ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !
ಸ್ವಯಂಸೂಚನೆಯ ಸತ್ರ ಮಾಡುತ್ತಿರುವಾಗ ಮನಸ್ಸಿನಲ್ಲಿ ನಿರರ್ಥಕ ವಿಚಾರದಿಂದ ಸತ್ರ ಏಕಾಗ್ರತೆಯಿಂದ ಆಗುತ್ತಿಲ್ಲ, ಎಂದು ಅನೇಕ ಸಾಧಕರು ಹೇಳುತ್ತಾರೆ. ಅದರಿಂದ ಸೂಚನೆಯು ಅಂತರ್ಮನಸ್ಸಿನಲ್ಲಿ ಸಂಸ್ಕಾರವಾಗದಿರುವುದರಿಂದ ಸ್ವಭಾವದೋಷ ಮತ್ತು ಅಹಂನ ತೀವ್ರತೆ ಕಡಿಮೆಯಾಗುವುದಿಲ್ಲ ಹಾಗೂ ಸಾಧನೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಸ್ವಯಂಸೂಚನೆ ಸತ್ರವನ್ನು ಸ್ವಲ್ಪ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಮಾಡಬಹುದು. ಇದರಿಂದ ವಿಚಾರದೆಡೆಗೆ ಗಮನ ಹೋಗದೆ ವಿಚಾರಗಳು ತನ್ನಿಂದ ತಾನೇ ಕಡಿಮೆಯಾಗುತ್ತದೆ ಮತ್ತು ಸ್ವಯಂಸೂಚನೆ ಸತ್ರ ಪರಿಣಾಮಕಾರಿಯಾಗುತ್ತದೆ. ದೊಡ್ಡ ಸ್ವರದಲ್ಲಿ ಸತ್ರ ಮಾಡುತ್ತಿರುವಾಗ ಇತರರಿಗೆ ಅಡಚಣೆಯಾಗದಂತೆ ಕಾಳಜಿವಹಿಸಿ.
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೧೧.೨೦೨೭)
ದಂಗೆಯಂತಹ ಭೀಷಣ ಪರಿಸ್ಥಿತಿಯನ್ನು ಎದುರಿಸಲು ಸ್ವಯಂಸೂಚನೆ ನೀಡಿ ಮನೋಬಲ ಹೆಚ್ಚಿಸಿಕೊಳ್ಳಿ!
ಪೂರ್ವಗ್ರಹ ಎಂಬ ಸ್ವಭಾವದೋಷದ ಬಗ್ಗೆ…
ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಅಂಶಗಳು
ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನೂ ತೆಗೆದುಕೊಳ್ಳಿ
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !