ಪೂಜೆಗಾಗಿ ಹೂವು ಆರಿಸುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು

ಹೂವಿನ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಒಂದು ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು. ಸಾತ್ತ್ವಿಕ ಪುಷ್ಪಗಳಿಂದ ಪ್ರಕ್ಷೇಪಿತವಾಗುವ ದೇವತಾತತ್ತ್ವದ ಪವಿತ್ರಕಗಳ ಕಾರಣದಿಂದ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಅವುಗಳ ತಮಪ್ರಧಾನ ಶಕ್ತಿ ಅಂದರೆ ಕಪ್ಪು ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ ಅಥವಾ ನಾಶವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಸಾತ್ತ್ವಿಕ ಪುಷ್ಪ, ದೇವತಾತತ್ತ್ವದ ತರಂಗಗಳನ್ನು ಪ್ರಕ್ಷೇಪಿಸಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ ಒಂದು ಪ್ರಕಾರ ಯುದ್ಧವನ್ನೇ ಮಾಡುತ್ತದೆ.

ಪೂಜೆಯಲ್ಲಿ ನಿಷಿದ್ಧ ಹೂವುಗಳು

೧. ಅಪವಿತ್ರ ಸ್ಥಳದಲ್ಲಿ ಬೆಳೆದ ಹೂವು
೨. ಅರಳದಿರುವ ಹೂವು ಅಂದರೆ ಮೊಗ್ಗು
೩. ಎಸುಳುಗಳು ಉದುರಿದ ಹೂವು
೪. ಗಂಧವಿಲ್ಲದ ಅಥವಾ ಉಗ್ರ ಗಂಧದ ಹೂವು
೫. ಆಘ್ರಾಣಿಸಿದ (ಸುಗಂಧವನ್ನು ನಾವು ಮೂಸಿ ನೋಡಿರುವ) ಹೂವು
೬. ನೆಲದ ಮೇಲೆ ಬಿದ್ದ ಹೂವು
೭. ಎಡಗೈಯಿಂದ ತಂದಿರುವ
೮. ನೀರಿನಲ್ಲಿ ಮುಳುಗಿಸಿ ತೊಳೆದ ಪುಷ್ಪಗಳು
೯. ಬೇರೆಯವರನ್ನು ಅಪ್ರಸನ್ನಗೊಳಿಸಿ ತರಲಾದ ಹೂವುಗಳನ್ನು ದೇವತೆಗೆ ಅರ್ಪಿಸುವುದು ನಿಷಿದ್ಧವಾಗಿದೆ.

ನಿಷೇಧದ ಕೆಲವು ಅಪವಾದಗಳು

೧. ದೇವತೆಗೆ ಮೊಗ್ಗುಗಳನ್ನು ಅರ್ಪಿಸುವುದಿಲ್ಲ, ಆದರೆ ಈ ನಿಷೇಧವು ಕಮಲಕ್ಕೆ ಅನ್ವಯಿಸುವುದಿಲ್ಲ.
೨. ಮಾಲಿಯ ಮನೆಯಲ್ಲಿ ಇಡಲಾದ ಹೂವುಗಳಿಗೆ ಹಳೆಯದಾಗಿದ್ದರೆ ದೋಷ ತಗಲುವುದಿಲ್ಲ.
೩. ಹೂವುಗಳನ್ನು ನೀರಿನಲ್ಲಿ ಮುಳುಗಿಸಿ ತೊಳೆಯುವುದಿಲ್ಲ. ಆದರೆ ಹೂವುಗಳ ಮೇಲೆ ನೀರನ್ನು ಸಿಂಪಡಿಸಬಹುದು.

ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು ?

ಸೂರ್ಯಾಸ್ತದ ನಂತರ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಾಗುತ್ತದೆ. ಇದರಿಂದ ವಾತಾವರಣದಲ್ಲಿ ತೊಂದರೆದಾಯಕ ತರಂಗಗಳು ಹೆಚ್ಚಾಗುತ್ತವೆ. ಇದರಿಂದ  ಮೊಗ್ಗುಗಳಲ್ಲಿ ರಜ-ತಮ ಕಣಗಳು ಸೇರಿಕೊಳ್ಳುತ್ತವೆ. ದೇವತೆಗಳ ತತ್ತ್ವವನ್ನು ಆಕರ್ಷಿಸುವ ಅವುಗಳ ಕ್ಷಮತೆಯು ಕಡಿಮೆಯಾಗುತ್ತದೆ. ಆದುದರಿಂದ ಆದಷ್ಟು ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಕೀಳಬಾರದು.

ಹೂವು ಆರಿಸುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು

೧. ಸ್ನಾನ ಮಾಡದೆ ಹೂವುಗಳನ್ನು ಕೀಳಬಾರದು.
೨. ಪಾದರಕ್ಷೆಗಳನ್ನು ಧರಿಸಿ ಪೂಜೆಗಾಗಿ ಹೂವು ಕೀಳಬಾರದು.
೩. ಹೂವನ್ನು ಆರಿಸುವ ಮೊದಲು, ಅದರ ಗಿಡಕ್ಕೆ ಕೃತಜ್ಞತೆ ವ್ಯಕ್ತಪಡಿಸಬೇಕು.
೪. ಪೂಜಾವಿಧಿಗೆ ಹೂವು ಆರಿಸುವಾಗ, ಹೂವನ್ನು ಅರ್ಪಿಸುವ ಉದ್ದೇಶವು ಸಫಲವಾಗಲಿ ಎಂದು ಪ್ರಾರ್ಥನೆ ಮಾಡಬೆಕು.
೫. ನಮ್ಮ ಇಷ್ಟದೇವರ ನಾಮಜಪ ಮಾಡುತ್ತಾ ಹೂವು ಕೀಳಬೇಕು.

1 thought on “ಪೂಜೆಗಾಗಿ ಹೂವು ಆರಿಸುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು”

Leave a Comment