ಭೀಕರ ಆಪತ್ಕಾಲದ ಕುರಿತು ದಾರ್ಶನಿಕ ಸಂತ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿ ನುಡಿದ ಭವಿಷ್ಯವಾಣಿ !

ಪ.ಪೂ. ಗಗನಗಿರಿ ಮಹಾರಾಜ

‘ಇತ್ತೀಚೆಗಷ್ಟೇ ಮಹಾರಾಷ್ಟ್ರ, ಕರ್ನಾಟಕ, ಕೇರಳ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನೆರೆಹಾವಳಿಯು ಭೀಕರ ರೂಪ ತಾಳಿತ್ತು. ಸದ್ಯ ಪ್ರಾರಂಭವಾಗಿರುವ ಆಪತ್ಕಾಲದ ಕುರಿತು ದಾರ್ಶನಿಕ ಸಂತರು ಅನೇಕ ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು ಮತ್ತು ಹಾಗೆಯೇ ಅದೇ ರೀತಿ ಆಗುತ್ತಿದೆ ಎನ್ನುವುದು ಗಮನಕ್ಕೆ ಬರುತ್ತದೆ. ಈ ಆಪತ್ಕಾಲದ ಕುರಿತು ಮಹಾರಾಷ್ಟ್ರದ ಒಬ್ಬ ಮಹಾನ್ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ೧೯೯೦ ರಲ್ಲಿಯೇ ಬರೆದಿಟ್ಟಿದ್ದರು. ಈ ಭೀಕರ ಕಾಲದ ಕುರಿತು ಕಾವ್ಯಪಂಕ್ತಿಗಳ ಮೂಲಕ ಅವರು ಮಾಡಿರುವ ವರ್ಣನೆ ಯನ್ನು ಅವರ ‘ಚೈತನ್ಯಲಹರಿ’ ಗ್ರಂಥದಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿಯ ಕೆಲವು ಆಯ್ದ ಕಾವ್ಯಪಂಕ್ತಿಗಳನ್ನು ಕನ್ನಡದಲ್ಲಿ ಅನುವಾದಿಸಿ ನೀಡುತ್ತಿದ್ದೇವೆ.

ಮಹಾಯುದ್ಧ, ಭೂಕಂಪ ಮತ್ತು ಜಲಪ್ರಳಯ ಆಗಲಿದೆ !
ನೆರೆಯಿಂದ ಭೂಮಿ ಕೊಚ್ಚಿ ಹೋಗಿ ಹೊಸದು ಮೇಲೆ ಬರಲಿದೆ ||
ಸಮುದ್ರ ದಡದಲ್ಲಿರುವ ಭಾರತದ ಭೂಮಿಯು ಜಲದಲ್ಲಿ ಮುಳುಗಲಿದೆ |
ಸುಮಾರು ೬ ಮೈಲಿ ದೂರದ ವರೆಗೆ ಜಲ ಮುಂದೆ ಬಂದು ಜಲಪ್ರಳಯವಾಗಲಿದೆ ||
ಕೃಷ್ಣೆಯ ಆಣೆಕಟ್ಟು ಎಲ್ಲವೂ ನಾಶವಾಗಲಿದೆ |
ಈ ಕಾರಣದಿಂದ ಕೃಷ್ಣೆಯ ಜಲವು ಆಕಾಶದೊಂದಿಗೆ ಹೋರಾಡುವುದು ||
ಶ್ರೀಶೈಲ ಮತ್ತು ಕನಕದುರ್ಗಾ ಜಲದಲ್ಲಿ ಮುಳುಗಲಿದೆ |
ಅಸಂಖ್ಯ ನಗರಗಳೂ ನೀರಿನಲ್ಲಿ ಮುಳುಗಲಿದೆ ||
ಅತಿಯಾದ ಉಷ್ಣತೆಯಿಂದ ಹಿಮ ಕರಗಿ ಜಲ ಕೆಳಗೆ ಇಳಿಯಲಿದೆ |
ಇದರಿಂದ ಅಪಾರ ಜೀವಹಾನಿ ಆಗಲಿದೆ ||
ವಿಂಧ್ಯಪರ್ವತಕ್ಕೆ ಹಿಮಾಲಯದ ಜಲ ಬಂದು ಅಪ್ಪಳಿಸಲಿದೆ |
ಆ ಕಾರಣದಿಂದ ಅನೇಕ ನಗರಗಳು ಜಲಮಯ ವಾಗಲಿದೆ ||
ನದಿಯ ಮೇಲಿನ ಆಣೆಕಟ್ಟು ಒಡೆದು ಹೋಗಲಿದೆ |
ಜಗತ್ತಿನಲ್ಲಿ ಈ ರೀತಿ ಜಲಪ್ರಳಯ ನೋಡಲು ಸಿಗಲಿದೆ ||

ಪ.ಪೂ. ಗಗನಗಿರಿ ಮಹಾರಾಜರು

Leave a Comment