ಸಾಧನಾವೃದ್ಧಿ ಸತ್ಸಂಗ (25)

ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಮ್ಮ ಅಹಂಭಾವ ಕಡಿಮೆಯಾಗುತ್ತದೆ, ಏಕೆಂದರೆ ಜೀವನದಲ್ಲಿ ಘಟಿಸುವ ಪ್ರತಿಯೊಂದು ಕೃತಿಯ ಶ್ರೇಯಸ್ಸನ್ನು ಈಶ್ವರನಿಗೆ ನೀಡಲಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (23)

ಮಾನಸ ದೃಷ್ಟಿಯನ್ನು ನಿವಾಳಿಸುವುದು ಕಳೆದ ಲೇಖನದಲ್ಲಿ ನಾವು ದೃಷ್ಟಿ ಏಕೆ ತಗಲುತ್ತದೆ, ದೃಷ್ಟಿ ತಗಲುವುದರ ಲಕ್ಷಣಗಳ್ಯಾವವು ? ಹಾಗೆಯೇ ಉಪ್ಪು-ಸಾಸಿವೆ-ಮೆಣಸಿನಕಾಯಿ, ನಿಂಬೆಹಣ್ಣು, ಕರ್ಪುರ, ಹಾಗೆಯೇ ತೆಂಗಿನಕಾಯಿ ಈ ಘಟಕಗಳಿಂದ ಪ್ರತ್ಯಕ್ಷ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಂಡಿದ್ದೇವೆ. ನಮಗಾಗುವ ಆಧ್ಯಾತ್ಮಿಕ ತೊಂದರೆಯು ದೃಷ್ಟಿ ತೆಗೆದ ನಂತರ ಕಡಿಮೆಯಾಗುತ್ತದೆ; ಆದರೆ ತೊಂದರೆಯ ಪ್ರಮಾಣ ಹೆಚ್ಚಾಗಿದ್ದರೆ, ಅದು ಪುನಃ ಉದ್ಭವಿಸಬಹುದು. ಎಲ್ಲಕ್ಕಿಂತ ಮಹತ್ವದ್ದೆಂದರೆ ಕಾಲದ ಪ್ರಭಾವದಿಂದ ಸದ್ಯದ ಕಲಿಯುಗದಲ್ಲಿನ ಸಂಪೂರ್ಣ ವಾಯುಮಂಡಲವೇ ತಮೋಗುಣದಿಂದ ಪೀಡಿತವಾಗಿದೆ. ಆದುದರಿಂದ ಪ್ರತಿಯೊಂದು ಜೀವಕ್ಕೆ ಯಾವುದಾದರೊಂದು … Read more

ಸಾಧನಾವೃದ್ಧಿ ಸತ್ಸಂಗ (22)

ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಸ್ಪಂದನಗಳು, ಹಾಗೆಯೇ ಕೆಟ್ಟಶಕ್ತಿಗಳ ತೊಂದರೆ ದೂರವಾಗುತ್ತವೆ ಮತ್ತು ರಕ್ಷಣೆಯ ಕವಚ ನಿರ್ಮಾಣವಾಗುತ್ತದೆ.

ಸಾಧನಾವೃದ್ಧಿ ಸತ್ಸಂಗ (18)

ಸ್ವಯಂಸೂಚನಾ ಸತ್ರಗಳು ಪ್ರಭಾವಶಾಲಿಯಾಗಲು ಮಾಡಬೇಕಾದ ಪ್ರಯತ್ನಗಳು ನಾವು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಮತ್ತು ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು? ಎಂದು ತಿಳಿದುಕೊಂಡಿದ್ದೆವು. ಅದರ ಜೊತೆಗೆ ಸ್ವಯಂಸೂಚನೆಯನ್ನು ನೀಡುವ ಬೇರೆ ಬೇರೆ ಪದ್ಧತಿಗಳು ಉದಾಹರಣೆಗಾಗಿ ಅ-೧, ಅ-೨, ಅ-೩, ಆ-೧, ಆ-೨, ಇದನ್ನು ಸಹ ತಿಳಿದುಕೊಂಡಿದ್ದೆವು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು, ಮತ್ತು ಸ್ವಯಂಸೂಚನೆ ಅಭ್ಯಾಸಸತ್ರಗಳನ್ನು ಮಾಡುವುದು ಇವು ೨ ಮಹತ್ವದ ಹಂತಗಳಾಗಿವೆ. ಈಗ ನಾವು ಸ್ವಯಂಸೂಚನೆಯ ಸತ್ರದ ಬಗ್ಗೆ ಮತ್ತೊಮ್ಮೆ ನೋಡೋಣ ಮತ್ತು ಅದು … Read more

ಸಾಧನಾವೃದ್ಧಿ ಸತ್ಸಂಗ (17)

ಆತ್ಮನಿವೇದನ ಭಕ್ತಿ ಅಧ್ಯಾತ್ಮದಲ್ಲಿ ಭಾವ ಎಂಬ ಘಟಕಕ್ಕೆ ಬಹಳ ಮಹತ್ವವಿದೆ. ಇಂದಿನ ತನಕ ನಾವು ಸಾಧನೆಯನ್ನು ಮಾಡುತ್ತಿರುವಾಗ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು? ಮಾನಸ ಪೂಜೆ ಮಾಡುವುದು ಹೇಗೆ? ನಮ್ಮಲ್ಲಿ ದೇವರ ಬಗ್ಗೆ ಭಾವವು ಉಂಟಾಗಲು ದೈನಂದಿನ ಕೃತಿಗಳಿಗೆ ಭಾವವನ್ನು ಜೋಡಿಸುವುದು ಹೇಗೆ ಎಂಬ ಅಂಶಗಳನ್ನು ತಿಳಿದುಕೊಂಡಿದ್ದೆವು. ಇಂದು ನಾವು ಭಾವಜಾಗೃತಿಯ ಅಂತರ್ಗತ ಆತ್ಮನಿವೇದನ ಭಕ್ತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಕೆಲವೊಮ್ಮೆ ನಮಗೆ ಎದುರಿಸಬೇಕಾದ ಪ್ರಸಂಗಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿರುತ್ತದೆ. ಒಳಗಿಂದೊಳಗೆ ಉಸಿರುಗಟ್ಟಿದಂತಾಗುತ್ತದೆ ಮತ್ತು ನಾವು ಅಸ್ವಸ್ಥರಾಗುತ್ತೇವೆ. ಈ … Read more

ಸಾಧನಾವೃದ್ಧಿ ಸತ್ಸಂಗ (16)

ಆವರಣವನ್ನು ತೆಗೆಯುವುದು ಹಿಂದೆ ನಾವು ಆಧ್ಯಾತ್ಮಿಕ ತೊಂದರೆ ಹಾಗೂ ಆಧ್ಯಾತ್ಮಿಕ ಉಪಚಾರಗಳು, ಹಾಗೂ ಉಪ್ಪು ನೀರಿನ ಉಪಾಯದ ಬಗ್ಗೆಯೂ ತಿಳಿದುಕೊಂಡಿದ್ದೆವು. ಈಗ ನಾವು ಆಧ್ಯಾತ್ಮಿಕ ಉಪಚಾರಗಳ ಅಂತರ್ಗತ ಆವರಣವನ್ನು ತೆಗೆಯುವುದು ಎಂದರೇನು ಎಂಬ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಆವರಣ ಬಂದಿದೆಯೇನು? ಇದನ್ನು ಹೇಗೆ ಗುರುತಿಸುವುದು, ಹಾಗೂ ಆವರಣವನ್ನು ದೂರಗೊಳಿಸಲು ಯಾವ್ಯಾವ ಆಧ್ಯಾತ್ಮಿಕ ಉಪಚಾರಗಳನ್ನು ಮಾಡಬೇಕು ಇದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಮ್ಮೆ ನಮಗೆ ಏನೂ ಹೊಳೆಯದಿರುವುದು, ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯಾಗುವುದು, ಶಾರೀರಿಕ ಕಾರಣಗಳೇನೂ ಇಲ್ಲದಿದ್ದರೂ ಬಹಳ ಸುಸ್ತಾಗುವುದು, ತುಂಬಾ ಆಯಾಸವೆನಿಸುವುದು, … Read more

ಸಾಧನಾವೃದ್ಧಿ ಸತ್ಸಂಗ (15)

ಭಾವಜಾಗೃತಿ (ಕೃತಿಗೆ ಭಾವವನ್ನು ಜೋಡಿಸುವುದು) ಹಿಂದೆ ನಾವು ಭಾವ ಎಂದರೇನು? ಸಾಧನಾ ಪ್ರವಾಸದಲ್ಲಿ ಭಾವಜಾಗೃತಿಯ ಮಹತ್ವವೇನು? ಎಂದು ತಿಳಿದುಕೊಂಡಿದ್ದೆವು. ಇಂದಿನ ಸತ್ಸಂಗದಲ್ಲಿ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸಲು ಇನ್ನು ಏನೇನು ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ‘ಭಾವ ಇದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧನಾ ಮಾರ್ಗದಲ್ಲಿ ನಮ್ಮಲ್ಲಿ ದೇವರ ಕುರಿತಾಗಿ ಇರುವಂತಹ ಭಾವವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ. ಅ. ಅಷ್ಟಸಾತ್ತ್ವಿಕಭಾವದ ಲಕ್ಷಣಗಳು ಭಾವಜಾಗೃತಿಯ ಪ್ರಯತ್ನಗಳಿಂದ ನಮ್ಮಲ್ಲಿರುವ ಭಕ್ತಿಭಾವವು ಹೆಚ್ಚಾಗುತ್ತದೆ. ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಹಾಗೂ … Read more

ಸಾಧನಾವೃದ್ಧಿ ಸತ್ಸಂಗ (14)

ಉಪ್ಪು ನೀರಿನ ಉಪಾಯ ಈ ಹಿಂದ ನಾವು ಕೆಟ್ಟ ಶಕ್ತಿಗಳ ತೊಂದರೆ ಎಂದರೇನು? ಹಾಗೂ ಆಧ್ಯಾತ್ಮಿಕ ಉಪಾಯ ಎಂದರೇನು? ಎಂದು ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯದ ಅಂತರ್ಗತ ಕರ್ಪೂರ-ಅತ್ತರ ಉಪಾಯವನ್ನು ಮಾಡುವುದು ಹೇಗೆ ಎಂದು ಸಹ ತಿಳಿದುಕೊಂಡಿದ್ದೇವೆ. ಆಧ್ಯಾತ್ಮಿಕ ಉಪಾಯಗಳಿಂದ ಸಾಧನೆಯ ಅಡಚಣೆಗಳು ದೂರವಾಗುತ್ತವೆ. ನಮ್ಮ ಶರೀರ, ಮನಸ್ಸು ಹಾಗೂ ಬುದ್ಧಿಯ ಮೇಲಿನ ನಕಾರಾತ್ಮಕ ಮತ್ತು ಅನಿಷ್ಟ ಶಕ್ತಿಗಳ ಆವರಣ ದೂರವಾಗಲು ಸಹಾಯವಾಗುತ್ತದೆ; ಕೆಟ್ಟ ಶಕ್ತಿಗಳನ್ನು ದೂರಗೊಳಿಸಲು ಸಾಧ್ಯವಾಗುತ್ತದೆ. ತಾವು ಕರ್ಪೂರ – ಅತ್ತರ ನ ಉಪಾಯವನ್ನು ಮಾಡಿದ … Read more

ಸಾಧನಾವೃದ್ಧಿ ಸತ್ಸಂಗ (11)

‘ಕರ್ತೃತ್ವ’ ವನ್ನು ಜಯಿಸಲು ಮಾಡಬೇಕಾಗಿರುವ ಪ್ರಯತ್ನಗಳು ಈ ಹಿಂದೆ ಅಹಂ ಎಂದರೇನು ? ಹಾಗೂ ಅಹಂ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣಕ್ಕೆ ಅಹಂ ಇರುತ್ತದೆ. ಕಾರ್ಯ, ಜ್ಞಾನ, ಯಶಸ್ಸು, ಪ್ರಸಿದ್ಧಿ, ಸೌಂದರ್ಯ, ಪರಿವಾರ, ಜಾತಿ, ಪಂಥ, ದೇಶ, ದೇವರು, ಸಾಧನೆ ಈ ವಿಷಯಗಳ ಬಗ್ಗೆ ಅಹಂಕಾರವಿರುತ್ತದೆ. ಅಹಂಕಾರ ಇರುವುದು ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ. ಅಹಂಕಾರವು ಎಲ್ಲ ದುಃಖಗಳ ಮೂಲವಾಗಿದೆ. ಅಹಂಕಾರವು ನಷ್ಟವಾದ ಹೊರತು ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ … Read more