ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ಯಾವ ಶ್ರೀಕೃಷ್ಣನಲ್ಲಿ ಸಂಪೂರ್ಣ ಸಮರ್ಪಣೆ ಆಗಲಿಕ್ಕಿದೆಯೋ ಅಂತಹವನನ್ನು ಸಂಪೂರ್ಣ ಅರಿತುಕೊಳ್ಳುವುದು ಆವಶ್ಯಕ !

ಪರಾತ್ಪರ ಗುರು ಪಾಂಡೆ ಮಹಾರಾಜ

‘ಸಮರ್ಪಣಾಭಾವದಲ್ಲಿ ತುಂಬಾ ಶಕ್ತಿ ಇದೆ’, ಎಂಬುದು ಆಗಾಗ ಕಂಡುಬರುತ್ತದೆ. ಭಗವದ್ಗೀತೆಯಲ್ಲಿ ಭಗವಂತನು, ‘ನೀನು ನನಗೆ ಎಲ್ಲವನ್ನು ಸಮರ್ಪಿಸು ಮತ್ತು ನಿಶ್ಚಿಂತ ಮನಸ್ಸಿನಿಂದ ವರ್ತಮಾನಕಾಲದಲ್ಲಿ ನನ್ನ ಅನುಸಂಧಾನದಲ್ಲಿ ಈಶ್ವರೀ ಕಾರ್ಯವೆಂದು ಕಾರ್ಯವನ್ನು ಮಾಡುತ್ತಿರು’, ಎಂದು ಹೇಳುತ್ತಾನೆ. ಸಮರ್ಪಣೆಯ ಪ್ರಕ್ರಿಯೆಯು ಇಷ್ಟೊಂದು ಸಹಜ ಮತ್ತು ಸುಲಭವಲ್ಲ! ಶ್ರೀಕೃಷ್ಣನ ಮೇಲೆ ಭಾರವನ್ನು ಹಾಕುವುದು, ಸಮರ್ಪಣೆಯನ್ನು ಮಾಡುವುದು, ಅವನಿಗೆ ಪೂರ್ಣವಾಗಿ ತಿಳಿದುಕೊಳ್ಳುವುದು, ಅವನು ನಮ್ಮ ಮನಸ್ಸಿನಲ್ಲಿ ಮೂರ್ತರೂಪದಲ್ಲಿ ಮೂಡುವುದು, ಅವನ ಮೇಲೆ ಪೂರ್ತಿ ಆತ್ಮವಿಶ್ವಾಸದಿಂದಿರುವುದು ಆವಶ್ಯಕವಿದೆ.

೧. ಗೋಪಿಗಳ ಪೂರ್ವ ಜನ್ಮದ ರಹಸ್ಯ

ಋಷಿಗಳು ತಪಸ್ಸನ್ನು ಮಾಡಿದ್ದರಿಂದ ಅವರಿಗೆ ರಾಮನ ದರ್ಶನವಾಗುವುದು; ಆದರೆ ಅವರಿಗೆ ರಸಾಸ್ವಾದ ಆಗದಿರುವುದರಿಂದ ಅದನ್ನು ಪಡೆಯುವುದಕ್ಕಾಗಿ ಅವರು ರಾಮನಿಗೆ ಬೇಡಿಕೊಳ್ಳುವುದು ಮತ್ತು ರಾಮನು ಕೃಷ್ಣಜನ್ಮದಲ್ಲಿ ಗೋಪಿಯಾದ ನಂತರ ಆನಂದ ಸಿಗುವುದೆಂದು ಅವರಿಗೆ ಹೇಳುವುದು : ಸಮರ್ಪಣೆ ಮಾಡಿದ ನಂತರವೂ ಸ್ವಲ್ಪ ಅಹಂಕಾರ ಉಳಿದಿರುತ್ತದೆ. ಆದುದರಿಂದ ಜೀವನದಲ್ಲಿ ಪರಮೋಚ್ಚವಾಗಿರುವ ಆತ್ಮಿಕ ಸುಖವು ಸಿಗುವುದಿಲ್ಲ. ರಾಮಜನ್ಮದಲ್ಲಿ ಋಷಿಗಳು ತಪಸ್ಸನ್ನು ಆಚರಿಸಿ ತಮ್ಮ ದೇಹವನ್ನು ನಿಸ್ತೇಜ ಮಾಡಿಕೊಂಡರು. ಅವರಿಗೆ ರಾಮನ ದರ್ಶನವಾಯಿತು. ಅವರಿಗೆ ‘ಇವನು ಭಗವಂತನಾಗಿರುವನು’, ಎಂದು ತಿಳಿಯಿತು; ಆದರೆ ಅವರ ಸಾತ್ತ್ವಿಕ ಭಾವವು ಜಾಗೃತವಾಗಲಿಲ್ಲ. ಅವರಿಗೆ ರಸಾಸ್ವಾದವು ಸಿಗಲಿಲ್ಲ. ಅಗ ಅವರು ರಾಮನಲ್ಲಿ “ನಮಗೆ ಆನಂದದ, ಮಧುರ ಭಾವದ ಆಸ್ವಾದನೆ ಬೇಕಾಗಿದೆ” ಎಂದು ಬೇಡಿಕೊಂಡರು. ಆಗ ರಾಮನು, “ಕೃಷ್ಣಜನ್ಮದಲ್ಲಿ ನೀವು ಗೋಪಿಯರಾದ ನಂತರ ನಿಮಗೆ ಆ ಆನಂದ ಸಿಗುವುದು” ಎಂದು ಹೇಳಿದನು.

೨. ಗೋಪಿಗಳ ರೂಪ ತಾಳಿದ್ದ ಋಷಿಗಳ ಸೂಕ್ಷ್ಮ ಅಹಂಕಾರದ ಹರಣ

ಋಷಿಗಳು ಗೋಪಿರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿದ್ದ ಸೂಕ್ಷ್ಮ ಅಹಂಕಾರವನ್ನು ಇಲ್ಲದಂತೆ ಮಾಡಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ಪ್ರಕಟಿಸುವುದು ಮತ್ತು ಅವರಿಗೆ ರಾಸಕ್ರೀಡೆಯಿಂದ ಮಧುರಭಾವದ ಆಸ್ವಾದನೆಯನ್ನು ನೀಡುವುದು : ಅದರಂತೆ ಆ ಋಷಿಗಳು ಗೋಪಿಸ್ವರೂಪದಲ್ಲಿ ಜನಿಸಿದರು; ಆದರೆ ಅವರಿಗೆ ‘ನಾವು ಜ್ಞಾನಿ ಋಷಿಗಳಿದ್ದೇವೆ’, ಎಂಬ ಜ್ಞಾನವಿರುವುದರಿಂದ ಶ್ರೀಕೃಷ್ಣನಿಗೆ ಅವರ ವಸ್ತ್ರಹರಣ ಮಾಡಬೇಕಾಯಿತು. ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿದ್ದ ಸೂಕ್ಷ್ಮ ಅಹಂಕಾರವನ್ನು ಇಲ್ಲದಂತೆ ಮಾಡಿ ಅವರಲ್ಲಿ ತನ್ನ ನಿಜವಾದ ಆತ್ಮಸ್ವರೂಪವನ್ನು ವ್ಯಕ್ತಗೊಳಿಸಿದನು. ಆದುದರಿಂದ ಅವರಿಗೆ ಅವರಲ್ಲಿನ ಅಭದ್ರ ಸ್ವರೂಪದ ಜ್ಞಾನವಾಗಿರುವುದರಿಂದ ನಾಚಿಕೆಯಾಯಿತು. ದುಷ್ಟ ಪ್ರವೃತ್ತಿಯು ಮೃದುವಾಯಿತು. ಅವರು ಶ್ರೀಕೃಷ್ಣನೊಂದಿಗೆ ತಲ್ಲೀನರಾದರು. ಅವರ ಚಿತ್ತವು ಈಗ ಶುದ್ಧವಾಯಿತು. ಹೃದಯದಲ್ಲಿನ ಆತ್ಮಭಾವವು ಜಾಗೃತವಾಯಿತು. ಶ್ರೀಕೃಷ್ಣನು ಅವರಿಗೆ ರಾಸಕ್ರಿಡೆಯಲ್ಲಿ ಸ್ಥಾನ ನೀಡಿ ಮಧುರಭಾವದ ಆಸ್ವಾದನೆಯನ್ನು ನೀಡಿದನು.

– (ಪರಾತ್ಪರ ಗುರು) ಪಾಂಡೆ ಮಹಾರಾಜ (೩೦.೩.೨೦೧೫)

ಶ್ರೀಕೃಷ್ಣನ ವೈಶಿಷ್ಟ್ಯಗಳು

೧. ಈಶ್ವರಃ ಪರಮಃ ಕೃಷ್ಣಃ ಸಚ್ಚಿದಾನನ್ದವಿಗ್ರಹಃ |
    ಅನಾದಿರಾದಿರ್ಗೋವಿನ್ದಃ ಸರ್ವಕಾರಣಕಾರಣಮ್ ||
– ಬ್ರಹ್ಮಸಂಹಿತಾ, ಶ್ಲೋಕ ೧

ಅರ್ಥ : ಶ್ರೀಕೃಷ್ಣನು ಪರಮ ಈಶ್ವರನಾಗಿದ್ದಾನೆ. ಅವನು ಸಚ್ಚಿದಾನಂದಸ್ವರೂಪನಾಗಿದ್ದಾನೆ. ಆ ಗೋವಿಂದನ ಮೊದಲು ಏನೂ ಇರಲಿಲ್ಲ. ಅವನೇ ಎಲ್ಲದರ ಆದಿಯಾಗಿದ್ದು ಎಲ್ಲ ಕಾರಣಗಳ ಕಾರಣನಾಗಿದ್ದಾನೆ.

೨. ವಶಿ ಸರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ |
– ಶ್ವೇತಾಶ್ವತರೋಪನಿಷದ್, ಅಧ್ಯಾಯ ೩, ಶ್ಲೋಕ ೧೮

ಅರ್ಥ : ಸ್ಥಾವರ, ಜಂಗಮ ಹೀಗೆ ಎಲ್ಲ ಜನರು ಅವನ ಸ್ವಾಧೀನದಲ್ಲಿದ್ದಾರೆ.

೩. ಸರ್ವಸ್ಯ ವಶೀ ಸರ್ವಸ್ಯೇಶಾನಃ ಸರ್ವಸ್ಯಾಧಿಪತಿಃ |
– ಬೃಹದಾರಣ್ಯಕೋಪನಿಷದ್, ಅಧ್ಯಾಯ ೪, ಬ್ರಾಹ್ಮಣ ೪, ವಾಕ್ಯ ೨೨

ಅರ್ಥ : ಅವನು ಎಲ್ಲರನ್ನು ನಿಯಂತ್ರಣದಲ್ಲಿಡುವನು, ಎಲ್ಲರ ಈಶ್ವರ ಮತ್ತು ಅಧಿಪತಿಯಾಗಿದ್ದಾನೆ.

ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪ ಧರಿಸಿ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನೇ ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಾಗಿದೆ. ಆದುದರಿಂದ ಕೇವಲ ಶ್ರೀಕೃಷ್ಣನೇ ಪರಮ ದೇವನಾಗಿದ್ದಾನೆ. ಅವನ ಮಾಧರ್ಯವನ್ನು ಆಸ್ವಾದಿಸಿ ಅವನ ಪೂಜೆ ಮತ್ತು ಭಜನೆ ಮಾಡಬೇಕು.

– (ಪರಾತ್ಪರ ಗುರು) ಪಾಂಡೆ ಮಹಾರಾಜ (೩೦.೧೧.೨೦೧೪)

Leave a Comment