
ಅನೇಕ ಜನರಿಗೆ ಹೊಟ್ಟೆ ಜಡವಾಗುವುದು, ಶೌಚವು ಸರಿಯಾಗದಿರುವುದು, ಹಸಿವಾಗದಿರುವುದು, ಇತ್ಯಾದಿ ಪಚನದ ತೊಂದರೆಗಳು ಸಂಭವಿಸುತ್ತವೆ. ನಮ್ಮೊಳಗೆ ಅಗ್ನಿತತ್ತ್ವವು ಕಡಿಮೆಯಾಗಿದ್ದರಿಂದ ಈ ತೊಂದರೆಗಳು ಸಂಭವಿಸುತ್ತವೆ. ಹೊಟ್ಟೆಯಲ್ಲಿನ ಅಗ್ನಿ ಮಂದವಾಗಿದ್ದರಿಂದ ತಿಂದಿದ್ದು ಸರಿಯಾಗಿ ಪಚನವಾಗುವುದಿಲ್ಲ; ಇದರಿಂದಾಗಿ ಹೊಟ್ಟೆಗೆ ಜಡತ್ವ ನಿರ್ಮಾಣವಾಗುತ್ತದೆ. ಇದಕ್ಕಾಗಿ ಅಗ್ನಿತತ್ತ್ವವನ್ನು ಪೂರೈಸುವ ಉಪಾಯ ಮಾಡಬೇಕು. ಇದಕ್ಕಾಗಿ ಮುಂದೆ ಹೇಳಿದ ಮುದ್ರೆ, ನ್ಯಾಸ ಮತ್ತು ನಾಮಜಪವನ್ನು ಪ್ರತಿದಿನ ೧ ಗಂಟೆ ಮಾಡಬೇಕು.
ಮುದ್ರೆ

ಮಧ್ಯದ ಬೆರಳಿನ ತುದಿಗೆ ಹೆಬ್ಬೆರಳಿನ ತುದಿ ತಗುಲಿಸುವುದು
ನ್ಯಾಸ
ಆಜ್ಞಾಚಕ್ರ ಮತ್ತು ಮಣಿಪುರ ಚಕ್ರ
ನಾಮಜಪ
ಓಂ ಓಂ ಶ್ರೀ ಅಗ್ನಿದೇವಾಯ ನಮಃ ಓಂ ಓಂ |
ಆಹಾರಪಚನದ ತೊಂದರೆಯು ನಿವಾರಣೆಯಾಗುವವರೆಗೆ ಈ ಉಪಾಯವನ್ನು ಮಾಡಬೇಕು. ಅಲ್ಲಿಯ ವರೆಗೆ ಪ್ರತಿದಿನ ಹಗುರವಾದ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಹಸಿವಾದ ಬಳಿಕವೇ ತಿನ್ನಬೇಕು.
(ಸಾಧಕರಿಗೆ ಸೂಚನೆ : ಇಲ್ಲಿ ಹೇಳಲಾಗಿದ್ದ ಅಗ್ನಿದೇವತೆಯ ನಾಮಜಪವು ಪಚನದ ಶಾರೀರಿಕ ತೊಂದರೆಯ ನಿವಾರಣೆಗಾಗಿ ಇರುವುದರಿಂದ ವ್ಯಷ್ಟಿ ಸ್ತರದಲ್ಲಿದೆ. ಆದುದರಿಂದ ಈ ತೊಂದರೆ ಇರುವ ಸಾಧಕರು ಅಗ್ನಿದೇವತೆಯ ನಾಮಜಪವನ್ನು ಉಪಾಯವೆಂದು ೧ ಗಂಟೆ ಕುಳಿತು ಮಾಡಬೇಕು ಮತ್ತು ಈ ಕಾಲಾವಧಿಯನ್ನು ವ್ಯಷ್ಟಿ ನಾಮಜಪವೆಂದು ತಿಳಿಯಬೇಕು.)
– (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯ, ಗೋವಾ.
ಹೊಸ ವಸ್ತುಗಳನ್ನು ಬಳಸುವ ಮೊದಲು ಇದನ್ನು ಮಾಡಿ…
ಸಾಧನೆಯಲ್ಲಿ ಅಡಚಣೆಗಳನ್ನು ದೂರಗೊಳಿಸಲು ‘ನಾಮಜಪದ ಮಂಡಲ ಹಾಕುವ’ ಉಪಾಯ
ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ
ಅಂಗೈಗಳನ್ನು ಜೋಡಿಸಿ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ!
ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’
Daily prayers are necessary to reach a Gurudev and to get mukti from birth and deaths