ದೇವಸ್ಥಾನದಲ್ಲಿ ದೇವರ ಎದುರು ಇರುವ ಆಮೆಯ ಪ್ರತಿಮೆಯ ಬದಿಯಲ್ಲಿ ನಿಂತು ಏಕೆ ದರ್ಶನ ಪಡೆಯಬೇಕು ?

ದೇವಸ್ಥಾನದಲ್ಲಿರುವ ಆಮೆಯ ಪ್ರತಿಮೆಯ ಮಹತ್ವ ಮತ್ತು ದೇವರ ಮೂರ್ತಿ ಹಾಗೂ ಆಮೆಯ ಪ್ರತಿಮೆಯ ನಡುವೆ ನಿಂತುಕೊಂಡು ಅಥವಾ ಕುಳಿತುಕೊಂಡು ದರ್ಶನವನ್ನು ಪಡೆಯದೇ, ಆಮೆ ಅಥವಾ ನಂದಿಯ ಪ್ರತಿಮೆ ಮತ್ತು ದೇವತೆಯ ಮೂರ್ತಿ ಅಥವಾ ಲಿಂಗವನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಂಡು ದರ್ಶನವನ್ನು ಪಡೆದುಕೊಳ್ಳುವುದು ಮಹತ್ವದ್ದಾಗಿದೆ: ಭುವರ್ಲೋಕದಲ್ಲಿರುವ ಕೆಲವು ಶಾಪಗ್ರಸ್ತ ಪುಣ್ಯಾತ್ಮರು ಪೃಥ್ವಿಯ ಮೇಲೆ ಆಮೆಯ ರೂಪದಲ್ಲಿ ಜನ್ಮತಾಳುತ್ತಾರೆ. ಪ್ರಾಣಿಗಳಲ್ಲಿ ಆಕಳನ್ನು ಬಿಟ್ಟರೆ ಕೇವಲ ಆಮೆಯಲ್ಲಿ ಮಾತ್ರ ವಾತಾವರಣದಲ್ಲಿರುವ ಸಾತ್ತ್ವಿಕತೆಯನ್ನು ಹೆಚ್ಚು ಪ್ರಮಾಣದಲ್ಲಿ ಸೆಳೆದುಕೊಳ್ಳುವ ಶಕ್ತಿಯಿದೆ. ಆದುದರಿಂದ ಆಮೆಯು ಇತರ ಪ್ರಾಣಿಗಳ ತುಲನೆಯಲ್ಲಿ ಹೆಚ್ಚು ಸಾತ್ತ್ವಿಕವಾಗಿದೆ.

ದೇವಸ್ಥಾನದಲ್ಲಿನ ಆಮೆಯ ಪ್ರತಿಮೆಯಲ್ಲಿ ವಾತಾವರಣದಲ್ಲಿನ ಸಾತ್ತ್ವಿಕ ಲಹರಿಗಳು ಆಕರ್ಷಿಸಿ, ಅವಶ್ಯಕತೆಗನುಸಾರ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುವುದರಿಂದ ದರ್ಶನಕ್ಕೆ ಬರುವ ಭಕ್ತರಿಗೆ ಈ ಲಹರಿಗಳಿಂದ ತೊಂದರೆಯಾಗುವುದಿಲ್ಲ: ಬಹಳಷ್ಟು ದೇವಸ್ಥಾನಗಳಲ್ಲಿ ದೇವರ ಎದುರಿಗೆ ಆಮೆಯ ಆಕಾರದಲ್ಲಿನ ಕಲ್ಲನ್ನು ಅಥವಾ ಲೋಹದ ಆಮೆಯನ್ನು ಇಟ್ಟಿರುತ್ತಾರೆ. ದೇವರಿಂದ ಬರುವ ಸಾತ್ತ್ವಿಕ ಲಹರಿಗಳು ಆಮೆಯ ಬಾಯಿಯಿಂದ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಗ್ರಹಿಸಲ್ಪಟ್ಟು ಅದರ ನಾಲ್ಕು ಕಾಲು ಮತ್ತು ಬಾಲದಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಆಮೆಯ ಬಾಲದಿಂದ ಸಾತ್ತ್ವಿಕ ಲಹರಿಗಳು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಸಾತ್ತ್ವಿಕ ಲಹರಿಗಳು ಅವಶ್ಯಕತೆಗನುಸಾರ ಆಮೆಯ ಪ್ರತಿಮೆಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವತೆಯಿಂದ ಬರುವ ಸಾತ್ತ್ವಿಕ ಲಹರಿಗಳು ನೇರವಾಗಿ ಸಿಗುವುದಿಲ್ಲ ಮತ್ತು ಭಕ್ತರಿಗೆ ಈ ಲಹರಿಗಳಿಂದ ತೊಂದರೆಯಾಗುವುದಿಲ್ಲ.

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು ಚಿತ್ರವನ್ನು ಕ್ಲಿಕ್ ಮಾಡಿ)

ಇಲ್ಲಿ ಗಮನದಲ್ಲಿಡಬೇಕಾದ ವಿಷಯವೇನೆಂದರೆ ದೇವತೆಯಿಂದ ಬರುವ ಲಹರಿಗಳು ಸಾತ್ತ್ವಿಕವೇ ಆಗಿದ್ದರೂ ಸಾಮಾನ್ಯ ಭಕ್ತರ ಆಧ್ಯಾತ್ಮಿಕ ಮಟ್ಟವು ಹೆಚ್ಚಿಗೆ ಇಲ್ಲದಿರುವುದರಿಂದ ಈ ಸಾತ್ತ್ವಿಕ ಲಹರಿಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಅವರಲ್ಲಿರುವುದಿಲ್ಲ. ಅವರಿಗೆ ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ. ಆದುದರಿಂದ ಸಾಮಾನ್ಯ ಭಕ್ತರು ದೇವತೆಯ ಮೂರ್ತಿ ಮತ್ತು ಆಮೆಯ ಪ್ರತಿಮೆಯ ನಡುವೆ ನಿಂತುಕೊಂಡು ಅಥವಾ ಕುಳಿತುಕೊಂಡು ದರ್ಶನವನ್ನು ಪಡೆಯಬಾರದು. ಯಾವಾಗಲೂ ಆಮೆ ಅಥವಾ ನಂದಿಯ ಪ್ರತಿಮೆ ಮತ್ತು ದೇವತೆಯ ಮೂರ್ತಿ ಅಥವಾ ಲಿಂಗವನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಂಡು ದರ್ಶನವನ್ನು ಪಡೆಯಬೇಕು.

(ಚಿತ್ರದಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ಓದಲು ಚಿತ್ರವನ್ನು ಕ್ಲಿಕ್ ಮಾಡಿ)

(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ದೇವಸ್ಥಾನದಲ್ಲಿ ದರ್ಶನವನ್ನು ಹೇಗೆ ಪಡೆಯಬೇಕು ?’)

Leave a Comment