ಗುರುಪೂರ್ಣಿಮೆಯ ನಂತರ ಬರುವ ಭೀಕರ ವಿಪತ್ತಿನಲ್ಲಿ ಸುರಕ್ಷಿತವಾಗಿರಲು ಗುರುರೂಪಿ ಸಂತರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ !

ಶ್ರೀಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಭಕ್ತರಿಗೆ, ಸಾಧಕರಿಗೆ, ಶಿಷ್ಯರಿಗೆ ಹೀಗೆ ಅನೇಕರಿಗೆ ಗುರುಪೂರ್ಣಿಮಾ ಮಹೋತ್ಸವವು ‘ಕೃತಜ್ಞತಾ ಉತ್ಸವ’ವಾಗಿರುತ್ತದೆ. ಗುರುಗಳಿಂದಾಗಿಯೇ ಆಧ್ಯಾತ್ಮಿಕ ಸಾಧನೆಯು ಆರಂಭವಾಗಿ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ. ಸಾಧನೆ ಮಾಡದಿರುವ ವ್ಯಕ್ತಿ ಮಾತ್ರ ವ್ಯವಹಾರಿಕ ಜೀವನ ನಡೆಸುತ್ತಿರುವುದರಿಂದ ಅವರಿಗೆ ಅಧ್ಯಾತ್ಮ, ಸಾಧನೆ, ಗುರು, ಗುರುಪೂರ್ಣಿಮೆ ಇಂತಹ ಪದಗಳೊಂದಿಗೆ ಏನೂ ಸಂಬಂಧವಿರುವುದಿಲ್ಲ. ಇವರೆಲ್ಲರಿಗೆ ಅಧ್ಯಾತ್ಮದ ಮಹತ್ವವು ಸ್ವಲ್ಪವಾದರೂ ಗಮನಕ್ಕೆ ಬರಲಿ ಎಂದು ಮುಂಬರುವ ಭೀಕರ ವಿಪತ್ತಿನ ಬಗ್ಗೆ ಹೇಳುವ ಆವಶ್ಯಕತೆಯಿದೆ.
ಈ ಗುರುಪೂರ್ಣಿಮೆಯ ನಂತರ ಕೆಲವೇ ತಿಂಗಳಲ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ; ಜಗತ್ತಿಗೇ ಭೀಕರ ವಿಪತ್ತಿನ ಅನುಭವವಾಗಲಿದೆ. ಕೆಲವು ದೇಶಗಳಲ್ಲಿ ಯುದ್ಧಜನ್ಯ ಪರಿಸ್ಥಿತಿಯಿಂದಾಗಿ ಪೆಟ್ರೋಲ್-ಡೀಸೆಲ್ನ ಬೆಲೆ ಹೆಚ್ಚಾಗಿ ಎಲ್ಲೆಡೆ ತೀವ್ರ ಬೆಲೆಯೇರಿಕೆ ಆಗಲಿದೆ. ದವಸಧಾನ್ಯ, ಔಷಧಗಳು, ಅನಿಲ ಇತ್ಯಾದಿಗಳ ತೀವ್ರ ಕೊರತೆಯುಂಟಾಗಲಿದೆ. ಅನೇಕ ದೇಶಗಳಿಗೆ ಕ್ಷಾಮ ಎದುರಾಗಬಹುದು. ಯುದ್ಧಜನ್ಯ ಸ್ಥಿತಿಯಿಂದಾಗಿ ಉದ್ಭವಿಸಿದ ಆರ್ಥಿಕ ಕುಸಿತದಿಂದ ಬ್ಯಾಂಕ್ಗಳಿಗೂ ಪೆಟ್ಟು ಬೀಳಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿಯೊಂದು ಕುಟುಂಬವು ಆರ್ಥಿಕ ವಿಪತ್ತನ್ನು ಎದುರಿಸ ಬೇಕಾಗಬಹುದು ಇಂತಹ ಸ್ಥಿತಿ ಬರಲಿದೆ. ಮುಂದೆ ಈ ಯುದ್ಧವು ವಿಶ್ವ ಮಹಾಯುದ್ಧದಲ್ಲಿ ರೂಪಾಂತರವಾಗಲಿದೆ. ಆದ್ದರಿಂದ ಮೂರನೇ ಮಹಾಯುದ್ಧವು ಈಗ ಇನ್ನು ಹೆಚ್ಚು ದೂರವಿಲ್ಲ.
ಭಾರತದಲ್ಲಿಯೂ ಮತೀಯ ಧ್ರುವೀಕರಣದಿಂದ ಎಲ್ಲಾ ಕಡೆಗಳಲ್ಲಿ ಗಲಭೆ ಅಥವಾ ಪ್ರಚಂಡ ಹಿಂಸಾತ್ಮಕ ಘಟನೆಗಳು ನಡೆಯಲಿವೆ. ಇದರಿಂದಾಗಿ ಸಾಮಾಜಿಕ ಅಸುರಕ್ಷಿತತೆಯ ಪ್ರಶ್ನೆ ಉದ್ಭವಿಸಲಿದೆ. ಸದ್ಯ ಯಾರೇ ಅಧಿಕಾರದಲ್ಲಿದ್ದರೂ ದೇಶದ ಸ್ಥಿತಿ ಅರಾಜಕಸಾದೃಶ್ಯವಾಗಲಿದೆ. ಈ ಅರಾಜಕತೆಯನ್ನು ತಡೆಗಟ್ಟಲು ಯಾವುದೇ ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಆದ್ದರಿಂದ ಈ ವಿಪತ್ತಿನಲ್ಲಿ ಇಂತಿಂತಹ ರಾಜಕೀಯ ಪಕ್ಷ ನಿಮ್ಮನ್ನು ಕಾಪಾಡುವುವು ಎಂಬ ಭ್ರಮೆಯಲ್ಲಿರಬೇಡಿ !
ಮುಂಬರುವ ಭೀಕರ ಕಾಲದಲ್ಲಿ ಆಧ್ಯಾತ್ಮಿಕ ರಕ್ಷಣಾಕವಚ ಇಲ್ಲದೇ ಸುರಕ್ಷಿತ ಜೀವನ ನಡೆಸಲು ಸಾಧ್ಯವಿಲ್ಲ; ಆದ್ದರಿಂದಲೇ ವಿಪತ್ತಿನ ಕಾಲದಲ್ಲಿ ಕೇವಲ ಭಗವಂತನಿಗೆ ಶರಣಾಗುತ್ತಾರೆ. ಸುದೈವದಿಂದ ಈಶ್ವರನ ಸಗುಣ ರೂಪವಾಗಿರುವ ಸಂತರು ಪೃಥ್ವಿಯ ಮೇಲಿದ್ದಾರೆ. ಈ ಗುರುರೂಪಿ ಸಂತರಿಗೆ ಶರಣಾಗಿ ಹಾಗೂ ಅವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿ. ಗುರುರೂಪಿ ಸಂತರ ಕೃಪೆಯ ಕವಚ ಅಥವಾ ಸಾಧನೆಯ ಆಧ್ಯಾತ್ಮಿಕ ಬಲ ಇವುಗಳೇ ಮುಂದಿನ ೪-೫ ವರ್ಷಗಳ ಕಾಲ ಪೃಥ್ವಿಯ ಮೇಲಿನ ಕೆಟ್ಟ ಕಾಲದಿಂದ ನಮ್ಮನ್ನು ಪಾರು ಮಾಡಲಿವೆ, ಈ ಬಗ್ಗೆ ಶ್ರದ್ಧೆಯನ್ನು ಇಡಿ !
– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ
Useful message share to all🙏