ಕೃತಕ ಮಳೆ ಬರಿಸಲು ಯಜ್ಞಗಳ ಬಳಕೆ – ಒಂದು ಶಾಸ್ತ್ರೀಯ ಆಧಾರ

ಯಜ್ಞಯಾಗಗಳ ಬಗ್ಗೆ ಬೆಂಕಿಯನ್ನು ಕಾರುವ ಕಥಿತ ಪ್ರಗತಿಪರರು ‘ಕೃತಕ ಮಳೆಗಾಗಿ ಯಜ್ಞದ ಬಳಕೆಯಾಗುತ್ತದೆ’, ಎಂಬ ಬಗ್ಗೆ ಏನಾದರೂ ಮಾತನಾಡುವರೇ ?

೧. ಮಳೆಯನ್ನು ಬರಿಸಲು ಗ್ರಾಮೀಣ ಭಾಗದಲ್ಲಿ ಮಾಡಲಾಗುವ ಅಶಾಸ್ತ್ರೀಯ ಕೃತಿಗಳು

ನಗರಗಳಲ್ಲಿ ವಾಸಿಸುವ ಜನರಿಗೆ ಮಳೆಗಾಲ ಬೇಡವೆನಿಸುತ್ತದೆ; ಆದರೆ ಗ್ರಾಮೀಣ ಭಾಗದ ಜನತೆಯ ಜೀವನ ಮಳೆಯ ಮೇಲೆಯೇ ಅವಲಂಬಿಸಿರುತ್ತದೆ. ಮಳೆ ಬೀಳದಿದ್ದರೆ ಹೊಲ ಹಾಳು ಬೀಳುತ್ತದೆ, ಅಪೌಷ್ಟಿಕತೆಯ ಸಮಸ್ಯೆ ಎದುರಾಗುತ್ತದೆ. ಬರಗಾಲದಿಂದ ಪ್ರಾಣಿಗಳೂ ಸಂಕಟಕ್ಕೊಳಗಾಗುವವು. ಅವುಗಳನ್ನು ಹೇಗೆ ಉಳಿಸುವುದು ? ಅಥವಾ ಕಸಾಯಿಖಾನೆಗೆ ಕಳುಹಿಸಬೇಕೇ ? ಎಂಬಂತಹ ಅನೇಕ ಪ್ರಶ್ನೆಗಳು ಮೂಡುತ್ತವೆ. ವರ್ಷದಲ್ಲಿ ಎರಡರಿಂದ ಎರಡುವರೆ ತಿಂಗಳು ಬೀಳುವ ಮಳೆ ಕಡಿಮೆಯಾಯಿತು ಅಥವಾ ಅದು ಹೆಚ್ಚಾದರೂ ಸಮಸ್ಯೆ ಇದ್ದೇ ಇರುತ್ತದೆ. ಮಳೆಯ ಅನಿಯಮಿತತೆಯ ಹೊಡೆತ ರೈತರಿಗೆ ಬೀಳುತ್ತದೆ. ಹೆಚ್ಚಿನ ಬಾರಿ ಬಿತ್ತನೆಯಾಗುತ್ತದೆ, ಬೆಳೆ ಬೆಳೆಯುತ್ತದೆ ಮತ್ತು ಮಳೆ ಕೈ ಕೊಡುತ್ತದೆ. ಕೃಷಿ ಮಾಡಿದ್ದು ವ್ಯರ್ಥವಾಗುತ್ತದೆ.

ಮುಂಗಾರು ಮಳೆಯ ಕೈಕೊಟ್ಟರೆ ಮಳೆಗೆ ಸಂಬಂಧಿಸಿದ ಅನೇಕ ಮೂಢನಂಬಿಕೆಗಳು ಉದ್ರೇಕಗೊಳ್ಳುತ್ತವೆ. ಅಮಾಯಕ ರೈತನು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಬಲಿಯಾಗುತ್ತಾನೆ. ಮಳೆ ತರಿಸಲು ಒಬ್ಬರು ಕತ್ತೆಗಳ ಮದುವೆ ಮಾಡಿಸಿದರೆ, ಇನ್ನೊಬ್ಬರು ಕಪ್ಪೆಗಳ ಮದುವೆ ಮಾಡಿಸುತ್ತಾರೆ. ಕೆಲವು ಸ್ಥಳಗಳಲ್ಲಿ ಪ್ರಶ್ನೆಗಳನ್ನು ಕೇಳಿ ದೇವರಿಂದ ಆಜ್ಞೆಯನ್ನು ಪಡೆಯುವ ಪದ್ಧತಿಯೂ ಇದೆ. ಹಳ್ಳಿಯಿಂದ ಕಪ್ಪು ಕುದುರೆ ಅಥವಾ ಹೆಣ್ಣು ಕುರಿಯನ್ನು ಓಡಿಸಲಾಗುತ್ತದೆ. ಒಂದು ವೇಳೆ ಅವು ಓಡುತ್ತಿರುವಾಗ ಮೂತ್ರವಿಸರ್ಜನೆ ಮಾಡಿದರೆ ಮಳೆ ಬೀಳುತ್ತದೆ ಎಂದು ತಿಳಿದುಕೊಳ್ಳಲಾಗುತ್ತದೆ. ಇಂತಹ ಅನೇಕ ರೂಢಿಗಳು ಇಂದಿಗೂ ಪ್ರಚಲಿತವಿವೆ; ಏಕೆಂದರೆ ಮಳೆಯ ಅನಿಯಮಿತತೆ ಎಲ್ಲರನ್ನು ದಿಗಿಲುಗೊಳಿಸುತ್ತಿದೆ. ಆದುದರಿಂದ ಸಮಸ್ಯೆಗಳ ಹಳ್ಳದಲ್ಲಿ ಸಿಲುಕಿದ ವ್ಯಕ್ತಿಯು ನಂತರ ಇಂತಹ ಮೂಢನಂಬಿಕೆಗಳ ಮೇಲೆ ವಿಶ್ವಾಸವಿಡುತ್ತಾನೆ. ಇಂತಹ ಕೃತಿ ಮಾಡಿದರೆ ವಾಸ್ತವದಲ್ಲಿ ಮಳೆ ಬೀಳುತ್ತದೆ ಏನು ? ಇದಕ್ಕೆ ಯಾವುದೇ ಶಾಸ್ತ್ರೀಯ ಆಧಾರವಿಲ್ಲ. ಇಂತಹ ಅನೇಕ ಮೂಢನಂಬಿಕೆಗಳು ಗ್ರಾಮೀಣ ಭಾಗಗಳಲ್ಲಿ ನೋಡಲು ಸಿಗುತ್ತವೆ.

೨. ‘ಪರ್ಜನ್ಯಯಾಗ’ವನ್ನು ಮಾಡಿದರೆ ಮಳೆ ಬೀಳುವುದು

ಕೃತಕ ಮಳೆ ತರಿಸಲು ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಯಜುರ್ವೇದದಲ್ಲಿ ‘ಕಾರೀರೀ ಇಷ್ಟಿ’ ಹೆಸರಿನ ಯಜ್ಞವನ್ನು ಹೇಳಲಾಗಿದೆ. ಪುರಾತನ ಕಾಲದಲ್ಲಿಯೂ ಮಳೆ ಬರಿಸಲು ವಿವಿಧ ಯಜ್ಞಗಳನ್ನು ಮಾಡಲಾಗುತ್ತಿತ್ತು. ಇದಕ್ಕೆ ಶಾಸ್ತ್ರೀಯ ಆಧಾರವೂ ಇದೆ.

ತಯಾ ಪರ್ಜನ್ಯಾ ಯಜ್ಞೀಂ ಜನ್ಮ | ಯಜ್ಞಾತೇಂ ಪ್ರಗಟೀ ಕರ್ಮ |
ಕರ್ಮಾಸಿ ಆದಿ ಬ್ರಹ್ಮ | ವೇದರೂಪ ||
– ಜ್ಞಾನೇಶ್ವರೀ, ಅಧ್ಯಾಯ ೩, ಓವೀ ೧೩೫

ಅರ್ಥ : ಆ ಮಳೆ ಯಜ್ಞದಿಂದ ಉತ್ಪನ್ನವಾಗುತ್ತದೆ, ಆ ಯಜ್ಞ ಕರ್ಮದಿಂದ ಪ್ರಕಟವಾಗುತ್ತದೆ ಮತ್ತು ವೇದರೂಪ ಬ್ರಹ್ಮ ಇದು ಕರ್ಮದ ಮೂಲವಾಗಿದೆ.

ಯಜ್ಞದಲ್ಲಿ ಮಾವಿನಮರ, ಆಲದ ಮರ, ಮುತ್ತುಗದ ಮರ, ಅರಳೀ ಮರ, ನೇರಳೆ, ಅತ್ತಿ ಮರ ಮುಂತಾದ ರಾಳ ಉತ್ಪಾದಿಸುವ ಮರಗಳ ಕೊಂಬೆಗಳನ್ನು ಬಳಸಲಾಗುತ್ತದೆ. ಇದರಲ್ಲಿ ಉಪ್ಪು, ನವಸಾಗರವನ್ನು (ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಮಾಡಿಸುವಾಗ ಉಪಯೋಗಿಸಲಾಗುವ ರಸಾಯನ, ಅಮೋನಿಯಂ ಕ್ಲೋರೈಡ್) ಅರ್ಪಿಸಲಾಗುತ್ತದೆ. ಇದಕ್ಕೆ ‘ಪರ್ಜನ್ಯಯಾಗ’ವೆಂದು ಹೇಳಲಾಗುತ್ತದೆ. ಇದರಿಂದ ಮಳೆ ಬರುತ್ತದೆ.

೩. ಪರ್ಜನ್ಯಯಾಗದಿಂದಾಗುವ ರಾಸಾಯನಿಕ ಪ್ರಕ್ರಿಯೆ ಮತ್ತು ಅದರಿಂದ ಕೃತಕ ಮಳೆ ಬೀಳುವುದು

ಕೆಲವು ವರ್ಷಗಳ ಹಿಂದೆ ಡಾ. ರಾಜಾ ಮರಾಠೆ ಇವರು ‘ವರುಣಯಂತ್ರ’ದ ಪ್ರಯೋಗವನ್ನು ಇದೇ ಶಾಸ್ತ್ರೀಯ ಆಧಾರದ ಮೇಲೆ ಮಹಾರಾಷ್ಟ್ರದಲ್ಲಿ ನಡೆಸಿದ್ದರು. ಮೋಡ ಕವಿದ ವಾತಾವರಣದ ಸಮಯದಲ್ಲಿ ಈ ಯಜ್ಞವನ್ನು ಮಾಡಿ ಮಳೆಯನ್ನು ತರಿಸಲಾಯಿತು. ಸಾದಾ ಉಪ್ಪು ೮೦೧ ಅಂಶ ಸೆಲ್ಸಿಯಸ್‌ಗೆ ಕರಗುತ್ತದೆ, ಮತ್ತು ೧ ಸಾವಿರದ ೪೬೫ ಅಂಶ ಸೆಲ್ಸಿಯಸ್‌ಗೆ ಕುದಿಯುತ್ತದೆ. ಯಜ್ಞದಲ್ಲಿ ಉಪ್ಪನ್ನು ಹಾಕಿದಾಗ ಅದು ಕರುಗುತ್ತದೆ. ಕರಗಿ ಆವಿಯಾದ ಉಪ್ಪು ತೀವ್ರವಾದ ಜ್ಞಾಲೆಯ ಮೂಲಕ ಆಕಾಶಕ್ಕೆ ಹೋಗುತ್ತದೆ. ವಾತಾವರಣದಲ್ಲಿ ಈ ಅಯಾನು ರೂಪದ ಉಪ್ಪಿನ ಮುಕ್ತ ಸಂಚಾರವಾಗುತ್ತದೆ. ಈ ಅಯಾನು (ion) ಉಷ್ಣ ಮೋಡಗಳ ವರೆಗೆ ತಲುಪಿದಾಗ ಆ ಮೋಡಗಳು ನೀರಿನಲ್ಲಿ ರೂಪಾಂತರಗೊಂಡು ಮಳೆ ಬೀಳುತ್ತದೆ. ಈ ರೀತಿಯ ರಾಸಾಯನಿಕ ಸಮೀಕರಣವಿದೆ. ಹಿಂದಿನ ಕಾಲದಲ್ಲಿ ಯಜ್ಞವು ಇದೇ ರಾಸಾಯನಿಕ ಅಧ್ಯಯನದ ಮೇಲೆ ಆಧರಿಸಿತ್ತು. ‘ಯಜ್ಞದಿಂದ ಮಳೆ ಬೀಳುತ್ತದೆ’, ಇದಕ್ಕೆ ಇಂತಹ ಶಾಸ್ತ್ರೀಯ ಆಧಾರವಿದೆ.

– ರಾಜೇಂದ್ರ ಕೃಷ್ಣರಾವ ಘೋರಪಡೆ, ಸಂಪಾದಕರು, ‘ಇಯೆ ಮರಾಠಿಚಿಯೆ ನಗರಿ’ ಜಾಲತಾಣ (ಆಧಾರ : ‘ಇಯೆ ಮರಾಠಿಚಿಯೆ ನಗರಿ’)

Leave a Comment