ಹೂವುಗಳಲ್ಲಿ ದೇವತೆಗಳ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ. ಜೀವವು ಹೂವಿನ ಪರಿಮಳ ತೆಗೆದುಕೊಂಡಾಗ ಜೀವದ ಗಂಧರೂಪದ ವಾಸನೆಗೆ ಸಂಬಂಧಿಸಿದ ಇಚ್ಛಾಶಕ್ತಿಯು ಉಚ್ಛ್ವಾಸದೊಂದಿಗೆ ಹೂವಿನ ಸೂಕ್ಷ್ಮ-ಕಕ್ಷೆಯಲ್ಲಿ ಪ್ರವೇಶಿಸುವುದರಿಂದ ಹೂವಿನ ಕಾರ್ಯಕ್ಷಮತೆಯು ಕಡಿಮೆಯಾಗುತ್ತದೆ. ಪರಿಮಳ ತೆಗೆದುಕೊಂಡಂತಹ ಇಂತಹ ಹೂವುಗಳಲ್ಲಿ ನೈಸರ್ಗಿಕವಾಗಿರುವ ಸತ್ತ್ವವೂ ಕಡಿಮೆಯಾಗುತ್ತದೆ. ಜೀವವು ಪರಿಮಳ ತೆಗೆದುಕೊಂಡ ಹೂವನ್ನು ಮೂರ್ತಿಗೆ ಅರ್ಪಿಸುವುದರಿಂದ ಮೂರ್ತಿಯು ರಜ-ತಮದಿಂದ ತುಂಬಿಕೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ಭಕ್ತರಿಗಾಗಿ ಮೂರ್ತಿಯಲ್ಲಿ ಬಂದಿರುವ ಚೈತನ್ಯಕಣಗಳ ಪ್ರಕ್ಷೇಪಣೆಗೆ ಅಡಚಣೆಯಾಗುತ್ತದೆ. ಇದರ ಪರಿಣಾಮದಿಂದ (ಸಮಷ್ಟಿಯಲ್ಲಿ) ಚೈತನ್ಯವು ಕಡಿಮೆ ಪ್ರಕ್ಷೇಪಣೆಯಾಗುತ್ತದೆ. ಇದೇ ಕಾರಣದಿಂದ ದೇವತೆಗಳಿಗೆ ಅರ್ಪಿಸುವ ಹೂವುಗಳ ಪರಿಮಳ ತೆಗೆದುಕೊಳ್ಳುವುದು ಒಂದು ರೀತಿಯಲ್ಲಿ ಅಪರಾಧವಾಗಿದೆ.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ’)
ಆಷಾಢ ಏಕಾದಶಿ
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)