ಭಗವಂತನ ಭೇಟಿಯ ಸೆಳೆತದಿಂದ ವ್ಯಾಕುಲಗೊಂಡಿರುವ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರ ಭಾವಸ್ಪರ್ಶಿ ಆತ್ಮಚಿಂತನೆ !

ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತ ನೆಡೆಗೆ ಪ್ರಕಟವಾಗಿರುವ ಅವರ ಆತ್ಮಚಿಂತನವನ್ನು ಇಲ್ಲಿ ನೀಡುತ್ತಿದ್ದೇವೆ. ಸಂತರ ಭಗವಂತನೆಡೆಗಿರುವ ಅಮೂಲ್ಯ ಭಾವವಿಶ್ವ ಹೇಗಿರುತ್ತದೆ, ಎನ್ನುವುದು ಈ ಲೇಖನದಿಂದ ತಿಳಿಯುತ್ತದೆ

ಶ್ರೀಕೃಷ್ಣನ ಪರಮಭಕ್ತೆ ರಾಧಾ ! ಅವಳು ತನ್ನ ಜನ್ಮವಿಡೀ ಉಸಿರಾಟದಷ್ಟು ಹರಿನಾಮವನ್ನು ಜಪಿಸಿದಳು. ಆಗ ಆ ಕೃಷ್ಣನು ಅವಳಿಗೆ ಪ್ರಾಪ್ತವಾದನು. ನಾನು ನನ್ನ ಕ್ಷಣಭಂಗುರ ಜೀವನದ ಕ್ಷಣಗಳನ್ನೆಲ್ಲ ನಿನ್ನ ಚರಣಗಳಿಗೆ ಅರ್ಪಿಸುತ್ತಿದ್ದೇನೆ. ದೇವಾ, ನಿನ್ನ ಚಿಂತನ-ಮನನವೇ ನಿಜವಾದ ನನ್ನ ನಿತ್ಯ ಸಾಧನೆಯಾಗಿದೆ. ನಿನ್ನ ಧ್ಯಾನದಲ್ಲಿ ಸಿಗುವ ಭಿನ್ನವಾದ ಆನಂದ ಮತ್ತು ಮನಃಶಾಂತಿ ಇನ್ಯಾವುದರಲ್ಲಿಯೂ ಇಲ್ಲ. ಈ ಆತ್ಮಕ್ಕೆ ಈಗ ನಿನ್ನ ಅಖಂಡ ದರ್ಶನದ ಸೆಳೆತ ಬೇಕಾಗಿದೆ. ಇನ್ಯಾವುದೇ ಅಸ್ತಿತ್ವ ಬೇಡ. ಮತ್ತಿನ್ನೇನೂ ಬೇಡ ದೇವಾ !

೧. ಈಗ ನನಗೆ ನಿನ್ನ ವಿರಹವನ್ನು ಸಹಿಸಲು ಆಗುತ್ತಿಲ್ಲ !

ಜೀವನವೇನೆಂಬುದೇ ತಿಳಿಯುವುದಿಲ್ಲ. ನೀನೇ ಹೇಳುತ್ತೀಯಲ್ಲ, ನಾನು ನಿರಂತರವಾಗಿ ನಿನ್ನೊಂದಿಗೆ ಇದ್ದೇನೆ. ನನ್ನ ನಾಮಜಪಿಸು ಮತ್ತು ನನ್ನನ್ನು ನಿನ್ನೆದುರಿಗೆ ನೋಡು ! ಎಂದು, ಹಾಗಿದ್ದರೆ ನೀನೆಲ್ಲಿದ್ದೀಯಾ ? ನಾನು ಸತತವಾಗಿ ನಿನ್ನ ಹೆಸರನ್ನೇ ಜಪಿಸುತ್ತಿರುತ್ತೇನೆ ! ನಿನ್ನ ವಿರಹಸಹಿಸಲಾಗುತ್ತಿಲ್ಲ. ನಾನು ನನ್ನ ಅಕ್ಕಪಕ್ಕದಲ್ಲಿ ಏನೆಲ್ಲವನ್ನು ನೋಡುತ್ತೇನೆಯೋ, ಅದೆಲ್ಲದರಲ್ಲಿಯೂ ನೀನೇ ಕಾಣಿಸುತ್ತೀಯಾ ! ಸತತವಾಗಿ ನಿನ್ನ ಸಹವಾಸದಲ್ಲಿರಬೇಕು, ನಿನ್ನ ಚಿಂತನೆಯನ್ನು ಮಾಡಬೇಕು, ನಿನ್ನ ಗೀತೆಯನ್ನು ಹಾಡಬೇಕು, ನೀನಲ್ಲದೇ ಬೇರೇನೂ ಬೇಡ ಎಂದೆನಿಸುತ್ತದೆ. ನೀನೇಕೆ ನನ್ನನ್ನು ಈ ಸಂಸಾರದ ಬಂಧನದಲ್ಲಿ, ಸಾಧಕರ ಸಂಕಟದಲ್ಲಿ ಸಿಲುಕಿಸಿದ್ದೀಯಾ ? ನನಗೆ ಈಗ ಈ ಬಂಧನವೇ ಬೇಡವೆನಿಸುತ್ತದೆ. ನನಗೆ ಈಗ ಕೇವಲ ನೀನು ಮತ್ತು ನೀನೇ ಬೇಕು ! ಯಾರೊಂದಿಗೂ ಮಾತನಾಡಬಾರದು, ನಗಬಾರದು ಎಂದೆನಿಸುತ್ತದೆ ಮತ್ತು ಹೀಗೆ ಅನಿಸುತ್ತಿರುವಾಗಲೇ ಮನಸ್ಸಿನಿಂದ ನಗುವ, ಮಾತನಾಡುವ ನಟನೆಯನ್ನು ಮಾಡಬೇಕಾಗುತ್ತದೆ. ಈ ಸಾಂಸಾರಿಕ ವಿಷಯಗಳಲ್ಲಿ ಮನಸ್ಸಿಗೆ ಸುಖ ಸಿಗುವುದಿಲ್ಲ. ಆದರೂ ಅದು ಸುಖವಾಗಿದೆ ಎಂದು ತೋರಿಸಲೇ ಬೇಕಾಗುತ್ತದೆ. ದತ್ತಾತ್ರೇಯಾ, ನಿನ್ನ ಸಹವಾಸದಲ್ಲಿ ಮಾತ್ರ ಗಂಟೆಗಳು ನಿಮಿಷಗಳಾಗುತ್ತವೆ. ಇತ್ತೀಚೆಗೆ ತೆವಳುತ್ತ ಸಾಗುವ ಸಮಯವು ವೇಗವಾಗಿ ಜಾರಿ ಹೋಗುತ್ತಿದೆ ಮತ್ತು ಯಾವಾಗ ನಿನ್ನ ಧ್ಯಾನ ತಗಲುವುದಿಲ್ಲವೋ, ಆಗ ಎಷ್ಟು ವರ್ಷಗಳು ಜಾರಿಹೋದವೋ ಯಾರಿಗೆ ಗೊತ್ತು ? ನಿನ್ನ ದರ್ಶನವಿಲ್ಲ, ಎಂದೆನಿಸುತ್ತದೆ.

೨. ನಿನ್ನ ದರ್ಶನವಿಲ್ಲದಿದ್ದರೆ ಈ ದೇಹವೇ ಬೇಡವೆನಿಸುವುದು !

ಈಗ ಮಾತ್ರ ಈ ದೇಹದ ಮೋಹ ಇಲ್ಲವಾಗಿದೆ. ಪರಮೇಶ್ವರಾ, ದತ್ತಗುರು ನಿನ್ನ ದರ್ಶನವಿಲ್ಲದಿದ್ದರೆ, ಈ ದೇಹವೇ ಬೇಡ. ಈ ಪಂಜರದೊಳಗಿನಿಂದ ಆತ್ಮ ಮುಕ್ತವಾಗಬೇಕೆಂದೆನಿಸುತ್ತಿದೆ. ಕೇವಲ ಒಂದೇ ಕಾರಣಕ್ಕಾಗಿ ಈ ದೇಹದ ಮೋಹವೆನಿಸುತ್ತದೆ. ಅದೆಂದರೆ ಈ ದೇಹದ ಮಾಧ್ಯಮದಿಂದ ನಿನ್ನದೇ ದರ್ಶನವಾಗುತ್ತಿರಬೇಕು.

೩. ಪರಮೇಶ್ವರಾ, ಜೀವ ತಳಮಳವಾಗುತ್ತಿದೆ.

ಆದಷ್ಟು ಬೇಗನೆ ಬಾ ಮತ್ತು ನನಗೆ ದರ್ಶನವನ್ನು ನೀಡು ! ಪರಮೇಶ್ವರಾ, ನನ್ನ  ಜೀವವೇ,  ಈಗ ನನಗೆ ಯಾವಾಗ ದರ್ಶನ ನೀಡುವೆ ? ಜೀವ ತಳಮಳಿಸುತ್ತಿದೆ. ಆದಷ್ಟು ಬೇಗನೆ ಬಾ ಮತ್ತು  ನನಗೆ ದರ್ಶನ ನೀಡು. ಶ್ರೀ ಜ್ಞಾನೇಶ್ವರನ ಆ ಸಾಲುಗಳ ನಿಜವಾದ ಅರ್ಥ ಈಗ ಅರಿವಾಗಿದೆ. ಚಂದನದಿಂದ ಅಂಗಾಂಗದ ದಾಹ ಶಾಂತವಾಗುತ್ತಿಲ್ಲ. ಹುಣ್ಣಿಮೆಯ ಬೆಳದಿಂಗಳು ಶೀತಲವೆನಿಸುತ್ತಿಲ್ಲ. ಈ ದಾಹ ಯಾವುದರಿಂದಲೂ ಶಾಂತವಾಗುವುದಿಲ್ಲ. ವಿರಹದಿಂದ ಆಗುವ ಈ ದಾಹ ಹೀಗೆಯೇ ಇರಲಿದೆ. ನಿನ್ನ ಚರಣಗಳ ಮೇಲೆ ತಲೆಯನ್ನು ಮಸ್ತಕವನ್ನು ಅಖಂಡವಾಗಿ ಇಡಬೇಕು ಎನ್ನುವುದಷ್ಟೇ ಪ್ರಖರವಾಗಿ ಅನಿಸುತ್ತಿದೆ. ಇದರ ಮುಂದೆ ಬೇರೇನೂ ಕಾಣಿಸದಂತಾಗಿದೆ.

೪. ಸೂರ್ಯನ ತೇಜಸ್ವಿ ಕಿರಣಗಳಲ್ಲಿ ಹಸಿರು ವನಸ್ಪತಿಯಲ್ಲಿ, ಶರೀರದ ಅಣುರೇಣುಗಳಲ್ಲಿಯೂ ನೀನೇ ಇರುವೆ !

ನನ್ನ ಅಕ್ಕಪಕ್ಕದಲ್ಲಿ ಯಾವುದೆಲ್ಲ ಮಂಗಲಕರ ವಾಸವಿದೆಯೋ, ಅದರಲ್ಲಿ ನೀನೇ ಇದ್ದೀಯಾ ಎನ್ನುವುದು ನನಗೆ ತಿಳಿದಿದೆ. ಸೂರ್ಯನ ತೇಜಸ್ವಿ ಕಿರಣಗಳಲ್ಲಿ ನೀನೇ ಇದ್ದೀಯಾ. ಹಚ್ಚಹಸಿರಿನ ವನಸ್ಪತಿಯಲ್ಲಿ ನೀನೇ ಇದ್ದೀಯಾ. ವಾತಾವರಣವನ್ನು ಮೋಹಕಗೊಳಿಸುವ ಸುಗಂಧದ  ಪುಷ್ಪಗಳಲ್ಲಿಯೂ ನೀನೇ ಇದ್ದೀಯಾ. ಇಷ್ಟೇ ಅಲ್ಲ, ನನ್ನ ಶರೀರದ ಅಣುರೇಣುವಿನಲ್ಲಿಯೂ ನೀನೇ ಇದ್ದಿಯಾ. ಈ ಹೃದಯದ ಕಣಕಣಗಳಲ್ಲಿಯೂ ನೀನೇ ಇರುವೆ. ಕಣ್ಣಿನ ಗುಡ್ಡೆಗಳಲ್ಲಿಯೂ ನೀನೇ ಇರುವೆ ಎಂದು ನಾನು ತಿಳಿಯುತ್ತೇನೆ. ಇದೆಲ್ಲ ಕಲ್ಪನೆಯ ಆಟವಾಗಿದ್ದರೂ, ಅದರಲ್ಲಿ ಆನಂದವೇ ಆನಂದವಿದೆ. ನನಗೆ ಆ ಆನಂದ ನಿರಂತರವಾಗಿ ದೊರೆಯುತ್ತಿರುತ್ತದೆ. ಶರೀರ ಸುಟ್ಟುಹೋದ ಬಳಿಕವೂ ಎಲುಬುಗಳ ತುಂಡುಗಳಲ್ಲಿ ವಿಠ್ಠಲ ವಿಠ್ಠಲ, ಎನ್ನುವ ಧ್ವನಿ ಕೇಳುವ ಚೋಖಾಮೇಳನಂತೆ ನನ್ನ ಶರೀರದ ಎಲ್ಲ ಅವಯವಗಳಲ್ಲಿ ನೀನೇ ಇದ್ದೀಯಾ ! ನಿನ್ನದೇ ಚಿಂತನೆ, ಸ್ಮರಣೆ ಇದೆ; ಆದರೆ ನಿನ್ನ ಅಂತರವು ಈಗ ನನಗೆ ಅಸಹನೀಯವಾಗುತ್ತಿದೆ. ನೀರಿನಲ್ಲಿ ಕರಗುವ ಸಕ್ಕರೆಯಂತೆ ಈ ದೇಹ ನಿನ್ನ ನಾಮ ಸ್ಮರಣೆಯಲ್ಲಿ ಕರಗಬೇಕು ಎಂದೆನಿಸುತ್ತದೆ. ಇದಕ್ಕಾಗಿ ನಾನು ಎಷ್ಟೇ ಕಠೋರವಾಗಿರುವ ಸಾಧನೆಯಾದರೂ ಆಚರಿಸುತ್ತೇನೆ.

೫. ಈಗ ಈ ಜಗತ್ತು ಶೂನ್ಯವೆನಿಸುತ್ತದೆ. ಈಗ ದರ್ಶನಕ್ಕಾಗಿ ಜೀವ ಎನ್ನುವ ಅವಸ್ಥೆಯಾಗಿದೆ; ಆದ್ದರಿಂದ ನಿನ್ನ ಬಳಿಗೆ ಏನು ಬೇಡಲಿ ? ನನ್ನ ದತ್ತಾತ್ರೇಯನ ಮನಮೋಹಕ ವಿಶ್ವರೂಪವನ್ನೇ ಬೇಡುತ್ತೇನೆ.

೬. ನಿನ್ನ ದರ್ಶನದ ಆನಂದ ಬೇರೆ ಇನ್ಯಾವುದರಲ್ಲಿಯೂ ಇಲ್ಲ !

ನಿಜ ಹೇಳುತ್ತೇನೆ. ನಿನ್ನ ದರ್ಶನದ ಆನಂದ ಇನ್ಯಾವುದರಲ್ಲಿಯೂ ಇಲ್ಲ. ಆ ಆನಂದವನ್ನು ಯಾರು ಅನುಭವಿಸುತ್ತಾರೆಯೋ, ಅವನಿಗಷ್ಟೇ ಅದು ಅರ್ಥವಾಗುತ್ತದೆ. ಶಬ್ದಗಳಲ್ಲಿ ಅವನನ್ನು ವರ್ಣಿಸುವುದು ಅಸಾಧ್ಯವಾಗಿದೆ ಮತ್ತು ಆಗ ನನಗೆ ಈ ಆನಂದದಿಂದ ಹೊರಗೆ ಬರಲೇಬಾರದು. ಈ ಅವಸ್ಥೆ ಹೀಗೆಯೇ ಇರಬೇಕು, ಎಂದೆನಿಸುತ್ತದೆ. ಭಗವಂತಾ, ನನ್ನ ತಳಮಳವನ್ನು ನೀನು ತಿಳಿದುಕೋ ! ಈ ಕ್ಷಣ ದರ್ಶನದ ನೆನಪಿನಿಂದ ಮನಸ್ಸು ತುಂಬಿ ಬಂದಿದೆ. ಕಣ್ಣುಗಳಿಗೆ ಕಾಣಿಸುವ ಆ ತೇಜಃ ಪುಂಜ ಮೂರ್ತಿ ಮತ್ತು ಅದರೆದುರಿಗೆ ನತಮಸ್ತಕವಾಗಿರುವ ಈ ನಶ್ವರ ದೇಹ ! ಕಲ್ಪನೆಯಿಂದಲೇ ನಾನು ನಿನ್ನ ದರ್ಶನವನ್ನು ಅನುಭವಿಸುತ್ತಿದ್ದೇನೆ ಮತ್ತು ಉಲ್ಲಸಿತನಾಗಿದ್ದೇನೆ. ಹೀಗಿರುವಾಗ ನಿನ್ನ ಪ್ರತ್ಯಕ್ಷ ಸಾನ್ನಿಧ್ಯದಲ್ಲಿ ಬರುವ ತಲ್ಲೀನತೆ ಎಷ್ಟಿರಬಹುದು !
– ಪ.ಪೂ.ಯೋಗತಜ್ಞ ದಾದಾಜಿ ವೈಶಂಪಾಯನ (ಇವರ ನಾಮಸ್ಮರಣ ವಹಿಯಲ್ಲಿ ಬರೆದಿರುವ ಮನೋಗತ)

Leave a Comment