ನಿಸರ್ಗದ ಸರ್ವನಾಶದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ವಿಚಾರಗಳು

ಸ್ವಾತಂತ್ರ್ಯ ಲಭಿಸಿದ ಕೇವಲ ೨ ಪೀಳಿಗೆಗಳಲ್ಲಿ ಭಾರತದ ನಿಸರ್ಗದ ಸರ್ವನಾಶ ಮಾಡಿ ಮುಂದಿನ ಅನೇಕ ಪೀಳಿಗೆಗಳ ಜೀವನವನ್ನು ಧ್ವಂಸ ಮಾಡುವ ಸ್ವಾರ್ಥಿ ರಾಜಕಾರಣಿಗಳು !

ಗಿಡ ಮರಗಳು, ಪಶು ಪಕ್ಷಿಗಳು ಮತ್ತು ಮಾನವರಂತಹ ಸಜೀವ ಘಟಕ, ಹಾಗೂ ಗಾಳಿ, ನೀರು (ನದಿ, ಕೆರೆ ಮುಂತಾದವುಗಳಲ್ಲಿ) ಮತ್ತು ಭೂಮಿಯಂತಹ ನಿರ್ಜೀವ ಘಟಕಗಳಿಂದ ಪರಿಸರ ಅಥವಾ ನಿಸರ್ಗವು ತುಂಬಿದೆ. ಪರಿಸರದ ಪ್ರತಿಯೊಂದು ಘಟಕವನ್ನು ದೇವರ ಸ್ಥಾನವನ್ನು ನೀಡಿ ಅದನ್ನು ಪೂಜಿಸುವ ಹಿಂದೂ ಸಂಸ್ಕೃತಿಯಿಂದ ಅದು ಲಕ್ಷಾಂತರ ವರ್ಷಗಳ ಕಾಲ ಸುರಕ್ಷಿತವಾಗಿತ್ತು; ಆದರೆ ಸ್ವಾತಂತ್ರ್ಯ ಬಂದ ನಂತರದ ‘ಜಾತ್ಯಾತೀತ’ ಭಾರತದಲ್ಲಿ ಅದು ವೇಗವಾಗಿ ವಿನಾಶದ ಅಂಚಿನತ್ತ ಸಾಗುತ್ತಿದೆ. ಅದರ ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

೧. ಅರಣ್ಯನಾಶ (ಭೂಮಿ ಮತ್ತು ವಾಯುಮಾಲಿನ್ಯದ ಕಾರಣ)

ಹಿಂದೊಮ್ಮೆ ಭಾರತದಲ್ಲಿ ಎಲ್ಲೆಡೆ ಅರಣ್ಯಗಳ ಹಸಿರು ಹೊದಿಕೆಯಿತ್ತು, ಆದರೆ ಕಟ್ಟಿಗೆಯ ವ್ಯಾಮೋಹದಿಂದ ರಾಜಕಾರಣಿಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ಅರಣ್ಯನಾಶ ಮಾಡಿದ್ದಾರೆ ಎಂದರೆ ಇಂದು ದೇಶಕ್ಕೆ ದೇಶವೇ ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತಿದೆ. ಮರಗಳಿದ್ದರೆ ಗಾಳಿಯು ಶುದ್ಧವಾಗುತ್ತದೆ. ಮರಗಳಿಲ್ಲದಿದ್ದರೆ, ಆ ದೂಷಿತ ಗಾಳಿಯನ್ನೇ ನಾವು ಸೇವಿಸಬೇಕಾಗುತ್ತಿದೆ. ಮರಗಳಿಂದಾಗ ಪೃಥ್ವಿಯ ಹವಾಮಾನವು ತಂಪಾಗಿರುತ್ತಿತ್ತು. ಆದರೆ ಇಂದು ಮರಗಳಿಲ್ಲದೆ ‘ಗ್ಲೋಬಲ್ ವಾರ್ಮಿಂಗ್’ (ಪೃಥ್ವಿಯ ತಾಪಮಾನ ಹೆಚ್ಚಾಗುವುದು) ಎಂಬ ಸಂಕಟ ಎದುರಾಗಿದೆ. ಅರಣ್ಯನಾಶದಿಂದ ಮಣ್ಣಿನ ಸವಕಳಿಯ ಸಮಸ್ಯೆಯು ಉದ್ಭವಿಸಿದೆ.

೨. ನದಿಗಳ ನಾಶ (ಅಶುದ್ಧ ನೀರು)

ಭಾರತ ಪ್ರತಿಯೊಂದು ನದಿಯಲ್ಲಿಯೂ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಬಿಡಲಾಗುತ್ತದೆ, ನಗರಗಳ ತ್ಯಾಜ್ಯ ಬಿಡಲಾಗುತ್ತದೆ ಆದುದರಿಂದ ನದಿಗಳು ಇಂದು ಕಲುಷಿತಗೊಂಡಿವೆ. ಇದರಿಂದಾಗಿ ಶುದ್ಧ ನೀರು ಕೂಡ ಸುಲಭವಾಗಿ ಸಿಗದಂತಾಗಿದೆ.

೩. ಭೂಮಿಯ ನಾಶ

೩ ಅ. ಭೂಮಿಯು ಬರಡಾಗುವುದು

ರಾಜಕಾರಣಿಗಳು ರಾಸಾಯನಿಕ ಗೊಬ್ಬರವನ್ನು ಪ್ರೋತ್ಸಾಹಿಸಿರುವುದರಿಂದ ಕೃಷಿಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕಿನ ಉಪಯೋಗ್ಯವನ್ನು ಪ್ರೋತ್ಸಾಹಿಸಿರುವುದರಿಂದ ಎಲ್ಲೆಡೆ ಮಾಲಿನ್ಯವು ಹೆಚ್ಚಿದೆ. ಪ್ಲಾಸ್ಟಿಕಿನ ಒಂದು ಸಾಮಾನ್ಯ ತೊಟ್ಟೆಯ ವಿಘಟನೆಯಾಗಲು ೧೦೦ ಕ್ಕಿಂತಲೂ ಹೆಚ್ಚು ವರ್ಷಗಳು ಬೇಕಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಅನೇಕ ರೀತಿಯ ರಾಸಾಯನಿಕಗಳು ಅದರಿಂದ ಹೊರಸೂಸಿ ಭೂಮಿಯನ್ನು ಸೇರುತ್ತವೆ. ಇದರಿಂದಾಗಿ ಆ ಭಾಗದಲ್ಲಿ ಭೂಮಿಯು ಬರಡಾಗುತ್ತದೆ.

ನದಿಗಳಲ್ಲಿ ಪ್ಲಾಸ್ಟಿಕ್ ಸೇರುವುದರಿಂದ ನೀರಿನಲ್ಲಿ ವಾಸಿಸುವ ಜಲಚರ ಪ್ರಾಣಿಗಳ ಮೇಲಾಗುತ್ತದೆ. ಪ್ಲಾಸ್ಟಿಕಿನ ಅಂಶವಿರುವ ನೀರನ್ನು ಗದ್ದೆಗಳಲ್ಲಿ ಉಪಯೋಗಿಸುವುದರಿಂದ ಆ ಭೂಮಿಯ ಫಲವತ್ತತೆಯೂ ಕುಸಿಯುತ್ತದೆ.

೩ ಆ. ಖನಿಜ ಸಂಪನ್ಮೂಲಗಳು ನಾಶದತ್ತ

ಕೊಲ್ಲಿ ದೇಶಗಳ ತೈಲ ಹೇಗೆ ಮುಂದೊಂದು ದಿ ವಿರಳವಾಗಲಿದೆಯೋ ಅದೇ ರೀತಿ ಭಾರತದ ಖನಿಜ ಸಂಪನ್ಮೂಲಗಳು ಕೂಡ ಸೀಮಿತವಾಗಿವೆ ಎಂದು ಗಮನದಲ್ಲಿಟ್ಟು ಅವುಗಳ ಸದುಪಯೋಗದ ಆಯೋಜನೆ ಮಾಡದಿದ್ದರೆ ಅವುಗಳು ಬಹುಬೇಗನೆ ಮುಗಿಯಲಿವೆ.

೪. ಗೋಧನದ ನಾಶ

೧೯೪೭ ರಲ್ಲಿ ಭಾರತದಲ್ಲಿ ೯೦ ಕೋಟಿಗಿಂತಲೂ ಹೆಚ್ಚು ಇದ್ದ ದೇಶಿಯ ಗೋವಂಶ ಈಗ ಒಂದು ಕೋಟಿಗಿಂತಲೂ ಕಡಿಮೆಯಾಗಿದೆ. ಕಸಾಯಿಖಾನೆಗಳನ್ನು ನಡೆಸಿ, ಗೋವುಗಳನ್ನು ಕಡಿದು, ಮಾಂಸ ಮಾರಿ, ಅದರಿಂದ ಕೋಟ್ಯಾವಧಿ ಸಂಪಾದಿಸುವ ರಾಜಕಾರಣಿಗಳು ಮುಂದಿನ ಪೀಳಿಗೆಗಳಿಗೆ ‘ಇದು ಗೋವು’ ಎಂದು ಗೋವಿನ ಚಿತ್ರ ತೋರಿಸಿ, ವಿದೇಶಗಳಿಂದ ಹಾಲಿನ ಪುಡಿಯನ್ನು ತರಬಹುದು !

೫. ಪಕ್ಷಿಗಳ ನಾಶ

ಮನೆಮನೆಯಲ್ಲಿ ಇರುವ ಮೊಬೈಲ್ ಗಳಿಗೆ ಸಂಪರ್ಕ ನೀಡಲು ಅಲ್ಲಲ್ಲಿ ನಿರ್ಮಿಸಿರುವ ಮೊಬೈಲ್ ಟವರ್ ಗಳಿಂದ ಹೊರಹೊಮ್ಮುವ ರೇಡಿಯೋ ಫ್ರೀಕ್ವೆನ್ಸಿ ವಿಕಿರಣಗಳಿಂದ ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಜಗತ್ತಿನ ತುಲನೆಯಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ನೋಡಲು ಸಿಗುತ್ತಿದ್ದ ಗುಬ್ಬಚ್ಚಿಗಳು ಇಂದು ವಿನಾಶದಂಚಿಗೆ ತಲುಪಿವೆ.

ಮಾನವನ ಈ ವಿನಾಶಕಾರಿ ಕಾರ್ಯಗಳಿಂದ ಮುಂಬರಲಿರುವ ಸರ್ವನಾಶವು ತಡೆಯಬೇಕಾದರೆ , ಅದಕ್ಕೆ ‘ಹಿಂದೂ ರಾಷ್ಟ್ರದ’ ಸ್ಥಾಪನೆ ಒಂದೇ ಪರ್ಯಾಯ !

– (ಪರಾತ್ಪರ ಗುರು) ಡಾ. ಆಠವಲೆ

ಹಿಂದುಗಳೇ, ಪರಿಸರದ ರಕ್ಷಣೆಯೊಂದಿಗೆ ರಜ-ತಮದ ಮಾಲಿನ್ಯವನ್ನು ಕೂಡ ದೂರಗೊಳಿಸಿ !

ಭೌತಿಕತೆಯಿಂದಾಗಿ ಇಂದು ಪೃಥ್ವಿಯ ಸ್ಥಿತಿಯು ದಿನೇದಿನೇ ಕೆಡುತ್ತಿದೆ. ೧೦೦ ವರ್ಷಗಳ ಹಿಂದೆ ಪರಿಸರ ಮಾಲಿನ್ಯದ ಇಂತಹ ಭೀಕರ ಸಮಸ್ಯೆನೇ ಇರಲಿಲ್ಲ, ಏಕೆಂದರೆ ಆಗ ವಿಜ್ಞಾನದ ಅತಿರೇಕವೂ ಇರಲಿಲ್ಲ. ಹಿಂದೂ ಧರ್ಮದಲ್ಲಿ ‘ನಿಸರ್ಗದಲ್ಲಿಯೂ ಈಶ್ವರನನ್ನು ನೋಡಿ’ ಎಂಬ ಕಲಿಕೆಯಿರುವುದರಿಂದ, ಮೊದಲಿನಿಂದಲೇ ಈ ವಸುಂಧರೆಯನ್ನು ‘ಪೃಥ್ವಿ ದೇವತೆ’ ಎಂದೇ ಪೂಜಿಸಲಾಗುತ್ತಿತ್ತು. ಇದರಿಂದಾಗಿ ಈ ಪರಿಸರದ ಹಾನಿಯನ್ನು ಮಾಡುವ ವಿಚಾರವೂ ಯಾರ ಮನಸ್ಸಿನಲ್ಲಿ ಬರುತ್ತಿರಲಿಲ್ಲ. ಹಿಂದೂ ಧರ್ಮದ ಈ ಕಲಿಕೆಯ ಉದಾಹರಣೆಯನ್ನು ನಮಗೆ ವಟಪೂರ್ಣಿಮೆಯಂದು ನೋಡಲು ಸಿಗುತ್ತದೆ. ಗೋಮಾತೆ, ನಂದಿ, ನಾಗ ಇವುಗಳನ್ನು ಕೂಡ ದೇವತೆಗಳನ್ನು ಪೂಜಿಸಲಾಗುತ್ತದೆ. ಆದರೆ ವಿಜ್ಞಾನವಾದಿಗಳು ಈ ವಿಷಯಗಳನ್ನು ಅಂಧಶ್ರದ್ಧೆಯೆಂದು ಹೀಯಾಳಿಸುತ್ತಾರೆ. ಅವರ ಭೌತಿಕತೆಯಿಂದಾಗಿ ನಿಸರ್ಗದತ್ತ ದೇವತೆಯೆಂದು ನೋಡುವ ದೃಷ್ಟಿಯೇ ಕ್ಷೀಣಿಸುತ್ತಿದೆ. ಆದುದರಿಂದ ಪೃಥ್ವಿಯನ್ನು ರಕ್ಷಿಸಲು ನಮಗೇನಾದರೂ ಮಾಡಬೇಕೆಂದು ಅನಿಸಿದರೆ ಮೊದಲಿಗೆ ವೈಜ್ಞಾನಿಕ ಆಧುನಿಕತೆಯ ಅಡಿಯಲ್ಲಿ ಹಿಂದೂ ಧರ್ಮದ ಮೇಲಾಗುವ ಆಕ್ರಮಣಗಳನ್ನು ತಡೆಯಬೇಕಾಗಿದೆ.

ಹಿಂದುಗಳೇ, ಪರಿಸರ ಮಾಲಿನ್ಯದಿಂದ ಆಗುವ ಹಾನಿಯನ್ನು ನಾವು ನೋಡಬಹುದು, ಆದರೆ ಅದಕ್ಕಿಂತಲೂ ಭಯಂಕರವಾದ ಒಂದು ಸಂಕಟವಿದೆ – ರಜ-ತಮದ ಮಾಲಿನ್ಯ. ಇಂದು ಮಾನವನು ಧರ್ಮಪಾಲನೆಯಿಂದ ದೂರವಾಗಿರುವ ಕಾರಣ ಭೋಗವಾದ, ಸ್ವಾರ್ಥ, ಅಧಿಕಾರ ಲಾಲಸೆ ಇವುಗಳು ರಾರಾಜಿಸುತ್ತಿವೆ. ಭ್ರಷ್ಟಾಚಾರ, ಅಪರಾಧ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಇವುಗಳೆಲ್ಲವೂ ಸೂಕ್ಷ್ಮದಲ್ಲಿ ಹೆಚ್ಚಿರುವ ರಜ-ತಮದ ಮಾಲಿನ್ಯದ ಪರಿಣಾಮಗಳೇ. ಅತಿರೇಕಿಗಳು, ಇಡೀ ಪೃಥ್ವಿಯು ೫೦ ಬಾರಿ ನಾಶವಾಗುವಷ್ಟು ಸಾಮರ್ಥ್ಯವಿರುವ ಅಣ್ವಸ್ತ್ರಗಳು, ಆ ಅಣ್ವಸ್ತ್ರಗಳನ್ನು ನಿರ್ಮಿಸುವ ವಿಕೃತ ಮಾನಸಿಕತೆಯ ಹಿಂದೆಯೂ ಇದೇ ರಜ-ತಮದ ಮಾಲಿನ್ಯ ಕಾರಣವಾಗಿದೆ. ಅಣ್ವಸ್ತ್ರಗಳಿಗಿಂತ ಹೆಚ್ಚಿನ ಹಾನಿಯನ್ನು ಮಾಡುವಂತಹ ಈ ಮಾಲಿನ್ಯವನ್ನು ತಡೆಯಲು ಸ್ಥೂಲದಲ್ಲಿ ಪ್ರಯತ್ನಗಳನ್ನು ಮಾಡಿ ಪರಿಣಾಮವಾಗುವುದಿಲ್ಲ, ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಗಳನ್ನು ಮಾಡಬೇಕು ! ಹೇಗೆ ‘ಗ್ಲೋಬರ್ ವಾರ್ಮಿಂಗ್’ (ಹೆಚ್ಚುತ್ತಿರುವ ಪೃಥ್ವಿಯ ತಾಪಮಾನದಿಂದ ಆಗುತ್ತಿರುವ ದುಷ್ಪರಿಣಾಮಗಳು) ನ ವಿರುದ್ಧ ‘ಅರಣ್ಯನಾಶವನ್ನು ತಡೆಯುವುದು ಮತ್ತು ಗಿಡ ಮರಗಳನ್ನು ನೆಡುವುದು’ ಉಪಾಯವೆಂದು ಪರಿಗಣಿಸಲಾಗಿದೆಯೋ, ಅದೇ ರೀತಿ ರಜ-ತಮದ ಮಾಲಿನ್ಯವನ್ನು ತಡೆಯಲು ‘ಸಮಾಜದ ಸಾತ್ತ್ವಿಕತೆಯಲ್ಲಿ ವೃದ್ಧಿಯಾಗುವುದು’ ಒಂದೇ ಒಂದು ಉಪಾಯವಾಗಿದೆ ! ಇದು ಆಗಬೇಕಾದರೆ ಧರ್ಮಾಚರಣೆ ಒಂದೇ ಮಾರ್ಗವಾಗಿದೆ. ಆದುದರಿಂದ ಪ್ರತಿಯೊಬ್ಬ ಹಿಂದೂವೂ ಹಿಂದೂ ಸಂಸ್ಕೃತಿಗನುಗುಣವಾಗಿ ಆಚರಣೆ ಮಾಡುವ ನಿರ್ಧಾರ ಮಾಡಬೇಕು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಸದ್ಬುದ್ಧಿಯನ್ನು ದೇವರು ಪ್ರತಿಯೊಬ್ಬ ಹಿಂದೂವಿಗೂ ನೀಡಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !

– (ಪರಾತ್ಪರ ಗುರು) ಡಾ. ಆಠವಲೆ

Leave a Comment