ಪ್ರದೋಷ ವ್ರತ

ಅ. ತಿಥಿ:
ಪ್ರತಿಯೊಂದು ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯಂದು ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎನ್ನುತ್ತಾರೆ.

ಆ. ವ್ರತವನ್ನು ಮಾಡುವ ಪದ್ಧತಿ:
ಇಂದು ದಿನವಿಡೀ ಉಪವಾಸ ಮತ್ತು ಉಪಾಸನೆಯನ್ನು ಮಾಡಿ ರಾತ್ರಿ ಶಿವಪೂಜೆಯ ನಂತರ ಭೋಜನ ಮಾಡಬೇಕು. ಪ್ರದೋಷದ ಮರುದಿನ ಶ್ರೀವಿಷ್ಣುಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಈ ವ್ರತವನ್ನು ಆದಷ್ಟು ಉತ್ತರಾಯಣದಲ್ಲಿ ಪ್ರಾರಂಭಿಸಬೇಕು. ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ.

ಇ. ನಿಷೇಧ:

ಪ್ರದೋಷಕಾಲದಲ್ಲಿ ವೇದಾಧ್ಯಯನವನ್ನು ಮಾಡಬಾರದು ಎಂದು ಹೇಳಲಾಗಿದೆ; ಏಕೆಂದರೆ ಇದು ರಾತ್ರಿಯ ಸಮಯದಲ್ಲಿನ ವ್ರತವಾಗಿದೆ ಮತ್ತು ವೇದಾಧ್ಯಯನವನ್ನು ಸೂರ್ಯನಿರುವಾಗ ಮಾಡಬೇಕಾಗುತ್ತದೆ.

ಈ. ವಿಧಗಳು :

ಸೋಮವಾರ ಬರುವ ಪ್ರದೋಷಕ್ಕೆ ಸೋಮಪ್ರದೋಷವೆನ್ನುತ್ತಾರೆ, ಮಂಗಳವಾರ ಬರುವ ಪ್ರದೋಷಕ್ಕೆ ಭೌಮಪ್ರದೋಷವೆನ್ನುತ್ತಾರೆ ಮತ್ತು ಶನಿವಾರ ಬರುವ ಪ್ರದೋಷಕ್ಕೆ ಶನಿಪ್ರದೋಷವೆಂದು ಕರೆಯುತ್ತಾರೆ. ಕೃಷ್ಣ ಪಕ್ಷದಲ್ಲಿನ ಪ್ರದೋಷವು ಒಂದು ವೇಳೆ ಶನಿವಾರ ಬಂದರೆ ಅದನ್ನು ವಿಶೇಷ ಫಲದಾಯಕವೆಂದು ತಿಳಿದುಕೊಳ್ಳಲಾಗುತ್ತದೆ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಶಿವ”)

Leave a Comment