್ರಭುದೇಸಾಯಿ ಮತ್ತು ಕರ್ನಾಟಕದ ಹಿಂದುತ್ವನಿಷ್ಠ ವಕೀಲರಾದ ಪಿ. ಕೃಷ್ಣಮೂರ್ತಿ ಅವರು ಮನೋಗತವನ್ನು ವ್ಯಕ್ತಪಡಿಸಿದರು. ಹಾಗೂ ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಸೇರಿದಂತೆ ಸನಾತನದ ಇನ್ನಿತರ ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋವಾ ಸರಸಂಘಚಾಲಕರಾದ ಶ್ರೀ. ರಾಜನ್ ಭೋಬೆ, ಶ್ರೀ ಮ್ಹಾರ್ದೋಳಿನ ಮಹಾಲಸಾ ಮಂದಿರದ ಅಧ್ಯಕ್ಷ ಶ್ರೀ. ಪ್ರೇಮಾನಂದ ಕಾಮತ್, ಗೋಮಾಂತಕ ಸಂತ ಮಂಡಲದ ಸಂಚಾಲಕ ಹ.ಭ.ಪ ಸುಹಾಸ್ ಬುವಾ ವಝೆ, ಗೋಮಾಂತಕ ದೇವಸ್ಥಾನದ ಮಹಾಸಂಘದ ಅಧ್ಯಕ್ಷ ಶ್ರೀ. ಭಾಯಿ ಪಂಡಿತ್, ಕೊಂಕಣಿ ಲೇಖಕ ಮಹೇಶ್ ಪಾರಕರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಹುಟ್ಟುಹಬ್ಬದ ನಿಮಿತ್ತ ಬ್ರಹ್ಮೋತ್ಸವದ ಸುವರ್ಣ ರಥದ ಮೆರವಣಿಗೆ
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಹುಟ್ಟುಹಬ್ಬದ ನಿಮಿತ್ತ ಬ್ರಹ್ಮೋತ್ಸವದ ಸುವರ್ಣ ರಥದ ಮೆರವಣಿಗೆ

ಕಾರ್ಯಕ್ರಮದ ಆರಂಭದಲ್ಲಿ 2021 ರಲ್ಲಿ ಜರುಗಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಬಳಿಕ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿದ್ದ ರಥ, ಅಂತೆಯೇ ಧರ್ಮಧ್ವಜ, ಮಂಗಲಕಲಶವನ್ನು ಹಿಡಿದ ಮುತ್ತೈದೆಯರು, ಧ್ವಜಪಥಕ, ತಾಳಪಥಕ ಇವುಗಳು ‘ಶ್ರೀಮನ್ನಾರಾಯಣ ನಾರಾಯಣ…’ ಈ ನಾಮದೊಂದಿಗೆ ಮೈದಾನದ ಸುತ್ತಲೂ ಮೆರವಣಿಗೆಯನ್ನು ನಡೆಸಿದವು. ಸುವರ್ಣ ರಥದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರೂ ವಿರಾಜಮಾನರಾಗಿದ್ದರು. ಈ ಸಂದರ್ಭದಲ್ಲಿ ನೃತ್ಯ ತಂಡವು ‘ಅಚ್ಯುತಾಷ್ಟಕಮ್’ ಆಧಾರಿತ ನೃತ್ಯವನ್ನು ಪ್ರಸ್ತುತಪಡೆಸಿತು. ಬಳಿಕ ‘ಆತ್ಮಾರಾಮ ಆನಂದರಮಣ’ ಈ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ವಂದನಾರ್ಪಣೆ ಮತ್ತು ರಥದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಹುಟ್ಟುಹಬ್ಬದ ನಿಮಿತ್ತ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡ ಸಾಧಕರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ 81 ನೇ ಹುಟ್ಟುಹಬ್ಬದ ನಿಮಿತ್ತ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡ ಸಾಧಕರು

ಬ್ರಹ್ಮೋತ್ಸವದಲ್ಲಿ ಉಪಸ್ಥಿತ ಸಾಧಕರು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಾದ್ಯಂತ ‘ಹಿಂದೂ ರಾಷ್ಟ್ರ ಜಾಗೃತಿ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ಅನೇಕ ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ, ನೂರಾರು ದೇವಾಲಯಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರಾರ್ಥನೆಗಳು, ಪ್ರವಚನಗಳು ಮತ್ತು ಹಲವೆಡೆ ‘ಹಿಂದೂ ಐಕ್ಯತಾ ಶೋಭಾಯಾತ್ರೆ’ಯಗಳನ್ನು ನಡೆಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು.

Leave a Comment