ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ – 1

18.9.2020 ರಿಂದ ಅಧಿಕ ಆಶ್ವಯುಜ ಮಾಸವು ಆರಂಭವಾಗಿದೆ. ಅಧಿಕ ಮಾಸದಿಂದ ಎಲ್ಲರಿಗೂ ಹಿಂದೂ ಧರ್ಮದ ತಿಥಿ, ನಕ್ಷತ್ರ, ಶುಭ-ಅಶುಭ ಮತ್ತು ಮಾಸಕ್ಕನುಸಾರ ಪ್ರತಿಯೊಂದು ದಿನದ ಶಾಸ್ತ್ರಾರ್ಥದ ಜ್ಞಾನವಾಗಲು ಸಾಪ್ತಾಹಿಕ ಶಾಸ್ತ್ರಾರ್ಥ (ಸಾಪ್ತಾಹಿಕ ದಿನವಿಶೇಷ) ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ.

1. ಹಿಂದೂ ಧರ್ಮದಲ್ಲಿ ಶಾರ್ವರಿ ನಾಮ ಸಂವತ್ಸರ, ಶಾಲಿವಾಹನ ಶಕೆ – 1942, ದಕ್ಷಿಣಾಯನ, ಶರದ ಋತು, ಅಧಿಕ ಆಶ್ವಯುಜ ಮಾಸ ಮತ್ತು ಶುಕ್ಲ ಪಕ್ಷವು ನಡೆಯುತ್ತಿದೆ.

ದಿನಾಂಕ ವಾರ ತಿಥಿ ನಕ್ಷತ್ರ ಶುಭ/ಅಶುಭ ಶಾಸ್ತ್ರಾರ್ಥ
18.9.2020 ಶುಕ್ರವಾರ ಪ್ರತಿಪದಾ
ಮಧ್ಯಾಹ್ನ, 12.51
ಉತ್ತರಾ
ಸಮಾಪ್ತಿ ಬೆಳಗ್ಗೆ 7 ಕ್ಕೆ
ಹಸ್ತ
ಸಮಾಪ್ತಿ (19 ಸೆಪ್ಟೆಂಬರ್) ಪ್ರಾತಃಕಾಲ 4.07 ಕ್ಕೆ
ಉತ್ತಮ ದಿನ ಮಲಮಾಸಾರಂಭ
(ಅಧಿಕ ಮಾಸ)
19.9.2020 ಶನಿವಾರ ದ್ವಿತೀಯಾ
ಬೆಳಗ್ಗೆ 9.10
ತೃತೀಯಾ (20 ಸೆಪ್ಟೆಂಬರ್) ಮುಂಜಾನೆ 5.39
ಚಿತ್ರಾ
ಸಮಾಪ್ತಿ (20 ಸೆಪ್ಟೆಂಬರ್) ಪ್ರಾತಃಕಾಲ 1.20
ಪ್ರತಿಕೂಲ ದಿನ ಕ್ಷಯ ದಿನ
20.9.2020 ರವಿವಾರ ಚತುರ್ಥಿ
ಸಮಾಪ್ತಿ (21 ಸೆಪ್ಟೆಂಬರ್) ಪ್ರಾತಃಕಾಲ 2.27
ಸ್ವಾತಿ
ಸಮಾಪ್ತಿ ರಾತ್ರಿ 10.52
ಮಧ್ಯಾಹ್ನ 12 ಗಂಟೆಯ ವರೆಗೆ ಉತ್ತಮ ದಿನ ವಿನಾಯಕ ಚತುರ್ಥಿ
21.9.2020 ಸೋಮವಾರ ಪಂಚಮಿ
ರಾತ್ರಿ 11.43 ರವರೆಗೆ
ವಿಶಾಖಾ
ಸಮಾಪ್ತಿ ರಾತ್ರಿ 8.49
ಅನಿಷ್ಟ ದಿನ ಯಮಘಂಟ ಯೋಗ
22.9.2020 ಮಂಗಳವಾರ ಷಷ್ಠಿ
ಸಮಾಪ್ತಿ ರಾತ್ರಿ 9.31
ಅನುರಾಧಾ
ಸಮಾಪ್ತಿ ಸಾಯಂಕಾಲ 7.18
ಸಾಯಂಕಾಲ 7 ಗಂಟೆಯವರೆಗೆ ಉತ್ತಮ ದಿನ
23.9.2020 ಬುಧವಾರ ಸಪ್ತಮಿ
ಸಮಾಪ್ತಿ ರಾತ್ರಿ 7.57
ಜ್ಯೇಷ್ಠಾ
ಸಮಾಪ್ತಿ ಸಾಯಂಕಾಲ 6.25
ಪ್ರತಿಕೂಲ ದಿನ
24.9.2020 ಗುರುವಾರ ಅಷ್ಟಮಿ
ಸಮಾಪ್ತಿ ಸಾಯಂಕಾಲ 7.02
ಮೂಲಾ
ಸಮಾಪ್ತಿ ಸಾಯಂಕಾಲ 6.10
ಉತ್ತಮ ದಿನ ದುರ್ಗಾಷ್ಟಮಿ
25.9.2020 ಶುಕ್ರವಾರ ನವಮಿ
ಸಮಾಪ್ತಿ ಸಾಯಂಕಾಲ 6.44
ಪೂರ್ವಾಷಾಢಾ
ಸಮಾಪ್ತಿ ಸಾಯಂಕಾಲ 6.31
ಉತ್ತಮ ದಿನ
26.9.2020 ಶನಿವಾರ ದಶಮಿ
ಸಮಾಪ್ತಿ ಸಾಯಂಕಾಲ 7.00
ಉತ್ತರಾಷಾಢಾ
ಸಮಾಪ್ತಿ ಸಾಯಂಕಾಲ 7.26
ಉತ್ತಮ ದಿನ

2. ಶಾಸ್ತ್ರಾರ್ಥ

2 ಅ. ಅಧಿಕ ಮಾಸ : ಅಧಿಕ ಮಾಸದ ಬಗ್ಗೆ ಸವಿಸ್ತಾರ ಮಾಹಿತಿ ಈ ಲಿಂಕ್‌ನಲ್ಲಿ ಲಭ್ಯವಿದೆ. ಅಧಿಕ ಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಹೆಚ್ಚೆಚ್ಚು ನಾಮಜಪ, ದಾನ ಮತ್ತು ಪುಣ್ಯಕರ್ಮಗಳನ್ನು ಮಾಡಬೇಕು. ಇದರ ಫಲವು ಮುಂದಿನ ಅಧಿಕ ಮಾಸದವರೆಗೆ ಪ್ರಾಪ್ತವಾಗುತ್ತದೆ.
2. ಆ. ಕ್ಷಯ ದಿನ : 19.9.2020 ಈ ದಿನವು ಕ್ಷಯ ದಿನವಾಗಿದೆ. ಯಾವ ತಿಥಿಯ ಸಮಯದಲ್ಲಿ ಸೂರ್ಯೋದಯದ ಸಮಯವಿರುವುದಿಲ್ಲವೋ, ಅದು ಕ್ಷಯ ತಿಥಿ ಇರುತ್ತದೆ. ಕ್ಷಯ ತಿಥಿಯು ಶುಭಕಾರ್ಯಕ್ಕಾಗಿ ವರ್ಜ್ಯವಿರುತ್ತದೆ.
2 ಇ. ವಿನಾಯಕ ಚತುರ್ಥಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಚತುರ್ಥಿ ತಿಥಿಗೆ ವಿನಾಯಕ ಚತುರ್ಥಿ ಎನ್ನುತ್ತಾರೆ. ಈ ದಿನ ಶ್ರೀ ವಿನಾಯಕ (ಗಣೇಶ) ವ್ರತವನ್ನು ಮಾಡುತ್ತಾರೆ. ಈ ದಿನ ಶ್ರೀ ವಿನಾಯಕಿ ಚತುರ್ಥಿ ಮಹಾತ್ಮೆ, ವ್ರತಕಥೆ ಮತ್ತು ಶ್ರೀ ವಿನಾಯಕ ಅಷ್ಟೋತ್ತರಶತ ನಾಮಸ್ತೋತ್ರವನ್ನು ಓದುತ್ತಾರೆ. ಈ ಉಪಾಸನೆಯಿಂದ ಎಲ್ಲ ಕಾರ್ಯಗಳು ಸಿದ್ಧವಾಗುತ್ತವೆ.
2 ಈ. ದುರ್ಗಾಷ್ಟಮಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ದುರ್ಗಾಷ್ಟಮಿ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.
2 ಉ. ಯಮಘಂಟ ಯೋಗ : ರವಿವಾರ ಮಘಾ, ಸೋಮವಾರ ವಿಶಾಖಾ, ಮಂಗಳವಾರ ಆರ್ದ್ರಾ, ಬುಧವಾರ ಮೂಲಾ, ಗುರುವಾರ ಕೃತ್ತಿಕಾ, ಶುಕ್ರವಾರ ರೋಹಿಣಿ ಮತ್ತು ಶನಿವಾರ ಹಸ್ತಾ ನಕ್ಷತ್ರಗಳು ಒಟ್ಟಾಗಿ ಬಂದರೆ ‘ಯಮಘಂಟ ಯೋಗ’ವಾಗುತ್ತದೆ. ಇದು ಅನಿಷ್ಟ ಯೋಗವಾಗಿದೆ. ಈ ಯೋಗದ ಸಮಯದಲ್ಲಿ ಎಂದಿಗೂ ಪ್ರವಾಸ ಮಾಡಬಾರದು.
3. ಅಧಿಕ ಮಾಸದಲ್ಲಿ ಮಾಡಬೇಕಾದ ಉಪಾಸನೆಯೊಂದಿಗೆ ಈ ವಾರದ ಕೆಲವು ತಿಥಿಗಳ ಮಹತ್ವವನ್ನು ಅರಿತು ಉಪಾಸನೆ ಮಾಡುವುದು ಲಾಭದಾಯಕವಾಗಿದೆ. ಸತ್ಸೇವೆಗೆ ಪ್ರಾಧಾನ್ಯತೆ ನೀಡಿ ಸತತ ಈಶ್ವರೀ ಅನುಸಂಧಾನದಲ್ಲಿದ್ದರೆ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ.
– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, certiied dowser, ರಮಲ ಪಂಡಿತ, ಹಸ್ತಾಕ್ಷರ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ.

Leave a Comment