ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಪ್ರವಚನ

 

ದಕ್ಷಿಣ ಕನ್ನಡ ಜಿಲ್ಲೆ : 24.8.2018 ನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಮಂಗಳೂರಿನ ಕೊಣಾಜೆಯ ‘ಭುವನೇಶ್ವರಿ ಮಾತೃ ಮಂಡಳಿ’, ಬೆಳ್ತಂಗಡಿ ತಾಲೂಕಿನ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಮೂಡಬಿದ್ರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನಗಳನ್ನು ಏರ್ಪಡಿಸಲಾಗಿತ್ತು. ಪ್ರವಚನದಲ್ಲಿ ‘ಹಬ್ಬ, ಉತ್ಸವ ವ್ರತಗಳ’ ಮಹತ್ವ, ಧಾರ್ಮಿಕ ಆಚರಣೆಗಳ ಕುರಿತು ಮಾಹಿತಿ ನೀಡಲಾಯಿತು. ನೂರಾರು ಭಕ್ತರು ಈ ಪ್ರವಚನಗಳ ಲಾಭವನ್ನು ಪಡೆದುಕೊಂಡರು.

Leave a Comment