‘ಶ್ರಾದ್ಧವು ಲಿಂಗದೇಹಕ್ಕೆ ಮಾಡಲಾಗುವ ಸಂಸ್ಕಾರಕರ್ಮಕ್ಕೆ ಸಂಬಂಧಿಸಿದೆ. ಶ್ರಾದ್ಧವನ್ನು ಮಾಡುವುದೆಂದರೆ ಪಿತೃಗಳ ಲಿಂಗದೇಹಗಳಿಗೆ ಗತಿ ಕೊಡಲು ಬ್ರಹ್ಮಾಂಡದಲ್ಲಿನ ಯಮಲಹರಿಗಳನ್ನು (ಇಂಧನಾತ್ಮಕ) ಆವಾಹನೆ ಮಾಡುವುದು. ಈ ಪ್ರಾರ್ಥನಾ ಸ್ವರೂಪ ಆವಾಹನೆಯಿಂದ ಬ್ರಹ್ಮಾಂಡದಲ್ಲಿನ ದತ್ತತತ್ತ್ವಕ್ಕೆ ಸಂಬಂಧಿಸಿದ ಇಚ್ಛಾಲಹರಿಗಳು ಕಾರ್ಯನಿರತವಾಗಿ ಪಿತೃಗಳ ಲಿಂಗದೇಹಕ್ಕೆ ಸಂಬಂಧಿಸಿದ ಯಮಲಹರಿಗಳನ್ನು ತಮ್ಮ ಆಕರ್ಷಣಾಶಕ್ತಿಯಿಂದ ಸೆಳೆದುಕೊಂಡು ಪೃಥ್ವಿಯ ಕಕ್ಷೆಯಲ್ಲಿ ತರುತ್ತವೆ. ಅನೇಕ ಲಿಂಗದೇಹಗಳು ಮೃತ್ಯುಲೋಕದಲ್ಲಿ ಸಿಲುಕಿಕೊಂಡಿರುತ್ತವೆ. ಈ ಲಿಂಗದೇಹಗಳಿಗೆ ಗತಿ ಸಿಗಲು ಕ್ರಿಯಾತ್ಮಕ ಯಮಲಹರಿಗಳ ಆವಶ್ಯಕತೆಯಿರುತ್ತದೆ. ಶ್ರಾದ್ಧಕರ್ಮದಲ್ಲಿ ಈ ಲಹರಿಗಳನ್ನು ಆವಾಹನೆ ಮಾಡಿದಾಗ ಪಿತೃಗಳ ಲಿಂಗದೇಹದ ಸುತ್ತಲೂ ಇರುವ ವಾಯುಮಂಡಲವು ಕಾರ್ಯನಿರತವಾಗಿ ಯಮಲಹರಿಗಳ ಶಕ್ತಿಯಿಂದ ಲಿಂಗದೇಹವು ಮುಂದಿನ ಹಂತಕ್ಕೆ ತಳ್ಳಲ್ಪಡುತ್ತದೆ. ಅಂದರೆ ಲಿಂಗದೇಹಕ್ಕೆ ಸದ್ಗತಿಯು ಸಿಗುತ್ತದೆ.’
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಮುದ್ರಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು’)
ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ನಾಮಜಪದ ಪರಿಣಾಮ
ಶ್ರಾದ್ಧದ ಅಡುಗೆ ಮತ್ತು ಊಟ
ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದವನ್ನು ಪಡೆಯಿರಿ !
ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು !
ಮಹಾಲಯ ಶ್ರಾದ್ಧದ ಶ್ರಾದ್ಧಕರ್ತನ (ಶ್ರಾದ್ಧ ಮಾಡುವವನ) ಮೇಲೆ ಆಗುವ ಆಧ್ಯಾತ್ಮಿಕ ಸ್ತರದ ಪರಿಣಾಮದ ವೈಜ್ಞಾನಿಕ ಸಂಶೋಧನೆ