ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರ ಮಾರ್ಗದರ್ಶನ

‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು’ ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿ !

‘ಭಗವಂತನು ತೆಗೆದುಕೊಳ್ಳುವ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗಿದೆ’ ಎಂಬುದನ್ನು ಗಮನದಲ್ಲಿಡಿ !

ಹೆಚ್ಚಿನ ಸಾಧಕರಿಗೆ ‘ಆಧ್ಯಾತ್ಮಿಕ ಮಟ್ಟವು ಶೇ. ೬೦ ಕ್ಕೆ ತಲುಪುವುದು ಎಂದರೆ ಪ್ರಗತಿಯಾಗುವುದು’ ಎಂದು ಅನಿಸುತ್ತದೆ. ಸಾಧಕರು ಮುಂಬರುವ ಯಾವುದಾದರೊಂದು ವಿಶೇಷ ದಿನದವರೆಗೆ (ಉದಾ. ಗುರುಪೂರ್ಣಿಮೆ, ಶ್ರೀಕೃಷ್ಣ ಜನ್ಮಾಷ್ಟಮಿ ಈ ದಿನಗಳವರೆಗೆ) ಅಥವಾ ತಮ್ಮ ಹುಟ್ಟುಹಬ್ಬದವರೆಗೆ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಬೇಕು ಎಂದು ಧ್ಯೇಯವನ್ನು ಇಡುತ್ತಾರೆ ಮತ್ತು ಅದಕ್ಕೂ ಮೊದಲು ಅವರು ಕೆಲವು ದಿನಗಳ ಮೊದಲು ಸಾಧನೆಯ ಪ್ರಯತ್ನಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ನಿರ್ಧರಿಸಿದ ಸಮಯಮಿತಿಯೊಳಗೆ ಧ್ಯೇಯಪೂರ್ತಿ ಆಗಲೇ ಬೇಕು, ಎಂದು ಕೆಲವು ಸಾಧಕರಿಗೆ ಅಪೇಕ್ಷೆ ಇರುತ್ತದೆ ಮತ್ತು ಅದು ಆಗದಿದ್ದರೆ ದುಃಖವಾಗುತ್ತದೆ. ಸಾಧಕರು ಖಂಡಿತವಾಗಿಯೂ ಧ್ಯೇಯವನ್ನು ಇಡಬೇಕು; ಆದರೆ ಧ್ಯೇಯಪೂರ್ತಿಯ ಅಪೇಕ್ಷೆಯನ್ನಿಟ್ಟು ಅದೇ ವಿಚಾರಗಳಲ್ಲಿ ಸಿಲುಕಬಾರದು.

ಫಲದ ಅಪೇಕ್ಷೆಯನ್ನಿಡದೇ ಕರ್ಮ ಮಾಡುತ್ತಿದ್ದರೆ ಶೀಘ್ರವಾಗಿ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ! – (ಪರಾತ್ಪರ ಗುರು) ಡಾ. ಆಠವಲೆ

ಶೇ. ೬೦ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪುವುದು ಆಧ್ಯಾತ್ಮಿಕ ಉನ್ನತಿಯ ದೃಶ್ಯ ಸ್ವರೂಪವಾಗಿದೆ; ಆದರೆ ನಿಜವಾದ ಪ್ರಗತಿ ಎಂದರೆ ಭಗವಂತನು ಆಗಾಗ ಘಟಿಸಿದ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ! ಪ್ರತಿಕ್ಷಣವೂ ತಮ್ಮ ಅಂತರ್ಮನಸ್ಸಿನ ನಿರೀಕ್ಷಣೆ ಮಾಡುವುದು, ಮನಸ್ಸಿನ ಅಯೋಗ್ಯ ವಿಚಾರ, ನಿರಾಶೆ ಇತ್ಯಾದಿಗಳು ಕಡಿಮೆಯಾಗಲು ಹಾಗೆಯೇ ಅಯೋಗ್ಯ ಕೃತಿಗಳನ್ನು ಸುಧಾರಿಸಲು ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆ ಮಾಡುವುದು ಹಾಗೂ ಭಾವವೃದ್ಧಿಗಾಗಿ ಪ್ರಯತ್ನಿಸುವುದು, ಇದು ಪ್ರತಿದಿನ ಮಾಡಿದ ಪ್ರಗತಿಯೇ ಆಗಿದೆ.

ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟಕ್ಕೆ ತಲುಪುವುದು ನಮ್ಮ ಕೈಯಲ್ಲಿ ಇಲ್ಲ; ಆದರೆ ಪ್ರತಿದಿನ ಯಾವುದೇ ಅಪೇಕ್ಷೆಯನ್ನಿಡದೇ ಮತ್ತು ಸತತವಾಗಿ ಸಾಧನೆಯ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ. ಆದುದರಿಂದ ತಳಮಳದಿಂದ ಪ್ರಯತ್ನ ಮಾಡಿದರೆ ಗುರುಕೃಪೆಯಿಂದ ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಲು ಸಾಧ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)

ಕೆಲವು ಸಾಧಕರಿಗೆ ತನ್ನ ಆಧ್ಯಾತ್ಮಿಕ ಮಟ್ಟ ಶೇಕಡಾ ೬೦ ರಷ್ಟು ಏಕೆ ಆಗುತ್ತಿಲ್ಲ ? ಎಂದು ವಿಚಾರ ಮಾಡಿ ನಿರಾಶೆ ಬರುತ್ತದೆ. ಅಂತಹ ಸಾಧಕರು ಗಮನದಲ್ಲಿಡಬೇಕಾದ ಅಂಶವೇನೆಂದರೆ, ಶೇಕಡಾ ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆಯಲು ಪೂರ್ವಜನ್ಮದ ಸಾಧನೆ, ಸಂಚಿತ, ಪ್ರಾರಬ್ಧ, ಭಾವ, ತಳಮಳ, ಕೆಟ್ಟ ಶಕ್ತಿಗಳ ತೊಂದರೆ, ಸ್ವಭಾವದೋಷ, ಅಹಂ, ಸಾಧನೆಗಾಗಿ ಇಡೀ ವರ್ಷದಲ್ಲಿ ಮಾಡಿದ ಪ್ರಯತ್ನ ಇತ್ಯಾದಿ ಅನೇಕ ಅಂಶಗಳು ಕಾರಣವಿರುತ್ತವೆ. ಒಬ್ಬ ಸಾಧಕನ ಪ್ರಾರಬ್ಧ ಹೆಚ್ಚು ಇದ್ದಲ್ಲಿ ಅವನ ಉನ್ನತಿಗೆ ಸಮಯ ತಗಲುತ್ತದೆ. ಏಕೆಂದರೆ ಪ್ರಾರಬ್ಧವನ್ನು ತೀರಿಸಲು ಅವನ ಸಾಧನೆಯು ಖರ್ಚಾಗುತ್ತದೆ. ಅವರೇನಾದರೂ ಒಂದು ವೇಳೆ ನಿರಪೇಕ್ಷವಾಗಿ ಹಾಗೂ ನಿರಂತರವಾಗಿ ಪ್ರಯತ್ನಿಸಿದರೆ ಖಂಡಿತವಾಗಿಯೂ ಸರಿಯಾದ ಸಮಯ ಬಂದಾಗ ಅವರ ಆಧ್ಯಾತ್ಮಿಕ ಪ್ರಗತಿಯಾಗುವುದು.

ಸಾಧಕರು ಆಧ್ಯಾತ್ಮಿಕ ಮಟ್ಟದ ವಿಚಾರದಿಂದ ನಿರಾಶರಾಗದೇ ಮುಂದಿನ ಪ್ರಯತ್ನಗಳನ್ನು ಮಾಡಬೇಕು.

೧. ಇತರ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿರುವಾಗ ನಾನೂ ಖಂಡಿತವಾಗಿ ಪ್ರಗತಿ ಮಾಡಿಕೊಳ್ಳಬಹುದು, ಎಂಬುದನ್ನು ಮನಸ್ಸಿನ ಮೇಲೆ ಬಿಂಬಿಸಲು ಸ್ವಯಂಸೂಚನೆ ನೀಡಿ.

೨. ‘ನಾನು ಸಾಧನೆಯ ಪ್ರಯತ್ನಗಳಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?’ ಎಂಬುದರ ಬಗ್ಗೆ ತತ್ತ್ವನಿಷ್ಠವಾಗಿ ಅಧ್ಯಯನ ಮಾಡಬೇಕು. ಸಾಧನೆಯಲ್ಲಿ ತಮ್ಮ ಸಾಧಕ ಪರಿವಾರದವರಿಂದ ಹಾಗೂ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವವರಿಗೆ ಹಾಗೂ ಜವಾಬ್ದಾರ ಸಾಧಕರಿಗೆ ‘ನನ್ನ ಸಾಧನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ?’ ಎಂಬುದನ್ನು ವಿಚಾರಿಸಿರಿ.

೩. ತಮ್ಮ ಸಂಪರ್ಕದಲ್ಲಿರುವ ಶೇಕಡಾ ೬೦ ಹಾಗೂ ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ಪಡೆದ ಸಾಧಕರಲ್ಲಿ ‘ಯಾವ ಗುಣವಿದೆ ಹಾಗೂ ಅವರು ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆಗೆ ಹೇಗೆ ಪ್ರಯತ್ನಿಸುತ್ತಿದ್ದಾರೆ ?’ ಎಂಬುದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಸ್ವತಃ ಪ್ರಯತ್ನಿಸಿರಿ.

೪. ಸನಾತನ ಪ್ರಭಾತದಲ್ಲಿ ಶೇಕಡಾ ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಸಾಧಕರ ಗುಣವೈಶಿಷ್ಟ್ಯಗಳನ್ನು ಹಾಗೂ ಸಂತರ ಸಾಧನಾಯಾತ್ರೆಯ ಬಗ್ಗೆ ಲೇಖನಗಳನ್ನು ಪ್ರಕಟಿಸಲಾಗುತ್ತದೆ. ಅವುಗಳ ಅಧ್ಯಯನ ಮಾಡಿ ಅವರಲ್ಲಿರುವ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿರಿ.

ಗುರುದೇವರ ಅಮೂಲ್ಯ ಮಾರ್ಗದರ್ಶನ ಲಭ್ಯವಾಗಿರುವುದರಿಂದಲೇ ಈ ಆಪತ್ಕಾಲದಲ್ಲಿಯೂ ಸಾಧಕರು ಪ್ರಗತಿಯು ಶೀಘ್ರಗತಿಯಲ್ಲಿ ಆಗುತ್ತಿದೆ. ಆದ್ದರಿಂದ ಸಾಧಕರೇ, ಪ್ರಗತಿಯ ಬಗ್ಗೆ ಚಿಂತಿಸ ಬೇಡಿರಿ, ಬದಲಾಗಿ ಶ್ರೀ ಗುರುದೇವರ ಮೇಲೆ ಶ್ರದ್ಧೆಯಿಟ್ಟುಕೊಂಡು ಪ್ರಯತ್ನಿಸಿರಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)

ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿದೆ !

ಕೆಲವು ಸಾಧಕರಿಗೆ ‘ತಮ್ಮ ಆಧ್ಯಾತ್ಮಿಕ ಮಟ್ಟವು ಆದಷ್ಟು ಬೇಗನೆ ಶೇ. ೬೦ ರಷ್ಟು ಆಗಬೇಕು’ ಎಂದೆನಿಸುತ್ತದೆ. ಈ ಅಪೇಕ್ಷೆಯಿಂದಾಗಿ ಅವರ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳು ಹೆಚ್ಚಾಗುತ್ತವೆ ಮತ್ತು ಸಾಧನೆಗಾಗಿ ಅಪೇಕ್ಷಿತ ಪ್ರಯತ್ನವಾಗುವುದಿಲ್ಲ. ‘ನಮ್ಮ ಮಟ್ಟವು ಹೆಚ್ಚಾಗಬೇಕು’ ಎಂಬುದು ಸಹ ಸ್ವೇಚ್ಛೆಯೇ ಆಗಿದ್ದು ಇಂತಹ ಇಚ್ಛೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆ ಅಥವಾ ಸಾಧನೆ ಮಾಡಿದರೆ ಮನಸ್ಸಿನಲ್ಲಿ ಅಪೇಕ್ಷೆಗಳ ವಿಚಾರಗಳು ಹೆಚ್ಚಾಗುತ್ತವೆ. ಈ ವಿಚಾರಗಳಲ್ಲಿ ಸಿಲುಕುವುದರಿಂದ ಸಾಧಕನ ಕಲಿಯುವ ಸ್ಥಿತಿಯು ಕಡಿಮೆಯಾಗುತ್ತದೆ ಮತ್ತು ಭಗವಂತನು ಪ್ರತಿಕ್ಷಣ ಏನೆಲ್ಲ ಕಲಿಸುತ್ತಿದ್ದಾನೆ ಎಂಬುದನ್ನು ಕಲಿಯುವುದರಿಂದ ವಂಚಿತನಾಗುತ್ತಾನೆ. ‘ನನ್ನ ಮಟ್ಟವು ಶೇ. ೬೦ ರಷ್ಟಾಗಬೇಕು’ ಎಂಬ ಸ್ವೇಚ್ಛೆಯು ಕಡಿಮೆಯಾದ ನಂತರವೇ ದೇವರು ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದವರೆಗೆ ಕರೆದುಕೊಂಡು ಹೋಗುತ್ತಾರೆ, ಇದರ ಅನುಭವವನ್ನು ಬಹಳಷ್ಟು ಸಾಧಕರು ಪಡೆದಿದ್ದಾರೆ. ಆದುದರಿಂದ ಸಾಧಕರು ಈ ವಿಚಾರಗಳಲ್ಲಿ ಸಿಲುಕದೇ ವ್ಯಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ಭಾವ ಮತ್ತು ಸಮಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ತಳಮಳ ಈ ಗುಣಗಳು ನಮ್ಮಲ್ಲಿ ಹೆಚ್ಚುತ್ತಿವೆಯಲ್ಲ? ಎಂಬುವುದರ ನಿರೀಕ್ಷಣೆ ಮಾಡಬೇಕು ಮತ್ತು ಅದಕ್ಕಾಗಿ ನಿರಂತರವಾಗಿ ಪ್ರಯತ್ನಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)

ಶೇ. ೬೦ ಮಟ್ಟದ ಅಥವಾ ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟ ಇರುವ ಸಾಧಕರಿಂದ ಕಲಿಯಲು ಪ್ರಯತ್ನಿಸಿ !

ಕೆಲವು ಸಾಧಕರ ಮನಸ್ಸಿನಲ್ಲಿ ‘ಆ ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಿದೆ. ಅವರಿಗಿಂತ ನಾನು ಹೆಚ್ಚು ಸೇವೆಯನ್ನು ಮಾಡುತ್ತೇನೆ; ಆದರೆ ನನ್ನ ಆಧ್ಯಾತ್ಮಿಕ ಪ್ರಗತಿ ಇನ್ನೂ ಆಗಿಲ್ಲ’ ಎಂಬ ವಿಚಾರಗಳು ಇರುತ್ತವೆ. ಆದ್ದರಿಂದ ಅವರಿಗೆ ನಿರಾಶೆಯಾಗುತ್ತದೆ.

೧. ಆಧ್ಯಾತ್ಮಿಕ ಪ್ರಗತಿಗಾಗಿ ಸಮಷ್ಟಿ ಸೇವೆಯೊಂದಿಗೆ ಇತರ ಘಟಕಗಳೂ ಕಾರಣವಾಗಿರುತ್ತದೆ

ಆಧ್ಯಾತ್ಮಿಕ ಪ್ರಗತಿ ಆಗುವಲ್ಲಿ ಸೇವಾಭಾವ ಇದೊಂದು ಘಟಕವಿದ್ದರೂ ಆ ಸಾಧಕರ ಪೂರ್ವಜನ್ಮದ ಸಾಧನೆ, ಸಂಚಿತ, ಪ್ರಾರಬ್ಧ, ಭಾವ, ತಳಮಳ, ಕೆಟ್ಟ ಶಕ್ತಿಗಳ ತೊಂದರೆ, ಸ್ವಭಾವದೋಷ, ಅಹಂ, ವರ್ಷವಿಡೀ ಸಾಧನೆಯ ಪ್ರಯತ್ನ, ಇತ್ಯಾದಿ ಘಟಕಗಳೂ ಕಾರಣವಾಗಿರುತ್ತವೆ. ಅದೇ ರೀತಿ ಆತನ ಪ್ರಾರಬ್ಧದ ತೀವ್ರತೆಯೂ ಕಡಿಮೆ ಇರುತ್ತದೆ. ಆದ್ದರಿಂದ ಆತನ ಆಧ್ಯಾತ್ಮಿಕ ಉನ್ನತಿ ವೇಗವಾಗಿ ಆಗುತ್ತದೆ.

ಹೆಚ್ಚಿನ ಸಾಧಕರಿಗೆ ತೀವ್ರವಾದ ಶಾರೀರಿಕ ಮತ್ತು ಆಧ್ಯಾತ್ಮಿಕ ತೊಂದರೆಗಳಿದ್ದರೆ ಅವರು ಸೇವೆಯನ್ನು ಮಾಡಲು ಸಾಧ್ಯವಿಲ್ಲ; ಆದರೆ ಅವರ ಅಂತರ್ಮನಸ್ಸಿನಲ್ಲಿ ಉತ್ತಮ ಸಾಧನೆ ನಡೆಯುತ್ತಿದ್ದರೆ ಅದು ಶ್ರೀ ಗುರುಗಳವರೆಗೆ ತಲುಪುತ್ತದೆ ಮತ್ತು ಅವರ ಆಧ್ಯಾತ್ಮಿಕ ಪ್ರಗತಿ ಆಗುತ್ತದೆ. ವಯಸ್ಸಿನಿಂದ ಸಮಷ್ಟಿ ಸೇವೆಯನ್ನು ಮಾಡಲು ಸಾಧ್ಯವಾಗದಿರುವ; ಆದರೆ ಭಗವಂತನ ಪ್ರಾಪ್ತಿಗಾಗಿ ಆಂತರಿಕ ಭಾವದಿಂದ ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟ ತಲುಪಿರುವ, ಅದೇ ರೀತಿ ಸಂತ ಪದವಿಯನ್ನು ತಲುಪಿರುವ ಅನೇಕ ಸಾಧಕರು ಸನಾತನ ಸಂಸ್ಥೆಯಲ್ಲಿ ಇದ್ದಾರೆ.

೨. ಸಾಧಕರೇ, ಆಧ್ಯಾತ್ಮಿಕ ಪ್ರಗತಿ ಆಗಿರುವ ಸಾಧಕರಿಂದ ಕಲಿಯಿರಿ !

‘ಕಾರ್ಯವಲ್ಲ ಸಾಧಕರು ಸಾಧನೆಗಾಗಿ ಮಾಡಿದ ಪ್ರಯತ್ನದಿಂದ ಅವರ ಪ್ರಗತಿಗೆ ಸಹಾಯವಾಗುತ್ತದೆ’, ಎಂದು ಪರಾತ್ಪರ ಗುರು ಡಾಕ್ಟರ ಆಠವಲೆ ಹೇಳಿದ್ದಾರೆ. ಇತರರೊಂದಿಗೆ ತಮ್ಮ ತುಲನೆಯನ್ನು ಮಾಡಿ ದುಃಖ ಪಡುವ ಬದಲು ‘ಆಧ್ಯಾತ್ಮಿಕ ಪ್ರಗತಿ ಆಗಿರುವ ಸಾಧಕರಲ್ಲಿ ಯಾವ ಗುಣಗಳು ಇವೆ ? ಅವರು ಸಾಧನೆಗಾಗಿ ಹೇಗೆ ಪ್ರಯತ್ನ ಮಾಡುತ್ತಿರುತ್ತಾರೆ ?’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ದೃಷ್ಟಿಯಿಂದ ಮನಃಪೂರ್ವಕವಾಗಿ ಪ್ರಯತ್ನಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)

Leave a Comment