ಪೂಜಾಸಾಹಿತ್ಯದ ಪಟ್ಟಿ

ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪ ಮಾಡಬೇಕು. ನಾಮಜಪದ ತುಲನೆಯಲ್ಲಿ ಸ್ತೋತ್ರದಲ್ಲಿ ಸಗುಣ ತತ್ತ್ವವು ಹೆಚ್ಚಿರುತ್ತದೆ. ಆದುದರಿಂದ ಸ್ತೋತ್ರವನ್ನು ದೊಡ್ಡಸ್ವರದಲ್ಲಿ ಹೇಳಬೇಕು ಮತ್ತು ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡಬೇಕು. ನಾಮ ಜಪವು ಮನಸ್ಸಿನಲ್ಲಿ ಆಗದಿದ್ದರೆ ದೊಡ್ಡಸ್ವರದಲ್ಲಿ ಮಾಡಬಹುದು. ಪೂಜಾಸಾಹಿತ್ಯದ ಪಟ್ಟಿ ೧. ಕುಂಕುಮ ೧೦೦ ಗ್ರಾಮ್ ೨. ಅರಿಶಿನ ೧೦೦ ಗ್ರಾಮ್ ೩. ಸಿಂಧೂರ ೨೫ ಗ್ರಾಮ್ ೪. ತೇಯ್ದ ಗಂಧ / ಅಷ್ಟಗಂಧ ೧೦೦ ಗ್ರಾಮ್ ೫. ರಂಗೋಲಿ ಪುಡಿ ಕಾಲು ಕಿಲೋ ೬. ಸುಗಂಧದ್ರವ್ಯ … Read more

ಚಾತುರ್ಮಾಸ

‘ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ದೇವರ ಈ ನಿದ್ರಾಕಾಲದಲ್ಲಿ ಅಸುರರು ಪ್ರಬಲರಾಗುತ್ತಾರೆ ಮತ್ತು ಮಾನವರಿಗೆ ತೊಂದರೆಗಳನ್ನು ಕೊಡುತ್ತಾರೆ. ‘ಅಸುರರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರೂ ಒಂದಲ್ಲ ಒಂದು ವ್ರತವನ್ನು ಅವಶ್ಯವಾಗಿ ಮಾಡಬೇಕು’,

ವ್ರತಗಳ ವಿಧಗಳು

ಸಕಾಮ (ಕಾಮ್ಯ), ನಿಷ್ಕಾಮ, ಆವಶ್ಯಕತೆಗನುಸಾರ, ಇಂದ್ರಿಯಕ್ಕನುಸಾರ, ಕಾಲಾನುಸಾರ, ವೈಯಕ್ತಿಕ ಮತ್ತು ಸಾಮೂಹಿಕ ವ್ರತಗಳ ಬಗ್ಗೆ ತಿಳಿದುಕೊಳ್ಳಿ.

ಚಾತುರ್ಮಾಸದ ಕಾಲದಲ್ಲಿ ಮಾಡಬೇಕಾದ ಸಾಧನೆಯ ಮಹತ್ವ

ಮನುಷ್ಯನ ಒಂದು ವರ್ಷದ ಮೊದಲ ಆರು ತಿಂಗಳು ಎಂದರೆ ದೇವರ ಒಂದು ದಿನ ಮತ್ತು ಮನುಷ್ಯನ ಇನ್ನುಳಿದ ಆರು ತಿಂಗಳು ಎಂದರೆ ದೇವರ ಒಂದು ರಾತ್ರಿಯಾಗಿದೆ; ಆದರೆ ದೇವತೆಗಳು ಚಾತುರ್ಮಾಸದಲ್ಲಿ ಕೇವಲ ನಾಲ್ಕು ತಿಂಗಳುಗಳಷ್ಟೇ ನಿದ್ರಿಸುತ್ತಾರೆ ಮತ್ತು ಒಂದು ತೃತೀಯಾಂಶ ರಾತ್ರಿ ಉಳಿದಿರುವಾಗಲೇ ಎಚ್ಚರಗೊಳ್ಳುತ್ತಾರೆ.

ನವರಾತ್ರಿಯ ವ್ರತಗಳು ಮತ್ತು ಪೂಜೆ

ಅಮವಾಸ್ಯೆಯುಕ್ತ ಪಾಡ್ಯದಂದು ನವರಾತ್ರಿಯ ವ್ರತ ಮತ್ತು ಪೂಜೆಯನ್ನು ಮಾಡಬಾರದು. ಇಂತಹ ಸಮಯದಲ್ಲಿ ಪಾಡ್ಯಯುಕ್ತ ಬಿದಿಗೆಯಂದು ವ್ರತವನ್ನು ಪ್ರಾರಂಭಿಸಿ ಪೂಜೆಯನ್ನು ಮಾಡುವುದು ಉತ್ತಮ.

ಕಲಿಯುಗದಲ್ಲಿ ವಿವಿಧ ಸಂತರು ಮಾಡಿರುವ ದೇವಿಯ ಉಪಾಸನೆ

ಆದಿ ಶಂಕರಾಚಾರ್ಯರು ತ್ರಿಪುರ ಸುಂದರಿದೇವಿಯ ಉಪಾಸನೆಯನ್ನು ಮಾಡಿದ್ದರು. ಅಲ್ಲದೇ ಅವರ ಮೇಲೆ ಮೂಕಾಂಬಿಕಾ ದೇವಿ ಮತ್ತು ಸರಸ್ವತಿದೇವಿಯ ವರದಹಸ್ತವಿತ್ತು.

ರಥಸಪ್ತಮಿ

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ. ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನವೇ ಸೂರ್ಯ ದೇವತೆಯನ್ನು ನಮಿಸಲು ವಿಶೇಷವಾಗಿ ಸೂರ್ಯನಮಸ್ಕಾರಗಳನ್ನು ಮಾಡುವ ದಿನ.

ಶ್ರೀ ದತ್ತ ಜಯಂತಿ

ಮಾರ್ಗಶಿರ ಹುಣ್ಣಿಮೆಯಂದು ಮೃಗ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು, ಆದುದರಿಂದ ಆ ದಿನ ದತ್ತನ ಜನ್ಮೋತ್ಸವವನ್ನು ಎಲ್ಲ ದತ್ತಕ್ಷೇತ್ರಗಳಲ್ಲಿ ಆಚರಿಸಲಾಗುತ್ತದೆ.

ಶ್ರೀ ದುರ್ಗಾದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ.