ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ

ಪ್ರತಿಯೊಂದು ಜನ್ಮದಲ್ಲಿ ಚಿಕ್ಕವರಿಂದ ಅನೇಕ ವರ್ಷಗಳವರೆಗೆ ಕಲಿತು ಅರಿತುಕೊಂಡ ಬುದ್ಧಿಗೆ ತಿಳಿಯುವ ಜ್ಞಾನವು ಮುಂದಿನ ಜನ್ಮದಲ್ಲಿ ಉಪಯೋಗಕ್ಕೆ ಬರುವುದಿಲ್ಲ, ಉದಾ. ಪ್ರತಿಯೊಂದು ಜನ್ಮದಲ್ಲೂ ಮತ್ತೆ ‘ಅ ಆ ಇ ಈ’ ಕಲಿಯಬೇಕಾಗುತ್ತದೆ.

ಇದಕ್ಕೆ ವಿರುದ್ಧವಾಗಿ ಜೀವಾತ್ಮ ಮತ್ತು ಶಿವಾತ್ಮಗಳಿಗೆ ಆಧ್ಯಾತ್ಮಿಕ ಸಾಧನೆ ಮಾಡಿದ ನಂತರ ಬಂದ ಅನುಭೂತಿಗಳ ಸ್ಮರಣೆಯು ಮುಂದಿನ ಜನ್ಮದಲ್ಲಿಯೂ ಇರುತ್ತದೆ ಮತ್ತು ಅಲ್ಲಿಂದಲೇ ನಮ್ಮ ಮುಂದಿನ ಆಧ್ಯಾತ್ಮಿಕ ಸಾಧನೆಯ ಪ್ರಯಾಣವು ಆರಂಭವಾಗುತ್ತದೆ. ಬುದ್ಧಿಗೆ ತಿಳಿಯುವ ಮಾಹಿತಿಯು ಮೆದುಳಿನ ಜೀವಕೋಶಗಳಲ್ಲಿ ಶೇಖರಿಸಲ್ಪಡುತ್ತದೆ. ಮುಪ್ಪು ಬರತೊಡಗಿದಾಗ ಮೆದುಳಿನ ಜೀವಕೋಶಗಳು ನಾಶವಾಗುತ್ತವೆ. ಆಗ ಅನೇಕ ವಿಷಯಗಳು ನೆನಪಿನಲ್ಲಿ ಉಳಿಯುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅನುಭೂತಿಯು ಜೀವಾತ್ಮ ಮತ್ತು ಶಿವಾತ್ಮಗಳಿಗೆ ಬರುವುದರಿಂದ ಅದು ಯಾವಾಗಲೂ ನೆನಪಿನಲ್ಲಿರುತ್ತದೆ. ಮುಂದಿನ ಜನ್ಮದಲ್ಲಿಯೂ ಇದೇ ಜೀವಾತ್ಮವು ಹೊಸ ದೇಹವನ್ನು ಧರಿಸಿಬರುತ್ತದೆ ಆದರೆ ಮೆದುಳು ಮಾತ್ರ ಹೊಸದಾಗಿರುತ್ತದೆ. ಹಾಗಾಗಿ ಲೌಕಿಕದ ಎಲ್ಲವನ್ನೂ ಹೊಸದಾಗಿ ಕಲಿಯಬೇಕಾಗುತ್ತದೆ.

ಹಾಗಾಗಿಯೇ ಅನೇಕ ಸಂತರು ಮಾನವ ಜನ್ಮ ಬಲು ದೊಡ್ಡದು ಅದನ್ನು ಹಾನಿಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂದು ಹೇಳಿದ್ದಾರೆ. ಇಂದೇ ಆಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಿ. ಆಧ್ಯಾತ್ಮಿಕ ಸಾಧನೆಯನ್ನು ಕುಲದೇವರ ನಾಮಜಪ ಮತ್ತು ದತ್ತ ಗುರುಗಳ ನಾಮಜಪದೊಂದಿಗೆ ಆರಂಭಿಸಿ. ಈಗಾಗಲೇ 5-6 ತಿಂಗಳು ಕುಲದೇವರ ನಾಮಜಪವನ್ನು ಮಾಡಿದ್ದರೆ ಮುಂದಿನ ಹಂತದ ಸಾಧನೆಯನ್ನು ತಿಳಿದುಕೊಳ್ಳಲು ಸನಾತನದ ಸತ್ಸಂಗ ಅಥವಾ ಸಾಧಕರನ್ನು ಸಂಪರ್ಕಿಸಿ.

ಲೌಕಿಕ ಜೀವನದಲ್ಲಿ ಹೇಗೆ ನಾವು ಒಂದೊಂದೇ ತರಗತಿಯನ್ನು ಕಲಿತು ತೇರ್ಗಡೆಗೊಂಡು ಮುಂದಿನ ತರಗತಿಗೆ ಹೋಗುತ್ತೇವೆಯೋ, ಹಾಗೆಯೇ ಅಧ್ಯಾತ್ಮದಲ್ಲಿಯೂ ಮುಂದುಮುಂದಿನ ಹಂತವಿರುತ್ತದೆ. ಅದನ್ನು ತಿಳಿದುಕೊಳ್ಳಿ ಮತ್ತು ಅದರಂತೆ ಸಾಧನೆಯನ್ನು ಮಾಡಿ.

(ಹೆಚ್ಚಿನ ಮಾಹಿತಿಗಾಗಿ ಓದಿ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’)

Leave a Comment