ಅನಿಷ್ಟವನ್ನು ತಪ್ಪಿಸಲು ನಾಮಜಪ

Article also available in :

ಈ ಲೇಖನದಲ್ಲಿ ಅನಿಷ್ಟವನ್ನು ತಪ್ಪಿಸಲು ಮಾಡಬಹುದಾದ ವಿವಿಧ ರೀತಿಯ ನಾಮಜಪಗಳ ಬಗ್ಗೆ ಮತ್ತು ನಾಮಜಪದಿಂದ ನಿಜವಾದ ಅರ್ಥದಲ್ಲಿ ಹೇಗೆ ಆಚಾರಪಾಲನೆ ಮಾಡಬಹುದು ಎಂಬುದರ ಕುರಿತು ತಿಳಿದುಕೊಳ್ಳೋಣ..

ಕೆಲವು ಕ್ರಿಯೆಗಳನ್ನು ಮಾಡುವಾಗ ಅಥವಾ ಅನಿಷ್ಟವನ್ನು ತಪ್ಪಿಸಲು ಮಾಡಬೇಕಾದ ನಾಮಜಪ

ಜೀವನದ ಪ್ರತಿಯೊಂದು ಕ್ರಿಯೆಯಲ್ಲಿ, ದೇವರು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತಾರೆ. ಇದಕ್ಕನುಸಾರ, ನಿರ್ದಿಷ್ಟ ಕ್ರಿಯೆಯನ್ನು ಮಾಡುವಾಗ ನಿರ್ದಿಷ್ಟ ದೇವತೆಯ ಹೆಸರನ್ನು ಜಪಿಸಿದರೆ, ಅದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಈ ಕೆಳಗಿನ ಕೋಷ್ಟಕದಲ್ಲಿ ‘ಬೃಹತ್ಸ್ತೋತ್ರರತ್ನಾಕರ’ದಲ್ಲಿ ನೀಡಿರುವಂತೆ ಕೆಲವು ಕ್ರಿಯೆಗಳನ್ನು ಮಾಡುವಾಗ ಜಪಿಸಬೇಕಾದ ದೇವತೆಯ ಹೆಸರನ್ನು ನೀಡಿದ್ದೇವೆ.

ಉದ್ದೇಶ / ಕೃತಿ ನಾಮಜಪ
ಔಷಧ ಸೇವಿಸುವುದು ಶ್ರೀ ವಿಷ್ಣವೇ ನಮಃ |
ಊಟ ಮಾಡುವುದು ಶ್ರೀ ಜನಾರ್ದನಾಯ ನಮಃ |
ನಿದ್ದೆ ಮಾಡುವುದು ಶ್ರೀ ಪದ್ಮನಾಭಾಯ ನಮಃ |
ಮದುವೆಯ ಸಮಯದಲ್ಲಿ ಶ್ರೀ ಪ್ರಜಾಪತಯೇ ನಮಃ |
ಯುದ್ಧ ಶ್ರೀ ಚಕ್ರಧರಾಯ ನಮಃ |
ಪ್ರವಾಸದಲ್ಲಿ ಶ್ರೀ ತ್ರಿವಿಕ್ರಮಾಯ ನಮಃ |
ಮರಣೋನ್ಮುಖ ಅವಸ್ಥೆಯಲ್ಲಿ ಶ್ರೀ ನಾರಾಯಣಾಯ ನಮಃ |
ಪ್ರಿಯ ವ್ಯಕ್ತಿಯನ್ನು ಭೇಟಿ ಮಾಡಲು ಹೋಗುವಾಗ ಶ್ರೀ ಶ್ರೀಧರಾಯ ನಮಃ |
ಕೆಟ್ಟು ಕನಸುಗಳು ಬೀಳದಿರಲು ಶ್ರೀ ಗೋವಿಂದಾಯ ನಮಃ |
ಸಂಕಟ ಬಂದಾಗ ಶ್ರೀ ಮಧುಸೂದನಾಯ ನಮಃ |
ಕಾಡಿನಲ್ಲಿ ವಿಹರಿಸುವಾಗ ಶ್ರೀ ನಾರಸಿಂಹಾಯ ನಮಃ |
ಬೆಂಕಿ ತಗುಲಿದಾಗ ಶ್ರೀ ಜಲಶಾಯಿನೇ ನಮಃ |
ನೀರಿನಲ್ಲಿರುವಾಗ ಶ್ರೀ ವರಾಹಾಯ ನಮಃ |
ಪರ್ವತಾರೋಹಣ ಅಥವಾ ಪರ್ವತದ ಮೇಲಿರುವಾಗ ಶ್ರೀ ರಘುನಂದನಾಯ ನಮಃ |
ವಿಹಾರಿಸುವಾಗ ಶ್ರೀ ವಾಮನಾಯ ನಮಃ |
ಇತರ ಕಾರ್ಯಗಳನ್ನು ಮಾಡುವಾಗ ಶ್ರೀ ಮಾಧವಾಯ ನಮಃ |

ಯಾರು ಮೇಲಿನ ನಾಮಗಳನ್ನು ನಿಯಮಿತವಾಗಿ ಜಪಿಸಿ ಕ್ರಿಯೆಗಳನ್ನು ಮಾಡುತ್ತಾರೆಯೋ, ಅವರು ಎಲ್ಲ ತೊಂದರೆಗಳಿಂದ ಪಾರಾಗುತ್ತಾರೆ ಮತ್ತು ಪಾಪಗಳಿಂದ ಮುಕ್ತರಾಗಿ ವಿಷ್ಣುಲೋಕದಲ್ಲಿ ಪೂಜ್ಯರಾಗಿ ಪರಿಗಣಿಸಲ್ಪಡುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ನಾಮಜಪದಿಂದ ಅಕರ್ಮ ಕರ್ಮವಾಗಿ ನಿಜವಾದ ಅರ್ಥದಲ್ಲಿ ಆಚಾರಪಾಲನೆ ಸಾಧ್ಯವಾಗುತ್ತದೆ

ನಿತ್ಯ ಜೀವನದಲ್ಲಿ ನಾಮಜಪದೊಂದಿಗೆ ಪ್ರತಿಯೊಂದು ಕಾರ್ಯವನ್ನು ಮಾಡುವುದರಿಂದ ಅದು ಅಕರ್ಮ ಕರ್ಮ. ಪ್ರತಿಯೊಂದು ಕ್ರಿಯೆಯೂ ಅಕರ್ಮ ಕರ್ಮವಾಗಿರುವುದರಿಂದ ಆ ಕರ್ಮಕ್ಕೆ ಒಳ್ಳೆಯ ಅಥವಾ ಕೆಟ್ಟ ಫಲವಿಲ್ಲ. ಆದ್ದರಿಂದ, ನಿಜವಾದ ಅರ್ಥದಲ್ಲಿ ಆಚಾರಪಾಲನೆ ಮಾಡಲು ಸಾಧ್ಯವಾಗುತ್ತದೆ ಮತ್ತು ಅದರ ಮೂಲಕ ದೇವರೊಂದಿಗೆ ಏಕರೂಪವಾಗಬಹುದು.

Leave a Comment