ಅ. ಉತ್ಪತ್ತಿ ಮತ್ತು ಉದ್ದೇಶ
೧. ಪುಂಸವನ ಶಬ್ದದ ಉತ್ಪತ್ತಿಯು ‘ಪುಂಸ್ಯ ಅವನಃ’ ಹೀಗಿದೆ. ಪುಂಸ್ಯ ಎಂದರೆ ಪುರುಷಾರ್ಥವು, ಅವನಿಯ ಮೇಲೆ ಅಂದರೆ ಪೃಥ್ವಿಯ ಮೇಲೆ ಅವತರಿಸುವಂತಹ ಅವಸ್ಥೆ ಹೀಗೆ ಇದರ ಅರ್ಥವಾಗಿದೆ. ಗರ್ಭಧಾರಣೆಯಾದ ನಂತರ ಪುತ್ರಪ್ರಾಪ್ತಿಗಾಗಿ ಈ ಸಂಸ್ಕಾರವನ್ನು ಮಾಡುತ್ತಾರೆ.
೨. ಸ್ತ್ರೀಯ ಗರ್ಭಾಶಯದಲ್ಲಿ ಪತಿ-ಪತ್ನಿಯ ವೀರ್ಯದ ಸಂಯೋಗದಿಂದ ಕಟ್ಟುವ ಗರ್ಭದಲ್ಲಿ ಬೀಜರೂಪದಲ್ಲಿ ಅನೇಕ ಸ್ತ್ರೀ-ಪುರುಷ ವೀರ್ಯಾಣುಗಳು ಇರುತ್ತವೆ. ಎರಡನೆಯ, ಮೂರನೆಯ ಅಥವಾ ನಾಲ್ಕನೆಯ ತಿಂಗಳಿನಲ್ಲಿ ಈ ಅನೇಕ ವೀರ್ಯಾಣುಗಳಲ್ಲಿನ ಒಂದು ವೀರ್ಯಾಣು (ಕೆಲವೊಮ್ಮೆ ಎರಡು) ಬೆಳೆಯತೊಡಗುತ್ತದೆ ಮತ್ತು ಇತರ ವೀರ್ಯಾಣುಗಳು ನಾಶವಾಗುತ್ತವೆ. ಬೆಳೆಯುತ್ತಿರುವ ವೀರ್ಯಾಣುವು ‘ಪುತ್ರ’ನಾಗಬೇಕೆಂದು ‘ಪುಂಸವನ’ ಈ ಸಂಸ್ಕಾರವಿದೆ.
– ಗುರುದೇವ ಡಾ. ಕಾಟೇಸ್ವಾಮೀಜಿ
ಆ. ಮುಹೂರ್ತ
ಗರ್ಭಧಾರಣೆಯಾಗಿದೆ ಎನ್ನುವುದು ಖಚಿತವಾದ ನಂತರ ಆದಷ್ಟು ಎರಡನೆಯ ತಿಂಗಳಿನಲ್ಲಿ ಈ ಸಂಸ್ಕಾರವನ್ನು ಮಾಡಬೇಕು. ಮಾತೆಯ ಉದರದಲ್ಲಿ ಗರ್ಭದ ಸ್ಪಂದನವು ಪ್ರಾರಂಭವಾಗುವ ಮೊದಲು ಹಾಗೂ ಅದರ ಲಿಂಗವು ವ್ಯಕ್ತವಾಗುವ ಮೊದಲೇ ಈ ಸಂಸ್ಕಾರವನ್ನು ಮಾಡಬೇಕು. ತಡವಾದಂತೆ ಅದರ ಪರಿಣಾಮದ ಪ್ರಮಾಣವು ಕಡಿಮೆಯಾಗುತ್ತದೆ.
ಲೇಖನದಿಂದ ವಾಚಕರು ಕನ್ಯಾರತ್ನದ ಬದಲು ಪುತ್ರಪ್ರಾಪ್ತಿಗಾಗಿ ಪ್ರಯತ್ನಿಸಬೇಕು ಅಥವಾ ಭ್ರೂಣಲಿಂಗ ಪತ್ತೆ ಮಾಡಬೇಕು ಎಂದು ಅರ್ಥೈಸಬಾರದು; ಏಕೆಂದರೆ ವಿವಾಹ ಮತ್ತು ಸಂತಾನಪ್ರಾಪ್ತಿಯು ಪ್ರಾರಬ್ಧದಂತೆಯೇ ಇರುತ್ತದೆ. ಹೆಣ್ಣುಶಿಶು ಮತ್ತು ಗಂಡುಶಿಶುಪ್ರಾಪ್ತಿಯ ಸಂದರ್ಭದಲ್ಲಿ ಹಿಂದೂ ಧರ್ಮಶಾಸ್ತ್ರ ಅಥವಾ ಆಯುರ್ವೇದದಲ್ಲಿರುವ ಉಪಾಯವನ್ನು ಗ್ರಂಥದಲ್ಲಿ ಕೊಡಲಾಗಿದ್ದರೂ ಈ ಮೂಲಕ ಲೇಖಕರು ಪುತ್ರಪ್ರಾಪ್ತಿಯನ್ನು ಬೆಂಬಲಿಸುತ್ತಿಲ್ಲ, ಅದು ಲೇಖಕರ ಇಚ್ಛೆಯೂ ಅಲ್ಲ. ಈ ಲೇಖನವನ್ನು ಕೇವಲ ಶಾಸ್ತ್ರವನ್ನು ತಿಳಿಸಿಹೇಳುವ ಉದ್ದೇಶದಿಂದ ಕೊಡಲಾಗಿದೆ. ಸಾಧಕರ ದೃಷ್ಟಿಯಲ್ಲಿ ಹೆಣ್ಣು ಅಥವಾ ಗಂಡು ಎಂದು ಭೇದಭಾವ ಮಾಡದೇ ಸಾಧನೆ ಮಾಡುತ್ತಾ ಪ್ರಾರಬ್ಧವನ್ನು ತೀರಿಸುವುದೇ ಶ್ರೇಯಸ್ಕರವಾಗಿದೆ.
(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಹದಿನಾರು ಸಂಸ್ಕಾರಗಳು’ ಗ್ರಂಥ)
ವಿವಾಹಕ್ಕೆ ಸಂಬಂಧಿಸಿ ಕೆಲವು ವಿಷಯಗಳ ಹಿನ್ನೆಲೆಯ ಶಾಸ್ತ್ರ
ಈಶ್ವರಪ್ರಾಪ್ತಿಗಾಗಿ ವಿವಾಹಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರಕ್ಕನುಗುಣವಾಗಿ ಆಚರಿಸಿ !
ವಿವಾಹ ಸಂಸ್ಕಾರ
ಚೌಲಕರ್ಮ (ಚೂಡಾಕರ್ಮ, ಜುಟ್ಟು ಇಡುವುದು)
ಮಗುವಿನ ಜನ್ಮದ ನಂತರ ಯಾವ ಸಂಸ್ಕಾರಗಳನ್ನು ಮಾಡಬೇಕು? (ನಾಲ್ಕನೇ, ಐದನೇ, ಆರನೇ ಮತ್ತು ಏಳನೇ ಸಂಸ್ಕಾರಗಳು)
ಗರ್ಭಾಧಾನ (ಋತುಶಾಂತಿ)