
ನಾಮವಿಲ್ಲದೇ ಈಶ್ವರನ ಅನುಭೂತಿ ಬರುವುದಿಲ್ಲ. ಈಶ್ವರಪ್ರಾಪ್ತಿ ಮಾಡಿಸುವ ವಿವಿಧ ಸಾಧನಾಮಾರ್ಗಗಳಿವೆ. ಇಂದಿನ ದೈನಂದಿನ ಬಿಡುವಿಲ್ಲದ ಜಗತ್ತಿನಲ್ಲಿರುವ ಸರ್ವಸಾಮಾನ್ಯ ಸಂಸಾರಿಯು ಆಚರಣೆಗೆ ತರಲು ಸುಲಭವಾಗಿರುವ, ಶುಚಿತ್ವ, ಸ್ಥಳ-ಕಾಲ ಮುಂತಾದ ಬಂಧನರಹಿತವಾದಂತಹ ಮತ್ತು ಭಗವಂತನೊಂದಿಗೆ ಸತತ ಅನುಸಂಧಾನವನ್ನಿಟ್ಟುಕೊಡುವ, ಅಂದರೆ ಸಾಧನೆ ಅಖಂಡವಾಗಿ ನಡೆಸುವಂತಹ ಏಕೈಕ ಸಾಧನಾಮಾರ್ಗ ಎಂದರೆ ನಾಮಯೋಗ. ಹುಲ್ಲು ಮತ್ತು ಅಗ್ನಿ ಒಟ್ಟಿಗೆ ಬಂದರೆ, ಹುಲ್ಲು ಸುಡುತ್ತದೆ ಮತ್ತು ಸುಟ್ಟು ಅಗ್ನಿರೂಪವಾಗುತ್ತದೆ, ಭಗವಂತನ ನಾಮವನ್ನು ಉಚ್ಚರಿಸಿದರೆ ನಾಮವು ಎಲ್ಲ ಪಾಪಗಳನ್ನು ಸುಟ್ಟು ಹಾಕುತ್ತದೆ ಮತ್ತು ಭಕ್ತನು ಭಗವಂತನೊಂದಿಗೆ ಏಕರೂಪನಾಗುತ್ತಾನೆ, ಇಷ್ಟು ಅಸಾಧಾರಣ ಮಹತ್ವವಿರುವ ಭಗವಂತನ ನಾಮದಲ್ಲಿ ಮಗ್ನವಾಗುವುದೇ ಹಿತಕಾರಿ !
ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !
ನಾಮಜಪಾದಿ ಉಪಚಾರಗಳಿಗಾಗಿ ಕುಳಿತುಕೊಳ್ಳುವಾಗ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ
ದೇವತೆಯ ‘ತಾರಕ’ ಮತ್ತು ‘ಮಾರಕ’ ನಾಮಜಪದ ಮಹತ್ತ್ವ
ಸಮಷ್ಟಿಗಾಗಿ (ಹಿಂದೂ ರಾಷ್ಟ್ರ ಸ್ಥಾಪನೆಗಾಗಿ) ಮಾಡಬೇಕಾಗಿರುವ ನಾಮಜಪ
ನಾಮಜಪ ಅಥವಾ ಮಂತ್ರ ಪಠಣ ಏಕಾಗ್ರತೆಯಿಂದ ಆಗಲು ಇದನ್ನು ಮಾಡಿರಿ !
ನಾಮಜಪ ಮಾಡುವಾಗ ಮುದ್ರೆ ಮತ್ತು ನ್ಯಾಸವನ್ನೂ ಮಾಡಬೇಕು!