ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯವಂದನೆ !

ಮಹೋತ್ಸವದಲ್ಲಿ ಭಾರತ ಸೇರಿದಂತೆ 23 ದೇಶಗಳಿಂದ 30,000 ಕ್ಕೂ ಹೆಚ್ಚು ಭಕ್ತರ ಸಹಭಾಗ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕಿಯರಿಂದ ಭಕ್ತಿಪೂರ್ವಕ ಗಾಯನ ಮತ್ತು ನೃತ್ಯ

ಫೋಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಲಾಜಿ ಆಠವಲೆ ಅವರ 83 ನೇ ಜನ್ಮೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಾಧಕರು ಪ್ರದರ್ಶಿಸಿದ ನೃತ್ಯ ಮತ್ತು ಗಾಯನವು ಭಕ್ತಿಪೂರ್ವಕ ಮತ್ತು ಈಶ್ವರಪ್ರಾಪ್ತಿಯ ಧ್ಯಾಸದೊಂದಿಗೆ ತುಂಬಿತ್ತು. ಕಲೆಯನ್ನು ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಸಾಧನೆಗಾಗಿಯೂ ಬಳಸಬಹುದು ಎಂಬ ಸಂದೇಶವನ್ನು ಈ ಪ್ರಸ್ತುತಿಯು ನೀಡಿತು. ಫೋಂಡಾದ ಫಾರ್ಮಾಗುಡಿಯಲ್ಲಿರುವ ಗೋವಾ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಈ ಮಹೋತ್ಸವವು ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು. ಭಾರತ ಸೇರಿದಂತೆ 23 ದೇಶಗಳಿಂದ 30,000 ಕ್ಕೂ ಹೆಚ್ಚು ಭಕ್ತರು ಮಹೋತ್ಸವದಲ್ಲಿ ಭಾಗವಹಿಸಿದ್ದರು.

ನೃತ್ಯ ಪ್ರದರ್ಶನವನ್ನು ಸಂಗೀತ ವಿಭಾಗದ ಸಾಧಕಿ ಸೌ. ಸಾವಿತ್ರಿ ಇಚಲಕರಂಜಿಕರ್ ನಿರ್ದೇಶಿಸಿದರು. ಭಕ್ತಿ ಪ್ರಧಾನವಾದ ಈ ನೃತ್ಯದಲ್ಲಿ ಕು. ವೈಷ್ಣವಿ ಗುರವ, ಕು. ಬಾಂಧವ್ಯ ಶ್ರೇಷ್ಠಿ, ಕು. ಸೋನಾಕ್ಷಿ ಚೋಪ್ದಾರ್, ಕು. ಚಾಂದಿನಿ ಅಸೋಲ್ಕರ್, ಕು. ಶರ್ವರಿ ಕಾನಸ್ಕರ್, ಕು. ಆರಾಧನಾ ಘಾಟ್ಕರ್, ಕು. ಅಪಾಲಾ ಔಂಧ್ಕರ್, ಕು. ನಿಧಿ ಗವಾರೆ, ಕು. ತೀರ್ಥ ದೇವ್ಘರೆ, ಕು. ಅಂಜಲಿ ಕಾನಸಕರ, ಕು. ಮೃಣಾಲಿ ದೇವಘರೆ, ಕು. ಮೋಕ್ಷದಾ ದೇಶಪಾಂಡೆ, ಕು. ವೈದೇಹಿ ಸಾವಂತ್ ಭಾಗವಹಿಸಿದ್ದರು. ನೃತ್ಯ ಮಾಡುವಾಗ, ಸಾಧಕರು ಗುರುಗಳ ಪಾದಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಸಂಗೀತ ವಿಭಾಗದ ಸಾಧಕರು ತಮ್ಮ ಭಕ್ತಿಪೂರ್ಣ ಸಂಗೀತ ಸೇವೆಯನ್ನು ಪ್ರಸ್ತುತಪಡಿಸುವ ಮೂಲಕ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಈಶ್ವರಪ್ರಾಪ್ತಿಗಾಗಿ ಕಲೆ’ ಎಂಬ ತತ್ವದ ಮೇಲೆ ಕಾರ್ಯರತವಾಗಿದ್ದು ನೃತ್ಯ ಮತ್ತು ಗಾಯನದಂತಹ ಮಾಧ್ಯಮಗಳ ಮೂಲಕ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿಯ ಮಾರ್ಗದರ್ಶನ ಮಾಡುತ್ತಿದೆ.

Leave a Comment