ಚಂಡಮಾರುತ ಎದುರಿಸಲು ಕೆಲವು ಮಾರ್ಗದರ್ಶಕ ಅಂಶಗಳು

ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು

ಮೇ ಮತ್ತು ಜೂನ್ ತಿಂಗಳಲ್ಲಿ ಅಂಫಾನ್ ಮತ್ತು ನಿಸರ್ಗ ಎಂಬ ಎರಡು ಶಕ್ತಿಶಾಲಿ ಚಂಡಮಾರುತಗಳನ್ನು ಭಾರತವು ಎದುರಿಸಬೇಕಾಯಿತು. ೨೦.೫.೨೦೨೦ ರಂದು ಪೂರ್ವಭಾರತದ  ಸಮುದ್ರ ದಡಕ್ಕೆ ಅಂಫಾನ್ ಹಾಗೂ ೨ ಮತ್ತು ೩ ಜೂನ್ ೨೦೨೦ ರಂದು ಮುಂಬಯಿಯೊಂದಿಗೆ ಕರಾವಳಿಯ ಸಮುದ್ರ ತೀರದಲ್ಲಿ ನಿಸರ್ಗವೆಂಬ ಚಂಡಮಾರುತಗಳು ಬಂದು ಅಪ್ಪಳಿಸಿದವು.

ಎದೆ ಝಲ್ಲೆನಿಸುವ ಪ್ರಚಂಡ ವೇಗದ ಗಾಳಿ ಮತ್ತು ಜೋರಾಗಿ ಸುರಿಯುವ ಮಳೆಯಿಂದಾಗಿ  ದೊಡ್ಡ-ದೊಡ್ಡ ಮರಗಳು ಬುಡಮೇಲಾಗಿ ಬಿದ್ದವು. ಮನೆಗಳ ಗೋಡೆಗಳು ಕುಸಿಯುವುದು, ಮೇಲ್ಛಾವಣಿಗಳು ಹಾರಿಹೋಗುವುದು, ಮುಂತಾದವುಗಳಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹಾನಿಯೂ ಆಯಿತು. ಬಹಳಷ್ಟು ಜನರು ತಮ್ಮ ಮನೆಗಳನ್ನು ಕಳೆದುಕೊಂಡರು. ಬಹಳಷ್ಟು ಕಡೆ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಸಂಚಾರವಾಣಿಯ ಜಾಲ ನಿಷ್ಕ್ರಿಯವಾಗಿದ್ದರಿಂದ ಸಂಪರ್ಕ ವ್ಯವಸ್ಥೆಯೂ ಖಂಡಿತವಾಯಿತು. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ನಿಸರ್ಗದ ಈ ರೌದ್ರ ರೂಪವನ್ನು ನೋಡಿ ಜನರು ಭಯಭೀತರಾದರು.

ಚಂಡಮಾರುತ, ಅತಿವೃಷ್ಟಿ, ಭೂಕಂಪ ಇವುಗಳಂತಹ ನೈಸರ್ಗಿಕ ವಿಪತ್ತುಗಳು ಯಾವಾಗ ಬಂದೆರಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಕ್ಷಣ ಇಂತಹ ಭಯಾನಕ ನಿರ್ಮಾಣವಾಗಬಹುದು. ಆದುದರಿಂದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ದೃಷ್ಟಿಯಿಂದ ಎಲ್ಲರೂ ಈ ಸೂಚನೆಗಳನ್ನು ಗಾಂಭೀರ್ಯತೆಯಿಂದ ಓದಿ ಮತ್ತು ಪಾಲಿಸಿ.

ನೈಸರ್ಗಿಕ ವಿಪತ್ತುಗಳ ದೃಷ್ಟಿಯಿಂದ ಮಾಡಬೇಕಾದ ಪೂರ್ವತಯಾರಿ

ಅ. ಹೊಸ ಮನೆಯನ್ನು ಕಟ್ಟುವುದಿದ್ದರೆ ತಗಡಿನ ಬದಲು ಗಟ್ಟಿ (ಉದಾ. ಸ್ಲ್ಯಾಬ್) ಮೇಲ್ಛಾವಣಿಯ ವಿಚಾರವನ್ನು ಮಾಡಬೇಕು.

ಆ. ಮನೆಗೆ ಮೇಲ್ಚಾವಣಿಯೆಂದು ಹಾಕಿದ ತಗಡಿನ ಶೆಡ್ ಎಷ್ಟೇ ಗಟ್ಟಿಮುಟ್ಟಾಗಿದ್ದರೂ, ಬಿರುಗಾಳಿಯಿಂದ ತಗಡು ಹಾರಿ ಹೋಗುತ್ತದೆ. ಮೇಲ್ಛಾವಣಿಗೆ ಹಾಕಲಾದ ತಗಡು ಗಾಳಿಯಿಂದ ಹಾರಿಹೋಗಬಾರದೆಂದು, ಅದರ ಮೇಲೆ ಮರಳು ತುಂಬಿದ ಚೀಲಗಳನ್ನು ಇಡಬೇಕು; ಏಕೆಂದರೆ ಬಿರುಗಾಳಿ/ಸುಂಟರಗಾಳಿ ಯಾವುದೇ ಕ್ಷಣದಲ್ಲಿ ಬಂದು ಅಪ್ಪಳಿಸಬಹುದು. (ಉದಾ.: ೫೦೦ ಚದರ ಅಡಿಗಳ ತಗಡಿನ ಮೇಲ್ಛಾವಣಿ ಇದ್ದರೆ ೫ ರಿಂದ ೧೦ ಕಿಲೋ ತೂಕವಿರುವ ಮರಳಿನ ಚೀಲಗಳನ್ನು ನಾಲ್ಕೂ ಮೂಲೆಗಳಲ್ಲಿ ಮತ್ತು ಆವಶ್ಯಕತೆಗನುಸಾರ ಮಧ್ಯದಲ್ಲಿಡಬೇಕು. ಈ ಚೀಲಗಳು ಒಳ್ಳೆಯ ಗುಣಮಟ್ಟದ್ದಾಗಿರುವುದು ಆವಶ್ಯಕವಾಗಿದೆ.)

ಇ. ಬಿರುಗಾಳಿಯ ಸಮಯದಲ್ಲಿ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಬಾರದೆಂದು, ಮನೆಯ ಅಕ್ಕಪಕ್ಕದಲ್ಲಿರುವ ತುಂಬಾ ಹಳೆಯ ಮತ್ತು ಅಪಾಯಕಾರಿ ಮರಗಳನ್ನು ತೆಗೆಯಬೇಕು.

ಈ. ನಿಮ್ಮ ಕಟ್ಟಡದ ಅಥವಾ ಮನೆಯ ಹೊರಗಿನ ರಸ್ತೆಯ ಮೇಲಿನಿಂದ ವಿದ್ಯುತ್ ತಂತಿಗಳು ಹಾದು ಹೋಗಿದ್ದರೆ ಮತ್ತು ಪಕ್ಕದಲ್ಲಿ ಗಿಡ-ಮರಗಳಿದ್ದರೆ ಮಳೆ ಅಥವಾ ಗಾಳಿಯಿಂದ ರೆಂಬೆ-ಕೊಂಬೆಗಳು ತಂತಿಯ ಮೇಲೆ ಬಿದ್ದು ಜೀವಹಾನಿಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸ್ಥಳೀಯ ವಿದ್ಯುತ್ ಮಂಡಳಿಯನ್ನು ಸಂಪರ್ಕಿಸಿ ವಿದ್ಯುತ್ ತಂತಿಯ ಹತ್ತಿರದ ಗಿಡ-ಮರಗಳ ಕೊಂಬೆಗಳನ್ನು ಕತ್ತರಿಸಲು ಹೇಳಬೇಕು.

ಉ. ಯಾವುದೇ ವಿದ್ಯುತ್ ತಂತಿಗಳ ಕೆಳಗೆ ನಿಂತುಕೊಳ್ಳಬಾರದು. ಹಾಗೆಯೇ ಅಲ್ಲಿ ಸಂಚಾರವಾಣಿಯಲ್ಲಿ (ಮೊಬೈಲ್‌ನಲ್ಲಿ) ಮಾತನಾಡಬಾರದು. ವಿದ್ಯುತ್ ಕಂಬಗಳ ಹತ್ತಿರ ಪ್ರಾಣಿಗಳು ನಿಂತುಕೊಳ್ಳದಂತೆ ಜಾಗೃತೆ ವಹಿಸಬೇಕು. ವಿದ್ಯುತ್ ತಂತಿಗಳಿಂದ ಕಿಡಿಗಳು ಹಾರುತ್ತಿದ್ದರೆ (ಸ್ಪಾರ್ಕಿಂಗ್) ತಕ್ಷಣವೇ ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಊ. ವಿದ್ಯುತ್ ಕಂಬ, ವಿದ್ಯುತ್ ತಂತಿ, ಹಾಗೆಯೇ ಮರಗಳ ಕೆಳಗೆ ದ್ವಿಚಕ್ರ ವಾಹನ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಿದರೆ ಬಿರುಗಾಳಿಯಿಂದ ಕಂಬ ಅಥವಾ ಮರಗಳು ಬುಡಮೇಲಾಗಿ ಅವುಗಳ ಮೇಲೆ ಬಿದ್ದರೆ ಆರ್ಥಿಕ ಹಾನಿಯಾಗಬಹುದು. ಆದುದರಿಂದ ಅಲ್ಲಿ ವಾಹನಗಳನ್ನು ನಿಲ್ಲಿಸುವುದು, ಬಿರುಗಾಳಿ ಬೀಸುವಾಗ ವಾಹನಗಳನ್ನು ಚಲಾಯಿಸುವುದು ಇತ್ಯಾದಿ ಮಾಡಬಾರದು.

ಋ. ಮಳೆಗಾಲದಲ್ಲಿ ವಿದ್ಯುತ್ ಪೂರೈಕೆ ಅನಿಶ್ಚಿತ ಅವಧಿಗೆ ಸ್ಥಗಿತವಾಗಬಹುದು. ಇದಕ್ಕೆ ಪೂರ್ವತಯಾರಿಯೆಂದು ಮನೆಯಲ್ಲಿ ಹಣತೆ, ಮೇಣದಬತ್ತಿ, ಟಾರ್ಚ್, ಲಾಂದ್ರ ದೀಪಗಳು (ಲ್ಯಾಂಟರ್ನ) ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.

ಎ. ಮನೆಯ ಕಿಟಕಿ-ಬಾಗಿಲುಗಳು ಗಟ್ಟಿಯಾಗಿ ಮುಚ್ಚಲ್ಪಡುತ್ತವೆಯೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು; ಸರಿ ಇಲ್ಲದಿದ್ದಲ್ಲಿ ಸರಿಪಡಿಸಿಕೊಳ್ಳಬೇಕು.

ಏ. ಸರಕಾರ ಮತ್ತು ಹವಾಮಾನ ಇಲಾಖೆಗಳಿಂದ ಬರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಅವುಗಳನ್ನು ದುರ್ಲಕ್ಷಿಸಬಾರದು.

ಚಂಡಮಾರುತದ ಬಗ್ಗೆ ಮುನ್ಸೂಚನೆ ಸಿಕ್ಕಿದರೆ ಮಾಡಬೇಕಾದ ಕೃತಿಗಳು

ಅ. ಮನೆಯ ಅಂಗಳ, ಬಾಲ್ಕನಿ ಅಥವಾ ಟೆರೇಸ್‌ಗಳಲ್ಲಿ ಹಗುರವಾದ (ಕಡಿಮೆ ಭಾರವಿರುವ) ಸಾಹಿತ್ಯಗಳನ್ನು ಇಟ್ಟಿದ್ದರೆ ಅವುಗಳನ್ನು ತಕ್ಷಣ ಒಳಗೆ ತರಬೇಕು ಅಥವಾ ವ್ಯವಸ್ಥಿತವಾಗಿ ಕಟ್ಟಿಡಬೇಕು.

ಆ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು.

ಇ. ಮನೆಯಲ್ಲಿ ಕುಡಿಯುಲು ಮತ್ತು ಇತರ ಕಾರಣಕ್ಕಾಗಿ ಬಳಸಲು ನೀರನ್ನು ಶೇಖರಿಸಿಡಬೇಕು ಮತ್ತು ಒಣ ತಿಂಡಿತಿನಸಗಳನ್ನು ತಂದಿಡಬೇಕು.

ಈ. ಗಾಳಿಯ ವೇಗ ಹೆಚ್ಚಾಗುತ್ತಿದೆ ಎಂದು ಗಮನಕ್ಕೆ ಬಂದರೆ, ಅಡುಗೆಮನೆಯ ಗ್ಯಾಸ್ ಮತ್ತು ಅದರ ಮುಖ್ಯ ‘ವಾಲ್ವ್’ (regulator knob) ಬಂದ ಮಾಡಿಡಬೇಕು. ಬಿರುಗಾಳಿಯ ತೀವ್ರತೆ ಮುಗಿಯುವವರೆಗೆ ಅದನ್ನು ಮತ್ತೆ ಶುರು ಮಾಡಬಾರದು.

ಬಿರುಗಾಳಿ ಬೀಸುವಾಗ ಮನೆಯಲ್ಲಿದ್ದರೆ ಏನು ಮಾಡಬೇಕು ?

ಅ. ಮನೆಯಿಂದ ಹೊರಗೆ ಹೋಗಬಾರದು. ಟೆರೇಸ್/ಬಾಲ್ಕನಿ ಅಥವಾ ತಗಡಿನ ಶೆಡ್ ಇದ್ದಲ್ಲಿ ಹೋಗಬಾರದು. ಅಕ್ಕಪಕ್ಕದ ಮನೆಗಳ ಮೇಲ್ಛಾವಣಿ, ಹಾಗೆಯೇ ವಸ್ತುಗಳು ಗಾಳಿಗೆ ಹಾರಿ ಬಂದು ಅಪಘಾತ ಅಥವಾ ಹಾನಿಯಾಗಬಹುದು.

ಆ. ಮನೆಯ ಕಿಟಕಿಗಳನ್ನು ಮತ್ತು ಬಾಗಿಲುಗಳನ್ನು ಸರಿಯಾಗಿ ಮುಚ್ಚಬೇಕು. ಗಾಳಿಯ ರಭಸದಿಂದಾಗಿ ಬಾಗಿಲುಗಳು ತನ್ನಷ್ಟಕ್ಕೆ ತೆರೆಯಬಾರದೆಂದು ಮನೆ ಒಳಗಿನಿಂದ ಬಾಗಿಲಿನ ಹತ್ತಿರ ಭಾರವಾದ ವಸ್ತುಗಳನ್ನು ಇಡಬಹುದು.

ಇ. ಕಿಟಕಿಯ ಗಾಜುಗಳು ಒಡೆದು ಗಾಯಗಳಾಗಬಾರದೆಂದು ಕಿಟಕಿಯ ಹತ್ತಿರ ನಿಲ್ಲುವುದು, ಮಲಗುವುದು ಇತ್ಯಾದಿಗಳನ್ನು ಮಾಡಬಾರದು.

ಈ. ಮನೆಯಲ್ಲಿನ ವಿದ್ಯುತ್ ಮೈನ್ ಸ್ವಿಚ್ (ಮೀಟರ್ ಸ್ವಿಚ್) ‘ಆಫ್’ ಮಾಡಿ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಬೇಕು. ದೂರದರ್ಶನ, ಮಿಕ್ಸರ್, ಫ್ರಿಜ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ಬೋರ್ಡ್ ನಿಂದ ಕಳಚಿಡಬೇಕು.

ಉ. ಈ ಅವಧಿಯಲ್ಲಿ ಲಿಫ್ಟ್, ಹವಾ ನಿಯಂತ್ರಕ (ಎ.ಸಿ), ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಕವನ್ನು (ಫ್ರಿಜ್) ಸ್ಪರ್ಶಿಸಬಾರದು.

ಊ. ಕೆಲವು ಸಲ ಆಪತ್ಕಾಲೀನ ಸ್ಥಿತಿಯಲ್ಲಿ ಸುಳ್ಳು ಸಂದೇಶಗಳು (ಎಸ್.ಎಮ್.ಎಸ್ ಅಥವಾ ವಾಟ್ಸ್ ಆ್ಯಪ್ ಸಂದೇಶಗಳು) ಹಬ್ಬುತ್ತವೆ. ಇಂತಹ ಯಾವುದೇ ವದಂತಿಗಳ ಮೇಲೆ ವಿಶ್ವಾಸವನ್ನಿಡಬಾರದು. ಸರಕಾರವು ಅಧಿಕೃತವಾಗಿ ಪ್ರಸಾರ ಮಾಡುವ ಮಾಹಿತಿಯನ್ನು ನಂಬಬೇಕು.

ಮನೆಯ ಹೊರಗೆ ಇರುವಾಗ ತೆಗೆದುಕೊಳ್ಳಬೇಕಾದ ದಕ್ಷತೆ

ಅ. ಬಿರುಗಾಳಿಯ ಸಮಯದಲ್ಲಿ ಸುರಕ್ಷಿತ ಸ್ಥಳವನ್ನು ಹುಡುಕಿ ಅಲ್ಲಿ ಆಶ್ರಯ ಪಡೆಯಬೇಕು. ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಇತ್ಯಾದಿಗಳು ಇಲ್ಲದಿರುವ ಸ್ಥಳಗಳು ಸುರಕ್ಷಿತವೆಂದು ಪರಿಗಣಿಸಬಹುದು. ಮರಗಳು ಅಥವಾ ವಿದ್ಯುತ್ ಕಂಬಗಳ ಕೆಳಗೆ, ಜೀರ್ಣವಾದ ಕಟ್ಟಡಗಳ ಕೆಳಗೆ ನಿಲ್ಲಬಾರದು.

ಆ. ಮರಗಳು ಮತ್ತು ವಿದ್ಯುತ್ ಕಂಬಗಳಿಗಿಂತ ದೂರ ಸುರಕ್ಷಿತ ಸ್ಥಳಗಳಲ್ಲಿ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಬೇಕು. ಚತುಷ್ಚಕ್ರ ವಾಹನಗಳ ಕಿಟಕಿ-ಬಾಗಿಲು ಸರಿಯಾಗಿ ಮುಚ್ಚಿರುವುದನ್ನು ದೃಢಪಡಿಸಿಕೊಳ್ಳಬೇಕು. ವಾಹನದ ಚಕ್ರಗಳಿಗೆ ಭಾರವಾದ  ವಸ್ತುಗಳನ್ನು (ಉದಾ: ದೊಡ್ಡ ಕಲ್ಲುಗಳು) ಹಚ್ಚಬೇಕು. ಏಕೆಂದರೆ, ಬಿರುಗಾಳಿಯ ರಭಸಕ್ಕೆ ವಾಹನ ಸರಿದಾಡುವ ಸಾಧ್ಯತೆಯಿರುತ್ತದೆ.

ಇ. ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ಮುಟ್ಟಬಾರದು. ಆ ಮರಗಳ ಮೇಲೆ ವಿದ್ಯುತ್‌ತಂತಿಗಳು ಬಿದ್ದಿರುವ ಸಾಧ್ಯತೆಯಿರುತ್ತದೆ.

ಈ. ಮಳೆಯ ನಂತರ ಎಲ್ಲವೂ ಒದ್ದೆಯಾಗಿರುವುದರಿಂದ ಯಾವುದೇ ವಿದ್ಯುತ್ ಕಂಬವನ್ನು ಸ್ಪರ್ಶಿಸಬಾರದು; ಏಕೆಂದರೆ ತೇವಾಂಶದಿಂದಾಗಿ ವಿದ್ಯುತ್ತಿನ ಆಘಾತ (‘ಶಾಕ್’) ಆಗಬಹುದು.

ಚಂಡಮಾರುತ ಬಂದು ಹೋದನಂತರ ಮಾಡಬೇಕಾದ ಕೃತಿಗಳು

ಅ. ವಾತಾವರಣವು ಸಹಜ ಸ್ಥಿತಿಗೆ ಮರಳುವ ತನಕ ಮನೆಯ ಹೊರಗೆ ಹೋಗಬಾರದು.

ಆ. ಬಿರುಗಾಳಿ ಮತ್ತು ಮಳೆಯಿಂದ ಪರಿಸರದ ಮರಗಳು ಬಿದ್ದಿದ್ದರೆ ಅಥವಾ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿದ್ದರೆ, ಅವುಗಳನ್ನು ಸ್ಪರ್ಶಿಸಬಾರದು. ಅಗ್ನಿಶಾಮಕ ದಳ ಮತ್ತು ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಇ. ಮನೆಯ ಗ್ಯಾಸ್ ಸಿಲಿಂಡರನಿಂದ ಗ್ಯಾಸ ಸೋರಿಕೆಯಾಗುತ್ತಿದ್ದರೆ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್‌ನ್ನು ಸ್ಥಗಿತಗೊಳಿಸಬೇಕು. ಸಿಲಿಂಡರ್ ಗಾಳಿಯ ಸಂಪರ್ಕಕ್ಕೆ ಬರುವ ಸ್ಥಳದಲ್ಲಿ (ಉದಾ. ಬಾಲ್ಕನಿಯಲ್ಲಿ) ಇಡಬೇಕು. ಸಂಪೂರ್ಣ ಮನೆಯಲ್ಲಿ ಗ್ಯಾಸ್ ವಾಸನೆ ಹರಡಿದ್ದರೆ ಯಾವುದೇ ವಿದ್ಯುತ್ ಸ್ವಿಚ್ ಆನ್-ಆಫ್ ಮಾಡಬಾರದು.

ಈ. ವಾಹನಗಳು, ವಿದ್ಯುತ್ ಉಪಕರಣಗಳು, ಹಾಗೆಯೇ ಮನೆಯ ಸಾಮಗ್ರಿಗಳು ಹೊಸದಾಗಿದ್ದರೆ, ಅವುಗಳ ವಿಮೆ ಮಾಡಿಸಿದ್ದರೆ ಮತ್ತು ನೈಸರ್ಗಿಕ ವಿಪತ್ತಿನಿಂದ ಆಗಿರುವ ಹಾನಿಯ ವಿಮೆ ಸಿಗುತ್ತಿದ್ದರೆ, ವಿಮಾ ಪ್ರತಿನಿಧಿಯ ಮಾರ್ಗದರ್ಶನವನ್ನು ಪಡೆಯಬೇಕು. ಹಾನಿಯಾಗಿರುವ ಮನೆಯ ವಸ್ತುಗಳನ್ನು ಸರಿಪಡಿಸುವ ಮೊದಲು ಅವುಗಳ ಛಾಯಾಚಿತ್ರಗಳನ್ನು ತೆಗೆಯಬೇಕು ಮತ್ತು ಅವುಗಳ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು.

ಆಪತ್ತುಗಳ ಪ್ರಸಂಗಗಳಲ್ಲಿ ರಾಷ್ಟ್ರೀಯ ಆಪತ್ತು ವ್ಯವಸ್ಥಾಪನೆಯ ಪ್ರಾಧಿಕಾರರವರ (National Disaster Management Authority) o11-1078 ಈ ಸಹಾಯವಾಣಿ ಕ್ರಮಾಂಕವನ್ನು ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆಯಬಹುದು.

ಇಲ್ಲಿ ಚಂಡಮಾರುತದ ದೃಷ್ಟಿಯಿಂದ ಕೆಲವು ಮಾರ್ಗದರ್ಶಕ ಅಂಶಗಳನ್ನು ಕೊಡಲಾಗಿದೆ. ವಾಚಕರಿಗೆ ಈ ವಿಷಯದ ಬಗ್ಗೆ ಇನ್ನೂ ಏನಾದರೂ ಸೂಚಿಸುವುದಿದ್ದರೆ ಅವರು ಈ ಕೆಳಗಿನ ಗಣಕೀಯ ಅಥವಾ ಅಂಚೆಯ ವಿಳಾಸಕ್ಕೆ ಕಳುಹಿಸಬೇಕೆಂದು, ವಿನಂತಿಸುತ್ತೇವೆ ! ಇದರಿಂದ ಈ ವಿಷಯವನ್ನು ಸಮಾಜದೆದುರು ಇನ್ನೂ ಆಳವಾಗಿ ಮಂಡಿಸಲು ಸಹಾಯವಾಗುವುದು.

ವಿ-ಅಂಚೆ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಮುಂಬರುವ ಮೂರನೇ ಮಹಾಯುದ್ಧದ ಕಾಲದಲ್ಲಿಯೂ ಇಂತಹ ಸ್ಥಿತಿಯು ನಿರ್ಮಾಣವಾಗಬಹದು. ಅದಕ್ಕಾಗಿಯೂ ಈ ಮಾಹಿತಿಯು ಉಪಯುಕ್ತವಾಗಬಹುದು; ಆದುದರಿಂದ ಇದನ್ನು ಸಂಗ್ರಹಿಸಿಡಬೇಕು.

ವಾಚಕರಿಗೆ ಕರೆ !

ಸಂಕಟ ಕಾಲದಲ್ಲಿ ಮನೋಧೈರ್ಯವನ್ನು ಉಳಿಸಿಡಲು ಸಾಧನೆಯ ಹೊರತು ಬೇರೆ ಮಾರ್ಗವಿಲ್ಲ !

ಇಂದು ವಿಜ್ಞಾನವು ಎಲ್ಲ ಕ್ಷೇತ್ರಗಳಲ್ಲಿ ಎಷ್ಟೇ ಪ್ರಗತಿ ಮಾಡಿದ್ದರೂ, ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳು ಉತ್ಪನ್ನವಾಗದಂತೆ ಮಾಡುವುದು ಮನುಷ್ಯನ ಶಕ್ತಿಯ ಆಚೆಗಿನ ವಿಷಯವಾಗಿದೆ. ಇಂತಹ ಪ್ರಸಂಗಗಳಲ್ಲಿ ಮನಸ್ಸನ್ನು ಸ್ಥಿರವಾಗಿಟ್ಟುಕೊಂಡು ಮನೋಧೈರ್ಯವನ್ನು ಉಳಿಸಿಕೊಳ್ಳುವುದಷ್ಟೇ, ನಮ್ಮ ಕೈಯಲ್ಲಿರುತ್ತದೆ. ಇದಕ್ಕಾಗಿ ದೈನಂದಿನ ಜೀವನದಲ್ಲಿ ಸಾಧನೆಯ ಪ್ರಯತ್ನಗಳನ್ನು ಮಾಡುವುದು ಅನಿವಾರ್ಯವಾಗಿದೆ. ಸಾಧನೆಯಿಂದಾಗಿ ಕಠಿಣ ಪರಿಸ್ಥಿತಿಗಳನ್ನೂ ಧೈರ್ಯದಿಂದ ಮತ್ತು ಆನಂದದಿಂದ ಎದುರಿಸಲು ಸಾಧ್ಯವಾಗುತ್ತದೆ. ವಾಚಕರೇ, ಆಪತ್ಕಾಲದಲ್ಲಿ ಅಲ್ಲ, ಈಗಿನಿಂದಲೇ ಸಾಧನೆಯನ್ನು ಪ್ರಾರಂಭಿಸಿರಿ ಮತ್ತು ತಮ್ಮಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು (ಈಶ್ವರೀ ಶಕ್ತಿಯ) ಬೆಳೆಸಿಕೊಂಡು ನಿಶ್ಚಿಂತರಾಗಿರಿ !

Leave a Comment