ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ

ಜೀವನದ ಧ್ಯೇಯವೇನು ? ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ. ಸುಖ ಮತ್ತು ಆನಂದದಲ್ಲಿರುವ ವ್ಯತ್ಯಾಸ ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ … Read more

ಒಂದು ಜನ್ಮದಲ್ಲಿ ಸಾಕ್ಷಾತ್ಕಾರವಾಗದಿದ್ದರೆ ಎಲ್ಲಾ ಸಾಧನೆ ವ್ಯರ್ಥವೇ ?

ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಭಗವದ್ಗೀತೆಯ ಎರಡನೆಯ ಅಧ್ಯಾಯದ ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ । ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥೪೦॥ ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ, ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರುಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು ! ಇದರಿಂದ ಏನು ಉಪಯೋಗ. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ … Read more

ಹಿಂದೂ ಧರ್ಮ ಪ್ರತಿಮಾ ಪೂಜೆಯನ್ನು ಹೇಳುತ್ತದೆಯೇ? ಪ್ರತಿಮೆಯೇ ಭಗವಂತನೇ?

ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಅಲ್ಲಿ ಒಂದು ಸುಂದರ ಕಲ್ಲಿನ ಮೂರ್ತಿ ಇರುತ್ತದೆ. ಆ ಕಲ್ಲಿನ ಮೂರ್ತಿ ದೇವರೇ? ಅಲ್ಲ. ಅದು ದೇವರ ಪ್ರತೀಕ ಮತ್ತು ನಾವು ಆ ಮೂರ್ತಿಯಲ್ಲಿ ದೇವರನ್ನು ಆವಾಹನೆ ಮಾಡಿ ಪೂಜೆ ಮಾಡುತ್ತೇವೆ. ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತ ಕಲ್ಲಿನೊಳಗೂ ಇರಬಹುದು – ಕಂಬದಲ್ಲೂ ಇರಬಹುದಲ್ಲವೇ? [ಹಿರಣ್ಯಕಶಿಪು ಮತ್ತು ಪ್ರಹ್ಲಾದನ ಕಥೆ-ನರಸಿಂಹಾವತಾರ ನೆನಪಿಸಿಕೊಳ್ಳಿ] ಭಗವಂತನಿಗೆ ಮೂರು ರೂಪಗಳು ೧. ಆವೇಶರೂಪ (ಉದಾ: ಪ್ರಥುಚಕ್ರವರ್ತಿ, ನರ) ೨. ಅವತಾರರೂಪ (ಉದಾ: ರಾಮ, ಕೃಷ್ಣ) ೩. ಪ್ರತೀಕರೂಪ. ಭಗವಂತನ … Read more

ಸಂಸಾರಿಗಳಿಗೆ ಸಾಕ್ಷಾತ್ಕಾರ ಹೇಗೆ ಸಾಧ್ಯ?

ಪ್ರಾರ್ಥನೆ ಬಲವಾದಂತೆ ಸಂಸಾರದ ಬಂಧನಗಳೂ ಸಡಿಲವಾಗಿ, ದೇವರ ಕಡೆಗೆ ಓಟ ತೀವ್ರವಾಗುತ್ತದೆ. ದೇವರು ನೋಡುವುದು ಭಕ್ತನ ಮನಸ್ಸು ಹೃದಯಗಳನ್ನೇ ಹೊರತು ಆತ ಸಂನ್ಯಾಸಿಯೋ, ಸಂಸಾರಿಯೋ ಎಂಬುದನ್ನಲ್ಲ.

ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ

ಯುಗಗಳು ದಿನಗಳಾಗಿ, ದಿನಗಳು ಕ್ಷಣಗಳಾಗಿ ಸದಾ ಧನ ಸಂಪಾದನೆಯಲ್ಲಿಯೇ ನಾವೆಲ್ಲರೂ ನಿರತರಾಗಿರುತ್ತೇವೆ. ನಮ್ಮ ಕಷ್ಟಗಳಿಗೆಲ್ಲಾ ದಾರಿದ್ರ್ಯವೇ ಕಾರಣವೆಂದೂ, ಧನದಿಂದ ಎಲ್ಲವೂ ದೊರೆಯುತ್ತದೆಯೆಂದೂ ನಂಬಿ ಅದಕ್ಕಾಗಿ ಅವಿರತ ಪ್ರಯತ್ನಿಸುತ್ತಿರುತ್ತೇವೆ. ಈ ಕಾಲದಲ್ಲಿ ಅಧ್ಯಾತ್ಮದ ಅಗತ್ಯವಿದೆಯೇ ? ಎಂದು ಕೆಲವರು ಯೋಚಿಸುವುದುಂಟು

ಮೂರ್ತಿ ಪೂಜೆ

ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.