ದೇವತೆಗೆ ಅರ್ಪಿಸುವ ಹೂವನ್ನು ಹೇಗೆ ಕೀಳಬೇಕು?

ಹೂವುಗಳ ಎಸಳುಗಳಿಗೆ ಸಂಬಂಧಿಸಿದ ಕೊಳವೆಯಂತಹ ಭಾಗಕ್ಕೆ ‘ತೊಟ್ಟು’ ಎನ್ನುತ್ತಾರೆ ಮತ್ತು ತೊಟ್ಟಿನ ಹಿಂದಿರುವ ಜಡತ್ವಧಾರಿ ಭಾಗಕ್ಕೆ ‘ತುಂಬು’ ಎನ್ನುತ್ತಾರೆ. ತುಂಬಿನಲ್ಲಿರುವ ನಾದವು ಜಡತ್ವಧಾರಿ, ಅಂದರೆ ಆಘಾತಾತ್ಮಕವಾಗಿರುತ್ತದೆ ಮತ್ತು ತೊಟ್ಟಿನ ಟೊಳ್ಳಿನಲ್ಲಿರುವ ನಾದವು ಸುಷೀರ, ಅಂದರೆ ವಾಯುಧಾರಣೆಗೆ ಸಂಬಂಧಿಸಿರುವುದರಿಂದ ಅದು ಚೈತನ್ಯವನ್ನು ಪ್ರವಹಿಸುವಲ್ಲಿ ಅಗ್ರೇಸರವಾಗಿರುತ್ತದೆ. ಹೂವುಗಳಿಗೆ ಸಂಬಂಧಿಸಿರುವ ತೊಟ್ಟು ಅಥವಾ ಹೂವುಗಳ ದಂಟನ್ನು ಯಾವಾಗಲೂ ಕೀಳಬಾರದು; ಏಕೆಂದರೆ ಅದನ್ನು ಕಿತ್ತರೆ, ಕೆಲವೊಮ್ಮೆ ಹೂವುಗಳ ಎಸಳುಗಳು ಹೂವುಗಳಿಂದ ಬೇರೆಯಾಗುವ ಮತ್ತು ಹೂವುಗಳ ಚೈತನ್ಯ ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಕಡಿಮೆಯಾಗುತ್ತದೆ.

ಕೆಲವು ಹೂವುಗಳಿಗೆ ಅವುಗಳ ಎಸಳುಗಳಿಗೆ ಕೂಡಿಕೊಂಡಿರುವ ತೊಟ್ಟಲ್ಲದೇ ಒಂದು ಸಣ್ಣ ಹಸಿರು ಭಾಗವು ತೊಟ್ಟಿನ ಕೆಳಗೆ ಜೋಡಿಸಿರುತ್ತದೆ. ಆ ತುಂಬನ್ನು ಅವಶ್ಯವಾಗಿ ತೆಗೆಯಬೇಕು. ಗೋರಂಟೆ (ಗೊರಟೆ, ಗೊರಟಿಗೆ) ನಂದಿಬಟ್ಟಲು ಇವುಗಳಂತಹ ಹೂವುಗಳ ತೊಟ್ಟುಗಳ ಕೆಳಗೆ ಇಂತಹ ಸಣ್ಣ ತುಂಬುಗಳು ಕಂಡುಬರುತ್ತವೆ. ಅವುಗಳನ್ನು ಅವಶ್ಯವಾಗಿ ತೆಗೆಯಬೇಕು; ಏಕೆಂದರೆ ಈ ತುಂಬುಗಳು ತೊಟ್ಟಿನ ಕಡೆಗೆ ಸಂಕ್ರಮಿತವಾಗುವ ದೇವತೆಯ ಚೈತನ್ಯಕ್ಕೆ ಅಡಚಣೆಯನ್ನುಂಟು ಮಾಡುತ್ತವೆ. ಈ ತುಂಬುಗಳು ಜಡತ್ವಧಾರಿ, ಅಂದರೆ ಪೃಥ್ವಿಧಾರಕತೆಗೆ ಸಂಬಂಧಿಸಿರುವುದರಿಂದ ಅವುಗಳ ಚೈತನ್ಯವನ್ನು ಪ್ರವಹಿಸುವ ಕ್ಷಮತೆಯು ಅತ್ಯಂತ ಕಡಿಮೆಯಿರುತ್ತದೆ. ಈ ತುಂಬುಗಳು ಹೂವುಗಳ ತೊಟ್ಟಿನ ಜೊತೆಗೆ ಹಾಗೇ ಬಿಟ್ಟರೆ, ತಮ್ಮ ಪೃಥ್ವಿತತ್ತ್ವಾತ್ಮಕ ಸ್ಪರ್ಶದಿಂದ ತೊಟ್ಟಿನ ಚೈತನ್ಯವನ್ನು ಪ್ರವಹಿಸುವ ಕಾರ್ಯಕ್ಷಮತೆಯನ್ನೂ ಕಡಿಮೆಗೊಳಿಸುತ್ತವೆ. ಇದರಿಂದ ಪೂಜಕನಿಗೆ ದೇವತೆಯಿಂದ ಪ್ರಕ್ಷೇಪಿಸುವ ಚೈತನ್ಯದಿಂದ ಅಪೇಕ್ಷಿತ ಲಾಭವಾಗುವುದಿಲ್ಲ; ಆದುದರಿಂದಲೇ ಈ ತುಂಬುಗಳನ್ನು ತೆಗೆದೇ ಹೂವುಗಳನ್ನು ದೇವರಿಗೆ ಅರ್ಪಿಸಬೇಕು.’

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)

Leave a Comment