ರಾಷ್ಟ್ರಪ್ರೇಮಿ ಹಿಂದೂಗಳೇ, ‘ಹಿಂದೂ ರಾಷ್ಟ್ರವನ್ನುಹೇಗೆ ಸ್ಥಾಪಿಸಬೇಕು ? ಎಂದು ಚಿಂತಿಸಬೇಡಿ !

೧. ಶ್ರೀಕೃಷ್ಣನು ಹಿಂದೂ ರಾಷ್ಟ್ರದ ಸ್ಥಾಪನೆಯ ಬಗೆಗಿನ ಮಹಾಯುದ್ಧವನ್ನು ಪಂಚ ಮಹಾಭೂತಗಳ ಅಸ್ತ್ರಗಳನ್ನು ಬಳಸಿ ಗೆದ್ದು ಕೊಡಲಿದ್ದಾನೆ !

‘ಹೆಚ್ಚಿನ ಹಿಂದೂಗಳು ಸಂಸ್ಕೃತಿರಹಿತ, ಧರ್ಮಾಭಿಮಾನಶೂನ್ಯ ಮತ್ತು ಸಂವೇದನಾರಹಿತರಾಗಿರುವುದರಿಂದ ‘ಹಿಂದೂ ರಾಷ್ಟ್ರವನ್ನು ಹೇಗೆ ಸ್ಥಾಪಿಸುವುದು ? ಎಂದು ಅನೇಕರಿಗೆ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಹೀಗಿದೆ – ದೇವರು ಒಬ್ಬ ಭಕ್ತನಿಗಾಗಿಯೂ ಓಡಿ ಬರುತ್ತಾನೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನಿಸುತ್ತಿರುವ ಕೆಲವು ಸಾವಿರ ಭಕ್ತರಿಗಾಗಿ ಅವನು ಖಂಡಿತ ಓಡಿ ಬರುವನು. ‘ಬಂದೂಕು, ಪಿಸ್ತೂಲು, ಬಾಂಬ್, ವಿಮಾನ ಇತ್ಯಾದಿಗಳಿರುವ ಲಕ್ಷಗಟ್ಟಲೆ ಭಾರತ ವಿರೋಧಿಶತ್ರುಗಳೊಂದಿಗೆ ಹೇಗೆ ಹೋರಾಡುವುದು ? ಎಂದು ಅವರಿಗೆ ಚಿಂತೆಯಾಗುತ್ತದೆ. ಪೃಥ್ವಿಯ ಮೇಲಿನ ಯಾವುದೇ ಶಸ್ತ್ರಾಸ್ತ್ರಗಳಿಗಿಂತ ಶ್ರೀಕೃಷ್ಣನ ಶಸ್ತ್ರಾಸ್ತ್ರಗಳು ಸಾವಿರಾರು ಪಟ್ಟು ವಿಧ್ವಂಸಕವಾಗಿರುತ್ತವೆ ಮತ್ತು ಶತ್ರುಗಳನ್ನು ನಾಶಗೊಳಿಸುತ್ತವೆ. ರಾಮಾಯಣ, ಮಹಾಭಾರತ,ಪುರಾಣ ಇತ್ಯಾದಿಗಳಲ್ಲಿ ‘ಪರ್ಜನ್ಯಾಸ್ತ್ರದಂತಹ ಪಂಚಮಹಾಭೂತಗಳಿಗೆ ಸಂಬಂಧಪಟ್ಟ ಅನೇಕ ಅಸ್ತ್ರಗಳ ಉಲ್ಲೇಖವಿದೆ.

೨. ಪಂಚಮಹಾಭೂತಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸೂಕ್ಷ್ಮದಲ್ಲಿನ ಅಸ್ತ್ರಗಳು

ಇಂತಹ ಅಸ್ತ್ರಗಳೆದುರಿಗೆ ಜಗತ್ತಿನಲ್ಲಿನ ಎಲ್ಲ ಶತ್ರುಗಳು ಒಂದಾದರೂಅವರು ಬದುಕುಳಿಯುವುದಿಲ್ಲ ! ಆದ್ದರಿಂದ ‘ಹಿಂದೂ ರಾಷ್ಟ್ರದ ಸ್ಥಾಪನೆ ಹೇಗಾಗುವುದು ? ಎಂದು ಭಕ್ತರಿಗೆ ಚಿಂತೆಯಾಗುವುದಿಲ್ಲಮತ್ತು ಅವರು ‘ಭಕ್ತಿಯೇ ಶಕ್ತಿ ಎಂಬುದನ್ನು ಅನುಭವಿಸುತ್ತಾರೆ.