ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ದೊಡ್ಡ ನಗರಗಳ ಅಸುರಕ್ಷಿತ ವಾತಾವರಣ, ಹಾಗೆಯೇ ನಗರಗಳಲ್ಲಿ ಹೆಚ್ಚುತ್ತಿರುವ ರಜ-ತಮದ ಪ್ರಾಬಲ್ಯ, ಈ ಕಾರಣಗಳಿಂದಾಗಿ ಕುಟುಂಬದವರೊಂದಿಗೆ ಗ್ರಾಮಗಳಿಗೆ ಅಥವಾ ತಾಲೂಕಿನ ಸ್ಥಳಗಳಿಗೆ ಸ್ಥಳಾಂತರವಾಗುವ ವಿಚಾರವನ್ನು ಮಾಡಿರಿ ಮತ್ತು ಅಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಿರಿ !

ಸದ್ಯ ಭಾರತದಲ್ಲಿರುವ ಮಹಾನಗರಗಳಲ್ಲಿ ಹಾಗೆಯೇ ಇತರ ದೊಡ್ಡ ನಗರಗಳಲ್ಲಿ ಜನಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವ ರೋಗರುಜಿನಗಳು ಎಲ್ಲರ ಚಿಂತೆಯ ವಿಷಯವಾಗಿವೆ. ನಗರಗಳಲ್ಲಿರುವ ಅಪಾರ ಜನಜಂಗುಳಿ, ಸ್ವಚ್ಛತೆಯ ಅಭಾವ, ಹೆಚ್ಚುತ್ತಿರುವ ಮಾಲಿನ್ಯ, ರಜ-ತಮಗಳ ಅಧಿಕ ಪ್ರಾಬಲ್ಯ ಇತ್ಯಾದಿಗಳ ಕಾರಣಗಳಿಂದ ಅಲ್ಲಿನ ನಾಗರಿಕರು ಭಯ ಮತ್ತು ಅಸುರಕ್ಷತೆಯ ನೆರಳಿನಲ್ಲಿ ಬದುಕುತ್ತಿರುವುದು ಕಂಡುಬರುತ್ತದೆ. ಯುದ್ಧಜನ್ಯ ಪರಿಸ್ಥಿತಿ, ಗಲಭೆಗಳು, ಸುನಾಮಿ, ರೋಗ ರುಜಿನ ಇತ್ಯಾದಿ ವಿಪತ್ತುಗಳ ಸಮಯದಲ್ಲಿ ಈ ನಗರಗಳು ಸಂಕಟಕ್ಕೆ ಒಳಗಾಗುವ ಸಾಧ್ಯತೆಗಳು ಗ್ರಾಮಗಳ ತುಲನೆಯಲ್ಲಿ ಅಧಿಕವಿರುತ್ತದೆ. ಆದುದರಿಂದ ಅಲ್ಲಿ ವಾಸಿಸುವುದು ಅತ್ಯಂತ ಅಪಾಯಕಾರಿ ಆಗಬಹುದು.

೧. ಗ್ರಾಮ ಅಥವಾ ತಾಲೂಕಿನ ಸ್ಥಳಗಳು ನಗರಗಳ ವಾತಾವರಣದ ತುಲನೆಯಲ್ಲಿ ಸುರಕ್ಷಿತವಾಗಿವೆ

ಮಹಾನಗರಗಳ ತುಲನೆಯಲ್ಲಿ ಗ್ರಾಮ(ಹಳ್ಳಿ)ಗಳು ಹಾಗೂ ತಾಲೂಕುಗಳ ಸ್ಥಳಗಳಲ್ಲಿ ಶುದ್ಧ ಗಾಳಿ, ನೈಸರ್ಗಿಕ ಸಂಪನ್ಮೂಲಗಳು (ಸೂರ್ಯನ ಬೆಳಕು, ಗಿಡ ಮರ ಇತ್ಯಾದಿ) ಯಥೇಚ್ಛವಾಗಿರುತ್ತವೆ, ಮಾಲಿನ್ಯದ ಪ್ರಮಾಣ ಕಡಿಮೆಯಿರುವುದರಿಂದ ವಾತಾವರಣ ಸುರಕ್ಷಿತ ಮತ್ತು ಆರೋಗ್ಯಕರವಾಗಿರುತ್ತದೆ, ಹಾಗೆಯೇ ಅಲ್ಲಿಯ ಜೀವನಶೈಲಿ ಸ್ವಾವಲಂಬಿಯಾಗಿರುತ್ತದೆ. ಗ್ರಾಮಗಳಲ್ಲಿ ಜೀವನಾವಶ್ಯಕ ವಸ್ತುಗಳು (ನೀರು, ತರಕಾರಿ, ಹಣ್ಣು ಇತ್ಯಾದಿ) ಸಹಜವಾಗಿ ಮತ್ತು ಹೇರಳವಾಗಿ ದೊರೆಯುತ್ತವೆ. ಸ್ವಂತದ ಹೊಲ-ಗದ್ದೆ ಇದ್ದರೆ ಅದರಲ್ಲಿ ಬೇಸಾಯ ಮಾಡಿ ಉದರನಿರ್ವಹಣೆಯನ್ನೂ ಮಾಡಿಕೊಳ್ಳಬಹುದು.

೨. ಮಹಾನಗರಗಳಿಗೆ ಸ್ಥಳಾಂತರವಾದ ಸಾಧಕರು ಕುಟುಂಬ ಸಹಿತ ಗ್ರಾಮ ಅಥವಾ ತಾಲೂಕು ಸ್ಥಳಗಳಲ್ಲಿ ನೆಲೆಸುವ ವಿಚಾರ ಮಾಡಿ ಅಲ್ಲಿನ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು

ಹಿಂದೆ ಗ್ರಾಮಗಳಲ್ಲಿ ವಾಸಿಸುವ ಕೆಲವು ಸಾಧಕರು ಶಿಕ್ಷಣ, ಉದ್ಯೋಗ ಇತ್ಯಾದಿಗಳ ನಿಮಿತ್ತ ಮಹಾನಗರಗಳು, ಹಾಗೆಯೇ ಇತರ ದೊಡ್ಡ ನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆಪತ್ಕಾಲದಲ್ಲಿ ಈ ನಗರಗಳಿಗೆ ಆಗುವ ಅಪಾರ ಹಾನಿಯನ್ನು ಗಮನದಲ್ಲಿರಿಸಿಕೊಂಡು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರು ಕುಟುಂಬದವರೊಂದಿಗೆ ಗ್ರಾಮಗಳಿಗೆ ಅಥವಾ ತಾಲೂಕಿನ ಸ್ಥಳಗಳಿಗೆ ಹೋಗಿ ವಾಸಿಸುವ ವಿಚಾರವನ್ನು ಮಾಡಬೇಕು. ಸುರಕ್ಷಿತ ಸ್ಥಳಗಳಲ್ಲಿ ಫಾರ್ಮ ಹೌಸ್ (ತೋಟದ ಮನೆ) ಇದ್ದರೆ ಅದನ್ನೂ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಊರು ಅಸುರಕ್ಷಿತವಾಗಿದ್ದರೆ, ಹಾಗೆಯೇ ಅಲ್ಲಿ ವಾಸಿಸುವ ವ್ಯವಸ್ಥೆಯಾಗದಿದ್ದರೆ ಸುರಕ್ಷಿತವಿರುವ ಪರ್ಯಾಯ ಹಳ್ಳಿ ಅಥವಾ ತಾಲೂಕಿನ ಸ್ಥಳವನ್ನು ಆಯ್ದುಕೊಳ್ಳಬೇಕು.

೩. ಮುಂಬರುವ ಆಪತ್ಕಾಲದಲ್ಲಿ ವಾಸಿಸಲು ಗ್ರಾಮ ಮತ್ತು ಮನೆಯನ್ನು ಆಯ್ಕೆ ಮಾಡುವಾಗ ಮುಂದಿನ ಮಹತ್ವದ ನಿಯಮಗಳನ್ನು ಗಮನದಲ್ಲಿ ತೆಗೆದುಕೊಳ್ಳಬೇಕು.

೩ ಅ. ಗ್ರಾಮ ಅಥವಾ ತಾಲೂಕನ್ನು ಆಯ್ಕೆ ಮಾಡುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆ (ಸೂಕ್ಷ್ಮ ಅವಲೋಕನ ಮಾಡುವುದು)

೧. ಆಯ್ಕೆ ಮಾಡಲಿರುವ ಗ್ರಾಮ ಅಥವಾ ತಾಲೂಕುಗಳು ಮಹಾನಗರ ಮತ್ತು ದೊಡ್ಡ ನಗರಗಳಿಗೆ ತುಂಬಾ ಹತ್ತಿರವಿರಬಾರದು.

೨. ಅಕ್ಕಪಕ್ಕದ ಗ್ರಾಮಗಳು ಸುರಕ್ಷಿತವಾಗಿವೆಯೇ ? ಎಂದು ನೋಡಬೇಕು.

೩. ಗ್ರಾಮವು ನೆರೆಪೀಡಿತ, ಜ್ವಾಲಾಮುಖಿ, ಹಾಗೆಯೇ ಭೂಕಂಪ ಪೀಡಿತ ಪ್ರದೇಶದಲ್ಲಿ ಇರಬಾರದು. ಆಣೆಕಟ್ಟಿನ ಹೆಚ್ಚುವರಿ ನೀರನ್ನು ಹೊರಗೆ ಬಿಟ್ಟಾಗ ಎದುರಾಗುವ ಅಪಾಯದ ಪ್ರದೇಶದ ಗ್ರಾಮದ ಆಯ್ಕೆ ಮಾಡಬಾರದು.

೪. ಸಮುದ್ರ, ಹಾಗೆಯೇ ನದಿಗಳ ದಡದ ಅಕ್ಕಪಕ್ಕದಲ್ಲಿರುವ ಊರುಗಳ ಬದಲಾಗಿ ಪರ್ಯಾಯ ಊರನ್ನು ಆಯ್ಕೆ ಮಾಡಿಕೊಳ್ಳಲು ಪ್ರಾಮುಖ್ಯತೆಯನ್ನು ನೀಡಬೇಕು. ಇದರ ಕಾರಣವೇನೆಂದರೆ ಸಮುದ್ರದ ಅಲೆಗಳು, ಅಲ್ಲದೇ ನದಿಗೆ ಬರುವ ನೆರೆಯಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ. ಈ ನೀರಿನಿಂದ ದಡದ ಆಸುಪಾಸಿನ ಊರುಗಳು ನೀರಿನಲ್ಲಿ ಮುಳುಗಬಹುದು. ಇದನ್ನು ತಡೆಯಲು ನೀರಿನ ಮೇಲ್ಮಟ್ಟಕ್ಕಿಂತ ೪ ಮೀಟರ ಎತ್ತರದ ಭೂಮಿಯ ಮಟ್ಟ (ಗ್ರೌಂಡ ಲೆವಲ್) ಇರುವ ಊರನ್ನು ಆಯ್ಕೆ ಮಾಡಿಕೊಳ್ಳಬೇಕು.

೫. ಕಲ್ಲಿದ್ದಲು ಗಣಿಯಿರುವ ಪ್ರದೇಶಗಳಲ್ಲಿ ಗಣಿಯ ಕೆಳಗೆ ಬೆಂಕಿಯಿರುತ್ತದೆ. ಬೆಂಕಿಯ ಕಾರಣದಿಂದ ಕಲ್ಲಿದ್ದಲು ಸುಟ್ಟು ಬೂದಿ ನಿರ್ಮಾಣವಾಗುತ್ತದೆ ಮತ್ತು ಭೂಮಿಯಲ್ಲಿ ಟೊಳ್ಳು ನಿರ್ಮಾಣವಾಗಿ ಅದು ಕುಸಿಯುತ್ತದೆ. ಆದುದರಿಂದ ಇಂತಹ ಪ್ರದೇಶಗಳಲ್ಲಿರುವ ಊರುಗಳನ್ನು ಆಯ್ದುಕೊಳ್ಳಬಾರದು.

೬. ದೊಡ್ಡ ದೊಡ್ಡ ಕಾರ್ಖಾನೆಗಳಲ್ಲಿ, ಕೈಗಾರಿಕಾ ಸ್ಥಳಗಳಲ್ಲಿ (ಇಂಡಸ್ಟ್ರಿಯಲ್ ಪ್ಲಾಂಟ್) ಮತ್ತು ಸಿಲಿಂಡರನ ಗೋದಾಮುಗಳಲ್ಲಿ ತಯಾರಾಗುವ ಅಥವಾ ಉಪಯೋಗಿಸುವ ಸುಲಾಭವಾಗಿ ಹೊತ್ತಿಕೊಳ್ಳುವ ಪದಾರ್ಥಗಳ ಸ್ಫೋಟವಾಗಿ ಅಕ್ಕಪಕ್ಕದ ಪರಿಸರಕ್ಕೆ ದೊಡ್ಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಅಕ್ಕಪಕ್ಕದ ಪರಿಸರದಲ್ಲಿ ಇಂತಹ ಕೈಗಾರಿಕಾ ಘಟಕಗಳು ಅಥವಾ ಉದ್ಯೋಗಗಳು ಇರಬಾರದು.

೭. ಆಪತ್ಕಾಲದಲ್ಲಿಯೂ ಗ್ರಾಮದಲ್ಲಿ ನೀರಿನ ಯಥೇಚ್ಛ ಸಂಗ್ರಹ, ಹಾಗೆಯೇ ಜೀವನೋಪಯೋಗಿ ಸಾಮಾಗ್ರಿಗಳ (ನೀರು, ತರಕಾರಿ, ಹಣ್ಣುಹಂಪಲು ಇತ್ಯಾದಿ) ಲಭ್ಯತೆ ಇರಬೇಕು.

೮. ಅನೇಕ ಗ್ರಾಮಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿರುವುದರಿಂದ ಇತರರನ್ನು ಸಂಪರ್ಕಿಸುವುದು ಕಠಿಣವಾಗುತ್ತದೆ. ಆದುದರಿಂದ ಗ್ರಾಮದಲ್ಲಿ ಸಂಪರ್ಕ ವ್ಯವಸ್ಥೆ ಚೆನ್ನಾಗಿದೆಯೇ ?, ಎಂಬುದನ್ನು ನೋಡಬೇಕು.

೯. ಗ್ರಾಮದ ವಾತಾವರಣವು ಸಾಧನೆ, ಹಾಗೆಯೇ ವೈಯಕ್ತಿಕ ಜೀವನಕ್ಕಾಗಿ ಅನುಕೂಲವಾಗಿರಬೇಕು. ತಮ್ಮ ಗ್ರಾಮದಲ್ಲಿ ಮನೆಯಿದೆ, ಆದರೆ ಅಲ್ಲಿ ವಾಸಿಸಲು ಯೋಗ್ಯವಾದಂತಹ ವ್ಯವಸ್ಥೆ ಇದ್ದರೆ ಅಲ್ಲಿಯೇ ವಾಸಿಸಬಹುದು. ಹಳ್ಳಿಯಲ್ಲಿರುವ ಮನೆಯಲ್ಲಿ ಸಾಧನೆಗೆ ಪೂರಕ ವಾತಾವರಣ ಇಲ್ಲದಿದ್ದರೆ ಪರ್ಯಾಯ ಸ್ಥಳದ ವಿಚಾರವನ್ನು ಮಾಡಬೇಕು.

೩ ಆ. ಮನೆಯ ವಿಷಯದಲ್ಲಿ ಮುಂದಿನ ಚಿಕ್ಕ ಚಿಕ್ಕ ವಿಷಯಗಳನ್ನು ಪರಿಶೀಲಿಸುವುದು ಆವಶ್ಯಕವಾಗಿದೆ !

೧. ಮನೆಯು ಹಿಂದೂಬಹುಸಂಖ್ಯಾತ ಪ್ರದೇಶದಲ್ಲಿರಬೇಕು.

೨. ಕೊಳೆಗೇರಿ ಪ್ರದೇಶಗಳಲ್ಲಿರುವ ಅನಧಿಕೃತ ಕಟ್ಟಡಗಳು, ದಟ್ಟಣೆಯ ವಸತಿ ಪ್ರದೇಶ ಹಾಗೆಯೇ ತುಂಬಾ ಅಸ್ವಚ್ಛತೆಯ ಕಾರಣದಿಂದ ರೋಗರುಜಿನಗಳೂ ಬೇಗನೆ ಹರಡುತ್ತವೆ, ಸಿಲಿಂಡರ್ ಸ್ಫೋಟ, ಶಾರ್ಟ ಸರ್ಕಿಟ್ ಇತ್ಯಾದಿಗಳಿಂದ ಬೆಂಕಿ ತಗಲುವಂತಹ ದುರ್ಘಟನೆಗಳು ಘಟಿಸುತ್ತವೆ. ಆದುದರಿಂದ ಮನೆಯ ಆಸುಪಾಸು ೧-೨ ಕಿ.ಮೀ. ದೂರದ ವರೆಗೆ ಕೊಳೆಗೇರಿ ಪ್ರದೇಶ ಇರಬಾರದು.

೩. ಅಕ್ಕಪಕ್ಕದಲ್ಲಿ ಸಾಧಕರು, ಹಾಗೆಯೇ ನಮಗೆ ಸಹಾಯ ಮಾಡಬಹುದಾದಂತಹ ಜನರು ವಾಸಿಸುತ್ತಿದ್ದರೆ ಉತ್ತಮ !

೪. ಧರ್ಮಪ್ರಸಾರ ಮಾಡುವುದು, ನಾಟಿ ಔಷಧಿಯ ಗಿಡಗಳನ್ನು ನೆಡುವುದು ಇತ್ಯಾದಿ ಸೇವೆಗಳನ್ನು ಅಲ್ಲಿ ಮಾಡಬಹುದೇ ? ಎಂದು ವಿಚಾರ ಮಾಡಬೇಕು.

೩ ಇ. ‘ಮೇಲಿನ ಎಲ್ಲ ನಿಯಮಗಳು ಅನ್ವಯವಾಗುವಂತಹ ಗ್ರಾಮ ಅಥವಾ ತಾಲೂಕಿನ ಸ್ಥಳ ದೊರಕಿದರೆ ಉತ್ತಮ !

ರಜ-ತಮ ಪ್ರಧಾನ ಗ್ರಾಮ ಅಥವಾ ತಾಲೂಕುಗಳಿಗಿಂತ ಸಾತ್ತ್ವಿಕ ಗ್ರಾಮ ಅಥವಾ ತಾಲೂಕುಗಳ ರಕ್ಷಣೆಯಾಗಲಿದೆ. ಆದುದರಿಂದ ಆಶ್ರಯವನ್ನು ಆಯ್ಕೆ ಮಾಡುವಾಗ ಸಾತ್ತ್ವಿಕತೆಯ, ಹಾಗೆಯೇ ಮೇಲಿನ ಇತರ ನಿಯಮಗಳು ಅನ್ವಯವಾಗುತ್ತವೆಯೇ ? ಎಂದು ನೋಡಬೇಕು. ಮೇಲಿನ ಎಲ್ಲ ನಿಯಮಗಳು ಅನ್ವಯವಾಗುವಂತಹ ಗ್ರಾಮ ಮತ್ತು ಮನೆಯನ್ನು ಪಡೆಯಲು ಪ್ರಯತ್ನಿಸಬೇಕು. ಹಾಗೆ ಸಾಧ್ಯವಿಲ್ಲದಿದ್ದರೆ ಸಾಧ್ಯವಾದಷ್ಟು ನಿಯಮಗಳು ಅನ್ವಯವಾಗುವಂತಹ ಗ್ರಾಮ ಮತ್ತು ಮನೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಆಪತ್ಕಾಲದ ಪೂರ್ವಸಿದ್ಧತೆಯೆಂದು ತಮ್ಮ ಗ್ರಾಮದಲ್ಲಿರುವ ಮನೆಯಲ್ಲಿ ಮುಂದೆ ನೀಡಿದ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಿರಿ !

ತಮ್ಮ ಗ್ರಾಮದಲ್ಲಿರುವ ಮನೆಯನ್ನು ದುರಸ್ತಿಗೊಳಿಸಿ ಅದನ್ನು ವಾಸಕ್ಕೆ ಯೋಗ್ಯ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಮೇಲಿನ ನಿಯಮಗಳಿಗನುಸಾರ ಗ್ರಾಮ ಅಥವಾ ತಾಲೂಕಿನ ಸ್ಥಳವನ್ನು ಆಯ್ಕೆ ಮಾಡಬೇಕಾಗಿದ್ದರೆ, ಅದನ್ನು ಆದಷ್ಟು ಬೇಗನೆ ಆಯ್ಕೆ ಮಾಡಿಕೊಂಡು ಅಲ್ಲಿ ವಾಸಿಸಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಟ್ಟುಕೊಳ್ಳಬೇಕು. ಮನೆಯಲ್ಲಿ ಸೌರಶಕ್ತಿಯ ಉಪಕರಣಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು. ಅಲ್ಲಿ ಮೊದಲೇ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೆ ಆಪತ್ಕಾಲ ಪ್ರಾರಂಭವಾದೊಡನೆ, ದೊಡ್ಡ ನಗರಗಳನ್ನು ಬಿಟ್ಟು ಗ್ರಾಮಕ್ಕೆ ಬಂದು ಆಶ್ರಯವನ್ನು ಪಡೆದುಕೊಂಡು ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಳ್ಳುವುದು ಸುಲಭವಾಗುತ್ತದೆ. ಸಾಧಕರು ಗ್ರಾಮ ಅಥವಾ ತಾಲೂಕಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಹಾಗೂ ಅಲ್ಲಿಗೆ ಸ್ಥಳಾಂತರಗೊಳ್ಳುವ ಸಂದರ್ಭದಲ್ಲಿನ ನಿರ್ಣಯವನ್ನು ಸ್ವಂತ ಮನಸ್ಸಿನಿಂದ ಮಾಡದೇ ಅದಕ್ಕಾಗಿ ಸ್ಥಳೀಯ ಜವಾಬ್ದಾರ ಸಾಧಕರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು. ದೊಡ್ಡ ನಗರಗಳಿಗಿಂತ ಹೆಚ್ಚು ಸುರಕ್ಷಿತವಾಗಿರುವ ಗ್ರಾಮಗಳಿಗೆ ಸ್ಥಳಾಂತರವಾಗುವ ವಿಚಾರ ಮಾಡುವುದು ಒಂದು ರೀತಿಯಲ್ಲಿ ಸಂಕಟ ಕಾಲದ ಸಿದ್ಧತೆಯೇ ಆಗಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿರಿ.

ಆಪತ್ಕಾಲಕ್ಕಿಂತ ಮೊದಲು ಮಹಾನಗರ ಹಾಗೂ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಸ್ಥಳಾಂತರವಾಗುವಾಗ ಒಬ್ಬೊಬ್ಬರೇ ವಾಸಿಸದೇ ಇತರ ಸಾಧಕರ ಜೊತೆಗೆ ತಮ್ಮ ನಿವಾಸವ್ಯವಸ್ಥೆಯನ್ನು ಮಾಡಿಕೊಳ್ಳಿ !

ಸಾಧಕರು ಆಪತ್ಕಾಲವನ್ನು ಎದುರಿಸಲು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳಲ್ಲಿ ಮಹತ್ವದ ಅಂಶವೆಂದರೆ ಮಹಾನಗರ ಹಾಗೂ ದೊಡ್ಡ ನಗರಗಳಲ್ಲಿ ವಾಸಿಸದೇ ಹಳ್ಳಿ ಅಥವಾ ತಾಲೂಕು ಪ್ರದೇಶಗಳಲ್ಲಿ ವಾಸಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡುವುದು. ಇಲ್ಲಿ ನೀಡಿರುವ ಚೌಕಟ್ಟಿನಲ್ಲಿ ಹೇಳಿದಂತೆ ಸಾಧಕರು ಭಾರತದಾದ್ಯಂತ ಯಾವುದೇ ಹಳ್ಳಿ ಅಥವಾ ತಾಲೂಕಿನಲ್ಲಿ ಮನೆಯನ್ನು ತೆಗೆದುಕೊಳ್ಳಬಹುದು. ಆದರೆ ತಮ್ಮ ಕುಟುಂಬದವರ ಜೊತೆಗೆ ಸ್ಥಳಾಂತರವಾಗುವಾಗ ಅವರು ಬೇರೆ ಬೇರೆ ಹಳ್ಳಿಗಳಿಗೆ ಒಬ್ಬೊಬ್ಬರೇ ವಾಸಿಸುವ ವಿಚಾರವನ್ನು ಮಾಡಬಾರದು. ಅದರ ಬದಲು ಎಲ್ಲರಿಗೂ ಸುಲಭವಾಗುವಂತಹ ಯಾವುದಾದರೊಂದು ಹಳ್ಳಿಯಲ್ಲಿ, ಸಾಧಕರು ಹತ್ತಿರದಲ್ಲಿರುವಂತಹ ಜಾಗದಲ್ಲಿ ಮನೆಯನ್ನು ಖರೀದಿಸಿ ವಾಸಿಸಬಹುದು. ಈ ರೀತಿ ಹಳ್ಳಿ ಅಥವಾ ತಾಲೂಕಿನಲ್ಲಿ ಸಾಧಕರು ಒಟ್ಟಿಗಿರುವುದು ಅವರ ಸಾಧನೆಯ ದೃಷ್ಟಿಯಿಂದ ಪೂರಕವಾಗಿದ್ದು ಕಾಲಾನುಸಾರ ಆವಶ್ಯಕವೂ ಆಗಿದೆ. ಇದರ ಬಗ್ಗೆ ಹಾಗೂ ಮನೆಯ ವಿಷಯದಲ್ಲಿ ಕೆಲವು ಮಾರ್ಗದರ್ಶಕ ಅಂಶಗಳನ್ನು ಮುಂದೆ ಕೊಡಲಾಗಿದೆ.

೪. ಸಾಧಕರು ಹಳ್ಳಿಯಲ್ಲಿ ಒಬ್ಬೊಬ್ಬರೇ ವಾಸಿಸದೇ ಇತರ ಸಾಧಕರ ಜೊತೆಯಲ್ಲಿದ್ದರೆ ಆಗುವ ಲಾಭಗಳು

೪ ಅ. ಸಾಧನೆಯ ದೃಷ್ಟಿಯಿಂದ

೧. ಮುಂಬರುವ ಆಪತ್ಕಾಲದಲ್ಲಿ ಪ್ರತಿಯೊಬ್ಬರೂ ಪ್ರತಿಕೂಲ ಪ್ರಸಂಗಗಳನ್ನು ಎದುರಿಸಬೇಕಾಗಲಿದೆ. ಕಠಿಣ ಪ್ರಸಂಗದಲ್ಲಿ ಸಾಧಕರು ಪರಸ್ಪರ ಹತ್ತಿರದಲ್ಲಿದ್ದರೆ ಅವರು ಇತರರಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಹಾಯ ಮಾಡಬಲ್ಲರು. ಹಾಗಾಗಿ ಸಾಧಕರಲ್ಲಿ ಸಂಘಟಿತನ ಹಾಗೂ ಕೌಟುಂಬಿಕ ಭಾವನೆಯು ಮೂಡುವುದು.

೨. ಆಪತ್ಕಾಲದಲ್ಲಿ ಬಾಹ್ಯ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ, ಸಾಧಕರು ಒಟ್ಟಿಗೆ ಇದ್ದಲ್ಲಿ ಅವರು ಪರಸ್ಪರರಿಗೆ ಸಾಧನೆಯಲ್ಲಿ ಸಹಾಯ ಮಾಡಬಹುದು. ಇದರಿಂದ ಅವರ ಸಾಧನೆಗೆ ವೇಗ ಬರಲಿದೆ ಮತ್ತು ಅವರ ಸಾಧನಾವೃದ್ಧಿಗಾಗಿ ಈ ಕಾಲವು ಅನುಕೂಲವಾಗುವುದು.

೩. ಒಳ್ಳೆಯ ಆಧ್ಯಾತ್ಮಿಕ ಮಟ್ಟ ಇರುವ ಸಾಧಕರು ಹಾಗೂ ಸಾಧನೆಗಾಗಿ ತಳಮಳದಿಂದ ಪ್ರಯತ್ನಿಸುವ ಸಾಧಕರು ಇತರರಿಗೆ ಸಾಧನೆಯ ಬಗ್ಗೆ ದಿಶೆಯನ್ನು ನೀಡಬಲ್ಲರು. ಹಾಗಾಗಿ ಶೀಘ್ರವಾಗಿ ಎಲ್ಲರ ಆಧ್ಯಾತ್ಮಿಕ ಉನ್ನತಿಯಾಗುವುದು ಆಪತ್ಕಾಲದಲ್ಲಿಯೂ ಹಳ್ಳಿಹಳ್ಳಿಗಳಲ್ಲಿ ಸಾಧನೆಗಾಗಿ ಪೂರಕ ಹಾಗೂ ಆಶ್ರಮದಂತಹ ಸಾತ್ತ್ವಿಕ ವಾತಾವರಣದ ನಿರ್ಮಿತಿಯಾಗುವುದು

೪ ಆ. ಧರ್ಮಪ್ರಸಾರದ ವಿಷಯದಲ್ಲಿ

೧. ಸಾಧಕರು ಸಾಧ್ಯವಿರುವಲ್ಲೆಲ್ಲ ಸಂಘಟಿತರಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡಬಹುದು

೨. ಪ್ರಸ್ತುತ ನಡೆಯುತ್ತಿರುವ ಧರ್ಮಪ್ರಸಾರದ ಉಪಕ್ರಮಗಳಲ್ಲಿ ಸಾಧ್ಯವಿರುವಷ್ಟು ಮತ್ತು ಸಮಯೋಚಿತ ಉಪಕ್ರಮಗಳನ್ನು (ಉದಾ. ನಾಮಸತ್ಸಂಗ, ಭಾವಸತ್ಸಂಗ, ಧರ್ಮಶಿಕ್ಷಣ ವರ್ಗ, ಬಾಲಸಂಸ್ಕಾರ ವರ್ಗ) ಆಯಾ ಹಳ್ಳಿಗಳಲ್ಲಿ ನಡೆಸಬಹುದು.

೪ ಇ. ಇತರ ಲಾಭಗಳು

೧. ಆಪತ್ಕಾಲದಲ್ಲಿ ಮನೆಯ ಆವರಣದಲ್ಲಿರುವ ಬಾವಿಯ ನೀರು ಉಪಯುಕ್ತವಾಗಲಿದೆ. ಸುತ್ತಮುತ್ತಲಿನ ಕೆಲವು ಸಾಧಕರು ಒಟ್ಟು ಸೇರಿ ಬಾವಿಯನ್ನು ತೋಡಿಸಿಕೊಳ್ಳಬಹುದು

೨. ಗೋಪಾಲನೆ, ಕೃಷಿ, ನಾಟಿ ಔಷಧಿಗಳ ತೋಟಗಾರಿಕೆ ಇವೆಲ್ಲವುಗಳನ್ನು ಜೊತೆಯಲ್ಲಿದ್ದು ಮಾಡಬಹುದು.

೩. ಸಾಧಕರು ಪರಸ್ಪರರ ಸಮೀಪ ವಾಸಿಸುವುದು, ಸುರಕ್ಷೆಯ ದೃಷ್ಟಿಯಿಂದ ಹಿತಕರವಾಗಿದೆ.

೪. ಯಾರಾದರೊಬ್ಬ ಸಾಧಕನಿಗೆ ಅನಾರೋಗ್ಯವಿದ್ದರೆ ಇತರ ಸಾಧಕರು ಅವರಿಗೆ ಬೇರೆಬೇರೆ ಚಿಕಿತ್ಸಾ ಪದ್ಧತಿಗಳಿಗನುಸಾರ (ಬಿಂದು ಒತ್ತಡ, ಪ್ರಾಣಶಕ್ತಿವಹನ ಉಪಾಯ, ನಾಮಜಪ-ಉಪಾಯ ಮುಂತಾದವುಗಳಿಗನುಸಾರ) ಉಪಾಯ ಮಾಡಬಹುದು.

೫. ಯಾರಾದರೊಬ್ಬ ಸಾಧಕರ ಬಳಿ ವಿಶಿಷ್ಟ ಕೌಶಲ್ಯವಿದ್ದಲ್ಲಿ (ಉದಾ. ಮೇಸ್ತ್ರಿ ಕೆಲಸ, ಬಡಗಿಯ ಕೆಲಸ, ತೋಟಗಾರಿಕೆ, ಹೊಲಿಗೆ) ಆ ಕೌಶಲ್ಯದಿಂದ ಇತರರಿಗೂ ಲಾಭವಾಗುವುದು

೫. ಹಳ್ಳಿಯಲ್ಲಿ ಮನೆಗಳನ್ನು ಖರೀದಿಸುವ ಬಗ್ಗೆ ಅಂಶಗಳು

ಮೇಲೆ ಹೇಳಿದ ಎಲ್ಲ ಲಾಭಗಳನ್ನು ಗಮನದಲ್ಲಿರಿಸಿ ಸಾಧಕರು ಎಲ್ಲ ದೃಷ್ಟಿಯಿಂದ, ಸೌಲಭ್ಯಕ್ಕನುಸಾರ ಯಾವುದಾದರೊಂದು ಹಳ್ಳಿಯಲ್ಲಿ ಹತ್ತಿರಹತ್ತಿರ ಮನೆಗಳನ್ನು ಖರೀದಿಸಿ ಅಥವಾ ಕಟ್ಟಿಸಿ ಅಲ್ಲಿ ವಾಸಿಸುವ ನಿರ್ಣಯ ತೆಗೆದುಕೊಳ್ಳಬೇಕು. ಇದರಲ್ಲಿ ೨-೩ ಸಾಧಕರು ಮುಂದಾಳತ್ವ ವಹಿಸಿ ಯೋಗ್ಯ ಹಳ್ಳಿ ಅಥವಾ ತಾಲೂಕುಗಳನ್ನು ಆಯ್ಕೆ ಮಾಡುವುದು, ಅಲ್ಲಿ ಮನೆ ಹುಡುಕುವುದು ಅಥವಾ ಕಟ್ಟಿಸುವುದು ಮುಂತಾದವುಗಳನ್ನು ಪ್ರಾರಂಭಿಸಬಹುದು.

ಅ. ಆಪತ್ಕಾಲದಲ್ಲಿ ನಮ್ಮ ಮೂಲಭೂತ ಆವಶ್ಯಕತೆಗಳನ್ನು ಪೂರೈಸಲು ಬಹಳ ಖರ್ಚನ್ನು ಮಾಡಬೇಕಾಗಬಹುದು. ಹಾಗಾಗಿ ಸಾಧಕರು ತಮ್ಮ ಉಳಿತಾಯವನ್ನು ಮುಂದಿನ ಆಪತ್ಕಾಲಕ್ಕಾಗಿ ಉಳಿಸಿಡಬೇಕು. ಹಳ್ಳಿಯಲ್ಲಿ ಮನೆ ಕಟ್ಟಿಸುವ ಅಥವಾ ಖರೀದಿಸುವ ವಿಚಾರ ಮಾಡುವಾಗ, ಅತ್ಯಂತ ಕಡಿಮೆ ಖರ್ಚಿನಲ್ಲಿ ಮನೆಯ ವ್ಯವಸ್ಥೆ ಹೇಗೆ ಮಾಡಬಹುದು? ಇದರತ್ತ ಗಮನ ಹರಿಸಬೇಕು.

ಆ. ಈಗ ಸಮಯವು ಬಹಳ ಕಡಿಮೆಯಿರುವುದರಿಂದ ಮನೆಯನ್ನು ಕಟ್ಟುವ ಬದಲು ತಯಾರಿರುವ ಮನೆಯನ್ನು ಖರೀದಿಸಲು ಆದ್ಯತೆ ನೀಡಬೇಕು. ಅಪೇಕ್ಷಿತ ರೀತಿಯಲ್ಲಿ ಸಿದ್ಧಮನೆ ಸಿಗದಿದ್ದಲ್ಲಿ ಮನೆ ಕಟ್ಟಿಸುವ ನಿರ್ಣಯ ತೆಗೆದುಕೊಳ್ಳಬಹುದು. ಹಳ್ಳಿಯಲ್ಲಿ ಮನೆ ಕಟ್ಟಿಸುವ ಪ್ರಕ್ರಿಯೆಯನ್ನು ಮುಂದಿನ ೫ ತಿಂಗಳಿನಲ್ಲಿ ಪೂರ್ಣಗೊಳಿಸಬೇಕು. ಆದರೆ ಈಗ ಅಲ್ಲಿಗೆ ಸ್ಥಳಾಂತರವಾಗಬಾರದು.

ಇ. ಸಾಮಾನ್ಯವಾಗಿ ಹೊಸ ಮನೆ ಖರೀದಿಸುವಾಗ ನಮ್ಮ ಮನೆಯು ಪ್ರಶಸ್ತವಾಗಿರಬೇಕು, ಅಲ್ಲಿ ಎಲ್ಲ ಸುಖ-ಸೌಲಭ್ಯಗಳಿರಬೇಕು ಎಂದು ಪ್ರತಿಯೊಬ್ಬರಿಗೆ ಅನಿಸುತ್ತದೆ. ಆಪತ್ಕಾಲದ ದೃಷ್ಟಿಯಿಂದ ಹಳ್ಳಿಯಲ್ಲಿ ಮನೆಯ ವ್ಯವಸ್ಥೆಯನ್ನು ಮಾಡುವಾಗ ಮಾತ್ರ ಎಲ್ಲ ಸುಖ ಸೌಲಭ್ಯಗಳ ಬದಲು ಜೀವನಾವಶ್ಯಕ ಸೌಲಭ್ಯಗಳು ಸಿಗುವಂತಹ ವಿಚಾರ ಮಾಡಬೇಕು. ‘ನಾವು ಕೇವಲ ಆಪತ್ಕಾಲದ ದೃಷ್ಟಿಯಿಂದ ಈ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂಬುದನ್ನು ಗಮನದಲ್ಲಿಡಬೇಕು.

ಈ. ಹಳ್ಳಿಯಲ್ಲಿ ತೆಗೆದುಕೊಳ್ಳಲಿರುವ ಮನೆಯ ಪರಿಸರದಲ್ಲಿ ಸ್ವಲ್ಪ ಖಾಲಿ ಜಾಗ ಸಹ ಇರಬೇಕು. ಈ ಖಾಲಿಜಾಗದಲ್ಲಿ ಔಷಧೀಯ ವನಸ್ಪತಿಗಳು, ಹೂವು, ಹಣ್ಣು, ತರಕಾರಿಗಳು ಮುಂತಾದ ಜೀವನಾವಶ್ಯಕ ತೋಟಗಾರಿಕೆ ಮಾಡಬಹುದು.

ಸಾಧಕರು ಮೇಲಿನ ಚೌಕಟ್ಟಿನಲ್ಲಿ ನೀಡಿರುವ ಅಂಶಗಳಿಗನುಸಾರ ಹಳ್ಳಿಯನ್ನು ಆರಿಸುವ ನಿರ್ಣಯವನ್ನು ಸ್ವಂತ ಮನಸ್ಸಿನಂತೆ ತೆಗೆದುಕೊಳ್ಳದೇ ಅದರ ಬಗ್ಗೆ ಜವಾಬ್ದಾರ ಸಾಧಕರ ಮಾರ್ಗದರ್ಶನ ಪಡೆದು ಅದಕ್ಕನುಸಾರ ಮುಂದಿನ ಪ್ರಕ್ರಿಯೆ ಮಾಡಬೇಕು. ಈ ಸಂದರ್ಭದಲ್ಲಿ ಏನಾದರೂ ಸಂದೇಹಗಳಿದ್ದಲ್ಲಿ ಜವಾಬ್ದಾರ ಸಾಧಕರಿಗೆ ಕೇಳಬೇಕು.

ಸಾಧಕರೇ ಆಪತ್ಕಾಲವು ದಿನೇ ದಿನೇ ಹತ್ತಿರ ಬರುತ್ತಿದೆ. ಕಾಲದ ಭೀಕರತೆಯನ್ನು ಗಮನದಲ್ಲಿರಿಸಿ ಭಗವಾನ್ ಶ್ರೀಕೃಷ್ಣನ ಮೇಲೆ ಅನನ್ಯವಾದ ನಿಷ್ಠೆಯನ್ನು ಇಟ್ಟು ಮೇಲಿನ ಎಲ್ಲ ಪ್ರಕ್ರಿಯೆಗಳನ್ನು (ಹೊಸ ಜಾಗ ಹುಡುಕುವುದು, ಅಲ್ಲಿ ಮನೆ ಖರೀದಿಸುವುದು,ಕಟ್ಟಿಸುವುದು ಇತ್ಯಾದಿ) ಮುಂದಿನ ೫ ತಿಂಗಳೊಳಗೆ ಆದಷ್ಟು ಶೀಘ್ರ ವಾಗಿ ಪೂರ್ಣಗೊಳಿಸಿರಿ. ಹಳ್ಳಿಯಲ್ಲಿ ನಿವಾಸ ವ್ಯವಸ್ಥೆ ಮಾಡಿದ್ದರೂ ಸದ್ಯ ಅಲ್ಲಿ ಸ್ಥಳಾಂತರವಾಗಬಾರದು.

ಸಾಧಕರಿಗೆ ಸೂಚನೆ

ದೊಡ್ಡ ನಗರಗಳಿಂದ ಗ್ರಾಮಗಳಿಗೆ ಸ್ಥಳಾಂತರವಾಗುವ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಧಕರಿಗೆ ಏನಾದರೂ ಅಂಶಗಳನ್ನು ಸೂಚಿಸುವುದಿದ್ದರೆ ಅವರು ಕೆಳಗೆ ನೀಡಿರುವ ಸಂಗಣಕೀಯ ವಿಳಾಸಕ್ಕೆ ಅಥವಾ ಅಂಚೆ ವಿಳಾಸಕ್ಕೆ ಕಳುಹಿಸಬೇಕೆಂದು ವಿನಂತಿ. ಮೇಲೆ ತಿಳಿಸಿದ ವಿಷಯಕ್ಕನುಸಾರ ಸುರಕ್ಷಿತವಿರುವ ಗ್ರಾಮ ತಿಳಿದಿದ್ದರೆ ಅದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಕಳುಹಿಸಬೇಕು.

ಸಂಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401

(ಸೆಪ್ಟೆಂಬರ್ ೨೦೨೦)

Leave a Comment