೧. ತಿಥಿ : ಭಾದ್ರಪದ ಶುಕ್ಲ ಪಕ್ಷ ಪಂಚಮಿ
೨. ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
೩. ಉದ್ದೇಶ
ಅ. ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ, ಮಾನವರ ಜೀವನಕ್ಕೆ ಯೋಗ್ಯ ದಿಶೆಯನ್ನು ಕೊಟ್ಟಿದ್ದಾರೆಯೋ, ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ. – ಪ.ಪೂ. ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ಆ. ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ, ಹಾಗೆಯೇ ಗೋಕುಲಾಷ್ಟಮಿಯ ಉಪವಾಸದಿಂದಲೂ ಕಡಿಮೆಯಾಗುತ್ತವೆ. (ಪುರುಷರ ಮೇಲಾಗುವ ಪರಿಣಾಮಗಳು ಕ್ಷೌರಾದಿ ಪ್ರಾಯಶ್ಚಿತ್ತ ಕರ್ಮಗಳಿಂದ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮಗಳು ಉದಕಶಾಂತಿಯಿಂದ ಕಡಿಮೆಯಾಗುತ್ತವೆ.)
೪. ವ್ರತ ಮಾಡುವ ಪದ್ಧತಿ
ಅ. ಈ ದಿನದಂದು ಸ್ತ್ರೀಯರು ಬೆಳಗ್ಗೆ ಉತ್ತರಣೆಯ ಕಡ್ಡಿಯಿಂದ (ಒಂದು ವನಸ್ಪತಿ) ಹಲ್ಲುಜ್ಜಬೇಕು.
ಆ. ಸ್ನಾನದ ನಂತರ ಪೂಜೆಯ ಮೊದಲು ‘ಮಾಸಿಕ ಋತುಸ್ರಾವದ ಸಮಯದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ಸ್ಪರ್ಶಗಳಿಂದ ಯಾವ ದೋಷಗಳು ತಗಲುತ್ತವೆಯೋ, ಅವುಗಳ ನಿವಾರಣೆಗಾಗಿ ಅರುಂಧತಿಯೊಂದಿಗೆ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ’, ಎಂದು ಸಂಕಲ್ಪವನ್ನು ಮಾಡಬೇಕು.
ಇ. ಮಣೆಯ ಮೇಲೆ ಅಕ್ಕಿಯ ಎಂಟು ಗುಡ್ಡೆಗಳನ್ನು ಮಾಡಿ ಅವುಗಳ ಮೇಲೆ ಎಂಟು ಅಡಿಕೆಯನ್ನಿಟ್ಟು ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯರ ಆವಾಹನೆ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಈ. ಈ ದಿನದಂದು ಗೆಡ್ಡೆಗೆಣಸುಗಳ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಎತ್ತುಗಳ ಶ್ರಮದಿಂದ ತಯಾರಾದ ಯಾವುದೇ ಆಹಾರವನ್ನು ಸ್ವೀಕರಿಸಬಾರದು ಎಂದು ಹೇಳಲಾಗಿದೆ.
ಉ. ಮರುದಿನ ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯ ವಿಸರ್ಜನೆಯನ್ನು ಮಾಡಬೇಕು.
ಹನ್ನೆರಡು ವರ್ಷಗಳ ನಂತರ ಅಥವಾ ಐವತ್ತನೆಯ ವಯಸ್ಸಿನ ನಂತರ ಈ ವ್ರತದ ಉದ್ಯಾಪನೆ ಮಾಡಬಹುದು. ಉದ್ಯಾಪನೆಯ ನಂತರವೂ ಈ ವ್ರತವನ್ನು ಮುಂದುವರಿಸಬಹುದು.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು”)
ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ (2026)
ಆಷಾಢ ಏಕಾದಶಿ
ವಿಜಯದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
ರಕ್ಷಾಬಂಧನ (ರಾಖಿ ಹುಣ್ಣಿಮೆ) Raksha bandhan 2025
ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ
ಸಂಪೂರ್ಣ ಶ್ರೀ ಗಣೇಶ ಪೂಜೆ