ಮಹಾಯುದ್ಧವು ಅನಿವಾರ್ಯವಾಗಿರುವುದರಿಂದ ಪ್ರಾಣರಕ್ಷಣೆಯ ಕೃತಿಗಳಿಗೆ ಮತ್ತು ಸಾಧನೆಗೆ ಸರ್ವೋಚ್ಚ ಆದ್ಯತೆ ನೀಡಿ !

‘ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತೀವ್ರ ಏರುಪೇರುಗಳು ಸಂಭವಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಮಹಾಯುದ್ಧವು ಅನಿವಾರ್ಯವಾಗಿದ್ದು, ಮುಂದಿನ ೫ ರಿಂದ ೭ ವರ್ಷಗಳ ಕಾಲ ಅತ್ಯಂತ ಭೀಕರವಾದ ಯುದ್ಧಸದೃಶ ಪರಿಸ್ಥಿತಿಯು ಎಲ್ಲೆಡೆ ಕಾಣಿಸಲಿದೆ. ಈ ಕಾಲವೆಂದರೆ ಒಂದು ರೀತಿಯಲ್ಲಿ ‘ಸಂಧಿಕಾಲ’ (ಸಂಕ್ರಮಣ ಕಾಲ) ವಾಗಿದೆ.
ಮುಂದೆ ಅತ್ಯಂತ ಕಠಿಣ ಆಪತ್ಕಾಲವು ಬರಲಿದೆ ಎಂದು ಕಳೆದ ೨೦ ವರ್ಷಗಳಿಂದ ‘ಸನಾತನ ಸಂಸ್ಥೆ’ಯು ಹೇಳುತ್ತಾ ಬಂದಿದೆ. ಆ ಕಠಿಣ ಕಾಲವನ್ನು ಇನ್ನು ಮುಂದೆ ಪ್ರತ್ಯಕ್ಷವಾಗಿ ಅನುಭವಿಸಬೇಕಾಗಲಿದೆ. ಈ ಸಂಕಟ ಕಾಲದಲ್ಲಿ ಜೀವಂತವಾಗಿರಲು ಮತ್ತು ಜೀವನ ನಡೆಸಲು ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು, ಹಾಗೆಯೇ ಯಾವ ಸಾಧನೆಯನ್ನು ಮಾಡಬೇಕು, ಎಮಭುವುದರ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯು ಕಾಲಕಾಲಕ್ಕೆ ತನ್ನ ಗ್ರಂಥಗಳು, ನಿಯತಕಾಲಿಕೆಗಳು, ಜಾಲತಾಣಗಳು ಮುಂತಾದ ಮಾಧ್ಯಮಗಳ ಮೂಲಕ ನೀಡುತ್ತಲಿದೆ. ಸಂಸ್ಥೆಯ ಮೂಲಕ ಮಾಡಲಾದ ಈ ಮಾರ್ಗದರ್ಶನವು ಕೇವಲ ಓದುವುದಕ್ಕಾಗಿ ಇರದೇ, ಅದನ್ನು ಕೃತಿಯಲ್ಲಿ ತರುವ ಯೋಗ್ಯ ಸಮಯ ಈಗ ಬಂದಿದೆ. ಆದ್ದರಿಂದ ಯಾವುದೇ ವಿಳಂಬವನ್ನು ಮಾಡದೇ ಪ್ರಾಣರಕ್ಷಣೆಗಾಗಿ ಆವಶ್ಯಕವಿರುವ ಕೃತಿಗಳಿಗೆ ಸರ್ವೋಚ್ಚ ಆದ್ಯತೆಯನ್ನು ನೀಡಿ, ಹಾಗೆಯೇ ಸಂಕಟ ಕಾಲದಲ್ಲಿ ಭಗವಂತನು ಕೇವಲ ಭಕ್ತರನ್ನೇ ರಕ್ಷಿಸುತ್ತಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಠಿಣ ಸಾಧನೆಯನ್ನು ಮಾಡಿ, ಭಗವಂತನ ಅನನ್ಯ ಭಕ್ತರಾಗಿ!
ಕಳೆದ ೫-೭ ವರ್ಷಗಳಿಂದ, ವಿಶೇಷವಾಗಿ ಕೊರೊನಾ ಸಾಂಕ್ರಾಮಿಕದ ಕಾಲದಿಂದ ‘ಸಂಪತ್ಕಾಲ’ (ಒಳ್ಳೆಯ ಕಾಲ)ವು ಮುಗಿದು ‘ಆಪತ್ಕಾಲ’ವು ಆರಂಭವಾಯಿತು. ಈಗ ಕಳೆದ ವರ್ಷದಿಂದ, ಅಂದರೆ ಭಾರತ-ಪಾಕಿಸ್ತಾನ ಯುದ್ಧದಿಂದ ಯುದ್ಧಕಾಲವು ಪ್ರಾರಂಭವಾಗಿದೆ. ಪ್ರತಿಯೊಂದು ಕಾಲದ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಸಂಪತ್ಕಾಲದಲ್ಲಿ ಮನೋರಂಜನೆ, ಪ್ರಯಾಣ, ಉದ್ಯೋಗ-ವ್ಯವಸಾಯಕ್ಕೆ ಹೇಗೆ ಆದ್ಯತೆ ಇರುತ್ತದೆಯೋ, ಯುದ್ಧಕಾಲದಲ್ಲಿ ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸಲು, ಜೀವರಕ್ಷಣೆಗಾಗಿ ಪ್ರಯತ್ನಿಸಲು ಮತ್ತು ಸಾಧನೆ ಮಾಡುಲು ಆದ್ಯತೆ ನೀಡಬೇಕಾಗುತ್ತದೆ. ಸಂಧಿಕಾಲದಲ್ಲಿ ಸಾಧನೆ ಮಾಡುವುದರಿಂದ ಅನೇಕ ವರ್ಷಗಳ ಸಾಧನೆಯು ಅಲ್ಪಾವಧಿಯಲ್ಲಿ ಆಗುತ್ತದೆ. ಆದ್ದರಿಂದ ಮುಂದಿನ ೫-೭ ವರ್ಷಗಳ ಕಠಿಣ ಕಾಲದಲ್ಲಿ ಸಾಧನೆಯ ಮೇಲೆ ಒತ್ತು ನೀಡಿದರೆ ನಿಮಗೆ ಅಪಾರ ಆಧ್ಯಾತ್ಮಿಕ ಲಾಭವಾಗುವುದು ಮತ್ತು ಈಶ್ವರೀ ರಕ್ಷಣೆಯೂ ಲಭಿಸುವುದು.
ಈ ಭೀಕರ ಯುದ್ಧಕಾಲದಲ್ಲಿ ಕೇವಲ ತನ್ನ ಬಗ್ಗೆ ವಿಚಾರ ಮಾಡದೇ, ಸಮಾಜದಲ್ಲಿರುವ ಸಾತ್ತ್ವಿಕ ಹಿಂದೂಗಳ (ಜೀವಗಳ) ರಕ್ಷಣೆ ಮಾಡುವುದೂ ಅತ್ಯಂತ ಆವಶ್ಯಕವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾತ್ತ್ವಿಕ ಹಿಂದೂಗಳ (ಜೀವಗಳ) ಪ್ರಾಣರಕ್ಷಣೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ ಈ ಕಾಲದ ನಿಜವಾದ ಸಮಷ್ಟಿ ಸಾಧನೆಯಾಗಲಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

Inspirational article for All to take oath on Hindurashtra sankalpa